ಹಳೆ ತಾ| ಕೇಂದ್ರದಲ್ಲಿ ಹೋಬಳಿಗೂ ಸೌಕರ್ಯವಿಲ್ಲ

ಉಪ್ಪಿನಂಗಡಿ: ನಾಡ ಕಚೇರಿಗೆ ಸ್ವಂತ ನಿವೇಶನವಿದ್ದರೂ ಗ್ರಾ.ಪಂ. ಕಟ್ಟಡದಲ್ಲಿ ಕಾರ್ಯ ನಿರ್ವಹಣೆ

Team Udayavani, Dec 20, 2021, 5:37 PM IST

ಹಳೆ ತಾ| ಕೇಂದ್ರದಲ್ಲಿ ಹೋಬಳಿಗೂ ಸೌಕರ್ಯವಿಲ್ಲ

ಉಪ್ಪಿನಂಗಡಿ: ಒಂದು ಕಾಲದಲ್ಲಿ ತಾಲೂಕು ಕೇಂದ್ರವಾಗಿದ್ದ ಉಪ್ಪಿನಂಗಡಿಯಲ್ಲಿ ಹೋಬಳಿ ಕೇಂದ್ರಕ್ಕೆ ಬೇಕಾದ ಸವಲತ್ತುಗಳೇ ಇನ್ನೂ ಇಲ್ಲದ ಸ್ಥಿತಿ.

11 ಗ್ರಾಮಗಳ ವ್ಯಾಪ್ತಿ ಹೊಂದಿರುವ ಉಪ್ಪಿನಂಗಡಿ ಹೋಬಳಿ ಪುತ್ತೂರು ತಾಲೂಕಿನ ಎರಡನೇ ಅತೀ ದೊಡ್ಡ ವಾಣಿಜ್ಯ ಕೇಂದ್ರ. ರಾಷ್ಟ್ರೀಯ ಹೆದ್ದಾರಿ ಹತ್ತಿರದಲ್ಲಿರುವುದನ್ನು ಬಿಟ್ಟರೆ ಬೇರೇನೂ ಇಲ್ಲ ಎನ್ನಬಹುದು.
ಸ್ವಂತ ನಿವೇಶನವಿದ್ದರೂ ಗ್ರಾ.ಪಂ. ಕಟ್ಟಡದಲ್ಲಿ ಆಶ್ರಯ ಪಡೆದು ಕಚೇರಿ ಕೆಲಸ ನಿರ್ವಹಿಸಬೇಕಾದ ಅನಿವಾರ್ಯತೆ ಇಲ್ಲಿನ ನಾಡ ಕಚೇರಿಯದ್ದು. ಎಂಟು ವರ್ಷಗಳ ಹಿಂದೆ ಒಂಬತ್ತು ಸೆಂಟ್ಸ್‌ ಸ್ವಂತ ನಿವೇಶನದಲ್ಲಿದ್ದ ಕಟ್ಟಡ ಶಿಥಿಲಗೊಂಡು ಛಾವಣಿ ಕುಸಿದು ಅಪಾಯದ ಅಂಚಿನಲ್ಲಿದ್ದ ವಿಚಾರ ತಿಳಿದ ಆಗಿನ ಜಿಲ್ಲಾಧಿಕಾರಿ ಸೂಚನೆ ಮೇರೆಗೆ ಸಹಾಯಕ ಕಮಿಶನರ್‌ ಮೂಲಕ ಗ್ರಾ.ಪಂ. ಆಡಳಿತದೊಂದಿಗೆ ಮಾತುಕತೆ ನಡೆಸಿ ಗ್ರಾ.ಪಂ.ನ ಒಂದು ಪಾರ್ಶ್ವದಲ್ಲಿ ಒಂದು ವರ್ಷದ ಅವಧಿಗೆಂದು ಅನುಮತಿ ಪಡೆಯಲಾಗಿತ್ತು. ನೂತನ ಕಟ್ಟಡ ರಚನೆಗೆ ಸರಕಾರದಿಂದ ಯಾವುದೇ ಅನುದಾನ ಬಿಡುಗಡೆಗೊಳ್ಳದಿರುವುದರಿಂದ ಮೂರು ವರ್ಷಗಳಿಂದ ಗ್ರಾ.ಪಂ. ಕಟ್ಟಡದಲ್ಲಿ ಉಳಿದುಕೊಂಡಿದೆ.

ಹೋಬಳಿಯ ಸೌಲಭ್ಯ ಇಲ್ಲ
ಬ್ರಿಟಿಷ್‌ ಕಾಲದ ಅವಧಿಯಲ್ಲಿ ಉಪ್ಪಿನಂಗಡಿ ತಾಲೂಕು ಕೇಂದ್ರವಾಗಿತ್ತು. ನೆರೆಪೀಡಿತ ಪ್ರದೇಶವಾದ ಕಾರಣಕ್ಕೆ ಪುತ್ತೂರಿಗೆ ಸ್ಥಳಾಂತರವಾಗಿತ್ತು. ಈ ಹೋಬಳಿ ಮಟ್ಟದ ನಾಡಕಚೇರಿ 11 ಗ್ರಾಮಗಳಿಗೆ 12 ಕಿ.ಮೀ. ದೂರದಲ್ಲಿದೆ. ಆದರೆ ಹೆದ್ದಾರಿ ಬದಿಯಲ್ಲಿಯೇ ಇರುವುದರಿಂದ ಸಂಚಾರ ದೃಷ್ಟಿಯಿಂದ ಸಹಕಾರಿ ಎಂದೆನಿಸಿದೆ.

ವಸತಿ ಗೃಹವೇ ಕಚೇರಿ
ಜಾತಿ ಆದಾಯ, ಜನನ ಮರಣ ನೋಂದಣಿ, ಪಿಂಚಣಿ, ಸಣ್ಣ ರೈತ ಮುಂತಾದ ದಾಖಲೆಗಳಿಗೆ ಸಾರ್ವಜನಿಕರು ಬಂದರೆ ಸರ್ವರ್‌ ಸಮಸ್ಯೆ ಇಲ್ಲಿ ಸಾಮಾನ್ಯ ಎಂಬಂತಿದೆ. ಒಂದು ಕೆಲಸಕ್ಕೆ ಮೂರು ನಾಲ್ಕು ಬಾರಿ ಅಲೆದಾಡುವ ಸ್ಥಿತಿ ಇಲ್ಲಿನದು. ಗ್ರಾಮ ಚಾವಡಿಯಲ್ಲಿ ಕಂದಾಯ ನಿರೀಕ್ಷಕರಿಗೆ ಕೊಠಡಿ ಇಲ್ಲದೆ ತಾತ್ಕಾಲಿಕವಾಗಿ ಕಂದಾಯ ಇಲಾಖೆ ವಸತಿ ಗೃಹವನ್ನೇ ಕಚೇರಿಯನ್ನಾಗಿಸುವ ಪರಿಸ್ಥಿತಿ ಉದ್ಬವಿಸಿದೆ. ಡಿ ಗ್ರೂಪ್‌ನ ಎರಡು ಹುದ್ದೆ ಭರ್ತಿಯಾಗಿಲ್ಲ. ಇಲ್ಲಿಗೆ ಪೂರ್ಣಾವಧಿ ಕಂದಾಯ ನಿರೀಕ್ಷಕರೇ ಇಲ್ಲ. ಅವರ ಬದಲಿಗೆ ಗ್ರಾಮ ಕರಣಿಕರನ್ನೇ ಪ್ರಭಾರವಾಗಿ ನೇಮಿಸಲಾಗಿದೆ. ಕರ್ತವ್ಯ ದಲ್ಲಿರುವ ಗ್ರಾಮ ಕರಣಿಕರು ನಿವೃತ್ತ ಸೇನಾನಿ ಯಾಗಿದ್ದು, ಅವರಿಗೆ ರಾಜ್ಯ ಅಗ್ನಿ ಶಾಮಕ ದಳದ ಎಸ್‌ಐ ಹುದ್ದೆಗೆ ನೇಮಕಾತಿ ಆದೇಶ ಬಂದಿದೆ. ಇದರಿಂದಾಗಿ ಈ ಹುದ್ದೆಯೂ ಖಾಲಿ ಬೀಳುವ ಸ್ಥಿತಿ ನಿರ್ಮಾಣವಾಗಿದೆ.

ಪಾಳು ಬಿದ್ದ ಕಟ್ಟಡ
ಸ್ವಂತ ನಿವೇಶನದಲ್ಲಿ ಸರಕಾರದ ಲಕ್ಷಾಂತರ ರೂಪಾಯಿ ಮೌಲ್ಯದ ಸೋಲಾರ್‌ ಪ್ಲೇಟ್‌ ಹಳೇ ಕಟ್ಟಡದಲ್ಲಿ ಪಾಳು ಬಿದ್ದಿದ್ದು ಪಕ್ಕದಲ್ಲೇ ಪೊಲೀಸ್‌ ಠಾಣೆ ಇರುವುದರಿಂದ ಇದಕ್ಕೆ ರಕ್ಷಣೆ ದೊರೆತಿದೆ.

ಹೋಬಳಿ ಗ್ರಾಮಗಳು
ಹೋಬಳಿ ವ್ಯಾಪ್ತಿಯಲ್ಲಿ ಉಪ್ಪಿನಂಗಡಿ, 34ನೇ ನೆಕ್ಕಿಲಾಡಿ, ಬಜತ್ತೂರು, ಹಿರೇಬಂಡಾಡಿ, ಕೋಡಿಂಬಾಡಿ, ಬೆಳ್ಳಿಪ್ಪಾಡಿ, ಚಿಕ್ಕಮುಟ್ನೂರು, ಬನ್ನೂರು, ಕಬಕ, ಕೋಡಿಪ್ಪಾಡಿ ಪಟ್ನೂರು ಸೇರಿ 11 ಗ್ರಾಮಗಳಿವೆ.

ಹೋಬಳಿ ಮಟ್ಟದ ಉಪ್ಪಿನಂಗಡಿ ನಾಡ ಕಚೇರಿಯ ಕಟ್ಟಡದ ವಿಚಾರ ಮನವರಿಕೆಯಾಗಿದೆ. ಈಗಾಗಲೇ ಈ ಬಗ್ಗೆ ಸರಕಾರಕ್ಕೆ 20 ಲಕ್ಷ ರೂ. ವೆಚ್ಚದಲ್ಲಿ ನೂತನ ಕಟ್ಟಡ ರಚನೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಶೀಘ್ರ ಜಿಲ್ಲೆಯ ಶಾಸಕರಿಗೆ ವಿಷಯ ಮನವರಿಕೆ ಮಾಡಿ ಸರಕಾರದ ಮಟ್ಟದಲ್ಲಿ ಮಂಜೂರಾತಿಗೆ ಪ್ರಯತ್ನಿಸಲಾಗುವುದು.
-ಡಾ| ರಾಜೇಂದ್ರ, ಜಿಲ್ಲಾಧಿಕಾರಿ

ಸ್ವಂತ ಕಟ್ಟಡಕ್ಕೆ ಸರಕಾರಕ್ಕೆ ಅನುದಾನದ ಅಂದಾಜುಪಟ್ಟಿ ಕಳುಹಿಸಲಾಗಿದೆ. ಮಂಜೂರಾತಿ ಪ್ರಕ್ರಿಯೆ ನಡೆದಿಲ್ಲ. ಕಚೇರಿಯಲ್ಲಿ ಡಿ ಗ್ರೂಪ್‌ ಹಾಗೂ ಕಂದಾಯ ನಿರೀಕ್ಷಕರ ಹುದ್ದೆ ಖಾಲಿ ಉಳಿದಿದೆ.
-ಚೆನ್ನಪ್ಪ, ಉಪ ತಹಶೀಲ್ದಾರ್‌

– ಎಂ.ಎಸ್‌.ಭಟ್‌ ಉಪ್ಪಿನಂಗಡಿ

 

ಟಾಪ್ ನ್ಯೂಸ್

West Bengal ಕೋರ್ಟ್‌ ಗಳಲ್ಲಿ ಭಯದ ವಾತಾವರಣ-ಸಿಬಿಐಗೆ ಸುಪ್ರೀಂಕೋರ್ಟ್ ತರಾಟೆ

West Bengal ಕೋರ್ಟ್‌ ಗಳಲ್ಲಿ ಭಯದ ವಾತಾವರಣ-ಸಿಬಿಐಗೆ ಸುಪ್ರೀಂಕೋರ್ಟ್ ತರಾಟೆ

Tirupati Case; Hurtful work for Hindus by converted Jagan: KS Eshwarappa

Tirupati Case; ಮತಾಂತರಗೊಂಡ ಜಗನ್‌ ರಿಂದ ಹಿಂದೂಗಳಿಗೆ ನೋವುಂಟು ಮಾಡುವ ಕೆಲಸ: ಈಶ್ವರಪ್ಪ

11-bantwala

Bantwala: ಸಂಬಂಧಿಕರ ಮನೆಗೆ ಹೋಗುವುದಾಗಿ ಹೇಳಿದ್ದ ಯುವತಿ ನಾಪತ್ತೆ

ರಾಂಗ್ ರೂಟ್ ನಲ್ಲಿ ಬಂದ ಕಾರಿಗೆ ಬೈಕ್ ಡಿಕ್ಕಿ… ಭಯಾನಕ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ

ರಾಂಗ್ ರೂಟ್ ನಲ್ಲಿ ಬಂದ ಕಾರಿಗೆ ಬೈಕ್ ಡಿಕ್ಕಿ… ಭಯಾನಕ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ

Supreme court ಯೂಟ್ಯೂಬ್‌ ಲೈವ್‌ ಸ್ಟ್ರೀಮ್‌ ಚಾನೆಲ್‌ ಹ್ಯಾಕ್…ಕ್ರಿಪ್ಟೋ ವಿಡಿಯೋ ಪೋಸ್ಟ್!

Supreme court ಯೂಟ್ಯೂಬ್‌ ಲೈವ್‌ ಸ್ಟ್ರೀಮ್‌ ಚಾನೆಲ್‌ ಹ್ಯಾಕ್…ಕ್ರಿಪ್ಟೋ ವಿಡಿಯೋ ಪೋಸ್ಟ್!

CM Siddaramaiah slams BJP about Ganeshotsav riot

Mysuru; ಬಿಜೆಪಿಯವರ ಕುಮ್ಮಕ್ಕಿನಿಂದಲೇ ರಾಜ್ಯದಲ್ಲಿ ಗಲಾಟೆ: ಸಿಎಂ ಸಿದ್ದರಾಮಯ್ಯ ಆರೋಪ

ಮೈಸೂರು ದಸರಾ ಉದ್ಘಾಟನೆಗೆ ಸಾಹಿತಿ ಪ್ರೊ.ಹಂ.ಪ.ನಾಗರಾಜಯ್ಯ

Mysuru Dasara 2024: ಮೈಸೂರು ದಸರಾ ಉದ್ಘಾಟನೆಗೆ ಸಾಹಿತಿ ಪ್ರೊ.ಹಂ.ಪ.ನಾಗರಾಜಯ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

11-bantwala

Bantwala: ಸಂಬಂಧಿಕರ ಮನೆಗೆ ಹೋಗುವುದಾಗಿ ಹೇಳಿದ್ದ ಯುವತಿ ನಾಪತ್ತೆ

Sullia: ಅಭಿವೃದ್ಧಿ ಕಾಣದ ಪೆರ್ಮಾಜೆ-ಕೋಟೆಗುಡ್ಡೆ-ಪಂಬೆತ್ತಾಡಿ ರಸ್ತೆ

Sullia: ಅಭಿವೃದ್ಧಿ ಕಾಣದ ಪೆರ್ಮಾಜೆ-ಕೋಟೆಗುಡ್ಡೆ-ಪಂಬೆತ್ತಾಡಿ ರಸ್ತೆ

Thumbe: ಅಗೆದಲ್ಲಿ ಕಡೆಗೂ ಡಾಮರು

Thumbe: ಅಗೆದಲ್ಲಿ ಕಡೆಗೂ ಡಾಮರು

Puttur: ಶೂನ್ಯ ತ್ಯಾಜ್ಯದತ್ತ ಪುತ್ತೂರು; ಹಸಿ ಕಸದಿಂದ ಬಯೋಗ್ಯಾಸ್‌ ತಯಾರಿ

Puttur: ಶೂನ್ಯ ತ್ಯಾಜ್ಯದತ್ತ ಪುತ್ತೂರು; ಹಸಿ ಕಸದಿಂದ ಬಯೋಗ್ಯಾಸ್‌ ತಯಾರಿ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Udupi ತಮಿಳುನಾಡಿನ ಎಳನೀರು; ಸ್ಥಳೀಯ ಕಾರ್ಮಿಕರ ಕೊರತೆ

Udupi ತಮಿಳುನಾಡಿನ ಎಳನೀರು; ಸ್ಥಳೀಯ ಕಾರ್ಮಿಕರ ಕೊರತೆ

Bellary; poor food supply; Protest in SC, ST hostel

Bellary; ಕಳಪೆ ಆಹಾರ ಪೂರೈಕೆ; ಎಸ್‌ಸಿ, ಎಸ್ಟಿ ವಸತಿ ನಿಲಯದಲ್ಲಿ ಪ್ರತಿಭಟನೆ

Udupi: ಉಡುಪಿಗೆ ಬರುವುದೆಂದು ವಾರಾಹಿ ನೀರು?; ಶೇ.90 ಕಾಮಗಾರಿ ಪೂರ್ಣ

Udupi: ಉಡುಪಿಗೆ ಬರುವುದೆಂದು ವಾರಾಹಿ ನೀರು?; ಶೇ.90 ಕಾಮಗಾರಿ ಪೂರ್ಣ

West Bengal ಕೋರ್ಟ್‌ ಗಳಲ್ಲಿ ಭಯದ ವಾತಾವರಣ-ಸಿಬಿಐಗೆ ಸುಪ್ರೀಂಕೋರ್ಟ್ ತರಾಟೆ

West Bengal ಕೋರ್ಟ್‌ ಗಳಲ್ಲಿ ಭಯದ ವಾತಾವರಣ-ಸಿಬಿಐಗೆ ಸುಪ್ರೀಂಕೋರ್ಟ್ ತರಾಟೆ

12-epson

Epson ಇಕೊ ಟ್ಯಾಂಕ್ ಪ್ರಿಂಟರ್: ರಶ್ಮಿಕಾ ಮಂದಣ್ಣ ಅಭಿಯಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.