![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
Team Udayavani, Oct 26, 2021, 7:41 PM IST
ಬಂಟ್ವಾಳ: ಬಂಟ್ವಾಳ ತಾಲೂಕಿನ ಮಿತ್ತೂರು ನಿವಾಸಿಯೊಬ್ಬರು ಮೃತಪಟ್ಟು 6 ತಿಂಗಳ ಬಳಿಕ ಅವರ 2ನೇ ಡೋಸ್ ಕೋವಿಡ್ ಲಸಿಕೆ ಪೂರ್ಣಗೊಂಡಿರುವ ಕುರಿತು ಮೊಬೈಲ್ಗೆ ಸಂದೇಶವೊಂದು ಬಂದಿದೆ ಎಂದು ಅವರ ಪುತ್ರ ಆರೋಪಿಸಿದ್ದಾರೆ.
ಈ ರೀತಿ 2ನೇ ಲಸಿಕೆ ಪಡೆಯದ ಇತರರಿಗೂ ಇಂತಹ ಸಂದೇಶ ಬಂದಿದ್ದು, ಆದರೆ ಐಡಿ ನಂಬರ್ ಹಾಕುವ ಸಂಖ್ಯೆ ವ್ಯತ್ಯಾಸದಿಂದ ಹೀಗಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ಮಿತ್ತೂರು ಅಕ್ಕರೆ ನಿವಾಸಿ ಹಸೈನಾರ್ ಅವರು ಎ. 27ರಂದು ಮೃತಪಟ್ಟಿದ್ದು, ಅವರು ಮಾಣಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮಾರ್ಚ್ನಲ್ಲಿ ಮೊದಲ ಡೋಸ್ ಕೋವಿಡ್ ಲಸಿಕೆ ಪಡೆದಿದ್ದರು. ಆದರೆ ಅವರು ಎ. 27 ರಂದು ಮೃತಪಟ್ಟಿದ್ದರು. ಅವರ ಪುತ್ರ ಸಾದಿಕ್ ಅವರ ಮೊಬೈಲ್ಗೆ ಅ. 14ಕ್ಕೆ ಪ್ರಾರಂಭದಲ್ಲಿ ಒಟಿಪಿ ಬಂದಿದ್ದು, ಅದರ ಬೆನ್ನಿಗೆ 2ನೇ ಡೋಸ್ ಪೂರ್ತಿಗೊಳಿಸಿರುವ ಸಂದೇಶ ಬಂದಿದೆ.
ಬಳಿಕ ಅದರಲ್ಲಿದ್ದ ಲಿಂಕ್ ತೆರೆದಾಗ ಪ್ರಮಾಣ ಪತ್ರ ಬಂದಿದ್ದು, ಅದರಲ್ಲಿ ಮಾಣಿಯಲ್ಲಿ ಲಸಿಕೆ ಪಡೆಯಲಾಗಿದೆ ಎಂದು ದಾಖಲಾಗಿದೆ. ಅವರ ಪುತ್ರನಿಗೆ 2 ತಿಂಗಳ ಮೊದಲು ಮಾಣಿ ಆರೋಗ್ಯ ಕೇಂದ್ರದಿಂದ ಕರೆ ಬಂದಿದ್ದು, ಹಸೈನಾರ್ ಅವರ 2ನೇ ಡೋಸ್ ಬಾಕಿ ಇದೆ ಎಂದಿದ್ದರು. ಆಗ ಅವರ ಪುತ್ರ ತಂದೆ ತೀರಿಕೊಂಡಿದ್ದಾರೆ ಎಂಬ ಉತ್ತರ ನೀಡಿದ್ದರು.
Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್
ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
You seem to have an Ad Blocker on.
To continue reading, please turn it off or whitelist Udayavani.