![Mann Ki Baat ಕಬ್ಬನ್ ಪಾರ್ಕ್ನಲ್ಲಿ ಸಂಸ್ಕೃತ ಕಲರವ: ಮೋದಿ ಮೆಚ್ಚುಗೆ](https://www.udayavani.com/wp-content/uploads/2024/07/mann-415x271.jpg)
Bantwal: ತಲೆಮರೆಸಿಕೊಂಡಿದ್ದ ಆರೋಪಿ ಸೆರೆ
Team Udayavani, Jun 29, 2024, 12:06 AM IST
![Bantwal: ತಲೆಮರೆಸಿಕೊಂಡಿದ್ದ ಆರೋಪಿ ಸೆರೆ](https://www.udayavani.com/wp-content/uploads/2024/06/BANTWAL-4-620x363.jpg)
ಬಂಟ್ವಾಳ: ಬಂಟ್ವಾಳದ ಜುವೆಲರಿ ಶಾಪ್ವೊಂದರ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಮಾರು 12 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಟ್ವಾಳ ಪೊಲೀಸರು ಮಧ್ಯಪ್ರದೇಶದಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮಧ್ಯಪ್ರದೇಶದ ಧಾರ್ ಜಿಲ್ಲೆಯ ಕುಕ್ಷಿ ಮಹಾಕಾಳಿಪುರ ನಿವಾಸಿ ಅಮರ್ ಸಿಂಗ್ ಯಾನೆ ಅಮ್ಜತ್ ಸಿಂಗ್ ಬಂಧಿತ ಆರೋಪಿ. ಆತನನ್ನು ಶುಕ್ರವಾರ ಬಂಟ್ವಾಳ ನಗರ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
2012ರಲ್ಲಿ ನಡೆದ ಜುವೆಲರಿ ಶಾಪ್ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿ ಬಳಿಕ ನ್ಯಾಯಾಲಯಕ್ಕೆ ಹಾಜರಾಗಿರಲಿಲ್ಲ.
ಆತ ಮಧ್ಯಪ್ರದೇಶದ ಧಾರ್ನಲ್ಲಿರುವ ಕುರಿತು ಮಾಹಿತಿ ಪಡೆದ ಬಂಟ್ವಾಳ ನಗರ ಪೊಲೀಸ್ ಠಾಣೆಯ ಹೆಡ್ಕಾನ್ಸ್ಟೆಬಲ್ ಗಣೇಶ್ ಎನ್. ಹಾಗೂ ಕಾನ್ಸ್ ಟೆಬಲ್ ಮಂಜುನಾಥ್ ಅವರು ಅಲ್ಲಿಗೆ ತೆರಳಿ ದಸ್ತಗಿರಿ ಮಾಡಿದ್ದಾರೆ.
ಟಾಪ್ ನ್ಯೂಸ್
![Mann Ki Baat ಕಬ್ಬನ್ ಪಾರ್ಕ್ನಲ್ಲಿ ಸಂಸ್ಕೃತ ಕಲರವ: ಮೋದಿ ಮೆಚ್ಚುಗೆ](https://www.udayavani.com/wp-content/uploads/2024/07/mann-415x271.jpg)
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.