ತಾಲೂಕಿನಾದ್ಯಂತ ಮಳೆ ಇಳಿಕೆ, ಮನೆ ಕುಸಿತ
Team Udayavani, Jun 17, 2018, 4:18 PM IST
ಪುತ್ತೂರು: ಶುಕ್ರವಾರ ಹಾಗೂ ಶನಿವಾರದ 48 ಗಂಟೆಗಳ ಅವಧಿಯಲ್ಲಿ ಪುತ್ತೂರು ನಗರ ಹಾಗೂ ಗ್ರಾಮಾಂತರ ಭಾಗದಲ್ಲಿ ಮಳೆಯ ಪ್ರಮಾಣದಲ್ಲಿ ಇಳಿಕೆ ಕಂಡು ಬಂದಿದೆ.
ಒಟ್ಟು 61.4 ಮಿ.ಮೀ. ಮಳೆ
ಪುತ್ತೂರು ತಾಲೂಕಿನಾದ್ಯಂತ ಶುಕ್ರವಾರ ಬೆಳಗ್ಗಿನಿಂದ ಶನಿವಾರ ಬೆಳಗ್ಗಿನ 24 ಗಂಟೆಗಳ ಅವಧಿಯಲ್ಲಿ ಒಟ್ಟು 61.4 ಮಿ.ಮೀ. ಹಾಗೂ ಸರಾಸರಿ 10.23 ಮಿ.ಮೀ. ಮಳೆಯಾಗಿದೆ. ಪುತ್ತೂರು ನಗರದಲ್ಲಿ 12.4 ಮಿ. ಮೀ., ಉಪ್ಪಿನಂಗಡಿಯಲ್ಲಿ 8.8ಮಿ. ಮೀ., ಶಿರಾಡಿಯಲ್ಲಿ 16.8 ಮಿ.ಮೀ., ಕೊಯಿಲದಲ್ಲಿ 5.2 ಮಿ.ಮೀ., ಐತೂರುನಲ್ಲಿ 10.6ಮಿ.ಮೀ., ಕಡಬದಲ್ಲಿ 8.4 ಮಿ.ಮೀ. ಮಳೆ ಸುರಿದಿದೆ.
ಮನೆಯ ಮಾಡು ಕುಸಿತ
ನಗರಸಭೆ ವ್ಯಾಪ್ತಿಯ ಬ್ರಹ್ಮನಗರದಲ್ಲಿ ಮಾಡು ಕುಸಿದು ಬಿದ್ದು, ಬಡ ಕುಟುಂಬಕ್ಕೆ ಆರ್ಥಿಕ ಸಂಕಷ್ಟ ಉಂಟು ಮಾಡಿದ ಘಟನೆ ನಡೆದಿದೆ. ಬ್ರಹ್ಮನಗರ ದಲಿತ ಕಾಲನಿಯ ಪಿಜಿನ ಅವರ ಮನೆಯ ಮಾಡು ಶುಕ್ರವಾರ ರಾತ್ರಿ ಮುರಿದು ಬಿದ್ದಿದ್ದು, ಮನೆ ಮಂದಿ ಹೊರಭಾಗದಲ್ಲಿದ್ದ ಕಾರಣ ಯಾವುದೇ ಅಪಾಯ ಉಂಟಾಗಿಲ್ಲ. ಇದು ಸರಕಾರ ನಿರ್ಮಿಸಿಕೊಟ್ಟ ಮನೆಯಾಗಿದ್ದು, ಘಟನಾ ಸ್ಥಳಕ್ಕೆ ಯಾವುದೇ ಅಧಿಕಾರಿಗಳು ಭೇಟಿ ನೀಡಿಲ್ಲ ಎಂದು ಈ ಕುಟುಂಬ ತಿಳಿಸಿದೆ. ಇವರ ಪುತ್ರ ಕೃಷ್ಣಪ್ಪ ಪತ್ರಿಕಾ ವಿತರಕನಾಗಿ ಕೆಲಸ ಮಾಡುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.