Aranthodu: ದೊಡ್ಡೇರಿ ಶಾಲೆ ಮಕ್ಕಳಿಗೆ ಅಕ್ಷರ ದಾಸೋಹ ಕಟ್ಟಡದ ಜಗಲಿಯೇ ಕ್ಲಾಸ್ರೂಮ್!
2 ವರ್ಷವಾದರೂ ಶಿಥಿಲ ಕಟ್ಟಡ ದುರಸ್ತಿ ಮುಗಿದಿಲ್ಲ; ಬೆಂಚು, ಡೆಸ್ಕ್ ಇಲ್ಲ; ಶಿಕ್ಷಕರೂ ನೆಲದಲ್ಲೇ ಕುಳಿತು ಪಾಠ!
Team Udayavani, Sep 18, 2024, 12:53 PM IST
ಅರಂತೋಡು: ಅಜ್ಜಾವರ ಗ್ರಾಮದ ದೊಡ್ಡೇರಿ ಕಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಕಳೆದ ಎರಡು ವರ್ಷಗಳಿಂದ ಅಕ್ಷರ ದಾಸೋಹ ಕೊಠಡಿಯ ಜಗುಲಿಯೇ ಕ್ಲಾಸ್ ರೂಮ್ ಆಗಿದೆ! ಇದಕ್ಕೆ ಕಾರಣ, ಎರಡು ವರ್ಷಗಳ ಹಿಂದೆ ಆರಂಭಗೊಂಡ ಶಿಥಿಲ ಕಟ್ಟಡದ ದುರಸ್ತಿ ಕಾಮಗಾರಿ ಇನ್ನೂ ಮುಗಿಯದಿರುವುದು!
2 ವರ್ಷದ ಹಿಂದೆ ಶಾಲೆ ಕಟ್ಟಡದ ಹಿಂಬದಿ ಗೋಡೆ ಸಂಪೂರ್ಣ ಶಿಥಿಲಗೊಂಡಿತ್ತು. ಆಗ ಮಕ್ಕಳನ್ನು ಅಕ್ಷರ ದಾಸೋಹ ಕಟ್ಟಡದ ಜಗಲಿಗೆ ಸ್ಥಳಾಂತರ ಮಾಡಲಾಗಿತ್ತು.
ಆಗ ಸಚಿವರಾಗಿದ್ದ ಎಸ್.ಅಂಗಾರ ಅವರು ಶಾಲೆ ದುರಸ್ತಿಗಾಗಿ ಪ್ರಾಕೃತಿಕ ವಿಕೋಪ ಯೋಜನೆಯಲ್ಲಿ 7 ಲಕ್ಷ ರೂ.ಅನುದಾನ ಮಂಜೂರು ಮಾಡಿಸಿದ್ದರು. ಅದರಲ್ಲಿ ಶಾಲೆಯ ಗೋಡೆಯನ್ನು ಸಂಪೂರ್ಣ ಕೆಡವಿ ಹೊಸ ಗೋಡೆ ನಿರ್ಮಿಸಲಾಯಿತು. ಹಳೆಯ ಪಕ್ಕಾಸು, ಹಂಚು ಬಳಸಿಕೊಂಡು ಮೇಲ್ಛಾವಣಿ ಮಾಡಲಾಯಿತು, ಆದರೆ, ನೆಲಕ್ಕೆ ಟೈಲ್ಸ… ಅಳವಡಿಕೆ ಆಗಿಲ್ಲ. ಕಿಟಕಿ ಜೋಡಣೆ, ಕರಿ ಹಲಗೆ ಜೋಡಣೆ ಬಾಕಿ ಉಳಿದಿವೆ. ಹೀಗಾಗಿ ಮಕ್ಕಳು ಈ ಶೈಕ್ಷಣಿಕ ವರ್ಷವನ್ನು ಕೂಡಾ ಅಕ್ಷರ ದಾಸೋಹ ಕಟ್ಟಡದ ಜಗಲಿಯಲ್ಲೇ ಕಳೆಯುವಂತಾಗಿದೆ. ತುರ್ತಾಗಿ ಶಾಲೆ ದುರಸ್ತಿ ಮಾಡಿ ಎನ್ನುವುದು ಮಕ್ಕಳ ಪೋಷಕರ ಆಗ್ರಹ.
ಎಲ್ಲ ಕ್ಲಾಸಿನ ಮಕ್ಕಳಿಗೆ ಒಟ್ಟಿಗೇ ಪಾಠ
ಈ ಶಾಲೆಯಲ್ಲಿ 15 ಮಕ್ಕಳಿದ್ದಾರೆ. ಈ ವರ್ಷ ದಾಖಲಾತಿ ಹೆಚ್ಚಿದೆ. ಶಾಲೆಯ ಪೀಠೊಪಕರಣಗಳನ್ನು ಪಕ್ಕದ ಕಾಂತಮಂಗಲ ಶಾಲೆಯಲ್ಲಿ ಇಡಲಾಗಿದೆ. ಇಲ್ಲಿಗೆ ಮರಳಿ ತಂದರೂ ಇಡಲು ಜಾಗವಿಲ್ಲ. ಆದ್ದರಿಂದ ಮಕ್ಕಳು ನೆಲದಲ್ಲೇ ಕುಳಿತು ಪಾಠ ಕೇಳುತ್ತಿದ್ದಾರೆ. ಶಿಕ್ಷಕರು ನೆಲದಲ್ಲೇ ಕುಳಿತು ಪಾಠ ಮಾಡುತ್ತಿದ್ದಾರೆ. ಜಗಲಿ ಸಣ್ಣದಾಗಿರುವುದರಿಂದ ಒಂದರಿಂದ ಐದನೇ ಕ್ಲಾಸ್ವರೆಗಿನ ಎಲ್ಲರಿಗೂ ಒಟ್ಟಿಗೇ ಪಾಠ ನಡೆಯುತ್ತಿದೆ!
ಅನುದಾನ ಇರಿಸಲಾಗಿದೆ
ದೊಡ್ಡೇರಿ ಶಾಲೆಯ ಉಳಿದ ಕಾಮಗಾರಿಗೆ ತಾ.ಪಂ.ನಲ್ಲಿ ಅನುದಾನ ಇರಿಸಲಾಗಿದೆ.ಆದಷ್ಟು ಬೇಗ ಉಳಿದ ಕಾಮಗಾರಿಗಳನ್ನು ಮುಗಿಸುತ್ತೇವೆ.
-ಮಣಿಕಂಠ, ಜಿ.ಪಂ. ಸಹಾಯಕ ಅಭಿಯಂತ
ಜಗಲಿಯಲ್ಲಿ ಪಾಠ ಕೇಳುವ ಪರಿಸ್ಥಿತಿ
ನಮ್ಮ ಮಕ್ಕಳು ಎರಡು ವರ್ಷದಿಂದ ಜಗಲಿಯಲ್ಲಿ ಪಾಠ ಕೇಳುವ ಪರಿಸ್ಥಿತಿ ಎದುರಾಗಿದೆ. ತತ್ಕ್ಷಣ ಶಾಲೆಯ ಕಾಮಗಾರಿ ಮುಗಿಸಿಕೊಡಿ.
-ದಯಾನಂದ ಡಿ.ಕೆ., ಎಸ್ಡಿಎಂಸಿ ಅಧ್ಯಕ್ಷರು
-ತೇಜೇಶ್ವರ್ ಕುಂದಲ್ಪಾಡಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ninthikallu-ಬೆಳ್ಳಾರೆ-ಸುಳ್ಯ ರಸ್ತೆಯಲ್ಲಿ ಹೊಂಡ-ಗುಂಡಿಗಳದ್ದೇ ಸಾಮ್ರಾಜ್ಯ
High Court ನಿರ್ದೇಶನ: ಕೊಂಬಾರಿನ ರಸ್ತೆ, ಬಿರ್ಮೆರೆಗುಂಡಿ ಸೇತುವೆಗೆ 1.31 ಕೋಟಿ ರೂ.
ಖಾಯಂ ಪಿಡಿಓ, ಕಾರ್ಯದರ್ಶಿ ನೇಮಕಕ್ಕೆ ಒತ್ತಾಯ;ಗ್ರಾ.ಪಂ.ಸಾಮಾನ್ಯ ಸಭೆ ಬಹಿಷ್ಕರಿಸಿ ಪ್ರತಿಭಟನೆ
Belthangady ತಾಲೂಕು ಒಕ್ಕಲಿಗ ಗೌಡರ ಸೇವಾ ಟ್ರಸ್ಟ್ ಅಸ್ಥಿತ್ವಕ್ಕೆ; ಲೋಗೋ ಅನಾವರಣ
Dharmasthala: ಶೌರ್ಯ ಯೋಧರು ಆಪತ್ಕಾಲದ ಆಪ್ತ ರಕ್ಷಕರು: ಡಾ.ಡಿ.ವೀರೇಂದ್ರ ಹೆಗ್ಗಡೆ
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Sagara: ವಿದ್ಯುತ್ ಸಂಪರ್ಕ ಕಡಿತಗೊಳಿಸುತ್ತಿರುವ ಮೆಸ್ಕಾಂ ನೀತಿ ಖಂಡನೆ; ಪ್ರತಿಭಟನೆ
Job Opportunities:ಪಂಜಾಬ್ and ಸಿಂಧ್ ಬ್ಯಾಂಕ್-213 ಆಫೀಸರ್ ಹುದ್ದೆಗೆ ಅರ್ಜಿ ಆಹ್ವಾನ
INDvsBAN: ”ಈತ ಭಾರತದ ಬಾಬರ್ ಅಜಂ..”: ಟೀಂ ಇಂಡಿಯಾ ಆಟಗಾರನಿಗೆ ನೆಟ್ಟಿಗರ ತರಾಟೆ
Salim Khan: ಬುರ್ಖಾಧಾರಿ ಮಹಿಳೆಯಿಂದ ಸಲ್ಮಾನ್ ತಂದೆಗೆ ಬೆದರಿಕೆ; ಅಸಲಿಗೆ ಆಗಿದ್ದೇನು?
Kannada Cinema: ರವಿ ಶ್ರೀವತ್ಸ ಅವರ ಗ್ಯಾಂಗ್ಸ್ ಆಫ್ ಯುಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.