ಗ್ರಾಮೀಣ ಭಾಗದಲ್ಲಿ ವಿದ್ಯುತ್‌ ಬಿಲ್‌ ಪಾವತಿ ಗೊಂದಲ

ಎಟಿಪಿ ಮೆಷಿನ್‌ ನೆಟ್‌ವರ್ಕ್‌ ಸಮಸ್ಯೆ

Team Udayavani, Apr 15, 2020, 1:36 PM IST

ಗ್ರಾಮೀಣ ಭಾಗದಲ್ಲಿ ವಿದ್ಯುತ್‌ ಬಿಲ್‌ ಪಾವತಿ ಗೊಂದಲ

ಮುಂಡಾಜೆ: ಲಾಕ್‌ಡೌನ್‌ ಆದೇಶದ ಕಾರಣ ಬ್ಯಾಂಕ್‌, ಸಹಕಾರ ಸಂಘ, ಅಂಚೆ ಕಚೇರಿ, ಎಲ್‌ಐಸಿ ಮೊದಲಾದ ಸೇವೆಗಳು ಗ್ರಾಹಕರ ಬಾಕಿ ಪಾವತಿಯ ಅವಧಿಯನ್ನು ವಿಸ್ತರಿಸಿವೆ. ಆದರೆ ಅವಧಿ ವಿಸ್ತರಿಸದಿರುವ ವಿದ್ಯುತ್‌ ಬಿಲ್‌ ಪಾವತಿಗೆ ಈಗ ತೀವ್ರ ಸಮಸ್ಯೆಯಾಗಿದೆ. ಅದರಲ್ಲೂ ಗ್ರಾಮೀಣ ಭಾಗದಲ್ಲಿ ಈ ಸಮಸ್ಯೆಯು ಗಂಭೀರವಾಗಿದೆ.

ಪಾವತಿ ವಿಧಾನಗಳು
ಮೆಸ್ಕಾಂ ಕಚೇರಿಗಳ ಎ.ಟಿ.ಪಿ. ಮೆಷಿನ್‌ ಮೂಲಕ, ಪಂಚಾಯತ್‌ ಮಟ್ಟದಲ್ಲಿ ಪ್ರತಿ ತಿಂಗಳಿಗೆ ಒಂದು ಅಥವಾ ಎರಡು ಬಾರಿ, ಪೇಟಿಯಂ ಮೂಲಕ, ಮೆಸ್ಕಾಂ ಟಿ.ಆರ್‌.ಎಂ. ಮೂಲಕ, ಅಂಚೆ ಕಚೇರಿ ಮೂಲಕ ಈ ಹಿಂದೆ ವಿದ್ಯುತ್‌ ಬಿಲ್‌ ಪಾವತಿ ವ್ಯವಸ್ಥೆ ಇತ್ತು. ಇದರಲ್ಲಿ ಹಳ್ಳಿಯ ಜನ ಹೆಚ್ಚು ಅವಲಂಬಿಸುತಿದ್ದುದು ಪಂಚಾಯತ್‌ ಮಟ್ಟದ ಬಿಲ್‌ ಪಾವತಿ ವ್ಯವಸ್ಥೆಯನ್ನು. ಈಗ ಲಾಕ್‌ಡೌನ್‌ ಕಾರಣ ಈ ವ್ಯವಸ್ಥೆಯನ್ನು ನಿಲ್ಲಿಸಲಾಗಿದೆ. ಯಾವಾಗ ವಿದ್ಯುತ್‌ ಸಂಪರ್ಕ ಕಡಿತಗೊಳಿಸುವರೋ ಎಂದು ಹೆದರಿರುವ ಬಳಕೆದಾರರು ಬಿಲ್‌ ಕಟ್ಟಲು ಪರದಾಡುತ್ತಿದ್ದಾರೆ.

ಮೆಸ್ಕಾಂ ಕಚೇರಿಯ ಎ.ಟಿ.ಪಿ. ಮೆಷಿನ್‌ಗಳಲ್ಲಿ ಬೆಳಗ್ಗೆ 9ರ ಬಳಿಕ ಮಧ್ಯಾಹ್ನ 12ರ ತನಕ ಬಿಲ್‌ ಪಾವತಿಸಬಹುದು. ಆದರೆ ಇಲ್ಲಿ ಸಾಮಾಜಿಕ ಅಂತರ ಕಾಯ್ದು ಕೊಳ್ಳುವುದು, ನೆಟ್‌ವರ್ಕ್‌ ಕೈಕೊಡು ವುದು ಇತ್ಯಾದಿ ಸಮಸ್ಯೆಗಳು ಎದುರಾ ಗುತ್ತಿವೆ. ಹಳ್ಳಿಯ ಹೆಚ್ಚಿನ ಬಳಕೆದಾರರಿಗೆ ಇದನ್ನು ಬಳಸುವ ವಿಧಾನ ತಿಳಿದಿಲ್ಲ. ಪೇಟಿಯಂ, ಮೆಸ್ಕಾಂ ಟಿ.ಆರ್‌.ಎಂ. ಮೂಲಕ ಪಾವತಿ ಹಳ್ಳಿಯ ಜನತೆಗೆ ಅರ್ಥವಾಗದ ವಿಚಾರವಾಗಿದೆ. ಏಕೆಂದರೆ ಹೆಚ್ಚಿನ ಜನರಲ್ಲಿ ಸ್ಮಾರ್ಟ್‌ಫೋನ್‌ಗಳಿಲ್ಲ. ಇದ್ದರೂ ಪಾವತಿ ವಿಧಾನ ಗೊತ್ತಿಲ್ಲ. ಅಂಚೆ ಕಚೇರಿ ಮೂಲಕ ಪಾವತಿಸಬೇಕಾದರೆ ಕೆಲವು ಕಡೆ ಅಂಚೆ ಕಚೇರಿಗೆ ಹೋಗಿ ಬರಲು ಹತ್ತಿಪ್ಪತ್ತು ಕಿ.ಮೀ.ದೂರವನ್ನು ಕ್ರಮಿಸಬೇಕು. ಅಲ್ಲಿ ಹೋದರೆ ಅಲ್ಲೂ ನೆಟ್‌ವರ್ಕ್‌ನ ಸಮಸ್ಯೆ ಎದುರಾಗುತ್ತಿದ. ಹಾಗಾಗಿ ಎರಡೆರಡು ಬಾರಿ ತೆರಳಬೇಕಾಗಿ ಬರುತ್ತದೆ.

ಮೆಸ್ಕಾಂನವರು ಈ ಸಮಸ್ಯೆಗಳನ್ನು ಅರಿತು ವಿದ್ಯುತ್‌ ಬಳಕೆದಾರರಿಗೆ ಸೂಕ್ತ ವ್ಯವಸ್ಥೆಯನ್ನು ಮಾಡಿ ಗೊಂದಲವನ್ನು ನಿವಾರಿಸುವುದು ಅಗತ್ಯವಾಗಿದೆ ಎಂದು ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.

ಹೋಗಿ ಬರಲು ವಾಹನ ವ್ಯವಸ್ಥೆ ಇಲ್ಲ
ಬೆಳಗ್ಗೆ 7ರಿಂದ 12ರ ತನಕ ಸಿಗುವ ಸಮಯದಲ್ಲಿ ಮನೆಯಿಂದ ದೂರದಲ್ಲಿರುವ ವಿದ್ಯುತ್‌ ಬಿಲ್‌ ಪಾವತಿ ಕೇಂದ್ರಗಳಿಗೆ ಹೋಗಿ ಬರಲು ವಾಹನ ವ್ಯವಸ್ಥೆ ಇಲ್ಲ, ಇದರಿಂದ ಬಿಲ್‌ ಪಾವತಿ ಮಾಡಲಾಗುತ್ತಿಲ್ಲ.
– ಡೀಕಯ್ಯ, ವಿದ್ಯುತ್‌ ಬಳಕೆದಾರ, ನೆರಿಯ

ಟಾಪ್ ನ್ಯೂಸ್

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Vitla: Bolanthur Narsha robbery case: Four more arrested including Kerala police

Vitla: ಬೋಳಂತೂರು ನಾರ್ಶ ದರೋಡೆ ಪ್ರಕರಣ: ಕೇರಳದ ಪೊಲೀಸ್‌ ಸೇರಿ ಮತ್ತೆ ನಾಲ್ವರ ಬಂಧನ

8-kukke

Subrahmanya: ಮುಜರಾಯಿ ಸಚಿವರ ನೇತೃತ್ವದಲ್ಲಿ ಕುಕ್ಕೆ ದೇಗುಲದ ಅಭಿವೃದ್ಧಿ ಸಭೆ

3(1

Sullia: ಜಳಕದಹೊಳೆ ಸೇತುವೆ; ಸಂಚಾರ ನಿಷೇಧ

2(1

Uppinangady: ಕಾಂಕ್ರೀಟ್‌ ರಸ್ತೆಯೇ ಕಿತ್ತೋಗಿದೆ

1

Bantwal: ಕೃಷಿಕರ ತೋಟಗಳಿಗೆ ನುಗ್ಗಿದ ಜಕ್ರಿಬೆಟ್ಟು ಅಣೆಕಟ್ಟು ನೀರು!

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

19

Bharamasagara: ವಿದ್ಯುತ್ ಕಿಡಿಗೆ ಎರಡು‌ ಮೇವಿನ ಬಣವೆ ಸಂಪೂರ್ಣ ಭಸ್ಮ

1-tengu-dsdsa

Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.