![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Mar 9, 2023, 5:03 AM IST
ಬಂಟ್ವಾಳ: ಮನೆಮಂದಿ ಕೆಲಸಕ್ಕೆ ಹೋಗಿದ್ದ ಸಂದರ್ಭದಲ್ಲಿ ಮನೆಯ ಪಕ್ಕದಲ್ಲೇ ಇರಿಸಿದ್ದ ಬೀಗದ ಕೀ ತೆರೆದು ಸುಮಾರು 3.11 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ಕಳವು ನಡೆಸಿದ ಘಟನೆ ಮಾ. 7ರಂದು ಇರಾದಲ್ಲಿ ನಡೆದಿದೆ.
ಘಟನೆಯ ಕುರಿತು ಮನೆಯ ಮಾಲಕಿ ರೋಹಿಣಿ ಅವರು ದೂರು ನೀಡಿದ್ದು, ಅವರು ಗಂಡನ ಜತೆ ಕೆಲಸಕ್ಕೆ ಹೋಗಿದ್ದ ಸಂದರ್ಭ ಮನೆಯ ಬೀಗ ಹಾಕಿ ಕೀಯನ್ನು ಬಚ್ಚಲು ಮನೆಯಲ್ಲಿ ಇರಿಸಿ ತೆರಳಿದ್ದರು. ಸಂಜೆ ಬಂದು ನೋಡಿದಾಗ ಮನೆಯ ಬೀಗ ತೆರೆದಿದ್ದು, ಒಳಗೆ ಹೋಗಿ ನೋಡಿದಾಗ ಕಳವು ನಡೆದಿರುವುದು ಬೆಳಕಿಗೆ ಬಂದಿದೆ.
ಮನೆಯ ಕೋಣೆಯ ಕಪಾಟಿನಲ್ಲಿ ಇಟ್ಟಿದ್ದ 10 ಗ್ರಾಂ. ಮೌಲ್ಯದ ಕಿವಿಯ ಬೆಂಡೋಳೆ, 8 ಗ್ರಾಂ.ಮೌಲ್ಯದ 3 ಉಂಗುರಗಳು, 20 ಗ್ರಾಂ. ತೂಕದ ಹವಳದ ಸರ, 35 ಗ್ರಾಂ. ತೂಕದ ಕರಿಮಣಿ ಸರ, ಕೈಬಳೆ ಸೇರಿ 93 ಗ್ರಾಂ. ಮೌಲ್ಯದ ಚಿನ್ನಾಭರಣ ಕಳವು ಮಾಡಲಾಗಿದೆ.
ಪ್ರತೀದಿನ ಅದೇ ರೀತಿ ಅವರು ಕೀ ಇರಿಸಿ ಹೋಗುತ್ತಿದ್ದು, ಹೀಗಾಗಿ ಅದರ ಮಾಹಿತಿ ತಿಳಿದವರೇ ಈ ಕೃತ್ಯ ಎಸಗಿರುವ ಕುರಿತು ಸಂಶಯಿಸಲಾಗಿದೆ. ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
You seem to have an Ad Blocker on.
To continue reading, please turn it off or whitelist Udayavani.