Bellare: ಗುಣಮಟ್ಟದ ರಸ್ತೆಗಾಗಿ ಠಿಕಾಣಿ ಹೂಡಿದ ಕೃಷಿಕ

ಬೆಳ್ಳಾರೆ ಸಮೀಪದ ಊರ ರಸ್ತೆಯ ಕಾಮಗಾರಿಗೆ ಫಲಾನುಭವಿ ಕಾವಲುಗಾರ

Team Udayavani, Sep 13, 2024, 1:15 PM IST

Bellare: ಗುಣಮಟ್ಟದ ರಸ್ತೆಗಾಗಿ ಠಿಕಾಣಿ ಹೂಡಿದ ಕೃಷಿಕ

ಪುತ್ತೂರು: ಸುಮಾರು ಹತ್ತು ವರ್ಷಗಳಿಂದ ತೀರಾ ಹದಗೆಟ್ಟಿದ್ದ ಸಾರ್ವಜನಿಕ ರಸ್ತೆಯೊಂದಕ್ಕೆ ಹೊಸದಾಗಿ ಕಾಂಕ್ರೀಟ್‌ ಕಾಮಗಾರಿ ನಡೆಯುತ್ತಿದ್ದು ಗುಣಮಟ್ಟದ ಮೇಲೆ ನಿಗಾ ಇಡಲು ಕೃಷಿಕ ನೋರ್ವ ದಿನ ನಿತ್ಯ ಕಾವಲು ಕಾಯುತ್ತಿರುವ ಅಪರೂಪದ ಪ್ರಸಂಗ ಇದು.

ಸುಳ್ಯ ತಾಲೂಕಿನ ಬೆಳ್ಳಾರೆ ಕೇಂದ್ರ ಬಸ್‌ ನಿಲ್ದಾಣದ ಬಳಿಯಿಂದ ಕವಲೊಡೆದು ತಡಗಜೆ ಮೂಲಕ ಕೊಡಿಯಾಲ ಗ್ರಾಮಕ್ಕೆ ಸಂಪರ್ಕ ಬೆಸೆಯುವ ಲೋಕೋಪಯೋಗಿ ಇಲಾಖಾ ವ್ಯಾಪ್ತಿಯ ರಸ್ತೆ ಇದು. ದಿನಂಪ್ರತಿ ನೂರಾರು ಮಂದಿ ಈ ರಸ್ತೆಯನ್ನು ಅವಲಂಬಿಸಿದ್ದರೂ, ಪಟ್ಟಣಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆ ಇದಾಗಿದ್ದರೂ ಕಳೆದ ಕೆಲ ವರ್ಷಗಳಿಂದ ತೀರಾ ಹದಗೆಟ್ಟು ಸಂಚಾರಕ್ಕೆ ಅಸಾಧ್ಯ ಎನ್ನುವ ಸ್ಥಿತಿಗೆ ತಲುಪಿತ್ತು. ಸ್ಥಳೀಯರ ನಿರಂತರ ಒತ್ತಡದಿಂದ ಕೆಲವು ತಿಂಗಳ ಹಿಂದೆ ಅನುದಾನ ಬಿಡುಗಡೆಗೊಂತ್ತು.

ಕಾಮಗಾರಿಗೆ ಕಾವಲುಗಾರ
ಹತ್ತು ದಿನಗಳ ಹಿಂದೆ ಬೆಳ್ಳಾರೆ ಜಂಕ್ಷನ್‌ನಿಂದ 230 ಮೀಟರ್‌ ದೂರದ ತನಕ ಸುಮಾರು 16 ಲಕ್ಷ ರೂ. ವೆಚ್ಚದಲ್ಲಿ ಕಾಂಕ್ರೀಟ್‌ ಕಾಮಗಾರಿ ಪ್ರಾರಂಭಗೊಂಡಿತ್ತು. ಕಾಮಗಾರಿ ಗುಣಮಟ್ಟ ಪರಿಶೀಲನೆಗೆ ರಸ್ತೆ ಫಲಾನುಭವಿಯಾಗಿರುವ ಕೃಷಿಕ ದಿಲೀಪ್‌ ಗಟ್ಟಿಗಾರು ನಿರ್ಧರಿಸಿದರು. ಸ್ವ ಇಚ್ಛೆಯಿಂದ, ಉಚಿತವಾಗಿ ಕಳೆದ ಹತ್ತು ದಿನಗಳಿಂದ ಕಾಮಗಾರಿಯ ಪ್ರತೀ ಕ್ಷಣವನ್ನೂ ವೀಕ್ಷಿಸುತ್ತಾ ಗುಣಮಟ್ಟದ ಬಗ್ಗೆ ಗುತ್ತಿಗೆದಾರ, ಎಂಜಿನಿಯರ್‌ ಅವರಿಂದ ಮಾಹಿತಿ ಪಡೆಯುತ್ತಿದ್ದಾರೆ. ಅನುಮಾನ ಬಂದಲ್ಲಿ ಕಾರ್ಮಿಕರ ಬಳಿ ವಿಚಾರಿಸಿ ಮಾಹಿತಿ ಪಡೆಯುತ್ತಾರೆ. ಈ ಕೆಲಸಕ್ಕಾಗಿ ಇಡೀ ದಿನವನ್ನು ಮೀಸಲಿಟ್ಟಿದ್ದಾರೆ.

ನನ್ನೂರಿನ ರಸ್ತೆಯ ಕಾಮಗಾರಿ ನಡೆಯುತ್ತಿದ್ದು ಇದರ ಮೇಲೆ ನಿತ್ಯವೂ ನಿಗಾ ಇರಿಸಿದ್ದೇನೆ. ಗುಣಮಟ್ಟದಲ್ಲಿ ರಾಜೀ ಮಾಡದೆ ಕಾಮಗಾರಿ ಮಾಡಬೇಕು ಅನ್ನುವುದೇ ನನ್ನ ಉದ್ದೇಶ. ಸಮರ್ಪಕ ರೀತಿಯಲ್ಲಿ ಕೆಲಸ ನಡೆದಿದೆ. -ದಿಲೀಪ್‌, ಗಟ್ಟಿಗಾರು

ಕರೆ ಮಾಡಿ ವಿಚಾರಿಸುತ್ತಾರೆ
ಪ್ರತೀ ದಿನ ರಸ್ತೆ ಕಾರ್ಮಿಕರು ಬೆಳಗ್ಗೆ 9.30ಕ್ಕೆ ಸ್ಥಳಕ್ಕೆ ಬಂದರೆ, ದಿಲೀಪ್‌ ಗಟ್ಟಿಗಾರು 8.45 ಕ್ಕೆ ಹಾಜರಿರುತ್ತಾರೆ. ಕಾರ್ಮಿಕರಿಗೆ ಫೋನ್‌ ಮಾಡಿ ಅವರು ಬರುವುದನ್ನು ಖಾತರಿ ಮಾಡುತ್ತಾರೆ. ಅಲ್ಲಿಂದ ಕಾಮಗಾರಿ ಮುಗಿಯುವ ತನಕವೂ ಇರುತ್ತಾರೆ. ಜಲ್ಲಿ, ಸಿಮೆಂಟ್‌ ಮಿಕ್ಸಿಂಗ್‌ ಸರಿಯಾಗಿದೆಯೋ ಎಂದು ಪರಿಶೀಲಿಸುತ್ತಾರೆ. ರಸ್ತೆಯ ಎತ್ತರ, ಅಗಲಕ್ಕೆ ಸಮ ಪ್ರಮಾಣದಲ್ಲಿ ಜಲ್ಲಿ ಮಿಶ್ರಣ ಹಾಕಿರುವ ಬಗ್ಗೆಯು ಮಾಹಿತಿ ಪಡೆಯುತ್ತಾ ರಸ್ತೆ ಗುಣಮಟ್ಟದ ಬಗ್ಗೆ ಹದ್ದಿನ ಕಣ್ಣಿರಿಸಿದ್ದಾರೆ. ಅಂತಿಮ ಹಂತದ ಕಾಮಗಾರಿ ಪ್ರಗತಿಯಲ್ಲಿದ್ದು ಅದಾದ ಬಳಿಕದ ಪ್ರಕ್ರಿಯೆಗಳ ಬಗ್ಗೆಯು ನಿಗಾ ಇರಿಸಲು ದಿಲೀಪ್‌ ನಿರ್ಧರಿಸಿದ್ದಾರೆ.

ಪೈಪ್‌ ಅಳವಡಿಕೆ
ರಸ್ತೆ ಕಾಮಗಾರಿ ಆದ ಬಳಿಕ ಕುಡಿಯುವ ನೀರಿಗಾಗಿ, ಕೇಬಲ್‌ ಅಳವಡಿಕೆಗಾಗಿ ರಸ್ತೆಯನ್ನೇ ಅಗೆಯುವುದನ್ನು ಕಂಡಿದ್ದೇವೆ. ಇದರಿಂದ ರಸ್ತೆ ಹಾಳಾದ ನೂರಾರು ಉದಾಹರಣೆಗಳು ಇವೆ. ಈ ಬಗ್ಗೆ ಮೊದಲೇ ಎಚ್ಚೆತ್ತುಕೊಂಡಿರುವ ದಿಲೀಪ್‌ ಗುತ್ತಿಗೆದಾರರ ಗಮನಕ್ಕೆ ತಂದು ರಸ್ತೆಯ ಬದಿಗಳಲ್ಲಿ ಪೈಪ್‌ ಅಳವಡಿಸಿದ್ದಾರೆ. ಭವಿಷ್ಯದ ದಿನಗಳಲ್ಲಿ ನಳ್ಳಿ ನೀರಿನ ಸಂಪರ್ಕ ಪಡೆಯಲು ಬೇಕಾದ ಹಾಗೇ ಪೈಪ್‌ ಜೋಡಿಸಿದ್ದಾರೆ.

-ಕಿರಣ್‌ ಪ್ರಸಾದ್‌ ಕುಂಡಡ್ಕ

ಟಾಪ್ ನ್ಯೂಸ್

High Court: ಒಂದೇ ದಿನ 503 ಪ್ರಕರಣ ವಿಚಾರಣೆ ನಡೆಸಿದ ನ್ಯಾ| ನಾಗಪ್ರಸನ್ನ

High Court: ಒಂದೇ ದಿನ 503 ಪ್ರಕರಣ ವಿಚಾರಣೆ ನಡೆಸಿದ ನ್ಯಾ| ನಾಗಪ್ರಸನ್ನ

Cap-Brijesh-Chowta

MSEZ: ಜೆಬಿಎಫ್‌ಗೆ ಭೂಮಿ ಕೊಟ್ಟವರಿಗೆ ಜಿಎಂಪಿಎಲ್‌ನಲ್ಲಿ ಉದ್ಯೋಗ

ಬಿಜೆಪಿಗೆ ಇಡೀ ರಾಜ್ಯವೇ ಒಪ್ಪಿಕೊಳ್ಳುವಂಥ ಸರ್ವಸ್ಪರ್ಶಿ ನಾಯಕತ್ವ ಇನ್ನಷ್ಟೇ ಸಿಗಬೇಕಿದೆ

ಬಿಜೆಪಿಗೆ ಇಡೀ ರಾಜ್ಯವೇ ಒಪ್ಪಿಕೊಳ್ಳುವಂಥ ಸರ್ವಸ್ಪರ್ಶಿ ನಾಯಕತ್ವ ಇನ್ನಷ್ಟೇ ಸಿಗಬೇಕಿದೆ

BJP ಶಾಸಕ ಮುನಿರತ್ನ ಪರಪ್ಪನ ಜೈಲಿಗೆ: ಇಂದು ಜಾಮೀನು ಭವಿಷ್ಯ

BJP ಶಾಸಕ ಮುನಿರತ್ನ ಪರಪ್ಪನ ಜೈಲಿಗೆ: ಇಂದು ಜಾಮೀನು ಭವಿಷ್ಯ

Nitin Gadkari responded to complaints of excessive toll collection

ಕಂತಿನಲ್ಲಿ ಕೊಂಡ ಕಾರ್‌ ಬೆಲೆ ಹೆಚ್ಚುವಂತೆ ಟೋಲ್‌ ಸಹ ವೆಚ್ಚಕ್ಕಿಂತ ಹೆಚ್ಚಿರುತ್ತದೆ:ಗಡ್ಕರಿ

DOOMAKETHU

Space Wonder: ಸೆ.27 ಸೂರ್ಯ, ಅ.12ಕ್ಕೆ ಭೂಮಿಗೆ ಸಮೀಪಿಸುವ ಧೂಮಕೇತು

Modi3.0ರಲ್ಲೇ ಏಕ ಚುನಾವಣೆ: ಕೇಂದ್ರ ಸರಕಾರಕ್ಕೆ 100 ದಿನ ಹಿನ್ನೆಲೆಯಲ್ಲಿ ಅಮಿತ್‌ ಶಾ ಘೋಷಣೆ

Modi3.0ರಲ್ಲೇ ಏಕ ಚುನಾವಣೆ: ಕೇಂದ್ರ ಸರಕಾರಕ್ಕೆ 100 ದಿನ ಹಿನ್ನೆಲೆಯಲ್ಲಿ ಅಮಿತ್‌ ಶಾ ಘೋಷಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BC-Road

Audio Contraversy: ಶರಣ್‌ ಸಹಿತ ಮೂವರ ವಿರುದ್ಧ ಪ್ರಕರಣ ದಾಖಲು

Electrcity

Sulya: ಲೈನ್‌ ದುರಸ್ತಿ ವೇಳೆ ಕಾರ್ಮಿಕನಿಗೆ ವಿದ್ಯುತ್‌ ಆಘಾತ

guttigaru

Guttigaru: ಅಸೌಖ್ಯದಿಂದ ನಾಲ್ಕೂರು ಗ್ರಾಮದ ಯುವಕ ಸಾವು

Kayartadka: ಕಳೆ ಕೀಳುವಾಗ ಕಬ್ಬಿಣದ ರಿಂಗ್‌ ಎದೆಗೆ ಬಿದು ವ್ಯಕ್ತಿ ಸಾವು

Kayartadka: ಕಳೆ ಕೀಳುವಾಗ ಕಬ್ಬಿಣದ ರಿಂಗ್‌ ಎದೆಗೆ ಬಿದು ವ್ಯಕ್ತಿ ಸಾವು

Belthangady: ರಬ್ಬರ್‌ ಸ್ಮೋಕ್‌ ಹೌಸ್‌ಗೆ ಬೆಂಕಿ

Belthangady: ರಬ್ಬರ್‌ ಸ್ಮೋಕ್‌ ಹೌಸ್‌ಗೆ ಬೆಂಕಿ; ಲಕ್ಷಾಂತರ ನಷ್ಟ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

High Court: ಒಂದೇ ದಿನ 503 ಪ್ರಕರಣ ವಿಚಾರಣೆ ನಡೆಸಿದ ನ್ಯಾ| ನಾಗಪ್ರಸನ್ನ

High Court: ಒಂದೇ ದಿನ 503 ಪ್ರಕರಣ ವಿಚಾರಣೆ ನಡೆಸಿದ ನ್ಯಾ| ನಾಗಪ್ರಸನ್ನ

Cap-Brijesh-Chowta

MSEZ: ಜೆಬಿಎಫ್‌ಗೆ ಭೂಮಿ ಕೊಟ್ಟವರಿಗೆ ಜಿಎಂಪಿಎಲ್‌ನಲ್ಲಿ ಉದ್ಯೋಗ

ಬಿಜೆಪಿಗೆ ಇಡೀ ರಾಜ್ಯವೇ ಒಪ್ಪಿಕೊಳ್ಳುವಂಥ ಸರ್ವಸ್ಪರ್ಶಿ ನಾಯಕತ್ವ ಇನ್ನಷ್ಟೇ ಸಿಗಬೇಕಿದೆ

ಬಿಜೆಪಿಗೆ ಇಡೀ ರಾಜ್ಯವೇ ಒಪ್ಪಿಕೊಳ್ಳುವಂಥ ಸರ್ವಸ್ಪರ್ಶಿ ನಾಯಕತ್ವ ಇನ್ನಷ್ಟೇ ಸಿಗಬೇಕಿದೆ

BJP ಶಾಸಕ ಮುನಿರತ್ನ ಪರಪ್ಪನ ಜೈಲಿಗೆ: ಇಂದು ಜಾಮೀನು ಭವಿಷ್ಯ

BJP ಶಾಸಕ ಮುನಿರತ್ನ ಪರಪ್ಪನ ಜೈಲಿಗೆ: ಇಂದು ಜಾಮೀನು ಭವಿಷ್ಯ

Nitin Gadkari responded to complaints of excessive toll collection

ಕಂತಿನಲ್ಲಿ ಕೊಂಡ ಕಾರ್‌ ಬೆಲೆ ಹೆಚ್ಚುವಂತೆ ಟೋಲ್‌ ಸಹ ವೆಚ್ಚಕ್ಕಿಂತ ಹೆಚ್ಚಿರುತ್ತದೆ:ಗಡ್ಕರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.