

Team Udayavani, Jan 30, 2025, 9:06 PM IST
ಬೆಳ್ತಂಗಡಿ: ಕಳೆದೆರಡು ದಿನಗಳ ಹಿಂದೆ ಮುಂಡಾ ಸಮೀಪದ ಸೋಮಂತಡ್ಕ ಬಳಿ ಚಾಲಕನ ನಿಯಂತ್ರಣ ತಪ್ಪಿ ಬಸ್ ಚರಂಡಿ ಮೇಲೆ ಹತ್ತಿದ ಘಟನೆ ಬೆನ್ನಲ್ಲೆ ಜ.30ರದು ಧರ್ಮಸ್ಥಳ -ಕೊಲ್ಲಿ ಆರ್ಗವಾಗಿ ಸಂಚರಿಸುವ ಕೆಎಸ್ಆರ್ಟಿಸಿ ಬಸ್ಸೊಂದು ಉಜಿರೆ ಸಮೀಪದ ಕಾಶಿಬೆಟ್ಟು ಟಿ.ಬಿ. ಕ್ರಾಸ್-ಕುಂಟಿನಿ ರಸ್ತೆಯಲ್ಲಿ ಟಯರ್ ಕಳಚಿ ನಿಂತ ಘಟನೆ ನಡೆದಿದೆ.
ಅಪಘಾತದ ಬಳಿಕ ಘಟನೆ ಬಳಿಕ ಕೆಎಸ್ಆರ್ಟಿಸಿ ಸಮರ್ಪಕವಾಗಿ ಬಸ್ ನೀಡದೆ ವಿದ್ಯಾರ್ಥಿಗಳಿಗೆ ಸಮಸ್ಯೆ ಉಂಟಾಗುತ್ತಿದ್ದು, ಹೆಚ್ಚುವರಿ ಬಸ್ ಹಾಗೂ ಇತರ ಬೇಡಿಕೆ ಮುಂದಿಟ್ಟು ಬುಧವಾರ ಎಬಿವಿಪಿ ವತಿಯಿಂದ ವಿದ್ಯಾರ್ಥಿಗಳು ಉಜಿರೆಯಲ್ಲಿ ಪ್ರತಿಭಟನೆ ನಡೆಸಿದ್ದರು. ಇದರ ಬೆನ್ನಲ್ಲೆ ಮತ್ತೆ ಬಸ್ ಟಯರ್ ಸಂಪೂರ್ಣ ಕಳಚಿ ಬೀಳುವ ಮೂಲಕ ಬಸ್ನ ಅವ್ಯವಸ್ಥಿತ ನಿರ್ವಹಣೆ ಎದ್ದು ಕಾಣುವಂತಾಗಿದೆ.
ರಾಷ್ಟ್ರೀಯ ಹೆದ್ದಾರಿ ರಸ್ತೆ ನಿರ್ಮಾಣ ಹಂತದಲ್ಲಿರುವುದು ಒಂದೆಡೆಯಾದರೆ, ಇಲ್ಲಿನ ಹೊಂಡ ಗುಂಡಿಗಳ ಮೇಲೆ ಅತೀವೇಗದಿಂದ ನಿರ್ಲಕ್ಷéದ ಚಾಲನೆ ನಡೆಸುತ್ತಿರುವ ಪರಿಣಾಮ ಬಸ್ಗಳು ಹಾಳಾಗುತ್ತಿವೆ. ಇದರ ಬೆನ್ನಲ್ಲೆ ಗ್ರಾಮೀಣ ಭಾಗಕ್ಕೆ ಕಳಪೆ ಬಸ್ಗಳನ್ನು ಹಾಕಲಾಗುತ್ತದೆ. ಕಡಿಮೆ ಬಸ್ ಸಂಚಾರವಿರುವ ಪರಿಣಾಮ ನಿರ್ವಹಣೆಗೂ ಸಮಯವಿಲ್ಲದಂತಾಗಿದೆ. ಮತ್ತೂಂದೆಡೆ ಮಿತಿ ಮೀರಿದ ಪ್ರಯಾಣಿಕರನ್ನು ಅನಿವಾರ್ಯವಾಗಿ ಹೇರುತ್ತಿರುವ ಪರಿಣಾಮ ಬಸ್ ಅಲ್ಲಲ್ಲಿ ಕೆಟ್ಟು ನಿಂತು ಪ್ರಯಾಣಿಕರಿಗೆ ಹಾಗೂ ವಿದ್ಯಾರ್ಥಿಗಳು ಸಮಸ್ಯೆ ಎದುರಿಸುವಂತಾಗಿದೆ ಎಂದು ವಿದ್ಯಾರ್ಥಿಗಳು ಹಾಗೂ ಪ್ರಯಾಣಿಕರು ಆಕ್ರೋಶ ಹೊರಹಾಕಿದ್ದಾರೆ.
You seem to have an Ad Blocker on.
To continue reading, please turn it off or whitelist Udayavani.