ಮಾಣಿ ಬಹುಗ್ರಾಮ ಕುಡಿಯುವ ನೀರು ಯೋಜನೆ: ತತ್ಕಾಲಕ್ಕೆ ಸಮಸ್ಯೆ ಪರಿಹಾರ

ಇನ್‌ಟೆಕ್‌ ವೆಲ್‌ ಹೂಳು ತೆರವು

Team Udayavani, Apr 27, 2020, 5:12 AM IST

ಮಾಣಿ ಬಹುಗ್ರಾಮ ಕುಡಿಯುವ ನೀರು ಯೋಜನೆ: ತತ್ಕಾಲಕ್ಕೆ ಸಮಸ್ಯೆ ಪರಿಹಾರ

ಕಲ್ಲಡ್ಕ: ಬಹುಕೋಟಿ ರೂ. ವೆಚ್ಚದ ಮಾಣಿ ಬಹುಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆಯ ಅನುಷ್ಠಾನದಲ್ಲಿ ಆಗಿರುವ ಎಡವಟ್ಟಿನಿಂದ ಕೆಲವು ದಿನಗಳಿಂದ ಸ್ಥಳೀಯವಾಗಿ ಕುಡಿಯುವ ನೀರು ಸರಬರಾಜು ನೀಲುಗಡೆ ಆಗಿತ್ತು. ಸಮಸ್ಯೆ ತಿಳಿಯುತ್ತಿದ್ದಂತೆ ಅಧಿಕಾರಿಗಳು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ತತ್ಕಾಲಕ್ಕೆ ಪರಿಹಾರ ಕಂಡುಕೊಂಡಿದ್ದಾರೆ.

ನೇತ್ರಾವತಿ ನದಿ ನೀರಿನ ಮಟ್ಟ ಕುಸಿತದಿಂದ ಶಂಭೂರು ಡ್ಯಾಂನಿಂದ ತುಂಬೆ ಡ್ಯಾಂಗೆ ನೀರು ಹರಿಯ ಬಿಡಲಾಗಿತ್ತು. ಇದರಿಂದ ಮಾಣಿ ಬಹುಗ್ರಾಮ ಯೋಜನೆಯ ಜ್ಯಾಕ್‌ವೆಲ್‌ಗೆ ನೀರಿನ ಹರಿವು ನಿಲುಗಡೆ ಆಗಿತ್ತು. ಈ ಸಂದರ್ಭ ಇನ್‌ಟೆಕ್‌ ವೆಲ್‌ನಿಂದ ನೀರು ಮೇಲಕ್ಕೆತ್ತಬೇಕಿತ್ತು. ಆದರೆ ಅಲ್ಲಿ ಮರಳು ತುಂಬಿ ಅದು ಸಾಧ್ಯವಾಗದೆ ಸಮಸ್ಯೆ ಸೃಷ್ಟಿಯಾಗಿತ್ತು. ಕೇವಲ ಆರು ತಿಂಗಳ ಹಿಂದೆಯಷ್ಟೇ ಉದ್ಘಾಟನೆಗೊಂಡಿದ್ದ ಈ ಯೋಜನೆ ರೂಪಿಸುವಾಗ ಎಡವಿದ್ದೆ ಸಮಸ್ಯೆಗೆ ಕಾರಣ ಎನ್ನಲಾಗಿದೆ. ಹರಿಯುವ ನೀರನ್ನು ನಂಬಿ ಯೋಜನೆ ರೂಪಿಸಿದಂತಿತ್ತು. ಈ ನೀರು ನಿಂತಾಗ ನೀರು ಇಲ್ಲವಾಗಿತ್ತು.

ಸಮಸ್ಯೆಗೆ ಕಾರಣ
ನದಿಯ ನಡುವೆ ಆಳ ಪ್ರದೇಶದಲ್ಲಿ ಮಾಡಿದ್ದ ಇನ್‌ಟೆಕ್‌ ವೆಲ್‌ನಿಂದ ಜಾಕ್‌ವೆಲ್‌ಗೆ ಸಂಪರ್ಕಿಸುವ ಕೊಳವೆಯಲ್ಲಿ ಹೂಳು ತುಂಬಿಕೊಂಡಿದ್ದು ನೀರು ಹರಿಯದಿರಲು ಕಾರಣವಾಗಿತ್ತು. ಕಡೇ ಶ್ವಾಲ್ಯ-ಅಜಿಲಮೊಗರು ಸಂಪರ್ಕದ ಸೇತುವೆ ನಿರ್ಮಾಣಕ್ಕೆ ನದಿಯಲ್ಲಿ ಹಾಕಿದ್ದ ಮಣ್ಣು ಕೊಳವೆಯಲ್ಲಿ ಸೇರಿಕೊಂಡಿದ್ದು ಇದಕ್ಕೆ ಕಾರಣವಾಗಿತ್ತು. ಈ ಮಣ್ಣನ್ನು ಮೊದಲೇ ತೆರವುಗೊಳಿಸುತ್ತಿದ್ದರೆ ಸಮಸ್ಯೆ ಆಗುತ್ತಿರಲಿಲ್ಲ. ಜ್ಯಾಕ್‌ವೆಲ್‌ಗಿಂತ ನೀರಿನ ಮಟ್ಟ ಎತ್ತರದಲ್ಲಿದ್ದಾಗ ಈ ಸಮಸ್ಯೆ ಇರಲಿಲ್ಲ. ನದಿಯ ಮದ್ಯದಲ್ಲಿ ಇರುವ ಇನ್‌ಟೆಕ್‌ ವೆಲ್‌ನಿಂದ ಜ್ಯಾಕ್‌ವೆಲ್‌ಗೆ ನೀರು ಹರಿದು ಬರುವ ಸಂಪರ್ಕ ಕೊಳವೆಯಲ್ಲಿ ಮರಳು ತುಂಬಿ ಅಡಚಣೆಗೆ ಕಾರಣವಾಗಿತ್ತು. ಇನ್‌ಟೆಕ್‌ ವೆಲ್‌ ಐದು ಮೀಟರ್‌ ಆಳವಾಗಿದ್ದು. ಈಗ ನೀರಿದೆ. ಜಿಲ್ಲಾಧಿಕಾರಿಗಳ ಅನುಮತಿಯಂತೆ ಹೂಳು ತೆರವು ಮಾಡಲಾಗಿದೆ. ಈಗ ವ್ಯವಸ್ಥೆಯನ್ನು ಪುನರ್‌ ಸ್ಥಾಪಿಸಲಾಗಿದೆ ಎಂದು ಗ್ರಾ.ಕು.ನೀ. ಮತ್ತು ನೈರ್ಮಲ್ಯ ಉಪವಿಭಾಗ ಬಂಟ್ವಾಳ ಇದರ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಮಹೇಶ್‌ ಹೇಳಿದ್ದಾರೆ

ಟಾಪ್ ನ್ಯೂಸ್

Udupi ಶಿಕ್ಷಕರನ್ನು ಅವಮಾನಿಸಿದರೆ ಸಹಿಸಲು ಸಾಧ್ಯವಿಲ್ಲ: ಯಶ್‌ಪಾಲ್‌ ಸುವರ್ಣ

Udupi ಶಿಕ್ಷಕರನ್ನು ಅವಮಾನಿಸಿದರೆ ಸಹಿಸಲು ಸಾಧ್ಯವಿಲ್ಲ: ಯಶ್‌ಪಾಲ್‌ ಸುವರ್ಣ

Govt.,ಆದಾಯ ಮೂಲಕ್ಕೆ ಸಮಿತಿ ರಚಿಸಿದ ಸರಕಾರ

Govt.,ಆದಾಯ ಮೂಲಕ್ಕೆ ಸಮಿತಿ ರಚಿಸಿದ ಸರಕಾರ

BSY ಪೋಕ್ಸೋ ಪ್ರಕರಣ: ಸೆ. 19ಕ್ಕೆ ವಿಚಾರಣೆ ಮುಂದೂಡಿಕೆ

BSY ಪೋಕ್ಸೋ ಪ್ರಕರಣ: ಸೆ. 19ಕ್ಕೆ ವಿಚಾರಣೆ ಮುಂದೂಡಿಕೆ

Farmers ಪಾತಾಳಕ್ಕಿಳಿದ ಶುಂಠಿ ಬೆಲೆ; ಬೆಳೆಗಾರ ಕಂಗಾಲು

Farmers ಪಾತಾಳಕ್ಕಿಳಿದ ಶುಂಠಿ ಬೆಲೆ; ಬೆಳೆಗಾರ ಕಂಗಾಲು

ಕೊನೆಗೂ 3 ವಿಧೇಯಕಕ್ಕೆ ಗವರ್ನರ ಅಸ್ತು

Bengaluru: ಕೊನೆಗೂ 3 ವಿಧೇಯಕಕ್ಕೆ ಗವರ್ನರ ಅಸ್ತು

Kharge 2

CM ಹುದ್ದೆ ವಿಚಾರದಲ್ಲಿ ಸಚಿವರಿಂದಲೇ ಗೊಂದಲ: ಖರ್ಗೆಗೆ ಪತ್ರ ಬರೆದ ಪರಿಷತ್ ಸದಸ್ಯರು

Kharge (2)

Mallikarjun Kharge ಕಿಡಿ: ಮಣಿಪುರ ವಿಚಾರದಲ್ಲಿ ಮೋದಿಯ ಹೀನಾಯ ವೈಫಲ್ಯ ಅಕ್ಷಮ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BC Road ಕಾರು ಅಪಘಾತವಾದ ಸ್ಥಳ ಪರಿಶೀಲಿಸಿದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ

BC Road ಕಾರು ಅಪಘಾತವಾದ ಸ್ಥಳ ಪರಿಶೀಲಿಸಿದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ

Letter to the mosque not to serve food and drink in Bolantur Ganeshotsava procession

Bolanthuru: ಗಣೇಶೋತ್ಸವ ಮೆರವಣಿಗೆಯಲ್ಲಿ ತಿಂಡಿ- ಪಾನೀಯ ನೀಡದಂತೆ ಮಸೀದಿಗೆ ಪತ್ರ

Puttur ಅತ್ಯಾಚಾರ ಆರೋಪ; ಮಾನವ ಹಕ್ಕುಗಳ ಆಯೋಗಕ್ಕೂ ದೂರು

Puttur ಅತ್ಯಾಚಾರ ಆರೋಪ; ಮಾನವ ಹಕ್ಕುಗಳ ಆಯೋಗಕ್ಕೂ ದೂರು

Heavy Rain: ಸುಬ್ರಹ್ಮಣ್ಯದಲ್ಲಿ ಹೆದ್ದಾರಿ ಜಲಾವೃತ

Heavy Rain: ಸುಬ್ರಹ್ಮಣ್ಯದಲ್ಲಿ ಹೆದ್ದಾರಿ ಜಲಾವೃತ

Aranthodu ರಿಕ್ಷಾ ಢಿಕ್ಕಿ: ಸ್ಕೂಟಿ ಸವಾರ ಸಾವು

Aranthodu ರಿಕ್ಷಾ ಢಿಕ್ಕಿ: ಸ್ಕೂಟಿ ಸವಾರ ಸಾವು

MUST WATCH

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

udayavani youtube

ತಮ್ಮ ಮಕ್ಕಳನ್ನು ಬೆಳೆಸುವ ಸಲುವಾಗಿ ಕಂಡೋರ ಮಕ್ಕಳ ಭವಿಷ್ಯ ನಾಶ. ಈ ವ್ಯವಸ್ಥೆಗೆ ನಾನೂ ಬಲಿ

ಹೊಸ ಸೇರ್ಪಡೆ

BC Road ಕಾರು ಅಪಘಾತವಾದ ಸ್ಥಳ ಪರಿಶೀಲಿಸಿದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ

BC Road ಕಾರು ಅಪಘಾತವಾದ ಸ್ಥಳ ಪರಿಶೀಲಿಸಿದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ

Udupi ಶಿಕ್ಷಕರನ್ನು ಅವಮಾನಿಸಿದರೆ ಸಹಿಸಲು ಸಾಧ್ಯವಿಲ್ಲ: ಯಶ್‌ಪಾಲ್‌ ಸುವರ್ಣ

Udupi ಶಿಕ್ಷಕರನ್ನು ಅವಮಾನಿಸಿದರೆ ಸಹಿಸಲು ಸಾಧ್ಯವಿಲ್ಲ: ಯಶ್‌ಪಾಲ್‌ ಸುವರ್ಣ

1-ak

AAP; ಹಣಕಾಸು ಅಕ್ರಮ: ಆಪ್‌ ಶಾಸಕ ಖಾನ್‌ಗೆ ನ್ಯಾಯಾಂಗ ಬಂಧನ

Kasaragod: ನೇಣು ಬಿಗಿದು ವಿದ್ಯಾರ್ಥಿ ಆತ್ಮಹತ್ಯೆ

Kasaragod: ನೇಣು ಬಿಗಿದು ವಿದ್ಯಾರ್ಥಿ ಆತ್ಮಹತ್ಯೆ

1-tennis

US Open;ಅಮೆರಿಕದ ಟೇಲರ್‌ ಫ್ರಿಟ್ಜ್ ಗೆ ಸೋಲು:ಸಿನ್ನರ್‌ ಯುಎಸ್‌ ಚಾಂಪಿಯನ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.