![1-lo](https://www.udayavani.com/wp-content/uploads/2024/07/1-lo-415x228.jpg)
ಅಖಂಡ ಭಾರತ ಸಂಕಲ್ಪ : ದ್ವಿಚಕ್ರ ವಾಹನ ಜಾಥಾಕ್ಕೆ ಚಾಲನೆ
Team Udayavani, Aug 14, 2017, 7:10 AM IST
![vahana-jatha.jpg](https://www.udayavani.com/wp-content/uploads/2017/08/14/vahana-jatha.jpg)
ಬಂಟ್ವಾಳ : ವಿಶ್ವ ಹಿಂದೂ ಪರಿಷತ್, ಬಜರಂಗ ದಳ ಬಂಟ್ವಾಳ ಆಶ್ರಯದಲ್ಲಿ ಆ. 13ರಂದು ಸಂಜೆ ಅಖಂಡ ಭಾರತ ಸಂಕಲ್ಪ ದಿನದ ಅಂಗವಾಗಿ ಬಿ.ಸಿ.ರೋಡ್ ಶ್ರೀ ರಕ್ತೇಶ್ವರಿ ದೇವಸ್ಥಾನ ವಠಾರದಿಂದ ಪಣೋಲಿಬೈಲು ಶ್ರೀ ಕಲ್ಲುರ್ಟಿ ದೈವಸ್ಥಾನದ ತನಕ ಹಮ್ಮಿಕೊಂಡಿದ್ದ ದ್ವಿಚಕ್ರ ವಾಹನ ಜಾಥಾಕ್ಕೆ ಬಿಜೆಪಿ ನೇತಾರ ರಾಜೇಶ್ ನಾೖಕ್ ಉಳಿಪಾಡಿಗುತ್ತು ಚಾಲನೆ ನೀಡಿದರು.
ಜಾಥಾವನ್ನು ಉದ್ದೇಶಿಸಿ ಮಾತನಾಡಿದ ಅವರು ಯುವಕರಲ್ಲಿ ಜಾಗೃತಿ ಹುಟ್ಟಿಸುವುದಕ್ಕಾಗಿ ಇಂತಹ ಕಾರ್ಯಕ್ರಮ ಹಮ್ಮಿಕೊಂಡಿದ್ದು ಮುಂದಿನ ದಿನಗಳಲ್ಲಿ ನಾವು ರಾಷ್ಟ್ರಭಕ್ತರಾಗಿ ಸೇವೆ ಸಲ್ಲಿಸಬೇಕು. ಇಂದು ಸಮರ್ಥ ಪ್ರಧಾನಿ ನರೇಂದ್ರ ಮೋದಿಯವರ ಆಡಳಿತದಲ್ಲಿ ನಾವು ಮುಂದಿನ ಗುರಿಯತ್ತ ಮುನ್ನಡೆಯಬೇಕು ಎಂದು ಕಾರ್ಯಕರ್ತರಿಗೆ ಕಕರೆ ನೀಡಿದರು.
ಇದೇ ಸಂದರ್ಭ ವಿಹಿಂಪ ಪ್ರಮುಖ ಭಾಸ್ಕರ ಧರ್ಮಸ್ಥಳ ಜಾಥಾವನ್ನು ಉದ್ದೇಶಿಸಿ ಮಾತನಾಡಿದರು. ನೂರಕ್ಕೂ ಅಧಿಕ ದ್ವಿಚಕ್ರ ಸವಾರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
![1-lo](https://www.udayavani.com/wp-content/uploads/2024/07/1-lo-415x228.jpg)
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.