![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, May 12, 2023, 6:30 AM IST
ಬಂಟ್ವಾಳ: ಬಿ.ಸಿ. ರೋಡು- ಅಡ್ಡಹೊಳೆ ಹೆದ್ದಾರಿ ಕಾಮಗಾರಿ ಭಾಗವಾಗಿ ಮೆಲ್ಕಾರ್ ನಲ್ಲಿ ಉಂಟಾಗುತ್ತಿರುವ ಟ್ರಾಫಿಕ್ ಜಾಮ್ ಸಮಸ್ಯೆ ನಿತ್ಯವೂ ಮುಂದು ವರಿದಿದ್ದು, ಗುರುವಾರವೂ ಬೆಳಗ್ಗಿ ನಿಂದಲೇ ವಾಹನಗಳ ಸರತಿ ಕಂಡುಬಂದಿತ್ತು.
ಪ್ರಸ್ತುತ ಮೆಲ್ಕಾರ್ನಲ್ಲಿ ಎರಡೂ ಬದಿಯ ಸರ್ವೀಸ್ ರಸ್ತೆಗಳಲ್ಲಿ ಮಾತ್ರ ವಾಹನ ಸಂಚಾರಕ್ಕೆ ಅವಕಾಶವಿದ್ದು, ಅದು ಕಿರಿದಾಗಿರುವ ಪರಿಣಾಮ ವಾಹನಗಳ ಸರಾಗ ಓಡಾಟಕ್ಕೆ ಅಡ್ಡಿಯಾಗಿದೆ. ಜತೆಗೆ ಬಸ್ಸುಗಳು ರಸ್ತೆಯಲ್ಲೇ ನಿಂತು ಪ್ರಯಾಣಿಕರನ್ನು ಹತ್ತಿಸಿಕೊಳ್ಳುತ್ತಿದ್ದು, ಇತರ ವಾಹನಗಳು ನಿಧಾನವಾಗಿ ಸಾಗುವ ಕಾರಣ ಸಂಚಾರ ದಟ್ಟಣೆ ಉಂಟಾಗುತ್ತಿದೆ.
ಮತ್ತೂಂದೆಡೆ ಮುಡಿಪು ಭಾಗದ ರಸ್ತೆಯು ಮೆಲ್ಕಾರ್ ಜಂಕ್ಷನ್ನಲ್ಲೇ ಹೆದ್ದಾರಿಯನ್ನು ಸೇರುತ್ತಿದ್ದು, ಇಲ್ಲಿ ವಾಹನದವರು ಎತ್ತ ಸಾಗಬೇಕು ಎಂಬ ಗೊಂದಲಕ್ಕೀಡಾಗುತ್ತಿದ್ದು, ನಿತ್ಯವೂ ಟ್ರಾಫಿಕ್ ಕಿರಿಕಿರಿಯಿಂದ ಸ್ಥಳೀಯರು ಬೇಸತ್ತಿದ್ದಾರೆ.
ಸಮಾರಂಭ ಇದ್ದ ದಿನಗಳಲ್ಲಿ ಹೆದ್ದಾರಿಯಲ್ಲಿ ದಿನವಿಡೀ ವಾಹನಗಳ ಸರತಿ ಕಂಡುಬರುತ್ತಿದ್ದು, ಗುರುವಾರವೂ ಅದೇ ಪರಿಸ್ಥಿತಿ ಮುಂದುವರಿದಿತ್ತು. ಮೆಲ್ಕಾರ್ನ ಒಂದು ಬದಿಯಲ್ಲಿ ಪಾಣೆಮಂಗ ಳೂರು ಬೈಪಾಸ್ವರೆಗೆ ಹಾಗೂ ಮತ್ತೂಂದು ಬದಿಯಲ್ಲಿ ಬೋಳಂ ಗಡಿ ವರೆಗೂ ವಾಹನಗಳು ಹೆದ್ದಾರಿ ಯಲ್ಲಿ ನಿಲ್ಲಬೇಕಾಗಿದೆ. ಈ ಸಮಸ್ಯೆ ಯಿದಾಗಿ ಸಮಾರಂಭಕ್ಕೆ ತೆರಳು ವವರಿಗೆ ನಿಗದಿತ ಸಮಯಕ್ಕೆ ತಲು ಪಲಾಗುತ್ತಿಲ್ಲ. ಈ ಬಗ್ಗೆ ಗಮನ ಹರಿಸ ಬೇಕು ಎಂಬುದು ಜನರ ಆಗ್ರಹ.
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
You seem to have an Ad Blocker on.
To continue reading, please turn it off or whitelist Udayavani.