Bantwal: ಈ ಮನೆಯಲ್ಲಿವೆ ಸಾವಿರಾರು ಗೊಂಬೆಗಳು!

ಬಿ.ಸಿ.ರೋಡಿನಲ್ಲಿ ಮೈಸೂರಿನ ಕುಟುಂಬದಿಂದ ನವರಾತ್ರಿ ಗೊಂಬೆಗಳ ಆರಾಧನೆ; ದಸರಾ ಮೆರವಣಿಗೆ, ಹೆಣ್ಣಿನ ಜೀವನ, ದೇವರ ಪೂಜೆ ಥೀಮ್‌ನಲ್ಲಿ ಜೋಡಣೆ

Team Udayavani, Oct 9, 2024, 12:49 PM IST

1(1)

ಮೈಸೂರು ದಸರಾ ಮೆರವಣಿಗೆ ನೆನಪಿಸುವ ಚಿತ್ರಣ.

ಬಂಟ್ವಾಳ: ಈ ಮನೆಯ ಹಾಲ್‌ನಲ್ಲಿ ಸಾವಿರಾರು ಗೊಂಬೆಗಳು ಕುಳಿತು ಕಥೆ ಹೇಳುತ್ತಿವೆ. ಒಂದಷ್ಟು ಗೊಂಬೆಗಳು ದಸರಾ ಮೆರವಣಿಗೆಯ ವೈಭವ ಸಾರಿದರೆ, ಇನ್ನೊಂದಷ್ಟು ದೇವರ ಪೂಜೆಯನ್ನು ವಿವರಿಸುತ್ತವೆ. ಇನ್ನು ಕೆಲವು ಹೆಣ್ಣಿನ ಜೀವನದ ಚಿತ್ರಣ ನೀಡುತ್ತಿವೆ. ಪ್ರತಿಯೊಂದು ಗೊಂಬೆಯ ಹಿಂದೆಯೂ ಒಂದೊಂದು ಕತೆ ಇದ್ದು ಕೇಳಲೂ ರೋಮಾಂಚಕವಾಗಿದೆ.

ಹೀಗೆ ನವರಾತ್ರಿ ಹೊತ್ತಿನಲ್ಲಿ ಮೂರು ಥೀಮ್‌ನ ಕಥೆಗಳನ್ನು ಹೇಳುವ ಗೊಂಬೆಗಳು ಕಂಡುಬಂದಿದ್ದು ಬಿ.ಸಿ.ರೋಡಿನ ಬಸ್‌ ನಿಲ್ದಾಣದ ಹಿಂಭಾಗದ ಅಪಾರ್ಟ್‌ಮೆಂಟ್‌ನಲ್ಲಿ ವಾಸ್ತವ್ಯವಿರುವ ಮೈಸೂರು ಮೂಲದ ಕುಟುಂಬವೊಂದರ ಮನೆಯಲ್ಲಿ. ಮೈಸೂರು, ಹಾಸನ, ಬೆಂಗಳೂರು ಭಾಗದಲ್ಲಿ ಸಾಮಾನ್ಯವಾಗಿರುವ ಗೊಂಬೆಗಳ ಪೂಜೆ ಇತ್ತೀಚೆಗೆ ಕರಾವಳಿಯಲ್ಲೂ ಅಲ್ಲಲ್ಲಿ ಕಂಡುಬರುತ್ತಿದೆ.

ರಾ. ಹೆದ್ದಾರಿ ಕಾಮಗಾರಿ ನಡೆಸುತ್ತಿರುವ ಕನ್‌ಸ್ಟ್ರಕ್ಷನ್‌ ಕಂಪನಿಯೊಂದರಲ್ಲಿ ಪಿಆರ್‌ಒ ಆಗಿರುವ ನಂದಕುಮಾರ್‌, ಅವರ ಪತ್ನಿ ಪುಷ್ಪಾ ನಂದಕುಮಾರ್‌ ಮತ್ತು ಪುತ್ರಿ ಈ ಗೊಂಬೆಗಳನ್ನು ಇಟ್ಟಿದ್ದಾರೆ.

ತವರು ಮನೆಯ ಪಟ್ಟದ ಬೊಂಬೆ
ಅವರು ಹೇಳುವ ಪ್ರಕಾರ ಆ ಭಾಗದಲ್ಲಿ ಹೆಣ್ಣು ಮದುವೆಯಾಗಿ ಗಂಡನ ಮನೆಗೆ ಹೋಗುವಾಗ ತವರು ಮನೆಯಿಂದ ಮರದಿಂದ ತಯಾರಿಸಿದ ಪಟ್ಟದ ಗೊಂಬೆ ನೀಡುತ್ತಾರೆ. ಪಟ್ಟದ ಗೊಂಬೆಗಳಿರುವ ಪ್ರತಿ ಮನೆಯಲ್ಲೂ ನವರಾತ್ರಿ ಸಂದರ್ಭ ನಿತ್ಯ ಪೂಜೆ ಮಾಡಲೇಬೇಕು. ಹೆಚ್ಚಿನ ಗೊಂಬೆಗಳಿಲ್ಲದಿದ್ದರೂ ಪಟ್ಟದ ಗೊಂಬೆಗಾದರೂ ಪೂಜೆ ನಡೆಸಲೇಬೇಕು.

ಪ್ರಸ್ತುತ ನಾವು ಕರಾವಳಿ ಭಾಗದಲ್ಲಿರುವ ಕಾರಣದಿಂದ ಇಲ್ಲಿನ ಸಂಸ್ಕೃತಿಯನ್ನು ಪರಿಚಯಿಸುವ ಗೊಂಬೆಗಳನ್ನು ಖರೀದಿಸಿ ಜೋಡಿಸಬೇಕು ಎಂಬ ಆಸೆ ಇತ್ತು. ಹುಲಿವೇಷ, ಯಕ್ಷಗಾನವನ್ನು ಸಾರುವ ಗೊಂಬೆಗಳು ಸಿಕ್ಕರೆ ಖರೀದಿಸಿ ಮುಂದೆ ನಾವು ಬೇರೆ ಊರುಗಳಿಗೆ ಹೋದಾಗ ಅದನ್ನು ಪರಿಚಯಿಸಬೇಕು ಎಂದು ಸಾಕಷ್ಟು ಹುಡುಕಾಟ ನಡೆಸಿದ್ದು, ಆದರೆ ನಮಗೆ ಎಲ್ಲಿಯೂ ಸಿಕ್ಕಿಲ್ಲ ಎನ್ನುತ್ತದೆ ನಂದಕುಮಾರ್‌ ಕುಟುಂಬ.

ಸಂಪ್ರದಾಯ ಪರಿಚಯಿಸುವ ಕಾರ್ಯ
ಪಟ್ಟದ ಗೊಂಬೆಗಳಿರುವ ಪ್ರತಿ ಮನೆಯಲ್ಲೂ ಪೂಜೆ ಕಡ್ಡಾಯ. ದೂರದ ಪ್ರದೇಶಗಳಿಗೆ ಹೋದಾಗ ಅಲ್ಲಿನ ಗೊಂಬೆಗಳನ್ನು ಖರೀದಿಸುತ್ತೇವೆ. ತಮಿಳುನಾಡಿಗೆ ಹೋದಾಗ ಅಲ್ಲಿನ ಕೃಷ್ಣಗಿರಿಯಲ್ಲಿ ಒಂದಷ್ಟು ಗೊಂಬೆಗಳು ಸಿಕ್ಕಿದವು. ನಮ್ಮ ಸಂಪ್ರದಾಯವನ್ನು ಕರಾವಳಿ ಭಾಗಕ್ಕೂ ಪರಿಚಯಿಸುವ ಪ್ರಯತ್ನ ಮಾಡಿದ್ದೇವೆ.
-ಪುಷ್ಪಾ ನಂದಕುಮಾರ್‌

ಬೊಂಬೆಗಳ ಜೋಡಣೆಯೊಂದಿಗೆ ನಂದಕುಮಾರ್‌ ಕುಟುಂಬ.

ಮೂರು ಥೀಮ್‌ಗಳು ಏನು?
ದೇವರ ಪೂಜೆಯ ಚಿತ್ರಣ: ಪಟ್ಟದ ಗೊಂಬೆ, ಕಲಶ ಪೂಜೆಯ ಜತೆಗೆ ಒಟ್ಟು ದೇವರ ಪೂಜಾ ಸಂಪ್ರದಾಯ ವಿವರಿಸುವ ರೀತಿಯಲ್ಲಿ ಗೊಂಬೆಗಳನ್ನು ಜೋಡಿಸಲಾಗಿದೆ. ರಾಧಾಕೃಷ್ಣ, ಗಣಪತಿ, ನವದುರ್ಗೆಯರು, ರಾಮ, ಸೀತೆ, ಲಕ್ಷ್ಮಣ, ಆಂಜನೇಯ, ಕೃಷ್ಣ ಭೋಜನ, ಗೋಪಿಕಾ ಸ್ತ್ರೀಯರು, ದಶಾವತಾರ, ಅಷ್ಟ ಲಕ್ಷ್ಮೀಯರು, ಸಪ್ತ ಮಾತೃಕೆಯರು, ನೃತ್ಯ, ಸಂಗೀತ ಸಾರುವ ಚಿತ್ರಣವಿದೆ. ವಿಶೇಷವಾಗಿ ತಮಿಳುನಾಡಿನ ನವನಾಚಿಯಾರ್‌ ಬೊಂಬೆಗಳ ಆರಾಧನೆಯೂ ಇದೆ.

ಮೈಸೂರು ದಸರಾ ಮೆರವಣಿಗೆ: ಪ್ರತ್ಯೇಕ ಅಂಬಾರಿಯಲ್ಲಿ ಚಾಮುಂಡಿ ತಾಯಿ ಹಾಗೂ ಮಹಾರಾಜರು ಕುಳಿತಿರುವುದು, ಸಾಲಾಗಿ ಸಾಗುವ ಸಿಪಾಯಿಗಳು, ಮಾವುತರು, ಆನೆ, ಕುದುರೆ, ಒಂಟೆ ಸಾಲು ಇಲ್ಲಿದೆ.

ಹೆಣ್ಣಿನ ಜೀವನ ಚಕ್ರ: ಹೆಣ್ಣು ಮಗುವಿನ ಜೀವನ ಚಕ್ರ ಬೊಂಬೆಗಳ ಮೂಲಕ ತೆರೆದುಕೊಂಡಿದೆ. ಮದುವೆ ನಿಶ್ಚಿತಾರ್ಥ, ಬಳೆ ತೊಡಿಸುವ ಸಂಪ್ರದಾಯ, ಮೆಹಂದಿ-ಅರಶಿನ ಶಾಸ್ತ್ರ, ಮದುವೆ-ಸಪ್ತಪದಿ, ಔತಣ ಕೂಟ, ಹೆಣ್ಣಿನ ಬೀಳ್ಕೊಡುಗೆ, ಸೀಮಂತ, ಮಗುವಿನ ನಾಮಕರಣ, ಮದುವೆ ಊಟ, ಸೀಮಂತದ ತಿಂಡಿಗಳು ಗೊಂಬೆಗಳ ಮೂಲಕ ತೆರೆದುಕೊಂಡಿದೆ.

-ಕಿರಣ್‌ ಸರಪಾಡಿ

ಟಾಪ್ ನ್ಯೂಸ್

arrest-lady

Hubli; ವ್ಯಾಪಾರಿಯ ಬೆತ್ತ*ಲೆ ವಿಡಿಯೋ: ಮಹಿಳೆ ಸೇರಿ ಐವರ ಬಂಧನ

Nayanthara: ನಯನತಾರ ಮಕ್ಕಳ ದಾದಿಯರಿಗೂ ನಾವೇ ಸಂಬಳ ಕೊಡಬೇಕಾ..? ಖ್ಯಾತ ನಿರ್ಮಾಪಕ ಗರಂ

Nayanthara: ನಯನತಾರ ಮಕ್ಕಳ ದಾದಿಯರಿಗೂ ನಾವೇ ಸಂಬಳ ಕೊಡಬೇಕಾ..? ಖ್ಯಾತ ನಿರ್ಮಾಪಕ ಗರಂ

Kerala Cinema: ಮಲಯಾಳಂ ಖ್ಯಾತ ನಟ ಟಿಪಿ ಮಾಧವನ್‌ ವಿಧಿವಶ; ಗಣ್ಯರ ಸಂತಾಪ

Kerala Cinema: ಮಲಯಾಳಂ ಖ್ಯಾತ ನಟ ಟಿಪಿ ಮಾಧವನ್‌ ವಿಧಿವಶ; ಗಣ್ಯರ ಸಂತಾಪ

6-sathish

Chikkamagaluru: ವಿರೋಧ ಪಕ್ಷದವರು ಹೇಳಿದ ತಕ್ಷಣ ಸರ್ಕಾರ ಬೀಳುವುದಿಲ್ಲ: ಸತೀಶ್ ಜಾರಕಿಹೊಳಿ

Jammu-Kashmir: ಇಬ್ಬರು ಸೇನಾ ಯೋಧರ ಅಪಹರಣ-ಓರ್ವ ಯೋಧನ ಮೃತದೇಹ ಪತ್ತೆ

Jammu-Kashmir: ಇಬ್ಬರು ಸೇನಾ ಯೋಧರ ಅಪಹರಣ-ಓರ್ವ ಯೋಧನ ಮೃತದೇಹ ಪತ್ತೆ

Na

Haryana: ಸೈನಿ ಪ್ರಮಾಣವಚನಕ್ಕೆ ಬಿಜೆಪಿ ಸಿದ್ಧತೆ: ದೆಹಲಿಯಲ್ಲಿ ಉನ್ನತ ಮಟ್ಟದ ಸಭೆ

Repo Rate: ಸತತ 10ನೇ ಬಾರಿಯೂ ರೆಪೋ ದರ ಯಥಾಸ್ಥಿತಿ: RBI ಗವರ್ನರ್‌ ಶಕ್ತಿಕಾಂತ್‌ ದಾಸ್

Repo Rate: ಸತತ 10ನೇ ಬಾರಿಯೂ ರೆಪೋ ದರ ಯಥಾಸ್ಥಿತಿ: RBI ಗವರ್ನರ್‌ ಶಕ್ತಿಕಾಂತ್‌ ದಾಸ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

6

Kota: ಹೂವಿನ ಕೋಲಿಗೆ ಮಕ್ಕಳ ರಾಯಭಾರ!

2

Sullia ತಾಲೂಕು ಆಸ್ಪತ್ರೆ: ಡಯಾಲಿಸಿಸ್‌ ಯಂತ್ರಗಳ ಹೆಚ್ಚಳ

Dasara: ಅತಿಥಿ ಶಿಕ್ಷಕರಿಗಿಲ್ಲ ಸಂಭ್ರಮ; “ನಿಧಿ’ ಬಿಡುಗಡೆಯಾಗಿದ್ದರೂ ಸಿಗದ ಸಂಬಳ

Dasara: ಅತಿಥಿ ಶಿಕ್ಷಕರಿಗಿಲ್ಲ ಸಂಭ್ರಮ; “ನಿಧಿ’ ಬಿಡುಗಡೆಯಾಗಿದ್ದರೂ ಸಿಗದ ಸಂಬಳ

Kukke Shri Subrahmanya Temple: ಅನ್ನ ಪ್ರಸಾದಕ್ಕೆ ವೈವಿಧ್ಯಮಯ ಪಾಯಸ

Kukke Shri Subrahmanya Temple: ಅನ್ನ ಪ್ರಸಾದಕ್ಕೆ ವೈವಿಧ್ಯಮಯ ಪಾಯಸ

Subrahmanya: ಕುಮಾರ ಪರ್ವತ ಚಾರಣ ಆರಂಭಿಸಿದ ಚಾರಣಿಗರು

Subrahmanya: ಕುಮಾರ ಪರ್ವತ ಚಾರಣ ಆರಂಭಿಸಿದ ಚಾರಣಿಗರು

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

6

Kota: ಹೂವಿನ ಕೋಲಿಗೆ ಮಕ್ಕಳ ರಾಯಭಾರ!

arrest-lady

Hubli; ವ್ಯಾಪಾರಿಯ ಬೆತ್ತ*ಲೆ ವಿಡಿಯೋ: ಮಹಿಳೆ ಸೇರಿ ಐವರ ಬಂಧನ

Nayanthara: ನಯನತಾರ ಮಕ್ಕಳ ದಾದಿಯರಿಗೂ ನಾವೇ ಸಂಬಳ ಕೊಡಬೇಕಾ..? ಖ್ಯಾತ ನಿರ್ಮಾಪಕ ಗರಂ

Nayanthara: ನಯನತಾರ ಮಕ್ಕಳ ದಾದಿಯರಿಗೂ ನಾವೇ ಸಂಬಳ ಕೊಡಬೇಕಾ..? ಖ್ಯಾತ ನಿರ್ಮಾಪಕ ಗರಂ

Kerala Cinema: ಮಲಯಾಳಂ ಖ್ಯಾತ ನಟ ಟಿಪಿ ಮಾಧವನ್‌ ವಿಧಿವಶ; ಗಣ್ಯರ ಸಂತಾಪ

Kerala Cinema: ಮಲಯಾಳಂ ಖ್ಯಾತ ನಟ ಟಿಪಿ ಮಾಧವನ್‌ ವಿಧಿವಶ; ಗಣ್ಯರ ಸಂತಾಪ

5

Mangaluru: ಈ ಮೇಸ್ಟ್ರು ಹುಲಿ ತಂಡಗಳ ತಾಯಿ ಹುಲಿ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.