![Shows cancelled: ಸ್ತ್ರೀ ವಿರೋಧಿ ಹೇಳಿಕೆ… ಹಾಸ್ಯಗಾರ ಬಸ್ಸಿ ಕಾರ್ಯಕ್ರಮ ರದ್ದು](https://www.udayavani.com/wp-content/uploads/2025/02/BASSI-415x234.jpg)
![Shows cancelled: ಸ್ತ್ರೀ ವಿರೋಧಿ ಹೇಳಿಕೆ… ಹಾಸ್ಯಗಾರ ಬಸ್ಸಿ ಕಾರ್ಯಕ್ರಮ ರದ್ದು](https://www.udayavani.com/wp-content/uploads/2025/02/BASSI-415x234.jpg)
Team Udayavani, Jan 29, 2025, 1:02 PM IST
ಬೆಳ್ತಂಗಡಿ: ನಗರ ಪಂಚಾಯತ್ ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳಿಗೆ 2025- 26ನೇ ಸಾಲಿಗೆ ವಿವಿಧ ಮೂಲ ಗಳಿಂದ 6.21 ಕೋಟಿ ರೂ. ಜಮೆ ಹಾಗೂ ವಿವಿಧ ಅಭಿವೃದ್ಧಿ ಯೋಜನೆ ಗಳಿಗೆ 5.59 ಕೋಟಿ ರೂ. ಖರ್ಚು ಇರುವ 62.18 ಲಕ್ಷ ರೂ. ಮಿಗತೆ ಬಜೆಟನ್ನು ಪಟ್ಟಣ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಪಟ್ಟಣ ಪಂಚಾಯತ್ ಅಧ್ಯಕ್ಷ ಜಯಾನಂದ ಗೌಡ ಅವರು ಮಂಡಿಸಿದರು.
ಬೆಳ್ತಂಗಡಿ ಪಟ್ಟಣ ಪಂಚಾಯತ್ನಲ್ಲಿ ಅಧ್ಯಕ್ಷ ಜಯಾನಂದ ಗೌಡ ಅಧ್ಯಕ್ಷತೆಯಲ್ಲಿ ಪಟ್ಟಣ ಪಂಚಾಯತ್ ಸಭಾಂಗಣದಲ್ಲಿ ಜರಗಿದ ಬಜೆಟ್ ಸಭೆಯಲ್ಲಿ ಚರ್ಚೆ ನಡೆದು ಸರ್ವಾ ನುಮತದಿಂದ ಅಂಗೀಕರಿಸಲಾ ಯಿತು. ಬಳಿಕ ಸಾಮಾನ್ಯ ಸಭೆ ನಡೆಯಿತು. ಬೆಳ್ತಂಗಡಿ ವಿಘ್ನೇಶ್ ಸಿಟಿ ಎದುರು, ಅಯ್ಯಪ್ಪ ಗುಡಿಯ ಬಳಿ ವಾಹನ ಪಾರ್ಕಿಂಗ್ ಮಾಡಿ ಜನರ ಓಡಾಟಕ್ಕೆ ಸಮಸ್ಯೆಯಾಗಿದೆ, ಚರ್ಚ್ ರಸ್ತೆ ಹಾಗೂ ವಾಣಿ ಕಾಲೇಜು ಬಳಿ ರಸ್ತೆ ದಾಟಲು ಶಾಲಾ ಮಕ್ಕಳಿಗೆ ಸಮಸ್ಯೆಯಾಗಿದೆ ಇದರ ಬಗ್ಗೆ ಕ್ರಮ ಕೈಗೊಳ್ಳಲು ನಗರ ಸಂಚಾರ ಠಾಣೆಗೆ ಹಾಗೂ ಬೆಳ್ತಂಗಡಿ ಪೊಲೀಸ್ ಠಾಣೆಗೆ ಪಂಚಾಯತ್ನಿಂದ ಪತ್ರ ಬರೆಯಲು ಸಭೆಯಲ್ಲಿ ನಿರ್ಣಯಿಸಲಾಯಿತು.
ಮುಖ್ಯಾಧಿಕಾರಿ ರಾಜೇಶ್ ಸ್ವಾಗತಿಸಿ, ಎಂಜಿನಿಯರ್ ಮಹಾವೀರ ಆರಿಗ ವಂದಿಸಿದರು.
ಉಪಾಧ್ಯಕ್ಷೆ ಗೌರಿ, ಸ್ಥಾಯೀ ಸಮಿತಿ ಅಧ್ಯಕ್ಷ ಶರತ್ ಕುಮಾರ್ ಶೆಟ್ಟಿ, ಪಟ್ಟಣ ಪಂಚಾಯತ್ ಸದಸ್ಯರು, ನಾಮನಿರ್ದೇಶನ ಸದಸ್ಯರು, ಮೆಸ್ಕಾಂ, ಆರೋಗ್ಯ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ಆದಾಯ ನಿರೀಕ್ಷೆ
ಆರಂಭಿಕ ಶುಲ್ಕ 54.48 ಲಕ್ಷ ರೂ., ಆಸ್ತಿ ತೆರಿಗೆ, ಸಂತೆ ಮತ್ತು ಮೀನು ಮಾರುಕಟ್ಟೆ, ನೀರಿನ ತೆರಿಗೆ, ಕಟ್ಟಡ ಪರವಾನಿಗೆ, ಸ್ಟಾಲ್ ಬಾಡಿಗೆ, ವ್ಯಾಪಾರೋದ್ಯಮ ಹಾಗೂ ಸರಕಾರದ ವಿವಿಧ ಯೋಜನೆಗಳ ಅನುದಾನ ಸೇರಿ ಒಟ್ಟು 5.66 ಕೋಟಿ ರೂ. ಸೇರಿದಂತೆ ಒಟ್ಟು 6.21 ಕೋಟಿ ರೂ. ಅನುದಾನವನ್ನು ವಿವಿಧ ಮೂಲಗಳಿಂದ ಜಮೆ ಮಾಡಲಾಗುವುದು.
ಮುಖ್ಯ ಖರ್ಚುಗಳು
ಚರಂಡಿ ಹೂಳೆತ್ತುವುದು 7.88 ಲಕ್ಷ ರೂ., ಅಭಿವೃದ್ಧಿ ಕಾಮಗಾರಿಗಳಿಗೆ 16.50 ಲಕ್ಷ ರೂ., ಸಾರ್ವಜನಿಕ ಶೌಚಾಲಯ ದುರಸ್ತಿ 2 ಲಕ್ಷ ರೂ., ವಾಹನ ನಿರ್ವಹಣೆ ಹಾಗೂ ದುರಸ್ತಿ 12 ಲಕ್ಷ ರೂ., ನೀರು ಸರಬರಾಜು ಮತ್ತು ವಿದ್ಯುತ್ ಬಿಲ್ 40 ಲಕ್ಷ ರೂ. ಸೇರಿಂದ 5.59 ಕೋಟಿ ರೂ. ವಿನಿಯೋಗಿಸಲು ಸಭೆಯಲ್ಲಿ ನಿರ್ಧರಿಸಲಾಯಿತು.
ವಾಣಿಜ್ಯ ಸಂಕೀರ್ಣದ 33 ಲಕ್ಷ ರೂ. ಬಾಡಿಗೆ ಬಾಕಿ
ನಗರದಲ್ಲಿ ವಾಣಿಜ್ಯ ಸಂಕೀರ್ಣ ಹೊಂದಿರುವ 83 ಮಳಿಗೆಗಳಿದ್ದು, ಒಟ್ಟು 67 ಲಕ್ಷ ರೂ. ಬಾಡಿಗೆ ಪಂಚಾಯತ್ಗೆ ಬರಬೇಕು ಆದರೆ ಒಟ್ಟು 34 ಲಕ್ಷ ರೂ. ವಸೂಲಿ ಆಗಿದೆ. ಇನ್ನೂ 33 ಲಕ್ಷ ರೂ. ಬಾಕಿಯಾಗಿದೆ ಎಂದು ಮುಖ್ಯಾಧಿಕಾರಿ ಅವರು ಜಗದೀಶ್ ಡಿ. ಅವರ ಪ್ರಶ್ನೆಗೆ ಉತ್ತರಿಸಿದರು. ಬಾಡಿಗೆ ಬಾಕಿ ಇರುವವರಿಗೆ ನೋಟಿಸ್ ನೀಡಲಾಗಿದೆ. ನೋಟಿಸ್ ಹೋದ ಬಳಿಕ 1.17 ಲಕ್ಷ ರೂ. ವಸೂಲಿ ಆಗಿದೆ. ಬಾಡಿಗೆ ನೀಡದವರ ಡಿಪೋಸಿಟನ್ನು ಬಾಡಿಗೆಗೆ ವಜಾ ಮಾಡಿ, ಅಂಗಡಿ ವಶಕ್ಕೆ ತೆಗೆದುಕೊಳ್ಳುವುದಾಗಿ ಮುಖ್ಯಾಧಿಕಾರಿ ಸಭೆಗೆ ತಿಳಿಸಿದರು.
ಸುದೇಮುಗೇರಿನಲ್ಲಿ ನಮ್ಮ ಕ್ಲಿನಿಕ್ಗೆ ನಿರ್ಧಾರ
ಬೆಳ್ತಂಗಡಿಯ ಸುದೇಮುಗೇರಿನಲ್ಲಿ ಸರಕಾರದ ಮಹತ್ವಾಕಾಂಕ್ಷೆ ಯೋಜನೆಯಾದ ‘ನಮ್ಮ ಕ್ಲಿನಿಕ್’ನ್ನು ತೆರೆಯುವ ಬಗ್ಗೆ ನಿರ್ಧರಿಸಲಾಯಿತು. ಆರೋಗ್ಯ ಇಲಾಖೆಯ ಅಜೇಯ್ ನಮ್ಮ ಕ್ಲಿನಿಕ್ನಲ್ಲಿ ಇರುವ ವೈದ್ಯರು ಹಾಗೂ ಸಿಬಂದಿ ಬಗ್ಗೆ ವಿವರ ನೀಡಿದರು.
6 ವರ್ಷವಾದರೂ ಮುಗಿಯದ ಕಾಮಗಾರಿ!
ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ 10 ಕೋಟಿ ರೂ. ವೆಚ್ಚದಲ್ಲಿ 33 ಕಾಮಗಾರಿ ಗುತ್ತಿಗೆಯನ್ನು ವಹಿಸಿಕೊಂಡ ಕೆಆರ್ಡಿಎಲ್ನವರು 6 ವರ್ಷ ಕಳೆದರೂ ಕಾಮಗಾರಿ ಪೂರ್ಣಗೊಳಿಸದಿರುವ ವಿಚಾರ ಚರ್ಚೆಗೆ ಒಳಗಾಯಿತು. ಎಂಜಿನಿಯರ್ ಪ್ರದೀಪ್ ಸಭೆಗೆ ಮಾಹಿತಿ ನೀಡಿ ಒಟ್ಟು 34 ಕಾಮಗಾರಿಯಲ್ಲಿ 24 ಕಾಮಗಾರಿ ಪೂರ್ಣವಾಗಿದೆ. ಇದರಲ್ಲಿ 27 ಕಾಮಗಾರಿ ಹಸ್ತಾಂತರವಾಗಿದೆ. 4 ಕಾಮಗಾರಿ ಬಾಕಿ ಇದೆ, 5.50 ಕೋಟಿ ರೂ. ಮಾತ್ರ ಸರಕಾರದಿಂದ ಬಿಡುಗಡೆಯಾಗಿದೆ. ಹೆಚ್ಚುವರಿ 3.50 ಕೋಟಿ ರೂ. ಕಾಮಗಾರಿ ಮಾಡಲಾಗಿದೆ. ಅನುದಾನ ಬಾರದೆ ಕೆಲಸ ಬಾಕಿಯಾಗಿದೆ ಎಂದರು. 6 ವರ್ಷವಾದರೂ ಕಾಮಗಾರಿ ಪೂರ್ತಿ ಮಾಡದಿರುವುದಕ್ಕೆ ಸದಸ್ಯ ಜಗದೀಶ್ ಎಂಜಿಯರ್ ಅನ್ನು ತರಾಟೆಗೆ ತೆಗೆದುಕೊಂಡರು. ಚರ್ಚ್ಕ್ರಾಸ್, ಕೆಇಬಿ ರಸ್ತೆಯ ಕಾಮಗಾರಿ ಕಳಪೆಯಾಗಿದೆ. ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಿ, ಕಾಮಗಾರಿ ಪೂರ್ತಿ ಆಗದಿರುವುದಕ್ಕೆ ಜಿಲ್ಲಾಧಿಕಾರಿಗೆ ಗೆ ಪತ್ರ ಬರೆಯುತ್ತೇವೆ ಎಂದು ನಗರ ಪಂಚಾಯತ್ ಅಧ್ಯಕ್ಷ ಜಯಾನಂದ ಗೌಡ ಅವರು ಹೇಳಿದರು.
ಬೆಳ್ತಂಗಡಿಗೆ ಸದ್ಯದಲ್ಲೇ ರಾಷ್ಟ್ರಪತಿಗಳ ಭೇಟಿ
ಬೆಳ್ತಂಗಡಿಗೆ ರಾಷ್ಟ್ರಪತಿಗಳು ಬರುವ ಕಾರ್ಯಕ್ರಮಕ್ಕೆ ತಯಾರಿ ನಡೆಯುತ್ತಿರುವುದರಿಂದ ಬೆಳ್ತಂಗಡಿ ಸಮಾಜ ಮಂದಿರದ ಬಳಿಯಿಂದ ರೆಂಕೆದಗುತ್ತು, ಚೌಕದಬೆಟ್ಟು ರಸ್ತೆಯನ್ನು ಅಭಿವೃದ್ಧಿ ಪಡಿಸುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಇದಕ್ಕೆ ಸುಮಾರು 20 ಲಕ್ಷ ರೂ. ಗೂ ಹೆಚ್ಚು ಅನುದಾನ ಬೇಕಾಗಬಹುದು ಎಂದು ಎಂಜಿನಿಯರ್ ಹೇಳಿದರೆ, ಈ ಬಗ್ಗೆ ಡಿ.ಸಿಯವರನ್ನು ಮುಖತಃ ಭೇಟಿ ಮಾಡಿ ಮಾತನಾಡುವ ಎಂದು ಅಧ್ಯಕ್ಷ ಜಯಾನಂದ ಸಲಹೆ ನೀಡಿದರು. ರಾಷ್ಟ್ರಪತಿಗಳು ಬರುವುದಾದರೆ, ಜಿಲ್ಲಾಡಳಿತದಿಂದಲೇ ಈ ರಸ್ತೆಯ ಅಭಿವೃದ್ಧಿಗೆ ಅನುದಾನ ಬಿಡುಗಡೆಯಾಗಬಹುದು ಎಂದು ಸಭೆಯಲ್ಲಿ ಸದಸ್ಯರು ಅಭಿಪ್ರಾಯ ವ್ಯಕ್ತಪಡಿಸಿದರು.
Katapadi: ಮುಕ್ಕಾಲು ಎಕರೆಯಲ್ಲಿ 8 ಟನ್ ಸೌತೆ, ಅಂಗಳದಿಂದಲೇ ಮಾರಾಟ!
Shows cancelled: ಸ್ತ್ರೀ ವಿರೋಧಿ ಹೇಳಿಕೆ… ಹಾಸ್ಯಗಾರ ಬಸ್ಸಿ ಕಾರ್ಯಕ್ರಮ ರದ್ದು
Website blocked: ಮೋದಿ ವ್ಯಂಗ್ಯಚಿತ್ರ ಪ್ರಕಟಿಸಿದ್ದಕ್ಕೆ ನಿರ್ಬಂಧ: ವಿಕಟನ್ ಪತ್ರಿಕೆ
Mangaluru: ನದಿ-ಕಡಲು ಸಂಗಮದ ಸನಿಹದಲ್ಲೇ ಪ್ರವಾಸಿ ಸೇತುವೆ!
ಚೀನಾ ಭಾರತದ ಶತ್ರುವಲ್ಲ: ಕಾಂಗ್ರೆಸ್ ಮುಖಂಡ ಪಿತ್ರೋಡಾ ಹೇಳಿಕೆಗೆ ಬಿಜೆಪಿ ಆಕ್ರೋಶ
You seem to have an Ad Blocker on.
To continue reading, please turn it off or whitelist Udayavani.