![BR-Hills](https://www.udayavani.com/wp-content/uploads/2025/02/BR-Hills-415x249.jpg)
![BR-Hills](https://www.udayavani.com/wp-content/uploads/2025/02/BR-Hills-415x249.jpg)
Team Udayavani, Aug 10, 2021, 7:05 AM IST
ಬೆಳ್ತಂಗಡಿ: ಮೊಬೈಲ್ ಸಂಖ್ಯೆಗೆ ಸಂದೇಶ ಕಳುಹಿಸಿ ಅರೆಕಾಲಿಕ ಉದ್ಯೋಗ ಕೊಡಿಸುವ ಆಮಿಷ ಒಡ್ಡಿದ ಆನ್ಲೈನ್ ಖದೀಮರು ಬೆಳ್ತಂಗಡಿ ತಾಲೂಕಿನ ಚರ್ಚ್ ರಸ್ತೆಯ ಮಹಿಳೆಗೆ 5.61 ಲಕ್ಷ ರೂ. ವಂಚಿಸಿದ ಪ್ರಕರಣ ನಡೆದಿದ್ದು, ಮಂಗಳೂರು ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಳ್ತಂಗಡಿ ತಾಲೂಕಿನ ಚರ್ಚ್ ರಸ್ತೆಯ ಕಲ್ಕಣಿ ಜಾನ್ಸ್ ವೀವ್ ನಿವಾಸಿ ರವಿಶಂಕರ್ ಡಿ.ಕೆ. ಅವರ ಪತ್ನಿ ಪೂರ್ಣಿಮಾ ಆರ್. ವಂಚನೆಗೊಳಗಾದ ಮಹಿಳೆ. ಅವರ ಮೊಬೈಲ್ಗೆ ಜೂ. 28ರಂದು ಅಪರಿಚಿತ 9324118159 ಸಂಖ್ಯೆಯಿಂದ ಕರೆ ಮಾಡಿ ನಾನು ಕಾರ್ತಿಕ್, ಪಾರ್ಟ್ ಟೈಮ್ಗೆ ತುರ್ತಾಗಿ ನೇಮಕಾತಿ ಮಾಡುತ್ತಿದ್ದು, ನೀವು ಪ್ರತಿದಿನ 3000ದಿಂದ 8000 ರೂ.ವರೆಗೆ ಗಳಿಸಬಹುದು.
ಇದಕ್ಕಾಗಿ (hhtps://wa.me/+917259213629) ಸಂಪರ್ಕಿಸುವಂತೆ ಸಂದೇಶ ಕಳುಹಿಸಲಾಗಿತ್ತು. ಇದನ್ನು ನಂಬಿದ್ದ ಮಹಿಳೆ ಅದೇ ಸಂಖ್ಯೆಗೆ ಸಂಪರ್ಕಿಸಿದಾಗ (hhtps://fun-earn.com/Home/Public/reg/smid/478150) ಲಿಂಕ್ ಕಳುಹಿಸಲಾಗಿದೆ. ಲಿಂಕ್ನಲ್ಲಿ ರಿಜಿಸ್ಟರ್ ಮಾಡಿದಾಗ ಪೂರ್ಣಿಮಾ ಖಾತೆಗೆ 100 ರೂ. ಜಮೆಯಾಗಿದೆ. ಅನಂತರ ಅಪರಿಚಿತ ವ್ಯಕ್ತಿ ಕಳುಹಿಸಿದ ವೆಬ್ಸೈಟ್ನಲ್ಲಿ ಮಹಿಳೆಗೆ ಒಂದೊಂದೇ ಟಾಸ್ಕ್ ನೀಡಿ 8 ಟಾಸ್ಕ್ ಗಳ ಮೂಲಕ ಒಟ್ಟು 5,61,537 ರೂ. ವಂಚಿಸಲಾಗಿದೆ.
You seem to have an Ad Blocker on.
To continue reading, please turn it off or whitelist Udayavani.