![1-congress](https://www.udayavani.com/wp-content/uploads/2025/02/1-congress-415x299.jpg)
![1-congress](https://www.udayavani.com/wp-content/uploads/2025/02/1-congress-415x299.jpg)
Team Udayavani, Aug 26, 2018, 12:55 PM IST
ಉಪ್ಪಿನಂಗಡಿ: ಮನೆಯಲ್ಲಿರುವ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಎಲ್ಲೆಂದರಲ್ಲಿ ಎಸೆಯದಿರಿ, ಎಸೆದು ಪರಿಸರ ಕೆಡಿಸದಿರಿ ಎನ್ನುವ ನೆಲೆಯಲ್ಲಿ ಶಾಲೆಯ ವಿದ್ಯಾರ್ಥಿಗಳೆಲ್ಲರೂ ಮನೆಯ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಶಾಲೆಗೆ ತನ್ನಿ ಎನ್ನುವ ಸ್ವಚ್ಛ ಭಾರತ ಅಭಿಯಾನದ ಸ್ವಚ್ಛತಾ ಸರ್ವೇಕ್ಷಣ ಕಾರ್ಯಕ್ರಮಕ್ಕೆ ಉಪ್ಪಿನಂಗಡಿ ಗ್ರಾ.ಪಂ. ವತಿಯಿಂದ ಶನಿವಾರ ಪುಳಿತ್ತಡಿ ಸರಕಾರಿ ಹಿ.ಪ್ರಾ. ಶಾಲೆಯಲ್ಲಿ ಚಾಲನೆ ನೀಡಲಾಯಿತು.
ಮಕ್ಕಳು ಶಾಲೆಗೆ ತಂದ ತ್ಯಾಜ್ಯಗಳನ್ನು ಸ್ಥಳೀಯ ಗ್ರಾ.ಪಂ. ವತಿಯಿಂದ ಸಂಗ್ರಹಿಸಿ ವಿಲೇ ಮಾಡಲಾಗುತ್ತದೆ. ಮನೆಯವರು, ಗ್ರಾಮಸ್ಥರು ಈ ಕಾರ್ಯಕ್ಕೆ ಸಹಕರಿಸಬೇಕು ಎಂದು ಗ್ರಾ.ಪಂ. ಕಾರ್ಯದರ್ಶಿ ಮರಿಯಮ್ಮ ಜಾನ್ಸಿ ಹೇಳಿದರು.
ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಉದಯ ಕುಮಾರ್ ಅತ್ರಮಜಲು, ಗ್ರಾ.ಪಂ. ಸದಸ್ಯ ಸುನೀಲ್ ದಡ್ಡು, ಶಾಲಾ ಮುಖ್ಯ ಶಿಕ್ಷಕಿ ಜೂಲಿಯಾನಾ ವಾಸ್, ಪ್ರಮುಖರಾದ ಚಂದ್ರಿಕಾ, ರಹಿಮತ್, ವಿಶ್ವೇಶ್ವರ ಭಟ್, ಪುಷ್ಪಾವತಿ ಉಪಸ್ಥಿತರಿದ್ದರು. ಶಾಲಾ ಶಿಕ್ಷಕಿ ಪುನಂತೇಶ್ವರಿ ಸ್ವಾಗತಿಸಿ, ರತ್ನಾವತಿ ವಂದಿಸಿದರು. ಗ್ರಾ.ಪಂ. ಸಿಬಂದಿ ಮಹಾಲಿಂಗ, ಇಕ್ಬಾಲ್, ಕೆ. ಇಸಾಕ್ ಕಾರ್ಯಕ್ರಮ ನಿರೂಪಿಸಿದರು.
You seem to have an Ad Blocker on.
To continue reading, please turn it off or whitelist Udayavani.