ನೆರೆಯ ಗ್ರಾಮದ ರಸ್ತೆ ಕಾಂಕ್ರೀಟ್‌ಗೆ ಬಿಲ್‌ ಪಾವತಿ

ಬಡಗನ್ನೂರು ಗ್ರಾ.ಪಂ. ಸಾಮಾನ್ಯ ಸಭೆಯಲ್ಲಿ ಸದಸ್ಯರ ಆಕ್ಷೇಪ

Team Udayavani, Jun 5, 2019, 6:00 AM IST

e-17

ಬಡಗನ್ನೂರು : ಗ್ರಾಮ ಪಂಚಾಯತ್‌ ಸ್ಥಿರ ಆಸ್ತಿಯಲ್ಲಿಲ್ಲದ ನೆರೆ ಗ್ರಾಮದ ರಸ್ತೆ ಕಾಂಕ್ರೀಟ್‌ ಕಾಮಗಾರಿಗೆ ಬಿಲ್‌ ಪಾವತಿ ಮಾಡಿರುವ ಬಗ್ಗೆ ಬಡಗನ್ನೂರು ಗ್ರಾ.ಪಂ. ಸಾಮಾನ್ಯ ಸಭೆಯಲ್ಲಿ ಸದಸ್ಯರಿಂದ ಆಕ್ಷೇಪ ವ್ಯಕ್ತವಾಯಿತು. ಗ್ರಾ.ಪಂ. ಅಧ್ಯಕ್ಷ ಕೇಶವ ಗೌಡ ಕನ್ನಯ ಅವರ ಅಧ್ಯಕ್ಷತೆಯಲ್ಲಿ ಜೂ. 3ರಂದು ಗ್ರಾ.ಪಂ. ಸಮುದಾಯ ಭವನದಲ್ಲಿ ಸಭೆ ನಡೆಯಿತು.

ಬಡಗನ್ನೂರು ಗ್ರಾ.ಪಂ. ಹಾಗೂ ನೆಟ್ಟಣಿಗೆಮುಟ್ನೂರು ಗ್ರಾಮದ ಗಡಿಭಾಗದಲ್ಲಿರುವ ಪಡುವನ್ನೂರು ಗ್ರಾಮದ ಸಾರಕೂಟೇಲು- ಮುಗುಳಿ ಸಂಪರ್ಕ ರಸ್ತೆಗೆ ಗ್ರಾ.ಪಂ. 14 ನೇ ಹಣಕಾಸು ಯೋಜನೆಯಲ್ಲಿ ರಸ್ತೆ ಕಾಂಕ್ರೀಟ್‌ ಕಾಮಗಾರಿಗೆ 76 ಸಾವಿರ ಅನುದಾನ ಇಟ್ಟಿತ್ತು. ಕಾಮಗಾರಿ ಸಂದರ್ಭ ಗುತ್ತಿಗೆದಾರರಿಗೆ ಸ್ಥಳೀಯ ವ್ಯಕ್ತಿಯೋರ್ವರು ಒತ್ತಡ ಹಾಕಿ ಪಂಚಾಯತ್‌ ಸ್ಥಿರ ಆಸ್ತಿಯಲ್ಲಿಲ್ಲದ ಇನ್ನೊಂದು ರಸ್ತೆಗೆ ಕಾಂಕ್ರೀಟ್‌ ಕಾಮಗಾರಿ ನಡೆಸಿದ್ದಾರೆ. ಮಾತ್ರವಲ್ಲದೇ ಸ್ಥಳೀಯ ಕೆಲ ವ್ಯಕ್ತಿಗಳಲ್ಲಿ ರಸ್ತೆ ಬೇಕಾದರೆ ಹಣ ನೀಡಬೇಕು ಎಂದು ಹೇಳಿ ಹಣ ಪಡೆದುಕೊಂಡಿದ್ದಾರೆ ಎಂದು ಸದಸ್ಯ ರವಿರಾಜ ರೈ ಹೇಳಿದರು.

ಬೆದರಿಕೆ ಹಾಕಿದ್ದಾರೆ
ಈ ಬಗ್ಗೆ ಪಿಡಿಒ ವಸೀಮ ಗಂಧದ ಪ್ರತಿಕ್ರಿಯಿಸಿ, ಕಾಮಗಾರಿ ಪೂರ್ಣಗೊಂಡು ಬಿಲ್‌ ಹಂತದ ಸಂದರ್ಭ ಗಮನಕ್ಕೆ ಬಂದಿದೆ ಎಂದರು. ಕ್ರಿಯಾ ಯೋಜನೆ ಇದೇ ರಸ್ತೆಯ ಹೆಸರು ಇದೆ. ಆದರೆ ರಸ್ತೆ ಬದಲಾವಣೆಯಾಗಿ ನೆಟ್ಟಣಿಗೆ ಮಾಟ್ನೂರು ಗ್ರಾಮದ ರಸ್ತೆಗೆ ಕಾಮಗಾರಿ ಮಾಡಲಾಗಿದೆ ಎಂದ ಅವರು, ಬಿಲ್‌ ನಿಡುವಲ್ಲಿ ಸ್ಥಳೀಯ ವ್ಯಕ್ತಿ ಐದಾರು ಬಾರಿ ಕರೆ ಮಾಡಿ ಬೆದರಿಕೆ ಹಾಕಿದ್ದಾರೆ ಎಂದರು. ಈ ಬಗ್ಗೆ ಪ್ರತಿಕ್ರಿಯಿಸಿದ ಗ್ರಾಮ ಪಂಚಾಯತ್‌ ಸದಸ್ಯ ರವಿರಾಜ ರೈ, ಬೆದರಿಕೆ ಒಡ್ಡಲು, ಬಿಲ್‌ ಕೇಳಲು ಆತ ಯಾರು? ಎಂದು ಪ್ರಶ್ನಿಸಿದರು. ಪಂಚಾಯತ್‌ ಸ್ಥಿರ ಆಸ್ತಿಯಲ್ಲಿರುವ ರಸ್ತೆಗೆ ಮಾತ್ರಬಿಲ್‌ ಪಾವತಿ ಮಾಡುವಂತೆ ನಿರ್ಣಯವನ್ನು ಕೈಗೊಳ್ಳಲಾಯಿತು.

ದೂರು ಅರ್ಜಿ
ಕಜಮೂಲೆ-ಸಾರೆಪ್ಪಾಡಿ ಪಂಚಾಯತ್‌ ರಸ್ತೆಯನ್ನು ಸ್ಥಳೀಯ ವ್ಯಕ್ತಿಯೋರ್ವರು ಅಡ್ಡಗಟ್ಟಿ ಬಂದ್‌ ಮಾಡಿದ ದೂರು ಅರ್ಜಿ ಬಗ್ಗೆ ಅಧ್ಯಕ್ಷ ಕೇಶವ ಗೌಡ ಮಾತನಾಡಿ, ಈ ಬಗ್ಗೆ ಅಭಿವೃದ್ಧಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುವ ಬಗ್ಗೆ ನಿರ್ಣಯ ಮಾಡಲಾಯಿತು.

ಗ್ರಾಮ ಪಂಚಾಯತ್‌ ಉಪಾಧ್ಯಕ್ಷೆ ಬೇಬಿ ಎಸ್‌., ಸದಸ್ಯರಾದ ರವಿರಾಜ ರೈ ಸಜಂಕಾಡಿ, ಗುರುಪ್ರಸಾದ್‌ ರೈ ಕುದಾRಡಿ, ಬಾಲಕೃಷ್ಣ ಮುಂಡೋಳೆ, ಗೋಪಾಲಕೃಷ್ಣ ಸುಳ್ಯಪದವು, ರಘುನಾಥ ರೈ ಕುತ್ಯಾಳ, ಉದಯ ಕುಮಾರ್‌ ಶರವು, ಸುಶೀಲಾ ಪಕ್ಯೂಡ್‌, ದಮಯಂತಿ ನೆಕ್ಕರೆ, ಸವಿತಾ ಮಡ್ಯಲಮೂಲೆ, ಹೇಮಲತಾ ಗೌಡ ಸಂಪಿಗೆಮಜಲು, ದೇವಕಿ ಕನ್ನಡ್ಕ, ವಿಜಯಲಕ್ಷ್ಮೀ ಮೇಗಿನಮನೆ, ದಾಮೋದರ ಆಚಾರ್ಯ ನೆಕ್ಕರೆ, ರೋಹಿನಿ ಕಜಮೂಲೆ, ಸವಿತಾ ಪದಡ್ಕ, ಜಲಜಾಕ್ಷಿ ನೆರೋತ್ತಡ್ಕ, ಪಿಡಿಒ ವಸೀಮ ಗಂಧದ ಉಪಸ್ಥಿತರಿದ್ದರು. ಗ್ರಾ.ಪಂ. ಕಾರ್ಯದರ್ಶಿ ಶಾರದಾ ಕೆ., ಸ್ವಾಗತಿಸಿದರು. ಗುಮಾಸ್ತ ಜಯಾಪ್ರಸಾದ ರೈ ಗತ ಸಭೆಯ ವರದಿ ಮಂಡಿಸಿ, ವಂದಿಸಿದರು. ಸಿಬಂದಿ ಅಬ್ದುಲ್‌ ರಹೆಮಾನ್‌, ಸುಕನ್ಯಾ, ಹೇಮಾವತಿ, ಶಾರದಾ ಹಾಗೂ ಶೀಲಾವತಿ ಸಹಕರಿಸಿದರು.

ಕಾಡಿದೆ ನೀರಿನ ಸಮಸ್ಯೆ; ಬಿಲ್‌ ಮನ್ನಾ!
ಏರಾಜೆ ಪಳ್ಳತ್ತಾರು ಕುಡಿಯುವ ನೀರಿನ ಪೈಪ್‌ ಒಡೆದು ಪಂಪ್‌ ತೆಗೆದು ಹಾಕಿದ ಕಿಡಿಗೇಡಿಗಳ ಬಗ್ಗೆ ಪಂಚಾಯತ್‌ ಯಾವುದೇ ಕ್ರಮ ಕೈಗೊಂಡಿಲ್ಲ. ಅಂದಿನಿಂದ ಏರಾಜೆ- ಪಳ್ಳತ್ತಾರು ಭಾಗದ ಜನರಿಗೆ ಕುಡಿಯುವ ನೀರಿನ ಸಮಸ್ಯೆಯಾಗಿದೆ ಎಂದು ಸದಸ್ಯೆ ವಿಜಯಲಕ್ಷ್ಮೀ ಹೇಳಿದರು. ಈ ಭಾಗದ ನಳ್ಳಿ ನೀರಿನ ಫ‌ಲಾನುಭವಿಗಳ ತಂಡ ಆಗಮಿಸಿ ಮೂರು ತಿಂಗಳಿಂದ ನೀರಿನ ಸಮಸ್ಯೆ ಬಗ್ಗೆ ಗ್ರಾ.ಪಂ. ಸದಸ್ಯರಿಗೆ ಹಾಗೂ ಅಧಿಕಾರಿಗಳ ಗಮನಕ್ಕೆ ತಂದು ಕೊನೆಯ ಬಾರಿಗೆ ಕೊಳವೆ ಬಾವಿ ಡಿಪ್‌ ಮಾಡಲಾಯಿತು. ಆದರೂ ನೀರು ಸರಿಯಾಗಿ ಬರುತ್ತಿಲ್ಲ ಎಂದು ತಿಳಿಸಿದರು.

ಅಧ್ಯಕ್ಷ ಕೇಶವ ಗೌಡ ಮಾತನಾಡಿ, ಕಳೆದ ಮೂರು ತಿಂಗಳ ನೀರಿನ ಬಿಲ್‌ ಮನ್ನಾ ಮಾಡುವ ಬಗ್ಗೆ ತಿಳಿಸಿ ಮುಂದೆ ಹೊಸ ಕೊಳವೆಬಾವಿ ತೆಗೆಯುವವರೆಗೆ ಮೂರು ದಿವಸಕ್ಕೆ ಒಂದು ಬಾರಿ ನೀರು ಬಿಡುವ ಬಗ್ಗೆ ಪಂಪ್‌ ಚಾಲಕರಿಗೆ ಆದೇಶಿಸಿ ನಿರ್ಣಯ ಕೈಗೊಂಡರು.

ಟಾಪ್ ನ್ಯೂಸ್

Bison: ಕಾಡುಕೋಣ ಹಾವಳಿ… ಮನೆಯಿಂದ ಹೊರಬರಲು ಹೆದರುತ್ತಿರುವ ಯಡೂರು ಗ್ರಾಮಸ್ಥರು

Bison: ಕಾಡುಕೋಣ ಹಾವಳಿ… ಮನೆಯಿಂದ ಹೊರಬರಲು ಹೆದರುತ್ತಿರುವ ಯಡೂರು ಗ್ರಾಮಸ್ಥರು

Maski: ಸಕಾಲಕ್ಕೆ ಬಾರದ ಮಳೆ ಸಂಕಷ್ಟದಲ್ಲಿ ರೈತ… ವಾರದೊಳಗೆ ಮಳೆ ಬರದಿದ್ದರೆ ಬೆಳೆ ನಾಶ

Maski: ಸಕಾಲಕ್ಕೆ ಬಾರದ ಮಳೆ, ಸಂಕಷ್ಟದಲ್ಲಿ ರೈತ… ವಾರದೊಳಗೆ ಮಳೆ ಬರದಿದ್ದರೆ ಬೆಳೆ ನಾಶ

Kalki

Indian Cinema; ಕಲ್ಕಿ ಗೆಲುವಲ್ಲಿ ಸ್ಟಾರ್ ನಗು

Heavy rain in Amboli; Five feet water rise in Hidkal reservoir in one day

Belagavi: ಅಂಬೋಲಿ ಭಾಗದಲ್ಲಿ ಭಾರಿ ಮಳೆ; ಹಿಡಕಲ್ ಜಲಾಶಯದಲ್ಲಿ ಒಂದೇ ದಿನ ಐದಡಿ ನೀರು ಏರಿಕೆ

9 ತಿಂಗಳ ಹಿಂದೆ ನಾಪತ್ತೆಯಾದ ಮಗಳ ಬಗ್ಗೆ DCM ಪವನ್ ಕಲ್ಯಾಣ್ ಬಳಿ ದೂರು.. 9 ದಿನದಲ್ಲಿ ಪತ್ತೆ

9 ತಿಂಗಳ ಹಿಂದೆ ನಾಪತ್ತೆಯಾದ ಮಗಳ ಬಗ್ಗೆ DCM ಪವನ್ ಕಲ್ಯಾಣ್ ಬಳಿ ದೂರು.. 9 ದಿನದಲ್ಲಿ ಪತ್ತೆ

Bellary: ಡ್ರೈವಿಂಗ್ ಸ್ಕೂಲ್ ಲಾಭಿ; ಆರ್ ಟಿಓ ಕಚೇರಿ ಸಿಬ್ಬಂದಿ ಮೇಲೆ ಹಲ್ಲೆ

Bellary: ಡ್ರೈವಿಂಗ್ ಸ್ಕೂಲ್ ಲಾಭಿ; ಆರ್ ಟಿಓ ಕಚೇರಿ ಸಿಬ್ಬಂದಿ ಮೇಲೆ ಹಲ್ಲೆ

UK: Keir Starmer- ಕಾರ್ಮಿಕನ ಮಗ ಬ್ರಿಟನ್‌ ಪ್ರಧಾನಿ; ರಿಷಿ ಸುನಕ್‌ ಪಕ್ಷಕ್ಕೆ ಹೀನಾಯ ಸೋಲು

UK: Keir Starmer- ಕಾರ್ಮಿಕನ ಮಗ ಬ್ರಿಟನ್‌ ಪ್ರಧಾನಿ; ರಿಷಿ ಸುನಕ್‌ ಪಕ್ಷಕ್ಕೆ ಹೀನಾಯ ಸೋಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

4-punjalkatte

Ajilamogaru: ನೀರು ಪಾಲಾದ ಮೈಕಲ್ ರ ಮೃತದೇಹ ಪತ್ತೆ

Ajilamogaru: ಗಾಳ ಹಾಕುತ್ತಿದ್ದ ವ್ಯಕ್ತಿ ನೀರು ಪಾಲು

Ajilamogaru: ಗಾಳ ಹಾಕುತ್ತಿದ್ದ ವ್ಯಕ್ತಿ ನೀರು ಪಾಲು

Missing ನೇಲ್ಯಕುಮೇರ್‌: ತಡರಾತ್ರಿ ಬಾಡಿಗೆಗೆ ತೆರಳಿದ್ದ ರಿಕ್ಷಾ ಚಾಲಕ ನಿಗೂಢ ನಾಪತ್ತೆMissing ನೇಲ್ಯಕುಮೇರ್‌: ತಡರಾತ್ರಿ ಬಾಡಿಗೆಗೆ ತೆರಳಿದ್ದ ರಿಕ್ಷಾ ಚಾಲಕ ನಿಗೂಢ ನಾಪತ್ತೆ

Missing ನೇಲ್ಯಕುಮೇರ್‌: ತಡರಾತ್ರಿ ಬಾಡಿಗೆಗೆ ತೆರಳಿದ್ದ ರಿಕ್ಷಾ ಚಾಲಕ ನಿಗೂಢ ನಾಪತ್ತೆ

ಪುತ್ತೂರು: ಮುಚ್ಚಿಹೋದ ಶಾಲೆಯಿಂದ ಮುಚ್ಚಲಿದ್ದ ಶಾಲೆಗೆ ಜೀವದಾನ!

ಪುತ್ತೂರು: ಮುಚ್ಚಿಹೋದ ಶಾಲೆಯಿಂದ ಮುಚ್ಚಲಿದ್ದ ಶಾಲೆಗೆ ಜೀವದಾನ!

9-Bantwala

Bantwala: ರಾಮಲಕಟ್ಟೆ: ಡಿವೈಡರ್ ಗೆ ಢಿಕ್ಕಿಯಾದ ಖಾಸಗಿ ಬಸ್

MUST WATCH

udayavani youtube

ಹತ್ರಾಸ್‌ನಲ್ಲಿ ಸತ್ಸಂಗದ ವೇಳೆ ಕಾಲ್ತುಳಿತ ಸಾವಿನ ಸಂಖ್ಯೆ 121 ಕ್ಕೆ ಏರಿಕೆ

udayavani youtube

ಕರ್ನಾಟಕ ಪ್ರವಾಸೋದ್ಯಮದ ಕುರಿತು ರಾಜ್ಯಸಭೆಯಲ್ಲಿ ಸುಧಾಮೂರ್ತಿ ಹೇಳಿದ್ದೇನು

udayavani youtube

ಹದಗೆಟ್ಟ ರಸ್ತೆಯಲ್ಲಿ ಜೀವ ಕೈಯಲ್ಲಿ ಹಿಡಿದು ಓಡಾಡುವ ವಾಹನ ಸವಾರರು!|

udayavani youtube

ಎಕ್ರೆಗಟ್ಟಲೆ ಹಡಿಲು ಭೂಮಿಗೆ ಜೀವ ತುಂಬಿದ ರೈತ

udayavani youtube

ಶ್ರೀ ಕ್ಷೇ.ಧ.ಗ್ರಾ.ಯೋಜನೆ | ಅರಣ್ಯ ಸಚಿವರಿಂದ ದಶಲಕ್ಷ ಗಿಡಗಳ ನಾಟಿಗೆ ಚಾಲನೆ

ಹೊಸ ಸೇರ್ಪಡೆ

9-crime

Bengaluru: ಬೈಕ್‌ಗೆ ಲಾರಿ ಡಿಕ್ಕಿ : ರಿಯಲ್‌ ಎಸ್ಟೇಟ್‌ ಏಜೆಂಟ್‌ ಸಾವು

Bison: ಕಾಡುಕೋಣ ಹಾವಳಿ… ಮನೆಯಿಂದ ಹೊರಬರಲು ಹೆದರುತ್ತಿರುವ ಯಡೂರು ಗ್ರಾಮಸ್ಥರು

Bison: ಕಾಡುಕೋಣ ಹಾವಳಿ… ಮನೆಯಿಂದ ಹೊರಬರಲು ಹೆದರುತ್ತಿರುವ ಯಡೂರು ಗ್ರಾಮಸ್ಥರು

8-bng

Bengaluru: ಹಳೇ ದ್ವೇಷಕ್ಕೆ ವ್ಯಕ್ತಿ ಕೊಲೆ ಪ್ರಕರಣ: ಇಬ್ಬರು ಆರೋಪಿಗಳ ಬಂಧನ

Maski: ಸಕಾಲಕ್ಕೆ ಬಾರದ ಮಳೆ ಸಂಕಷ್ಟದಲ್ಲಿ ರೈತ… ವಾರದೊಳಗೆ ಮಳೆ ಬರದಿದ್ದರೆ ಬೆಳೆ ನಾಶ

Maski: ಸಕಾಲಕ್ಕೆ ಬಾರದ ಮಳೆ, ಸಂಕಷ್ಟದಲ್ಲಿ ರೈತ… ವಾರದೊಳಗೆ ಮಳೆ ಬರದಿದ್ದರೆ ಬೆಳೆ ನಾಶ

7-bng

Bengaluru: ವಿಚಾರಣಾಧೀನ ಕೈದಿಯ ಗುದದ್ವಾರದಲ್ಲಿ 2 ಮೊಬೈಲ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.