ಪುತ್ತೂರು: ಯಾರಿಗೂ ಬೇಡವಾದ ಶುದ್ಧ ನೀರಿನ ಘಟಕಗಳು!


Team Udayavani, May 31, 2024, 4:22 PM IST

ಪುತ್ತೂರು: ಯಾರಿಗೂ ಬೇಡವಾದ ಶುದ್ಧ ನೀರಿನ ಘಟಕಗಳು!

ಕಿರಣ್‌ ಪ್ರಸಾದ್‌ ಕುಂಡಡ್ಕ
ಪುತ್ತೂರು: ಈ ಬೇಸಗೆಯಲ್ಲಿ ತಾಲೂಕಿನ ಕೆಲವು ಭಾಗಗಳಲ್ಲಿ  ನೀರಿಗೂ ತತ್ವಾರ ಉಂಟಾಗಿತ್ತು. ಹಾಗಂತ ಲಕ್ಷ-ಲಕ್ಷ ರೂ. ಖರ್ಚು ಮಾಡಿ ನೀರು ಪೂರೈಸಲೆಂದೇ ನಿರ್ಮಿಸಲಾಗಿದ್ದ ಶುದ್ಧ ಕುಡಿಯುವ ನೀರಿನ ಘಟಕ ಹನಿ ನೀರು ಕೊಡುವ ಸ್ಥಿತಿಯಲ್ಲಿರಲಿಲ್ಲ. ಪಕ್ಕಾ ರಹಸ್ಯ ಬಂಗಲೆಯನ್ನು ನೆನಪಿಸುತ್ತಿರುವ ಈ ಘಟಕದ ಸ್ಥಿತಿಗೆ ಆಡಳಿತ ವ್ಯವಸ್ಥೆ ತಲೆ ತಗ್ಗಿಸುವಂತಿದೆ. ಈ ಬಾರಿ ಬಯಲಾದದ್ದು ಬರಗಾಲವಲ್ಲ, ಶುದ್ಧ ನೀರಿನ ಘಟಕದ ವ್ಯವಸ್ಥೆಯ ಬಂಡವಾಳ.

ಏನಿದು ಶುದ್ಧ ನೀರಿನ ಘಟಕ?
ಗ್ರಾಮೀಣಾಭಿವೃದ್ಧಿ ಮತ್ತು ಪಂ.ರಾಜ್‌ ಇಲಾಖೆಯ ನೇತೃತ್ವದಲ್ಲಿ 2016 ರಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣ
ಯೋಜನೆ ಪ್ರಸ್ತಾಪ ವಾದಾಗ ದ. ಕ.ಜಿಲ್ಲೆಗೆ ಸೂಕ್ತ ಅಲ್ಲ ಅನ್ನುವ ಅಭಿಪ್ರಾಯ ಕೇಳಿ ಬಂದಿತ್ತು. ಮುಂದೊಂದು ದಿನ
ನೀರಿಗಾಗಿ ಹಾಹಾಕಾರ ಉಂಟಾದಾಗ ಪ್ರಯೋಜನ ಆದೀತು ಎನ್ನುವ ಉತ್ತರ ನೀಡಿ ಯೋಜನೆ ತರಾತುರಿಯಲ್ಲಿ ಚಾಲನೆ ನೀಡಲಾಯಿತು.

ಗ್ರಾ.ಪಂ. ವ್ಯಾಪ್ತಿಗಳಲ್ಲಿ 12 ಲಕ್ಷ ರೂ. ವೆಚ್ಚದಲ್ಲಿ ಘಟಕ ನಿರ್ಮಾಣ ಕೈಗೆತ್ತಿಕೊಳ್ಳಲಾಗಿತ್ತು. ಕೆಆರ್‌ಡಿಎಲ್‌ ಕಾಮಗಾರಿ ನಿರ್ವಹಣೆ
ಜವಾಬ್ದಾರಿ ಹೊಂದಿತ್ತು. ಈ ಯೋಜನೆ ಪ್ರಕಾರ ಜನವಸತಿ ಪ್ರದೇಶದಲ್ಲಿ ಘಟಕ ನಿರ್ಮಿಸಿ ನೀರಿನ ಅಗತ್ಯವುಳ್ಳ ವ್ಯಕ್ತಿಯು
2 ರೂ.ಕಾಯಿನ್‌ ಹಾಕಿ 20 ಲೀಟರ್‌ ನೀರನ್ನು ಪಡೆದುಕೊಳ್ಳುವುದಾಗಿತ್ತು. 13 ಸ್ಥಳ, 7 ಘಟಕ ತಾಲೂಕಿನಲ್ಲಿ 13 ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಿಸಲು ಸ್ಥಳ ಗುರುತು ಮಾಡಿದ್ದರೂ ಪೂರ್ಣಗೊಂಡದ್ದು 7 ಮಾತ್ರ. ಉಳಿದದ್ದು ಆರಂಭದಲ್ಲೇ ನಿಂತಿತ್ತು. ಕೆಲವೆಡೇ ಅಡಿಪಾಯ ಹಂತದಲ್ಲೇ ಬಾಕಿಯಾಯಿತು.

ಕೆಲವು ವರ್ಷಗಳ ಬಳಿಕ ರಾಜ್ಯದ ಬೇರೆ ಬೇರೆ ಭಾಗದಲ್ಲಿ ಘಟಕ ನಿರ್ಮಾಣದಲ್ಲಿ ಕಂಡು ಬಂದ ಅವ್ಯವಹಾರ, ಸೂಕ್ತವಲ್ಲದ
ಕಡೆ ನಿರ್ಮಾಣ, ಗುತ್ತಿಗೆದಾರರ ವಿಳಂಬ ಕಾರಣಗಳಿಂದ ಯೋಜನೆಯನ್ನು ಮುಂದುವರಿಸದಂತೆ ಸೂಚನೆ ನೀಡಲಾಯಿತು. ಈ ಪೈಕಿ ಐದು ವರ್ಷದ ಹಿಂದೆ ಪುತ್ತೂರು ತಾಲೂಕಿನಲ್ಲಿ ಪೂರ್ಣಗೊಂಡ 7 ಘಟಕಗಳನ್ನು ಕೆಆರ್‌ ಡಿಸಿಎಲ್‌ ಗ್ರಾಮ ಪಂಚಾಯತ್‌ಗೆ
ಹಸ್ತಾಂತರಿಸಿತ್ತು.

ಗಡಿ ಗ್ರಾಮದ ಕಥೆಯೂ ಅದೇ ಪುತ್ತೂರು ತಾಲೂಕಿನ ಗಡಿ ಗ್ರಾಮ, ಕಡಬ ತಾಲೂಕಿಗೆ ಸೇರಿರುವ ಸವಣೂರು ಗ್ರಾ.ಪಂ.ನ ಎರಡು ಕಡೆ ಘಟಕ ನಿರ್ಮಾಣವಾಗಿದೆ. ಅವೆರೆಡೂ ಪಾಳು ಬಿದ್ದು ತನ್ನ ಸ್ಥಿತಿಗೆ ತಾನೇ ಮರುಗುತ್ತಿದೆ. ಮಂಜುನಾಥನಗರ ಬಳಿ ನಿರ್ಮಿಸಿರುವ ಘಟಕದ ಬಾಗಿಲು ತುಂಡಾಗಿ ಪೊದೆ ತುಂಬಿದೆ. ಸವಣೂರು ಬಳಿ ಜನ ಸಂಚಾರವೇ ಇಲ್ಲದ ಕಡೆ ಘಟಕ ನಿರ್ಮಿಸಿದ್ದು ಅದು ಮಣ್ಣು, ಪೊದೆ ಆವೃತವಾಗಿ ಇತಿಹಾಸದ ಪುಟ ಸೇರಲು ಅಣಿಯಾಗಿದೆ.

ಕಳ್ಳರ ತಾಣ
ಜನವಸತಿ ಕೇಂದ್ರಗಳಲ್ಲಿ ಘಟಕ ನಿರ್ಮಿಸಿದರೆ ಅದರಿಂದ ಪ್ರಯೋಜನ ಇತ್ತು. ಆದರೆ ಜನ ಸಂಚಾರ ಇಲ್ಲದ, ವಾಹನ ಪಾರ್ಕಿಂಗ್‌ಗೆ ಸ್ಥಳ ಇಲ್ಲದ ಕಡೆಗಳಲ್ಲಿ ಘಟಕ ಸ್ಥಾಪಿಸಲಾಗಿದೆ ಅನ್ನುವುದು ಗ್ರಾ.ಪಂ.ಗಳ ಆರೋಪ. ಘಟಕ ನಿರ್ಮಿಸಿ ಗ್ರಾ.ಪಂ.ಗೆ ಹಸ್ತಾಂತರಿಸುವ ಸಂದರ್ಭದಲ್ಲಿ ಘಟಕದ ಕಾರ್ಯನಿರ್ವಹಣೆ ಬಗ್ಗೆ ತರಬೇತಿ ನೀಡುವುದಾಗಿ ಜಿ.ಪಂ. ಹೇಳಿತ್ತು. ಆ ತರಬೇತಿಯು ನೀಡಲಿಲ್ಲ. ಪರಿಣಾಮ ಗ್ರಾ.ಪಂ. ಘಟಕದ ಕಡೆಗೆ ತಲೆ ಹಾಕುವ ಪ್ರಯತ್ನವನ್ನೂ ಮಾಡಲಿಲ್ಲ. ಐದು ವರ್ಷದ ಹಿಂದೆ ಆರಂಭದಲ್ಲಿ ಕೆಲವೆಡೆ ಕಾಯಿನ್‌ ಹಾಕಿ ನೀರು ಪಡೆಯುವ ಪ್ರಯತ್ನ ನಡೆದಿದ್ದರೂ ಕೆಲವು ತಿಂಗಳಲ್ಲೇ ಅದು
ನಿಂತು ಹೋಗಿದೆ. ಸದ್ಯದ ಪರಿಸ್ಥಿತಿ ಹೇಗಿದೆ ಅಂದರೆ, ಘಟಕಗಳು ಪೊದೆ ತುಂಬಿ ಪ್ರವೇಶವೇ ಇಲ್ಲದಂತಿದೆ. ಅಲ್ಲಿನ ಲಕ್ಷಾಂತರ ರೂ. ಮೌಲ್ಯದ ಯಂತ್ರ, ಕಟ್ಟಡದ ಪರಿಕರಗಳು ಕಳ್ಳರ ಪಾಲಾಗಿವೆ.

ಗಿಡಗಂಟಿಗಳಿಂದ ತುಂಬಿದ ಘಟಕ
ಕಬಕ ಗ್ರಾ.ಪಂ.ಗೆ ಒಳಪಟ್ಟ ಮುರ ಪ್ರದೇಶ ಜನನಿಬಿಡ ಪಟ್ಟಣ. ಇದು ನಗರಕ್ಕೆ ತಾಗಿಕೊಂಡಿದೆ. ಇಲ್ಲಿ ರಸ್ತೆ ಬದಿಯಲ್ಲೇ ಘಟಕ ನಿರ್ಮಾಣ ಮಾಡಲಾಗಿದೆ. ಇಡೀ  ಘಟಕವೇ ಗಿಡಗಂಟಿಳಿಂದ ಆವೃತವಾಗಿದೆ. ಬಾಗಿಲು ತೆರೆದಿದೆ. ಯಂತ್ರಗಳೆಲ್ಲ ತುಕ್ಕು ಹಿಡಿದಿದೆ. ಕೈಗೆ ಸಿಕ್ಕವೂ ಕಳ್ಳರ  ಪಾಲಾಗಿದೆ. ಆರ್ಯಾಪು ಗ್ರಾ.ಪಂ. ವ್ಯಾಪ್ತಿಯ ಆರ್ಯಾಪು ಬಳಿ ಜನವಸತಿ ಇಲ್ಲದೆ ಕಡೆ ಘಟಕ ಇದ್ದು ಪಾಳು ಬಿದ್ದಿದೆ. ಇಲ್ಲಿ ವಿದ್ಯುತ್‌ ಪರಿಕರಗಳಿಗೆ ಬಳ್ಳಿ ಸುತ್ತಿ ಅಪಾಯ ಆಹ್ವಾನಿಸುತ್ತಿದೆ.

ವಿದ್ಯಾರ್ಥಿಗಳಿಗೆ ಅನುಕೂಲ
ಕುರಿಯ ಗ್ರಾಮದ ಇಡಬೆಟ್ಟುವಿನಲ್ಲಿ ನಿರ್ಮಿಸಿರುವ ಘಟಕದ್ದು ದಯನೀಯ ಸ್ಥಿತಿ. ಸರಕಾರಿ ಪ್ರಾಥಮಿಕ ಶಾಲೆಯ ಗೇಟಿನ ಪಕ್ಕವೇ ಇರುವ ಈ ಘಟಕ ಸಮರ್ಪಕವಾಗಿದ್ದರೆ ಶಾಲಾ ವಿದ್ಯಾರ್ಥಿಗಳಿಗೆ ಅನುಕೂಲ ಆಗುತ್ತಿತ್ತು. ಅಂತಹ ಪ್ರಯತ್ನವೇ ಆಗಿಲ್ಲ. ಇಲ್ಲಿ ಘಟಕದ ಬಾಗಿಲು ತುಂಡಾಗಿ ನೇತಾಡುತ್ತಿದೆ. ಪೊದೆ ಆವರಿಸಿದೆ, ಯಂತ್ರ ಧೂಳು ತುಂಬಿದೆ.

ಟಕವನ್ನೇ ಹೊತ್ತೂಯ್ದರು
ಉಪ್ಪಿನಂಗಡಿಯಲ್ಲಿ ಎರಡು ಘಟಕ ನಿರ್ಮಿಸಲಾಗಿದ್ದರೂ ಎರಡೂ ಕೂಡ ಕಾರ್ಯ ನಿರ್ವಹಣೆಯನ್ನು ನಿಲ್ಲಿಸಿವೆ. ಬಸ್‌ ನಿಲ್ದಾಣದ ಬಳಿಯ ಘಟಕವನ್ನೇ ದುರಸ್ತಿಯ ನೆಪದಲ್ಲಿ ಹೊತ್ತೂಯ್ದು ವರ್ಷಗಳೇ ಕಳೆದಿವೆ. ಬಲಾ°ಡು
ಗ್ರಾ.ಪಂ. ವ್ಯಾಪ್ತಿಯ ಬೆಳಿಯೂರು ಕಟ್ಟೆಯಲ್ಲಿನ ಘಟಕ ಆರಂಭದ ದಿನದಲ್ಲಿ ದುರಸ್ತಿಯಿಂದ ಬಳಲಿತ್ತು. ಈಗಂತೂ ನೀರು ಹರಿಸಲು ಶಕ್ತವಾಗಿದ್ದರೂ ಪರಿಪೂರ್ಣ ಎನ್ನುವಂತಿಲ್ಲ.
ಇನ್ನೂ ಬಜತ್ತೂರು ಗ್ರಾ.ಪಂ.ನ ಬೆದ್ರೋಡಿಯಲ್ಲಿ ನಿರ್ಮಿಸಿರುವ ಘಟಕ ಕಳೆದ ಮೂರು ವರ್ಷಗಳಿಂದ ಕೆಟ್ಟು ನಿಂತಿದೆ. ಇಲ್ಲಿ
ಘಟಕವೇ ಬೇಡ ಎಂದು ಗ್ರಾ.ಪಂ. ಮೇಲಾಧಿಕಾರಿಗಳಿಗೆ ಪತ್ರ ಬರೆದು ಸ್ಥಳಾಂತರಕ್ಕೆ ಆಗ್ರಹಿಸಲುಮುಂದಾಗಿದೆ.
ಕಿರಣ್‌ ಪ್ರಸಾದ್‌ ಕುಂಡಡ್ಕ

ಟಾಪ್ ನ್ಯೂಸ್

Google 25th Birthday! ಗ್ಯಾರೇಜ್‌ನಿಂದ ಮೌಂಟ್‌ವಿವ್‌ವರೆಗೆ….ಗೂಗಲ್‌ ರಜತ ಸಂಭ್ರಮ

Google 25th Birthday! ಗ್ಯಾರೇಜ್‌ನಿಂದ ಮೌಂಟ್‌ವಿವ್‌ವರೆಗೆ….ಗೂಗಲ್‌ ರಜತ ಸಂಭ್ರಮ

Musheer Khan

Musheer Khan: ರಸ್ತೆ ಅಪಘಾತದಲ್ಲಿ ಗಂಭೀರ ಗಾಯಗೊಂಡ ಯುವ ಬ್ಯಾಟರ್ ಮುಶೀರ್‌ ಖಾನ್‌

Israel: ಬೈರೂತ್‌ ಮೇಲಿನ ದಾಳಿಯಲ್ಲಿ ಹೆಜ್ಬುಲ್ಲಾ ಮುಖ್ಯಸ್ಥ ಹಸನ್‌ ಸಾವು: ಇಸ್ರೇಲ್‌ ಸೇನೆ

Israel: ಬೈರೂತ್‌ ಮೇಲಿನ ದಾಳಿಯಲ್ಲಿ ಹೆಜ್ಬುಲ್ಲಾ ಮುಖ್ಯಸ್ಥ ಹಸನ್‌ ಸಾವು: ಇಸ್ರೇಲ್‌ ಸೇನೆ

1

ʼದೇವರʼ ಸಿನಿಮಾ ನೋಡುತ್ತಿರುವಾಗ ಥಿಯೇಟರ್‌ನಲ್ಲೇ ಕುಸಿದು ಬಿದ್ದು ಮೃತಪಟ್ಟ Jr NTR ಅಭಿಮಾನಿ

ಭೀಕರ ರಸ್ತೆ ಅಪಘಾತ… ಪುರಿ ಜಗನ್ನಾಥನ ದರ್ಶನಕ್ಕೆ ಹೊರಟಿದ್ದ ನಾಲ್ವರು ಯಾತ್ರಿಕರು ಮೃತ್ಯು

Bus Overturns… ಪುರಿ ಜಗನ್ನಾಥನ ದರ್ಶನಕ್ಕೆ ಹೊರಟಿದ್ದ ನಾಲ್ವರು ಯಾತ್ರಿಕರು ಮೃತ್ಯು

India: ಮೊದಲು ಗಡಿ ಭಯೋತ್ಪಾದನೆ ನಿಲ್ಲಿಸಿ-ವಿಶ್ವಸಂಸ್ಥೆಯಲ್ಲಿ ಪಾಕ್‌ ಗೆ ಭಾರತದ ಚಾಟಿ

India: ಮೊದಲು ಗಡಿ ಭಯೋತ್ಪಾದನೆ ನಿಲ್ಲಿಸಿ-ವಿಶ್ವಸಂಸ್ಥೆಯಲ್ಲಿ ಪಾಕ್‌ ಗೆ ಭಾರತದ ಚಾಟಿ

Laapataa Ladies

Laapataa Ladies: ಕಾಣೆಯಾದ ಮಹಿಳೆಯರ ಆಸ್ಕರ್‌ ಪ್ರಯಾಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Puttur: ಬ್ಯಾಂಕ್‌ ಸಿಬಂದಿ ವಿರುದ್ಧ ಮಾನಭಂಗಕ್ಕೆ ಯತ್ನದ ಪ್ರತಿದೂರು; ಎಸ್‌ಪಿ ಭೇಟಿ

Puttur: ಬ್ಯಾಂಕ್‌ ಸಿಬಂದಿ ವಿರುದ್ಧ ಮಾನಭಂಗಕ್ಕೆ ಯತ್ನದ ಪ್ರತಿದೂರು; ಎಸ್‌ಪಿ ಭೇಟಿ

Puttur: ಮಹಿಳೆಯ ಮೇಲೆ ಮಾನಭಂಗಕ್ಕೆ ಯತ್ನ: ದೂರು ದಾಖಲು

Puttur: ಮಹಿಳೆಯ ಮೇಲೆ ಮಾನಭಂಗಕ್ಕೆ ಯತ್ನ: ದೂರು ದಾಖಲು

Aranthodu: ಮಿತ್ತಡ್ಕದ ಮಹಿಳೆ ನಾಪತ್ತೆ; ಬಾವಿಯಲ್ಲಿ ಹುಡುಕಾಟ

Aranthodu: ಮಿತ್ತಡ್ಕದ ಮಹಿಳೆ ನಾಪತ್ತೆ; ಬಾವಿಯಲ್ಲಿ ಹುಡುಕಾಟ

ತನ್ನಿಂತಾನೆ ಚಲಿಸಿದ ಲಾರಿ; ತಪ್ಪಿದ ಭಾರಿ ಅನಾಹುತ

ತನ್ನಿಂತಾನೆ ಚಲಿಸಿದ ಲಾರಿ; ತಪ್ಪಿದ ಭಾರಿ ಅನಾಹುತ

World Tourism Day: ಕುತ್ಲೂರಿಗೆ ಅತ್ಯುತ್ತಮ ಪ್ರವಾಸಿ ಹಳ್ಳಿ ಪ್ರಶಸ್ತಿ

World Tourism Day: ಕುತ್ಲೂರಿಗೆ ಅತ್ಯುತ್ತಮ ಪ್ರವಾಸಿ ಹಳ್ಳಿ ಪ್ರಶಸ್ತಿ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

Google 25th Birthday! ಗ್ಯಾರೇಜ್‌ನಿಂದ ಮೌಂಟ್‌ವಿವ್‌ವರೆಗೆ….ಗೂಗಲ್‌ ರಜತ ಸಂಭ್ರಮ

Google 25th Birthday! ಗ್ಯಾರೇಜ್‌ನಿಂದ ಮೌಂಟ್‌ವಿವ್‌ವರೆಗೆ….ಗೂಗಲ್‌ ರಜತ ಸಂಭ್ರಮ

Musheer Khan

Musheer Khan: ರಸ್ತೆ ಅಪಘಾತದಲ್ಲಿ ಗಂಭೀರ ಗಾಯಗೊಂಡ ಯುವ ಬ್ಯಾಟರ್ ಮುಶೀರ್‌ ಖಾನ್‌

12-bng

Bengaluru: ಮಕ್ಕಳಲ್ಲಿ ವಿಜ್ಞಾನ ಆಸಕ್ತಿ ಮೂಡಿಸಲು “ಸೈನ್ಸ್‌ ಬಸ್‌’

Israel: ಬೈರೂತ್‌ ಮೇಲಿನ ದಾಳಿಯಲ್ಲಿ ಹೆಜ್ಬುಲ್ಲಾ ಮುಖ್ಯಸ್ಥ ಹಸನ್‌ ಸಾವು: ಇಸ್ರೇಲ್‌ ಸೇನೆ

Israel: ಬೈರೂತ್‌ ಮೇಲಿನ ದಾಳಿಯಲ್ಲಿ ಹೆಜ್ಬುಲ್ಲಾ ಮುಖ್ಯಸ್ಥ ಹಸನ್‌ ಸಾವು: ಇಸ್ರೇಲ್‌ ಸೇನೆ

Kedarnath Kuri Farm Movie Review

Kedarnath Kuri Farm Review: ಫಾರಂನಲ್ಲಿ ಪ್ರೇಮ ಸಂಭಾಷಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.