Dharmasthala”ಧರ್ಮ ಜೀರ್ಣೋದ್ಧಾರದ ಭಕ್ತಿ ಕ್ರಾಂತಿ ಭಜನೆ’

ಧರ್ಮಸ್ಥಳ ಭಜನ ಕಮ್ಮಟ ರಜತ ವರ್ಷದ ಸಮಾರೋಪ

Team Udayavani, Oct 5, 2023, 12:29 AM IST

Dharmasthala”ಧರ್ಮ ಜೀರ್ಣೋದ್ಧಾರದ ಭಕ್ತಿ ಕ್ರಾಂತಿ ಭಜನೆ’

ಬೆಳ್ತಂಗಡಿ: ಈ ದೇಶದ ಸಾಂಸ್ಕೃತಿಕ ಪರಂಪರೆಯಲ್ಲಿ ಭಕ್ತಿಯ ಬೇರುಗಳನ್ನು ಆಳವಾಗಿ ಕೊಂಡೊಯ್ದ ಶ್ರೇಷ್ಠ ಪರಂಪರೆ ಭಜನೆ. ಭಜನ ಪದ್ಧತಿಗೊಂದು ಸಂವಿಧಾನವನ್ನೇ ಸೃಷ್ಟಿಸಿರುವ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ಧರ್ಮ ಜೀರ್ಣೋದ್ಧಾರದ ಸಾಮೂಹಿಕ ಭಕ್ತಿ ಕ್ರಾಂತಿ ಮಾಡಿದ್ದಾರೆ ಎಂದು ಹುಬ್ಬಳ್ಳಿ ಹಾನಗಲ್‌ ವಿರಕ್ತ ಮಠ ಶ್ರೀ ಜಗದ್ಗುರು ಮೂರುಸಾವಿರ ಮಠ ಮಹಾ ಸಂಸ್ಥಾನದ ಶ್ರೀ ಮನ್ಮಹಾರಾಜ ನಿರಂಜನ ಜಗದ್ಗುರು ಡಾ| ಗುರುಸಿದ್ದ ರಾಜಯೋಗೀಂದ್ರ ಮಹಾಸ್ವಾಮಿ ನುಡಿದರು.

ಧರ್ಮಸ್ಥಳದಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನ ಪರಿಷತ್‌ನಿಂದ ಸೆ. 28ರಿಂದ ಒಂದು ವಾರ ಕಾಲ ನಡೆದ 25ನೇ ವರ್ಷದ ಭಜನ ತರಬೇತಿ ಕಮ್ಮಟದ ಪ್ರಯುಕ್ತ ಅ. 4ರಂದು ಅಮೃತವರ್ಷಿಣಿ ಸಭಾಭವನದಲ್ಲಿ ನಡೆದ ಸಮಾರೋಪದಲ್ಲಿ ಆಶೀರ್ವ ಚನಗೈದರು.

ಮುಖ್ಯ ಅಭ್ಯಾಗತರಾದ ರಾಜ್ಯ ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗ ರೆಡ್ಡಿ ಮಾತನಾಡಿ, ಗ್ರಾಮೀಣಾಭಿವೃದ್ಧಿ ಚಿಂತನೆಯಡಿ ಲಕ್ಷಾಂತರ ಯುವಕ ಯುವತಿಯರ ಸಶಕ್ತೀಕರಣ ಕ್ಷೇತ್ರದಿಂದಾಗಿದೆ ಎಂದು ಶ್ಲಾಘಿ ಸಿದರು.

ವರ್ಣಿಸಲಸದಳ
ರಾಜ್ಯ ಸಭಾ ಸದಸ್ಯ, ಚಲನಚಿತ್ರ ಸಂಗೀತ ನಿರ್ದೇಶಕ ಮತ್ತು ಗಾಯಕ ಇಳಯರಾಜ ಭಾಗವಹಿಸಿ, ಧರ್ಮಸ್ಥಳ ಕ್ಷೇತ್ರ ಹಾಗೂ ಭಜನ ಕಮ್ಮಟವನ್ನು ಮಾತಿನಲ್ಲಿ ವರ್ಣಿಸಲಸಾಧ್ಯ. ನಾನು ಕರ್ನಾಟಕದಲ್ಲಿ ಹುಟ್ಟದಿದ್ದರೂ ಕೊಲ್ಲೂರು ಮೂಕಾಂಬಿಕೆ ನನ್ನಲ್ಲಿ ನೆಲೆಸಿದ್ದಾಳೆ ಎಂದುಕೊಂಡವ ನಾನು.

ಹಾಗಾಗಿ 1,500ಕ್ಕೂ ಅಧಿಕ ಸಿನೆಮಾಗಳಿಗೆ ಸಂಗೀತ ನೀಡುವಂತಾ ಗಿದೆ. ಧರ್ಮಸ್ಥಳ ಕ್ಷೇತ್ರದ ಧಾರ್ಮಿಕ ಶ್ರೀಮಂತಿಕೆಯನ್ನು “ಆನಂದ ಕಂಡೆ ನಾನಿಂದು… ಮಾತಿಗೆ ಸಿಕ್ಕೋದಲ್ಲ… ಹೇಳ್ಳೋದು ಬಾರದಲ್ಲ’ ಪದ್ಯವನ್ನು ಹಾಡುವ ಮೂಲಕ ವರ್ಣಿಸಿದರು.

ನಾಯಕತ್ವ ಬೆಳೆಸುವ ಉದ್ದೇಶ
ಅಧ್ಯಕ್ಷತೆ ವಹಿಸಿದ್ದ ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಸುಭಿಕ್ಷೆ ನೆಲೆಸಿ ನಾಯಕತ್ವ ಬೆಳೆಯಬೇಕೆಂಬುದು ನಮ್ಮ ಇಚ್ಛೆ. ಅಂತಹ ಸಂಘಟನೆ ಪ್ರಾರಂಭಿಸುವುದು ಕ್ಷೇತ್ರದ ಉದ್ದೇಶ. ಬದಲಾವಣೆ ಎಂದರೆ ವ್ಯಕ್ತಿತ್ವ ದಲ್ಲಲ್ಲ. ಅದು ಮಾತು, ವಾತ್ಸಲ್ಯ, ನಡವಳಿಕೆಯಿಂದ ಆಗಬೇಕಿದೆ. ಸ್ವಚ್ಛತೆ,ಆರೋಗ್ಯ ಕಾಳಜಿ, ಶಿಸ್ತು ಬೆಳೆಸಿ ಎಂದು ಹಾರೈಸಿ ಭಜಕರನ್ನು ಹಾಗೂ ತರಬೇತುದಾರರನ್ನು ಶ್ಲಾಘಿಸಿದರು.

ಪುಲಿಯಾರು ಸಿದ್ಧಪ್ಪ ಅಯ್ಯಪ್ಪ ಸ್ವಾಮೀಜಿ, ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ, ವಿಧಾನ ಪರಿಷತ್‌ ಸದಸ್ಯ ಕೆ. ಪ್ರತಾಪಸಿಂಹ ನಾಯಕ್‌, ಕನ್ನಡ ಅರ್ಚಕ ಹಿರೇಮಗಳೂರು ಕಣ್ಣನ್‌, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನ ಪರಿಷತ್‌ ಉಪಾಧ್ಯಕ್ಷರಾದ ಡಾ| ಹೇಮಾವತಿ ವೀ. ಹೆಗ್ಗಡೆ, ಡಿ. ಹರ್ಷೇಂದ್ರ ಕುಮಾರ್‌, ಸುಪ್ರಿಯಾ ಹರ್ಷೇಂದ್ರ ಕುಮಾರ್‌, ಭಜನ ಪರಿಷತ್‌ ಅಧ್ಯಕ್ಷ ಬಾಲಕೃಷ್ಣ ಪಂಜ, ಕಸಾಪ ಮಾಜಿ ಅಧ್ಯಕ್ಷ ಪ್ರದೀಪ್‌ ಕುಮಾರ್‌ ಕಲ್ಕೂರ, ಎಸ್‌ಡಿಎಂ ಟ್ರಸ್ಟಿ ಎಸ್‌.ಡಿ. ಸಂಪತ್‌ ಸಾಮ್ರಾಜ್ಯ ಶಿರ್ತಾಡಿ, ಸೋನಿಯಾ ವರ್ಮಾ ಉಪಸ್ಥಿತರಿದ್ದರು.

ಗೌರವಾರ್ಪಣೆ
ಇಳಯರಾಜ ಅವರಿಗೆ ಕ್ಷೇತ್ರದ ವತಿಯಿಂದ, ಡಾ| ಹೆಗ್ಗಡೆಯವರಿಗೆ ಸಚಿವರಿಂದ ಗೌರವಾರ್ಪಣೆ ನಡೆ ಯಿತು. ಭಜನ ರಜತ ಮಹೋತ್ಸವದ ಹಿನ್ನೆಲೆಯಲ್ಲಿ ಅಭಿಮಾನಿಗಳು ಡಾ| ಹೆಗ್ಗಡೆಯವರಿಗೆ ರಜತ ಕಿರೀಟ ತೊಡಿಸಿ ಗೌರವಿಸಿದರು.

ಭಜನ ಪರಿಷತ್‌ ಸಂಚಾಲಕ ಸುಬ್ರಹ್ಮಣ್ಯ ಪ್ರಸಾದ್‌ ಪ್ರಸ್ತಾವನೆಗೈದರು. ಭಜನ ಪರಿಷತ್‌ ಕಾರ್ಯದರ್ಶಿ ಪುರುಷೋತ್ತಮ ಪಿ.ಕೆ., ವಂದಿಸಿದರು. ಡಾ| ಐ. ಶಶಿಕಾಂತ್‌ ಜೈನ್‌, ಶ್ರೀನಿವಾಸ್‌ ರಾವ್‌ ನಿರೂಪಿಸಿದರು. ಕಾರ್ಯದರ್ಶಿ ಸುರೇಶ್‌ ಮೊಲಿ ವರದಿ ವಾಚಿಸಿದರು.

ಡಾ| ಹೆಗ್ಗಡೆ ಶ್ರೇಷ್ಠ ಸಂತ
ಗ್ರಾಮ ಗ್ರಾಮದಲ್ಲಿ ಭಜನ ತಂಡ ಸಂಘಟಿಸಿ ಲಕ್ಷಾಂತರ ಜನರನ್ನು ದುಶ್ಚಟ ಮುಕ್ತಗೊಳಿಸಿರುವ ಡಾ| ಹೆಗ್ಗಡೆಯವರು ಸಾವಿರಾರು ಮಠಾಧೀಶರು, ಸಂತರು, ಸರಕಾರ ಮಾಡುವ ಕೆಲಸ ಒಬ್ಬರೇ ಮಾಡಿದ್ದಾರೆ. ಹಾಗಾಗಿ ಎಲ್ಲ ಧರ್ಮಗಳ ಧರ್ಮಾಧಿಕಾರಿಯಾಗಿ 21ನೇ ಶತಮಾನದ ಶ್ರೇಷ್ಠ ಸಂತರೆನಿಸಿದ್ದಾರೆ ಎಂದು ವಿರಕ್ತ ಮಠ ಶ್ರೀಗಳು ಬಣ್ಣಿಸಿದರು.

ಟಾಪ್ ನ್ಯೂಸ್

Thirupathi-Laddu

Tirupati Laddu Row: ತಿರುಪತಿ ಶ್ರೀವಾರಿ ಲಡ್ಡು ಈಗ ಪರಿಶುದ್ಧ: ದೇವಸ್ಥಾನ ಸಮಿತಿ

1-siddu-aa

TB Dam; ಮೈತುಂಬಿಕೊಂಡ ತುಂಗಭದ್ರೆಗೆ ಸಿಎಂ ಸಿದ್ದರಾಮಯ್ಯ ಅವರಿಂದ ಬಾಗಿನ ಅರ್ಪಣೆ

Parvati Nair: ಮನೆ ಕೆಲಸದವನ ಮೇಲೆ ಹಲ್ಲೆ ಆರೋಪ; ನಟಿ ಪಾರ್ವತಿ ನಾಯರ್‌ ವಿರುದ್ಧ ಕೇಸ್‌

Parvati Nair: ಮನೆ ಕೆಲಸದವನ ಮೇಲೆ ಹಲ್ಲೆ ಆರೋಪ; ನಟಿ ಪಾರ್ವತಿ ನಾಯರ್‌ ವಿರುದ್ಧ ಕೇಸ್‌

1-tirupati-laddu

Tirupati laddu ಅಪವಿತ್ರ: ಎಸ್ ಐಟಿ ತನಿಖೆಗೆ ಆಗ್ರಹಿಸಿ ಸುಪ್ರೀಂನಲ್ಲಿ ಪಿಐಎಲ್ ಸಲ್ಲಿಕೆ

1-pavan

Tirupati laddu; ಪ್ರಾಯಶ್ಚಿತ ಎಂಬಂತೆ 11 ದಿನಗಳ ಉಪವಾಸ ಕೈಗೊಳ್ಳಲಿರುವ ಪವನ್ ಕಲ್ಯಾಣ್

Pushpa 2: ಅಲ್ಲು ಅರ್ಜುನ್‌ ʼಪುಷ್ಪ-2ʼನಲ್ಲಿ ಕ್ರಿಕೆಟಿಗ ಡೇವಿಡ್‌ ವಾರ್ನರ್?‌- ಫೋಟೋ ವೈರಲ್

Pushpa 2: ಅಲ್ಲು ಅರ್ಜುನ್‌ ʼಪುಷ್ಪ-2ʼನಲ್ಲಿ ಕ್ರಿಕೆಟಿಗ ಡೇವಿಡ್‌ ವಾರ್ನರ್?‌- ಫೋಟೋ ವೈರಲ್

ಟಿಟಿಡಿಯಿಂದ ನಂದಿನಿ ತುಪ್ಪಕ್ಕೆ ಮತ್ತೆ ಬೇಡಿಕೆ:‌ ಕೆಎಂಎಫ್ ಅಧ್ಯಕ್ಷ ಭೀಮಾನಾಯ್ಕ್

LadduCase; ಟಿಟಿಡಿಯಿಂದ ನಂದಿನಿ ತುಪ್ಪಕ್ಕೆ ಮತ್ತೆಬೇಡಿಕೆ:‌ ಕೆಎಂಎಫ್ ಅಧ್ಯಕ್ಷ ಭೀಮಾನಾಯ್ಕ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Panemangalore ಗ್ರಾಮ ಆಡಳಿತ ಕಚೇರಿ; ಶಿಥಿಲ ಕಟ್ಟಡದಲ್ಲೇ ಕಾರ್ಯಾಚರಣೆ

Panemangalore ಗ್ರಾಮ ಆಡಳಿತ ಕಚೇರಿ; ಶಿಥಿಲ ಕಟ್ಟಡದಲ್ಲೇ ಕಾರ್ಯಾಚರಣೆ

Belthangady: ತೋಡಿಗೆ ಅಡಿಕೆ ಮರವೇ ಸಂಕ!

Belthangady: ತೋಡಿಗೆ ಅಡಿಕೆ ಮರವೇ ಸಂಕ!

Belthangady: ಧರ್ಮಸ್ಥಳದಲ್ಲಿ 26 ನೇ ವರ್ಷದ ಭಜನಾ ತರಬೇತಿ ಕಮ್ಮಟ

Belthangady: ಧರ್ಮಸ್ಥಳದಲ್ಲಿ 26 ನೇ ವರ್ಷದ ಭಜನಾ ತರಬೇತಿ ಕಮ್ಮಟ

Aranthodu: ವಿದ್ಯಾರ್ಥಿಯ ಮರ್ಮಾಂಗ ಹಿಡಿದೆಳೆದು ಹಲ್ಲೆ

Aranthodu: ವಿದ್ಯಾರ್ಥಿಯ ಮರ್ಮಾಂಗ ಹಿಡಿದೆಳೆದು ಹಲ್ಲೆ

Fraud: ಕ್ರೆಡಿಟ್‌ ಕಾರ್ಡ್‌ ಆ್ಯಕ್ಟಿವೇಶನ್‌ ಹೆಸರಲ್ಲಿ ವಂಚನೆ

Fraud: ಕ್ರೆಡಿಟ್‌ ಕಾರ್ಡ್‌ ಆ್ಯಕ್ಟಿವೇಶನ್‌ ಹೆಸರಲ್ಲಿ ವಂಚನೆ

MUST WATCH

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

ಹೊಸ ಸೇರ್ಪಡೆ

10

Multi level parking ಇನ್ನೆಷ್ಟು ವರ್ಷ ಬೇಕು? ಬರೀ ಪಾರ್ಕಿಂಗಲ್ಲ, ಶಾಪಿಂಗ್‌ ಮಾಲೂ ಇದೆ!

16

Shirva: ಬಂಟಕಲ್‌ ತಾಂತ್ರಿಕ ಕಾಲೇಜು ಪದವಿ ಪ್ರದಾನ ಕಾರ್ಯಕ್ರಮ

9

Karkala: ವಿದ್ಯಾರ್ಥಿನಿ ರೂಪಿಸಿದ ವಿಜ್ಞಾನ ಮಾದರಿಗೆ  ರಾಷ್ಟ್ರ ಪ್ರಶಸ್ತಿ ಗರಿ

8

Kundapura-ಬೈಂದೂರು ಹೆದ್ದಾರಿ: ಬೆಳಗದ ಬೀದಿ ದೀಪಗಳು

Thirupathi-Laddu

Tirupati Laddu Row: ತಿರುಪತಿ ಶ್ರೀವಾರಿ ಲಡ್ಡು ಈಗ ಪರಿಶುದ್ಧ: ದೇವಸ್ಥಾನ ಸಮಿತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.