ಬೆಳ್ತಂಗಡಿ: ಕುಡುಕರ ವಿಶ್ರಾಂತಿ ತಾಣ ಆಗುತ್ತಿರುವ ಉಜಿರೆ ವೃತ್ತ!
Team Udayavani, Jun 21, 2024, 1:25 PM IST
ಬೆಳ್ತಂಗಡಿ: ರಾಷ್ಟ್ರೀಯ ಹೆದ್ದಾರಿಯ ಬೆಳ್ತಂಗಡಿ, ಚಾರ್ಮಾಡಿ ಹಾಗೂ ಧರ್ಮಸ್ಥಳವನ್ನು ಜೋಡಿಸುವ ಉಜಿರೆ ಪ್ರಧಾನ ಸಂಪರ್ಕ ಕೇಂದ್ರವಾಗಿ ಬೆಳೆಯುತ್ತಿದೆ. ಉಜಿರೆ ಬೆಳೆದಂತೆ ಬಸ್ ನಿಲ್ದಾಣ, ಮುಖ್ಯ ವೃತ್ತ ಹಾಗೂ ಧರ್ಮಸ್ಥಳ ಮಹಾದ್ವಾರ ಕುಡುಕರ ವಿಶ್ರಾಂತಿ ತಾಣವಾಗುತ್ತಿದೆ.
ದಿನಬೆಳಗಾದರೆ ರಸ್ತೆಯ ಎರಡು ಬದಿಗಳಲ್ಲಿ ಕುಡುಕರ ಹಾವಳಿಯಿಂದ ಬಸ್ ನಿಲ್ದಾಣದಲ್ಲಿ ವಿದ್ಯಾರ್ಥಿ ಗಳಿಗೆ, ಮಹಿಳೆಯರಿಗೆ ಕಿರಿಕಿರಿ ತಂದೊಡ್ಡುವಂತಾಗಿದೆ. ಉಜಿರೆ ಮುಖ್ಯ ವೃತ್ತವನ್ನೂ ವಿಶ್ರಾಂತಿ ತಾಣವನ್ನಾಗಿಸುತ್ತಿದ್ದಾರೆ. ಹೆಂಗಸರು, ಮಕ್ಕಳು ಓಡಾಡುವ ಹೆದ್ದಾರಿ ಬದಿ ಕುಡುಕರ ಈ ವರ್ತನೆಯಿಂದ ಜನರು ಬೇಸತ್ತಿದ್ದಾರೆ.
ಕುಡುಕರು ರಸ್ತೆಯಲ್ಲೇ ತೂರಾಡುತ್ತಾ ಸಂಚರಿಸುತ್ತಿರುವ ಪರಿಣಾಮ ಅತೀ ಹೆಚ್ಚು ಪ್ರವಾಸಿಗರು ಸಹಿತ ಸಾರ್ವಜನಿಕ ವಾಹನ
ಸಂಚಾರವಿರುವ ಈ ಪ್ರದೇಶ ಅಪಘಾತಕ್ಕೆ ಆಹ್ವಾನಿಸುವಂತಿದೆ.
ನಿರ್ಗತಿಕರ ರಕ್ಷಣೆ, ಪುನರ್ವಸತಿ ಸಹಿತ ಇತರ ವಿಚಾರಗಳಿಗೆ ಗ್ರಾಮ ಪಂಚಾಯತ್ ಗಳಿಗೆ ಅನುದಾನ ಸರಕಾರದಿಂದ
ಬರುತ್ತದೆ. ಆದರೆ ಇದರ ಸದ್ಬಳಕೆ ಆಗುತ್ತಿಲ್ಲವೇ ಎಂಬ ಅನುಮಾನವನ್ನು ಜನರು ವ್ಯಕ್ತಪಡಿಸಲಾರಂಭಿಸಿದ್ದಾರೆ.
ಮುಂದೆಯಾದರೂ ಉಜಿರೆ ಗ್ರಾ.ಪಂ., ಪೊಲೀಸ್ ಇಲಾಖೆ ಇಂತವರ ಬಗೆಗೆ ಜಾಗೃತಿ, ಎಚ್ಚರಿಕೆ ಕ್ರಮ ಕೈಗೊಳ್ಳಬೇಕು
ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Heartstopping Moment: ಉಕ್ಕಿ ಹರಿಯುವ ಹೊಳೆಯಲ್ಲೇ ಬಾಣಂತಿಯನ್ನು ಹೊತ್ತು ಸಾಗಿದ ವ್ಯಕ್ತಿ
Bengaluru; ಚುನಾವಣಾ ಬಾಂಡ್ ಸೋಗಿನಲ್ಲಿ ಸುಲಿಗೆ; ನಿರ್ಮಲಾ ಸೀತಾರಾಮನ್ ವಿರುದ್ದ ಎಫ್ಐಆರ್
Gurudath Kamath: ಖ್ಯಾತ ಫೋಟೋಗ್ರಾಫರ್ ಗುರುದತ್ ಕಾಮತ್ ನಿಧನ
Moksha Kushal: ಹಾಟ್ ಫೋಟೋಶೂಟ್ನಲ್ಲಿ ಮೋಕ್ಷಾ ಮಿಂಚು
MUDA; ಅವರು-ಇವರು ಕಳ್ಳರು ಎನ್ನೋದು ಬೇಡ, ರಾಜೀನಾಮೆ ಕೊಟ್ಟು ನೀವು ಸ್ವಚ್ಛವಾಗಿರಿ: ಯತ್ನಾಳ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.