ನಿವೇಶನ ಹಂಚಿಕೆಗೆ ಹೆಚ್ಚುತ್ತಿದೆ ವಸತಿ ರಹಿತರ ಬೇಡಿಕೆ

ಬೆಳ್ತಂಗಡಿ ಪಟ್ಟಣ ಪಂಚಾಯತ್‌ ಹೊಸ ಆಡಳಿತ ಮಂಡಳಿ ಮುಂದಿವೆ ಹಲವು ಸವಾಲುಗಳು

Team Udayavani, Mar 21, 2020, 4:18 AM IST

ನಿವೇಶನ ಹಂಚಿಕೆಗೆ ಹೆಚ್ಚುತ್ತಿದೆ ವಸತಿ ರಹಿತರ ಬೇಡಿಕೆ

ಬೆಳ್ತಂಗಡಿ: ಇತಿಹಾಸದಲ್ಲೇ ಮೊದಲ ಬಾರಿಗೆ ಪ.ಪಂ. ಚುನಾವಣೆಯಲ್ಲಿ ಬಹುಮತ ಪಡೆದಿದ್ದ ಬಿಜೆಪಿಗೆ ಮೀಸ ಲಾತಿ ಗೊಂದಲದಿಂದ ಸಿಕ್ಕಿದ ಅಧಿಕಾರ ಅವಕಾಶವೂ ವಿಳಂಬವಾಗಿತ್ತು. ಇತ್ತ ಕಳೆದ ವಾರ ರಾಜ್ಯ ಸರಕಾರ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳಿಗೆ ಮೀಸಲಾತಿ ಪ್ರಕಟಿಸಿದ್ದರೂ ಸಿಂಧ ನೂರು ನಗರಸಭೆ ಅಧ್ಯಕ್ಷ ಸ್ಥಾನದ ಮೀಸಲಾತಿ ಪ್ರಶ್ನಿಸಿ ಉಚ್ಚ ನ್ಯಾಯಾಲಯಕ್ಕೆ ಸಲ್ಲಿಸಿರುವ ಅರ್ಜಿಯಿಂದ ಮತ್ತೆ ನಿರಾಸೆ ಮೂಡಿಸಿದೆ.

ನೂತನ ಆಡಳಿತ ಮಂಡಳಿ ಬಂದರೂ ಹಲವು ಸವಾಲುಗಳನ್ನು ಎದುರಿಸಲು ಸನದ್ಧ ವಾಗಬೇಕಿದೆ. ಈಗಾ ಗಲೇ ಬೆಳ್ತಂಗಡಿ ಪ.ಪಂ. ವ್ಯಾಪ್ತಿಗೊಳಪಟ್ಟಂತೆ ನಿವೇಶನ ಹಂಚಿಕೆ ಸವಾಲಾಗಿರುವ ನಡುವೆಯೇ ನಿವೇಶನ ರಹಿತ ಆಕಾಂಕ್ಷಿಗಳ ಪಟ್ಟಿ ಬೆಳೆಯುತ್ತಿದೆ. ಪಟ್ಟಣ ವ್ಯಾಪ್ತಿಯಲ್ಲಿ ಅಂದಾಜು ಪ್ರಕಾರ 8,300ಕ್ಕೂ ಹೆಚ್ಚು ಜನಸಂಖ್ಯೆ ಹೊಂದಿದೆ. ಈ ನಡುವೆ 400ಕ್ಕೂ ಹೆಚ್ಚು ಮಂದಿ ನಿವೇಶನ ಬೇಡಿಕೆಯಲ್ಲಿದ್ದರೆ, ಅನೇಕ ಮಂದಿ ಮೂಡ ಕಾನೂನಿನ ಅಡೆತಡೆಯಿಂದ ಪೇಟೆ ಬಿಟ್ಟು ಮನೆ ನಿರ್ಮಾಣಕ್ಕೆ ಮುಂದಾಗಿದ್ದಾರೆ.

155 ನಿವೇಶನ ಹಸ್ತಾಂತರ
ನಿವೇಶನ ರಹಿತರ ಅರ್ಜಿಯಂತೆ 2000-01ರಲ್ಲಿ ಮೊದಲ ಬಾರಿಗೆ ವಾರ್ಡ್‌ ನಂ. 7ರ ರೆಂಕೆದಗುತ್ತು ಎಂಬಲ್ಲಿ ಆಶ್ರಯ ಯೋಜನೆಯಡಿ ಬಡಾವಣೆ ನಿರ್ಮಿಸಿ ಎರಡು ಮುಕ್ಕಾಲು ಸೆಂಟ್ಸ್‌ನಂತೆ 108 ನಿವೇಶನ ಹಂಚಿಕೆ ಮಾಡಲಾಗಿತ್ತು. ಇದರ ಹೊರತಾಗಿ 2012-14ರಲ್ಲಿ ವಾರ್ಡ್‌ ನಂ. 9ರ ಹುಣ್ಸೆಕಟ್ಟೆ ಎಂಬಲ್ಲಿ ಪ. ಜಾತಿ, ಪ. ಪಂಗಡದ 47 ಕುಟುಂಬಗಳಿಗೆ ನಿವೇಶನ ಒದಗಿಸಿತ್ತು. 2019-20ನೇ ಸಾಲಿನಲ್ಲಿ ಅರ್ಜಿ ಸಲ್ಲಿಸಿದವರಿಗೆ ಪ್ರಸಕ್ತ ವಾರ್ಡ್‌ ನಂ. 2ರ ಕಲ್ಲಗುಡ್ಡೆ ಎಂಬಲ್ಲಿ ನಿವೇಶನ ಗುರುತಿಸಲಾಗಿದ್ದು, ಹಕ್ಕುಪತ್ರ ಬರುವ ಹಂತದಲ್ಲಿದೆ.

ಉಳಿದಂತೆ ಸುಮಾರು 400ಕ್ಕೂ ಹೆಚ್ಚು ನಿವೇಶನ ರಹಿತರಿಗೆ ನಿವೇಶನ ಒದಗಿಸುವ ಸವಾಲಿದ್ದು, 10ರಿಂದ 12 ಎಕ್ರೆ ಸ್ಥಳಾವಕಾಶ ಅಗತ್ಯವಿದೆ. ಈ ಕುರಿತಾಗಿ ಪ.ಪಂ. ಆಡಳಿತಾಧಿಕಾರಿಯಾಗಿರುವ ತಹಶೀಲ್ದಾರ್‌ ಹಾಗೂ ಶಾಸಕರು ನಿವೇಶನ ಗುರುತಿಸುವ ಪ್ರಯತ್ನದಲ್ಲಿದ್ದಾರೆ. ಸರಕಾರಿ ಸ್ಥಳಾವಕಾಶ ಇಲ್ಲದಿದ್ದಲ್ಲಿ ಖಾಸಗಿಯಾಗಿ ಎಕ್ರೆಗೆ 12 ಲಕ್ಷ ರೂ.ನಂತೆ ಖರೀದಿಸುವ ಅವಕಾಶವೂ ಇದೆ. ಆದರೆ ಅದರ ಅನುಷ್ಠಾನಕ್ಕೆ ಮುಂದಾಗಬೇಕಿದೆ.

ಮೂಡ ಸಮಸ್ಯೆ ಬಗೆಹರಿಯುವುದೇ?
ಮೂಡ ಕಾನೂನು ಸಡಿಲಗೊಳಿಸುವ ಸಲುವಾಗಿ ಈಗಾಗಲೇ ಪ.ಪಂ. ವತಿಯಿಂದ ನಗರಾಭಿವೃದ್ಧಿ ಸಚಿವರಿಗೆ ಮನವಿ ನೀಡಲಾಗಿದೆ. ಸಿಂಗಲ್‌ ಲೇಔಟ್‌ ಕನ್ವರ್ಶನ್‌, ರಸ್ತೆ ವಿಸ್ತರಣೆ ಕಾನೂನು ತೊಡಕು ಮನೆ ನಿರ್ಮಾಣಕ್ಕೆ ಸದ್ಯ ದುಪ್ಪಟ್ಟು ದಂಡ ತೆರಬೇಕಾದ ಸ್ಥಿತಿ ಇದೆ. ಕಾನೂನು ಸರಳಗೊಳಿಸಿದಲ್ಲಿ ಅನೇಕ ಮಂದಿಗೆ ಅನುಕೂಲವಾಗಲಿದೆ.

ಹೊಟೇಲ್‌ ತ್ಯಾಜ್ಯ, ಒಳಚರಂಡಿ ನಿರ್ವಹಣೆ
ಹೊಟೇಲ್‌ ತ್ಯಾಜ್ಯ ನೀರು ರಸ್ತೆ ಚರಂಡಿಯಲ್ಲಿ ಸಾಗುತ್ತಿರುವ ಕುರಿತು ಅನೇಕ ದೂರುಗಳು ಕೇಳಿಬರುತ್ತಿವೆ. ಉಳಿದಂತೆ ಒಳಚರಂಡಿ ಯೋಜನೆಗೆ 2009-10ನೇ ಸಾಲಿನಲ್ಲಿ ಸರ್ವೆ ನಡೆದಿದೆ. ಆದರೆ ಮುಖ್ಯ ರಸ್ತೆ ಹೆದ್ದಾರಿ ಇಲಾಖೆಗೆ ಹಸ್ತಾಂತರಗೊಂಡಿದ್ದರಿಂದ ಒಳಚರಂಡಿ ವಿಸ್ತರಣೆ ನನೆಗುದಿಗೆ ಬಿದ್ದಿದೆ. ಸಮಗ್ರ ಒಳಚರಂಡಿ ನಿರ್ಮಾಣವಾಗದಿದ್ದಲ್ಲಿ ಬೆಳೆಯುತ್ತಿರುವ ಪಟ್ಟಣದ ಅಭಿವೃದ್ಧಿಗೆ ಹೊಡೆತ ಬೀಳಲಿವೆ. ಈ ಸವಾಲುಗಳನ್ನು ಸಮರ್ಥವಾಗಿ ಎದುರಿಸುವ ಸವಾಲು ಪ.ಪಂ. ಆಡಳಿತದ ಮುಂದಿದೆ.

ಪಾರ್ಕಿಂಗ್‌ ವ್ಯವಸ್ಥೆ, ಸಂತೆ ಮಾರುಕಟ್ಟೆ ಸ್ಥಳಾಂತರ
ಈಗಿರುವ ರಸ್ತೆ ಕಿರಿದಾಗಿದ್ದು, ಪಾರ್ಕಿಂಗ್‌ ವ್ಯವಸ್ಥೆ ಪ.ಪಂ.ಗೆ ಸವಾಲಾಗಿದೆ. ಸೂಕ್ತ ಸ್ಥಳಾವಕಾಶ ಗುರುತಿಸುವುದು ಒಂದೆಡೆಯಾದರೆ, ವಾರದ ಸಂತೆ ಮಾರುಕಟ್ಟೆಯಿಂದ ಸಂಚಾರ ಕಿರಿಕಿರಿಯಾಗುತ್ತಿರುವುದರಿಂದ ಎಪಿಎಂಸಿಗೆ ಸ್ಥಳಾಂತರಿಸಬೇಕೆಂಬ ಕೂಗು ಕೇಳಿ ಬರುತ್ತಿದೆ. ಸ್ಥಳಾಂತರಗೊಂಡಲ್ಲಿ ಪ.ಪಂ. ಆದಾಯಕ್ಕೆ ಹೊಡೆತ ಬೀಳುವುದರಿಂದ ಇರುವ ಮಾರಕಟ್ಟೆಯಲ್ಲೇ ಸ್ಥಳಾವಕಾಶ ನೀಡುವ ಯೋಜನೆ ಫಲಪ್ರದಾವಗುತ್ತದೋ ಕಾದುನೋಡಬೇಕಿದೆ.

 ಹಂತಹಂತವಾಗಿ ಹಂಚಿಕೆಗೆ ಆದ್ಯತೆ
ನಿವೇಶನ ಹಂಚಿಕೆ ಹಿಂದಿನಿಂದಲೂ ಗರಿಷ್ಠ ಪ್ರಯತ್ನ ನಡೆದಿದೆ. ಮುಂದಿನ ದಿನಗಳಲ್ಲಿ ಸೂಕ್ತ ಸ್ಥಳಾವಕಾಶ ಗುರುತಿಸುವಲ್ಲಿ ಸರ್ವೆ ನಡೆಸಲಾಗುವುದು. ಹೊಸ ಆಡಳಿತ ಮಂಡಳಿ ಸಲಹೆಯಂತೆ ಬೇಡಿಕೆಯಷ್ಟು ನಿವೇಶನ ನೀಡಲಾಗದಿದ್ದರೂ ಹಂತಹಂತವಾಗಿ ನಿವೇಶನ ಹಂಚಿಕೆಗೆ ಆದ್ಯತೆ ನೀಡಲಾಗುವುದು.
– ಗಣಪತಿ ಶಾಸ್ತ್ರಿ, ತಹಶೀಲ್ದಾರ್‌, ಪ‌.ಪಂ. ಆಡಳಿತಾಧಿಕಾರಿ

-  ಚೈತ್ರೇಶ್‌ ಇಳಂತಿಲ

ಟಾಪ್ ನ್ಯೂಸ್

MOdi (3)

Jammu and Kashmir ಜನತೆ ಭ್ರಷ್ಟ ಮುಕ್ತ ಸರಕಾರ ಬಯಸಿದ್ದಾರೆ: ಮೋದಿ

UNITED NATIONS

UN ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ಸ್ಥಾನ: ಪೋರ್ಚುಗಲ್‌ ಬೆಂಬಲ

1-wewewq

PM ರೇಸ್‌ನಲ್ಲಿ ನಾನು ಇಲ್ಲ; ಬೇಕಿದ್ದರೇ ಮೋದಿ ಕೇಳಿ: ಗಡ್ಕರಿ

Manglrui

Mangaluru: ಸಂಸ್ಥೆಯ ಬೆಳವಣಿಗೆಯಲ್ಲಿ ಮಾನವ ಸಂಪನ್ಮೂಲ ಪಾತ್ರ ಪ್ರಮುಖ: ಮಂಜುನಾಥ ಭಂಡಾರಿ

1-asasa

Test; ನ್ಯೂಜಿಲ್ಯಾಂಡ್‌ ಆಲೌಟ್‌ 88 : ಲಂಕೆಗೆ 514 ರನ್‌ ದಾಖಲೆ ಮುನ್ನಡೆ

dinesh-gu

Dinesh Gundurao; ತಿಂಗಳೊಳಗೆ ಗೃಹ ಆರೋಗ್ಯ ಯೋಜನೆ ಜಾರಿ

leopard

leopard: ಮೂಲ್ಕಿ ಕೊಯ್ಯಾರಿನಲ್ಲಿ ಸಣ್ಣ ಮರಿಯೊಂದಿಗೆ ಚಿರತೆ ಪ್ರತ್ಯಕ್ಷ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

05856

Sullia: ಮರ್ಕಂಜ; ಕಾಣೆಯಾಗಿದ್ದ ಮಹಿಳೆಯ ಮೃತದೇಹ ಬಾವಿಯಲ್ಲಿ ಪತ್ತೆ

Sullia: ಅಂಗಡಿ, ಹೊಟೇಲ್‌ನಿಂದ ನಗದು ಕಳವು

Sullia: ಅಂಗಡಿ, ಹೊಟೇಲ್‌ನಿಂದ ನಗದು ಕಳವು

Puttur: ಬ್ಯಾಂಕ್‌ ಸಿಬಂದಿ ವಿರುದ್ಧ ಮಾನಭಂಗಕ್ಕೆ ಯತ್ನದ ಪ್ರತಿದೂರು; ಎಸ್‌ಪಿ ಭೇಟಿ

Puttur: ಬ್ಯಾಂಕ್‌ ಸಿಬಂದಿ ವಿರುದ್ಧ ಮಾನಭಂಗಕ್ಕೆ ಯತ್ನದ ಪ್ರತಿದೂರು; ಎಸ್‌ಪಿ ಭೇಟಿ

Puttur: ಮಹಿಳೆಯ ಮೇಲೆ ಮಾನಭಂಗಕ್ಕೆ ಯತ್ನ: ದೂರು ದಾಖಲು

Puttur: ಮಹಿಳೆಯ ಮೇಲೆ ಮಾನಭಂಗಕ್ಕೆ ಯತ್ನ: ದೂರು ದಾಖಲು

Aranthodu: ಮಿತ್ತಡ್ಕದ ಮಹಿಳೆ ನಾಪತ್ತೆ; ಬಾವಿಯಲ್ಲಿ ಹುಡುಕಾಟ

Aranthodu: ಮಿತ್ತಡ್ಕದ ಮಹಿಳೆ ನಾಪತ್ತೆ; ಬಾವಿಯಲ್ಲಿ ಹುಡುಕಾಟ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

congress

Haryana ಅನ್ನದಾತರ ಕಲ್ಯಾಣಕ್ಕೆ ಆಯೋಗ ರಚನೆ: ಕಾಂಗ್ರೆಸ್‌ ವಾಗ್ಧಾನ

MOdi (3)

Jammu and Kashmir ಜನತೆ ಭ್ರಷ್ಟ ಮುಕ್ತ ಸರಕಾರ ಬಯಸಿದ್ದಾರೆ: ಮೋದಿ

court

Jama Masjid:ಮಾಜಿ ಪಿಎಂ ಸಹಿ ಕಡತ ಸಲ್ಲಿಸದ್ದಕ್ಕೆ ಕೋರ್ಟ್‌ ಟೀಕೆ

UNITED NATIONS

UN ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ಸ್ಥಾನ: ಪೋರ್ಚುಗಲ್‌ ಬೆಂಬಲ

1-wewewq

PM ರೇಸ್‌ನಲ್ಲಿ ನಾನು ಇಲ್ಲ; ಬೇಕಿದ್ದರೇ ಮೋದಿ ಕೇಳಿ: ಗಡ್ಕರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.