Vitla: ಭಾರೀ ಸುಳಿಗಾಳಿಗೆ ತತ್ತರ : ಹಲವು ಮನೆಗಳಿಗೆ ಹಾನಿ
Team Udayavani, Jul 23, 2023, 2:38 PM IST
ವಿಟ್ಲ: ಅಳಿಕೆ ಗ್ರಾಮದ ವಧ್ವ, ಕಾನತ್ತಡ್ಕ, ಕೊಳೆಂಜಿಮಾರು ಭಾಗದಲ್ಲಿ ಭಾರೀ ಸುಳಿಗಾಳಿಗೆ ಜನ ತತ್ತರಿಸಿ ಹೋಗಿದ್ದಾರೆ. ಹಲವು ಮನೆ, ದನದ ಹಟ್ಟಿ, ಕೊಟ್ಟಿಗೆ, ವಿದ್ಯುತ್ ಕಂಬಗಳು ಹಾನಿಗೊಳಗಾಗಿದೆ.
ಅಳಿಕೆ ಗ್ರಾಮದ ವಧ್ವ ನಿವಾಸಿಗಳಾದ ಗೋಪಾಲಕೃಷ್ಣ ನಾವುಡ, ನರಸಿಂಹ ನಾವುಡ, ರಾಮ ಬೆಳ್ಚಾಡ, ಕೊಳೆಂಜಿಮಾರು ನಿವಾಸಿ ಚಂದ್ರಶೇಖರ ನಾಯ್ಕ, ಕಾನತ್ತಡ್ಕ ನಿವಾಸಿ ಅಬ್ದುಲ್ ರಝಾಕ್ ಅವರ ಮನೆ ಹಾಗೂ ಉಪಕಟ್ಟಡಗಳಿಗೆ ಹಾನಿಯಾಗಿದೆ.
ಇಬ್ಬರ ಮನೆಗಳು ಭಾಗಶಃ ಸಂಪೂರ್ಣ ಹಾನಿಯಾಗಿದ್ದು, ಉಳಿದ ಇಬ್ಬರ ಮನೆಗಳು ಹಾನಿಗೊಳಗಾಗಿದೆ. ಸುಳಿಗಾಳಿಯ ಅವಾಂತರಕ್ಕೆ ಮರಗಳು ಮನೆ ಹಾಗೂ ಕಟ್ಟಡಗಳ ಮೇಲೆ ಎಸೆಯಲ್ಪಟ್ಟಿದೆ.
ಸ್ಥಳಕ್ಕೆ ಅಳಿಕೆ ಗ್ರಾಮ ಪಂಚಾಯತ್ ಅಧಿಕಾರಿಗಳು, ಜನಪ್ರತಿನಿಧಿಗಳು, ಕಂದಾಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ
Vijayapura: ಗ್ರಾಮಕ್ಕೆ ನುಗ್ಗಿದ ಮೊಸಳೆ ಸೆರೆ
Canada Vs India: ನಿಜ್ಜರ್ ಹತ್ಯೆ ಕೇಸಲ್ಲಿ ಸತ್ಯ ಒಪ್ಪಿದ ಕೆನಡಾ ಪ್ರಧಾನಿ: ಕೇಂದ್ರ ಸರಕಾರ
Helping Nature: ಭಾರತ ದಾಳಿ ಮಾಡಲ್ಲ, ತನ್ನ ಮೇಲಿನ ದಾಳಿಯನ್ನೂ ಸಹಿಸಲ್ಲ: ಭಾಗವತ್
Kanakapura: ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.