ಪುತ್ತೂರು: ಮೆಡಿಕಲ್‌ ಕಾಲೇಜಿನ ಜಾಗ ವರ್ಗ ವಿಚಾರ; ಪರ-ವಿರೋಧ ಚರ್ಚೆ


Team Udayavani, Nov 14, 2020, 4:30 AM IST

ಪುತ್ತೂರು: ಮೆಡಿಕಲ್‌ ಕಾಲೇಜಿನ ಜಾಗ ವರ್ಗ ವಿಚಾರ; ಪರ-ವಿರೋಧ ಚರ್ಚೆಪುತ್ತೂರು: ಮೆಡಿಕಲ್‌ ಕಾಲೇಜಿನ ಜಾಗ ವರ್ಗ ವಿಚಾರ; ಪರ-ವಿರೋಧ ಚರ್ಚೆ

ಸಾಂದರ್ಭಿಕ ಚಿತ್ರ

ಪುತ್ತೂರು: ಸರಕಾರಿ ಮೆಡಿಕಲ್‌ ಕಾಲೇಜು ನಿರ್ಮಾಣಕ್ಕೆ ಬನ್ನೂರಿನ ಸೇಡಿಯಾಪಿನಲ್ಲಿ ಕಾದಿರಿಸಲಾದ 40 ಎಕರೆ ಜಾಗವನ್ನು ರದ್ದುಪಡಿಸಿ ಆ ಸ್ಥಳವನ್ನು ಉದ್ದೇಶಿತ ಸಿ-ಫುಡ್‌ ಪಾರ್ಕ್‌ ನಿರ್ಮಾಣಕ್ಕೆ ಬಳಸಲು ತೀರ್ಮಾನಿಸಿರುವ ವಿಚಾರವೀಗ ಪರ-ವಿರೋಧದ ಚರ್ಚೆಗೆ ಗ್ರಾಸವೆನಿಸಿದೆ!

ದ.ಕ. ಜಿಲ್ಲೆಗೆ ಸರಕಾರಿ ಮೆಡಿಕಲ್‌ ಕಾಲೇಜು ಮಂಜೂರಾತಿಗೆ ಪೂರಕವಾಗಿ 2013ರಲ್ಲಿ ಅಂದಿನ ಶಾಸಕಿ ಶಕುಂತಳಾ ಟಿ. ಶೆಟ್ಟಿ ಮೆಡಿಕಲ್‌ ಕಾಲೇಜು ನಿರ್ಮಾಣದ ಕುರಿತು ಸರಕಾರದ ಹಂತದಲ್ಲಿ ಬೇಡಿಕೆ ಇರಿಸಿದ್ದರು. ಅದಕ್ಕಾಗಿ ಬನ್ನೂರು ಸೇಡಿಯಾಪು ಬಳಿ 40 ಎಕರೆಯನ್ನು ಮೆಡಿಕಲ್‌ ಕಾಲೇಜು ನಿರ್ಮಾಣಕ್ಕೆ ಕಾದಿರಿಸಿ ಅದರ ಪಹಣಿ ಪತ್ರವು ಆಗಿತ್ತು.

ಆಕ್ಷೇಪಣೆ ಇದ್ದಲ್ಲಿ ಸಲ್ಲಿಕೆಗೆ ಆಹ್ವಾನ
ಮೆಡಿಕಲ್‌ ಕಾಲೇಜಿಗೆ ಕಾದಿರಿಸಿದ ಸ.ನ.84 ರಲ್ಲಿನ 40 ಎಕ್ರೆ ಜಮೀನನ್ನು ರದ್ದುಪಡಿಸಿ ಸೀ-ಫ‌ುಡ್‌ ಪಾರ್ಕ್‌ ನಿರ್ಮಾಣಕ್ಕೆ ಪಹಣಿ ಮಾಡಲು ಕಂದಾಯ ಇಲಾಖೆ ಮುಂದಾಗಿದೆ. ಈ ಬಗ್ಗೆ ಆಕ್ಷೇಪಣೆಗಳಿದ್ದರೆ 7 ದಿವಸದೊಳಗೆ ಲಿಖಿತ ರೂಪದಲ್ಲಿ ಸಲ್ಲಿಸುವಂತೆ ಬನ್ನೂರಿನ ಗ್ರಾಮಕರಣಿಕರು ಪ್ರಕಟನೆ ಹೊರಡಿಸಿದ್ದಾರೆ. ಈ ಪರಭಾರೆ ವಿಚಾರ ಈಗ ಅನೇಕರ ವಿರೋಧಕ್ಕೂ ಕಾರಣವಾಗಿದೆ.

50 ಕೋ.ರೂ. ವೆಚ್ಚದಲ್ಲಿ ಸಿ-ಫುಡ್‌ ಪಾರ್ಕ್‌
ದ.ಕ. ಜಿಲ್ಲೆಯ ಮೂಡುಬಿದಿರೆ ಮತ್ತು ಪುತ್ತೂರಿನಲ್ಲಿ ತಲಾ 50 ಕೋಟಿ ರೂ. ವೆಚ್ಚದಲ್ಲಿ ಸೀ ಫುಡ್‌ ಪಾರ್ಕ್‌ ನಿರ್ಮಾಣದ ಮೂಲಸೌಕರ್ಯ ರಚನೆ ಸಿದ್ಧಪಡಿಸಲಾಗಿದೆ. ಮುಂದಿನ ದಿನಗಳಲ್ಲಿ ಆ ಜಾಗದಲ್ಲಿ ಕೇಂದ್ರ ಸರಕಾರ ಪ್ರಾಯೋಜಿತ ಸಾಗರೋತ್ಪನ್ನಕ್ಕೆ ಸಂಬಂಧಿಸಿದ ಕಾರ್ಖಾನೆಗಳು ಸ್ಥಾಪನೆಯಾಗಿ ಉದ್ಯೋಗ ಸೃಷ್ಟಿಸುವುದು ಇದರ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ ಶಾಸಕ ಸಂಜೀವ ಮಠಂದೂರು ಅವರ ಪ್ರಸ್ತಾವನೆಯಂತೆ ಜಿಲ್ಲಾ ಉಸ್ತುವಾರಿ ಸಚಿವರು ಬನ್ನೂರು ಗ್ರಾಮದ ಸರ್ವೇ ನಂಬರ್‌ 84ರಲ್ಲಿ 40 ಎಕರೆ ಜಮೀನನ್ನು ಮೆಡಿಕಲ್‌ ಕಾಲೇಜು ಯೋಜನೆಯಿಂದ ರದ್ದುಪಡಿಸಿ ಮೆಗಾ ಸೀ-ಫ‌ುಡ್‌ ಯೋಜನೆಗಾಗಿ ಬಳಸಿಕೊಳ್ಳಲು ಸೂಚನೆ ನೀಡಿದ್ದರು.

ಬೇರೆ ಜಾಗ ನೋಡಲಿ
ಸಿ-ಫುಡ್‌ ಪಾರ್ಕ್‌ ಯೋಜನೆ ಪುತ್ತೂರಿನಲ್ಲಿ ಅನುಷ್ಠಾನಗೊಳಿಸುವುದಕ್ಕೆ ಆಕ್ಷೇಪ ಇಲ್ಲ. ಆದರೆ ಅದಕ್ಕೆ ಸರಕಾರಿ ಮೆಡಿಕಲ್‌ ಕಾಲೇಜಿಗೆ ಕಾದಿರಿಸಿದ ಜಾಗ ಬಳಸುವುದಕ್ಕೆ ವಿರೋಧ ಇದೆ. ಈಗಿನ ಶಾಸಕರು ಬೇರೆ ಜಾಗ ಗುರುತಿಸಲಿ. ಅದು ಬಿಟ್ಟು ಮೆಡಿಕಲ್‌ ಕಾಲೇಜಿಗೆ ಕಾದಿರಿಸಿದ ಜಾಗ ಬಳಸುವುದು ಸರಿ ಅಲ್ಲ. ಮೆಡಿಕಲ್‌ ಕಾಲೇಜು ಮಂಜೂರು ಆಗಬೇಕಾದರೆ ಅದಕ್ಕೆ ಮೊದಲೇ ಜಾಗ ಕಾದಿರಿಸಬೇಕು. ಆ ಕೆಲಸವನ್ನು ನನ್ನ ಅವಧಿಯಲ್ಲಿ ಮಾಡಿದ್ದೆ. ಈಗಿನ ಶಾಸಕರಿಗೆ ಮೆಡಿಕಲ್‌ ಕಾಲೇಜು ಮಾಡಲು ಆಸಕ್ತಿ ಇಲ್ಲ ಎಂದಾದರೆ ಮುಂದೆ ಬರುವ ಆಸಕ್ತ ಶಾಸಕರಿಗಾದರೂ ಕೆಲಸ ಮಾಡಲು ಜಾಗ ಇರಲಿ.
-ಟಿ.ಶಕುಂತಳಾ ಶೆಟ್ಟಿ, ಮಾಜಿ ಶಾಸಕಿ

ಜಮೀನು ಬೇಕಾಗಿದೆ
ಮೆಡಿಕಲ್‌ ಕಾಲೇಜ್‌ ಜಾಗವನ್ನು ಸಿ-ಫ‌ುಡ್‌ಗೆ ಕಾದಿರಿಸುವ ವಿಚಾರದಲ್ಲಿ ಯಾವುದೇ ಗೊಂದಲವಿಲ್ಲ. ಮೆಡಿಕಲ್‌ ಕಾಲೇಜು ಯಾವಾಗ ಮಂಜೂರಾಗುತ್ತದೆ ಎಂಬುದರ ಸ್ಪಷ್ಟತೆ ಇಲ್ಲ. ಈಗ ಸದ್ಯಕ್ಕೆ ನಮಗೆ ಸಿ- ಫ‌ುಡ್‌ ಪಾರ್ಕ್‌ ನಿರ್ಮಾಣಕ್ಕೆ ಜಮೀನು ಬೇಕಾಗಿದೆ. ಬೇರೆ ಯಾವುದಾದರೂ ಕಡೆ ಜಾಗ ಸಿಗಬಹುದೇ ಎಂದು ಪರಿಶೀಲನೆ ನಡೆಸಲಾಗುವುದು. ಸೂಕ್ತ ಜಾಗ ಸಿಕ್ಕಿದರೆ ಅದನ್ನೇ ಬಳಸಿಕೊಳ್ಳಲಾಗುವುದು. ಇಲ್ಲದಿದ್ದರೆ ಮೆಡಿಕಲ್‌ ಕಾಲೇಜಿಗೆ ಕಾದಿರಿಸಿದ ಜಾಗ ಬಳಸಲು ಉದ್ದೇಶಿಸಲಾಗಿದೆ.
-ಡಾ| ಕೆ.ವಿ.ರಾಜೇಂದ್ರ, ಜಿಲ್ಲಾಧಿಕಾರಿ, ದ.ಕ.

ಟಾಪ್ ನ್ಯೂಸ್

Udupi ಅಧಿಕ ಲಾಭಾಂಶ ಆಮಿಷ: ಲಕ್ಷಾಂತರ ರೂ. ವಂಚನೆ

Udupi ಅಧಿಕ ಲಾಭಾಂಶ ಆಮಿಷ: ಲಕ್ಷಾಂತರ ರೂ. ವಂಚನೆ

Malpe ಮೆಹಂದಿ ಕಾರ್ಯಕ್ರಮಕ್ಕೆ ಪೊಲೀಸ್‌ ದಾಳಿ

Malpe ಮೆಹಂದಿ ಕಾರ್ಯಕ್ರಮಕ್ಕೆ ಪೊಲೀಸ್‌ ದಾಳಿ

MUDA ಹಗರಣದಲ್ಲಿ ಯಾರೇ ತಪ್ಪು ಮಾಡಿದ್ದರೂ ಕ್ರಮ: ಸಚಿವ ಬೈರತಿ ಸುರೇಶ್‌

MUDA ಹಗರಣದಲ್ಲಿ ಯಾರೇ ತಪ್ಪು ಮಾಡಿದ್ದರೂ ಕ್ರಮ: ಸಚಿವ ಬೈರತಿ ಸುರೇಶ್‌

Karnataka Govt., ಅಗ್ನಿಶಾಮಕ ಇಲಾಖೆ 68 ಚಾಲಕರ ಹುದ್ದೆ ಅಂತಿಮ

Karnataka Govt., ಅಗ್ನಿಶಾಮಕ ಇಲಾಖೆ 68 ಚಾಲಕರ ಹುದ್ದೆ ಅಂತಿಮ

Laxmeshwar ಮಗನ ಹಠಕ್ಕೆ ಮುಸ್ಲಿಮರ ಮನೆಯಲ್ಲಿ ಗಣೇಶ ಹಬ್ಬ !

Laxmeshwar ಮಗನ ಹಠಕ್ಕೆ ಮುಸ್ಲಿಮರ ಮನೆಯಲ್ಲಿ ಗಣೇಶ ಹಬ್ಬ !

Arrest

Mandya ಹೆಣ್ಣು ಭ್ರೂಣ ಹತ್ಯೆ ಕೇಸ್‌: ಮತ್ತೆ ಮೂವರ ಬಂಧನ

ಕರಾವಳಿಯಲ್ಲಿ ಮತ್ಸ್ಯಕ್ಷಾಮ: ಸಚಿವ ವೈದ್ಯ ಬಾಗಿನ

Fishing ಕರಾವಳಿಯಲ್ಲಿ ಮತ್ಸ್ಯಕ್ಷಾಮ: ಸಚಿವ ವೈದ್ಯ ಬಾಗಿನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

12-bantwala-1

Bantwala: ನವ ದಂಪತಿ ಪ್ರಯಾಣಿಸುತ್ತಿದ್ದ ಕಾರು ಭೀಕರ ಅಪಘಾತ; ಪತ್ನಿ ಮೃತ್ಯು, ಪತಿ ಗಂಭೀರ

Belthangady ಅಂಗಮಾರಿ ರೋಗ ಲಕ್ಷಣ: ಪರಿಶೀಲನೆ

Belthangady ಅಂಗಮಾರಿ ರೋಗ ಲಕ್ಷಣ: ಪರಿಶೀಲನೆ

Untitled-1

Uppinangady ವಿವಾಹಿತೆ ನಾಪತ್ತೆ: ದೂರು ದಾಖಲು

Suresh ಬಲ್ನಾಡು ಅವರಿಗೆ ಸಾಂಬಾರ ಕೃಷಿಕ ಪ್ರಶಸ್ತಿ ಪ್ರದಾನ

Suresh ಬಲ್ನಾಡು ಅವರಿಗೆ ಸಾಂಬಾರ ಕೃಷಿಕ ಪ್ರಶಸ್ತಿ ಪ್ರದಾನ

Engineer Bantwal ಜಯಂತ್‌ ಬಾಳಿಗ ಅವರಿಗೆ ಪ್ರತಿಷ್ಠಿತ ಮಿಲೇನಿಯಂ ಟೆಕ್ನಾಲಿಜಿ ಪ್ರಶಸ್ತಿ

Engineer Bantwal ಜಯಂತ್‌ ಬಾಳಿಗ ಅವರಿಗೆ ಪ್ರತಿಷ್ಠಿತ ಮಿಲೇನಿಯಂ ಟೆಕ್ನಾಲಿಜಿ ಪ್ರಶಸ್ತಿ

MUST WATCH

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

udayavani youtube

ತಮ್ಮ ಮಕ್ಕಳನ್ನು ಬೆಳೆಸುವ ಸಲುವಾಗಿ ಕಂಡೋರ ಮಕ್ಕಳ ಭವಿಷ್ಯ ನಾಶ. ಈ ವ್ಯವಸ್ಥೆಗೆ ನಾನೂ ಬಲಿ

ಹೊಸ ಸೇರ್ಪಡೆ

Udupi ಅಧಿಕ ಲಾಭಾಂಶ ಆಮಿಷ: ಲಕ್ಷಾಂತರ ರೂ. ವಂಚನೆ

Udupi ಅಧಿಕ ಲಾಭಾಂಶ ಆಮಿಷ: ಲಕ್ಷಾಂತರ ರೂ. ವಂಚನೆ

Malpe ಮೆಹಂದಿ ಕಾರ್ಯಕ್ರಮಕ್ಕೆ ಪೊಲೀಸ್‌ ದಾಳಿ

Malpe ಮೆಹಂದಿ ಕಾರ್ಯಕ್ರಮಕ್ಕೆ ಪೊಲೀಸ್‌ ದಾಳಿ

1-bhat-bg

Bhatkal;ಗಣಪತಿ ವಿಸರ್ಜನೆ ವೇಳೆ ಸಮುದ್ರದಲ್ಲಿ ಕೊಚ್ಚಿಹೋದ ಬಾಲಕನ ರಕ್ಷಣೆ

ಅನುದಾನಿತ ಪ್ರೌಢಶಾಲೆಗೆ ನೇಮಕಾತಿ ಮಾಡಿಕೊಳ್ಳಬೇಡಿ;ಮಾರ್ಗಸೂಚಿ/ಸುತ್ತೋಲೆ ಬಿಡುಗಡೆವರೆಗೆ ತಡೆ

ಅನುದಾನಿತ ಪ್ರೌಢಶಾಲೆಗೆ ನೇಮಕಾತಿ ಮಾಡಿಕೊಳ್ಳಬೇಡಿ;ಮಾರ್ಗಸೂಚಿ/ಸುತ್ತೋಲೆ ಬಿಡುಗಡೆವರೆಗೆ ತಡೆ

MUDA ಹಗರಣದಲ್ಲಿ ಯಾರೇ ತಪ್ಪು ಮಾಡಿದ್ದರೂ ಕ್ರಮ: ಸಚಿವ ಬೈರತಿ ಸುರೇಶ್‌

MUDA ಹಗರಣದಲ್ಲಿ ಯಾರೇ ತಪ್ಪು ಮಾಡಿದ್ದರೂ ಕ್ರಮ: ಸಚಿವ ಬೈರತಿ ಸುರೇಶ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.