![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Jul 21, 2022, 6:25 AM IST
ಪುತ್ತೂರು: ಅಂಗವಿಕಲರ ಕಲ್ಯಾಣ ಇಲಾಖೆಯು ಅಂಗವಿಕಲರಿಗೆ ಉಚಿತವಾಗಿ ದ್ವಿಚಕ್ರ ವಾಹನ ನೀಡುತ್ತಿದ್ದರೂ ಆದಾಯ ಮಿತಿಯ ಕಾರಣದಿಂದ ಹಲವು ಅರ್ಹರಿಗೆ ಸೌಲಭ್ಯ ಪಡೆಯಲು ಸಾಧ್ಯವಾಗುತ್ತಿಲ್ಲ.
ಶೇ. 75ಕ್ಕೂ ಅಧಿಕ ಅಂಗವಿಕಲರಿಗೆ ಸ್ವಸಾಮರ್ಥ್ಯದಿಂದ ವಾಹನ ಚಲಾಯಿಸಲು ಸಾಧ್ಯವಿಲ್ಲದ ಕಾರಣ ದ್ವಿಚಕ್ರ ವಾಹನ ನೀಡಲಾಗುತ್ತದೆ. ಪ್ರತೀ ವರ್ಷ ಇಲಾಖೆ ರಾಜ್ಯಮಟ್ಟದಲ್ಲಿ ಇದಕ್ಕಾಗಿ ಗುರಿ ನಿಗದಿಪಡಿಸಿ ಅದನ್ನು ಜಿಲ್ಲಾವಾರು ಹಂಚಿಕೆ ಮಾಡುತ್ತದೆ.
ವಾರ್ಷಿಕ 2 ಲಕ್ಷ ರೂ.ಗಿಂತ ಹೆಚ್ಚಿನ ಆದಾಯ ಇರುವವರಿಗೆ ಈ ಸೌಲಭ್ಯ ಸಿಗುತ್ತಿಲ್ಲ. ಪ್ರತ್ಯೇಕ 2 ಟಯರ್ ಅಳ ವಡಿಸಿದ ದ್ವಿಚಕ್ರ ವಾಹನ ಖರೀದಿಸ ಬೇಕಾದರೆ 1 ಲಕ್ಷ ರೂ.ಗಳಿಗೂ ಅಧಿಕ ಹಣ ಬೇಕಾಗುತ್ತದೆ. ಅಂಗವಿಕಲರಿಗೆ ಸಾಲ ನೀಡಲು ಬ್ಯಾಂಕ್ಗಳು ಕೂಡ ಮೀನಮೇಷ ಎಣಿಸುತ್ತವೆ. ಹೀಗಿರುವಾಗ ಸರಕಾರ ಇನ್ನೂ ಕೂಡ 2 ಲಕ್ಷ ರೂ. ಮಿತಿ ಇಟ್ಟುಕೊಂಡಿರುವುದು ಸರಿಯಲ್ಲ ಎನ್ನುತ್ತಾರೆ ಅಂಗವಿಕಲರು.
1,200 ವಾಹನ
2021-22ನೇ ಸಾಲಿನಲ್ಲಿ ರಾಜ್ಯದಲ್ಲಿ 1,200 ಅಂಗವಿಕಲರಿಗೆ ಉಚಿತ ದ್ವಿಚಕ್ರ ವಾಹನ ಮಂಜೂರು ಮಾಡಲಾಗಿತ್ತು. ಪುತ್ತೂರು-ಕಡಬಕ್ಕೆ 10, ಬೆಳ್ತಂಗಡಿ-4, ಸುಳ್ಯ-6, ಬಂಟ್ವಾಳ-6, ಉಳ್ಳಾಲ – 6, ಮಂಗಳೂರು ನಗರ- 5, ಮಂಗಳೂರು ಉತ್ತರ- 4, ಮೂಡು ಬಿದಿರೆ-5 ಮಂಜೂರಾಗಿದೆ. ದ.ಕ. ಜಿಲ್ಲೆಯಲ್ಲಿ 32 ವಾಹನಗಳ ಗುರಿ ನೀಡ ಲಾಗಿದ್ದು, ಗುರಿ ಮೀರಿ ಸಾಧನೆ ಮಾಡಿ 50 ವಾಹನ ವಿತರಿಸಲಾಗುತ್ತಿದೆ. 2022-23ನೇ ಸಾಲಿನಲ್ಲಿ ವಾಹನ ವಿತರಣೆಗೆ ಸಂಬಂಧಿಸಿ ಇಲಾಖೆಯಿಂದ ಇನ್ನೂ ಗುರಿ ನಿಗದಿ ಮಾಡಿ ಆದೇಶ ಬಂದಿಲ್ಲ.
1 ವಾಹನಕ್ಕೆ 92 ಸಾವಿರ ರೂ.
ದ.ಕ. ಜಿಲ್ಲೆಗೆ ಕಳೆದ ಆರ್ಥಿಕ ಸಾಲಿನಲ್ಲಿ ಮಂಜೂರಾದ 50 ದ್ವಿಚಕ್ರ ವಾಹನಗಳು ವಿಳಂಬವಾಗಿ ಪೂರೈಕೆಯಾದ ಕಾರಣ ಈಗ ವಿತರಿಸ ಲಾಗುತ್ತಿದೆ. ಅವುಗಳಿಗೆ ವಿಮೆ ಆಗ ಬೇಕಿದೆ. ಇನ್ನೊಂದು ವಾರ ದಲ್ಲಿ ಫಲಾ ನುಭವಿಗಳಿಗೆ ಆರ್ಸಿ ನೀಡಲಾಗು ವುದು. ವಿಶೇಷ ಚಕ್ರಗಳ ಅಳವಡಿಕೆ ಸೇರಿದಂತೆ 1 ವಾಹನಕ್ಕೆ 92 ಸಾವಿರ ರೂ. ಸರಕಾರ ನೀಡುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಉಚಿತ ವಾಹನ ಪಡೆಯಲು ಶೇ. 75 ಅಥವಾ ಅದಕ್ಕಿಂತ ಹೆಚ್ಚಿನ ವೈಕಲ್ಯ ಇರಬೇಕೆಂಬ ನಿಯಮವಿದ್ದು, ಅದನ್ನು ಪರಿಷ್ಕರಿಸಿ ಶೇ. 50ಕ್ಕೆ ಇಳಿಸಬೇಕು ಎಂದು ಪ್ರಸ್ತಾವನೆ ಸಲ್ಲಿಸಲಾಗಿದೆ. ಇದರಿಂದ ಶೇ. 50 ವೈಕಲ್ಯ ಹೊಂದಿದವರೂ ಉಚಿತ ವಾಹನ ಪಡೆಯಬಹುದು. ಆದಾಯ ಮಿತಿ ಹೆಚ್ಚಳದ ಬಗ್ಗೆ ಇದುವರೆಗೂ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿಲ್ಲ.
– ಗೋಪಾಲಕೃಷ್ಣ ,
ಅಂಗವಿಕಲರ ಕಲ್ಯಾಣಾಧಿಕಾರಿ, ದ.ಕ. ಜಿಲ್ಲೆ
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
You seem to have an Ad Blocker on.
To continue reading, please turn it off or whitelist Udayavani.