![1-sidda](https://www.udayavani.com/wp-content/uploads/2025/02/1-sidda-415x281.jpg)
![1-sidda](https://www.udayavani.com/wp-content/uploads/2025/02/1-sidda-415x281.jpg)
Team Udayavani, Dec 10, 2023, 1:02 PM IST
ವಿಟ್ಲ: ಭಾರೀ ಗುಡುಗು ಮಳೆಗೆ ಮನೆಯ ವಿದ್ಯುತ್ ಉಪಕರಣಗಳು ಹಾಗೂ ಕೃಷಿ ಪಂಪ್ ಶೆಡ್ಡ್ ಗೆ ಹಾನಿಯಾದ ಘಟನೆ ಪುಣಚದ ಮನೆಯೊಂದರಲ್ಲಿ ಡಿ.9ರಂದು ನಡೆದಿದೆ.
ಪುಣಚ ಗ್ರಾಮದ ಕೆಲ್ಲಾಳಿಯ ಕೆಲ್ಲಾಳಿ ದೇವಪ್ಪ ನಾಯ್ಕ ಎಂಬವರ ಮನೆಯ ವಿದ್ಯುತ್ ಉಪಕರಣಗಳು ಹಾಗೂ ಕೃಷಿ ಪಂಪ್ ಶೆಡ್ಡ್ ಗೆ ಸಿಡಿಲು ಬಡಿದು ಅಪಾರ ನಷ್ಟ ಉಂಟಾಗಿದೆ.
ನಿನ್ನೆ ರಾತ್ರಿ ಸುರಿದ ಭಾರೀ ಮಳೆ, ಸಿಡಿಲು, ಮಿಂಚಿಗೆ ಮನೆಯ ವಿದ್ಯುತ್ ಉಪಕರಣಗಳು ಹಾಗೂ ಪಕ್ಕದಲ್ಲಿ ಕೃಷಿಗೆ ಅಳವಡಿಸಲಾದ ಪಂಪು ಶೆಡ್ಡ್ ಗೆ ಕೂಡಾ ಸಿಡಿಲು ಬಡಿದು ಅಪಾರ ನಷ್ಟ ಉಂಟಾಗಿದೆ ಎಂದು ಮನೆಯ ಮಾಲಕ ತಿಳಿಸಿದ್ದಾರೆ.
You seem to have an Ad Blocker on.
To continue reading, please turn it off or whitelist Udayavani.