![2](https://www.udayavani.com/wp-content/uploads/2024/06/2-21-415x249.jpg)
BC Road: ಏಕಾಂಗಿಯಾಗಿ ವಾಸವಿದ್ದ ವ್ಯಕ್ತಿಯ ಮೃತದೇಹ ಪತ್ತೆ
Team Udayavani, Jun 11, 2024, 9:15 PM IST
![9-](https://www.udayavani.com/wp-content/uploads/2024/06/9--620x372.jpg)
ಬಂಟ್ವಾಳ: ಬಿ.ಸಿ.ರೋಡಿನ ಅಜ್ಜಿಬೆಟ್ಟುನಲ್ಲಿ ಏಕಾಂಗಿಯಾಗಿ ವಾಸವಿದ್ದ ವ್ಯಕ್ತಿಯೊಬ್ಬರ ಮೃತದೇಹ ಅವರ ಮನೆಯ ಬಚ್ಚಲು ಮನೆಯಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಸ್ನಾನಕ್ಕೆ ಹೋಗಿದ್ದ ಸಂದರ್ಭದಲ್ಲಿ ಕುಸಿದು ಬಿದ್ದಿರುವ ಸಾಧ್ಯತೆಯ ಕುರಿತು ಶಂಕಿಸಲಾಗಿದೆ.
ಅಜ್ಜಿಬೆಟ್ಟು ನಿವಾಸಿ ದಿ| ಈಶ್ವರ ಕರಂಬೇರ ಅವರ ಪುತ್ರ ಬಿ.ಕುಮಾರ್(62) ಮೃತಪಟ್ಟವರು.
ಅವರು ಅಜ್ಜಿಬೆಟ್ಟುನಲ್ಲಿರುವ ತಮ್ಮ ನಿವಾಸದಲ್ಲಿ ಏಕಾಂಗಿಯಾಗಿ ವಾಸವಿದ್ದು, ಕಳೆದೆರಡು ದಿನಗಳಲ್ಲಿ ಯಾರಿಗೂ ಕಾಣಿಸಿಕೊಂಡಿರಲಿಲ್ಲ. ಜೂ. 10ರ ರಾತ್ರಿ ಸ್ಥಳೀಯರಿಗೆ ಅವರ ಮನೆಯೊಳಗಿಂದ ದುರ್ವಾಸನೆ ಬರುತ್ತಿದ್ದು, ಸಂಶಯಗೊಂಡು ಪೊಲೀಸರಿಗೆ ಮಾಹಿತಿ ನೀಡಲಾಗಿದೆ.
ಬಳಿಕ ಪೊಲೀಸರು ಆಗಮಿಸಿ ಮನೆಯ ಬಾಗಿಲು ಮುರಿದು ಒಳಪ್ರವೇಶಿಸಿದಾಗ ಬಚ್ಚಲು ಮನೆಯಲ್ಲಿ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಬಂಟ್ವಾಳ ಸರಕಾರಿ ಆಸ್ಪತ್ರೆಯಲ್ಲಿ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
![2](https://www.udayavani.com/wp-content/uploads/2024/06/2-21-415x249.jpg)
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.