![1-sidda](https://www.udayavani.com/wp-content/uploads/2025/02/1-sidda-415x281.jpg)
![1-sidda](https://www.udayavani.com/wp-content/uploads/2025/02/1-sidda-415x281.jpg)
Team Udayavani, Nov 16, 2021, 3:28 PM IST
ಬೆಳ್ತಂಗಡಿ: ಚಿಕ್ಕಮಗಳೂರು ಸೇರಿದಂತೆ ಘಾಟ್ ಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿರುವ ಪರಿಣಾಮ ದಿಡುಪೆ ಪ್ರದೇಶದ ಹಳ್ಳಗಳು ತುಂಬಿ ಹರಿಯಲಾರಂಬಿಸಿದೆ.
ರಾಷ್ಟ್ರೀಯ ಉದ್ಯಾನದಂಚಿನಲ್ಲಿರುವ ಬಂಡಾಜೆ ಅರ್ಬಿ ಫಾಲ್ಸ್ ಧುಮ್ಮಿಕ್ಕಿ ಹರಿಯುವ ದೃಶ್ಯ ಸ್ಥಳೀಯರು ಸೆರೆ ಹಿಡಿದಿದ್ದಾರೆ.
ಕಳೆದ ಎರಡು ದಿನಗಳ ಹಿಂದಿನಿಂದ ಬೆಳ್ತಂಗಡಿ ತಾಲೂನಾದ್ಯಂತ ಸಂಜೆಯಾಗುತ್ತಲೆ ಭಾರೀ ಮಳೆ ಸುರಿಯುತ್ತಿದೆ.
ಇದೀಗ ದಿಡುಪೆ ಪರಿಸರದಲ್ಲಿ ನಿರಂತರ 3 ಗಂಟೆ ಭಾರಿ ಗಾಳಿ ಮಳೆ ಸುರಿಯುತ್ತಿರುವ ಪರಿಣಾಮ ಹಳ್ಳ, ತೋಡುಗಳಲ್ಲಿ ಹರಿವು ಹೆಚ್ಚಾಗಿದ್ದು ನೇತ್ರಾವತಿ ನದಿಯಲ್ಲಿ ನೀರು ಹೆಚ್ಚಾಗುವ ಸಂಭವವಿದೆ.
ದಿಡುಪೆ ಸಮೀಪ ಹಳ್ಳಗಳಿಗೆ ಹಾಕಿದ ತಾತ್ಕಾಲಿಕ ಮರದ ಪಾಲಗಳು ಕೊಚ್ಚಿಹೋಗಿವೆ.
You seem to have an Ad Blocker on.
To continue reading, please turn it off or whitelist Udayavani.