![Gambhir-Agarkar have differences of opinion on Pant-Rahul issue](https://www.udayavani.com/wp-content/uploads/2025/02/agarkar-415x233.jpg)
![Gambhir-Agarkar have differences of opinion on Pant-Rahul issue](https://www.udayavani.com/wp-content/uploads/2025/02/agarkar-415x233.jpg)
Team Udayavani, Aug 3, 2022, 8:14 AM IST
ಅರಂತೋಡು : ಸೋಮವಾರ ತಡರಾತ್ರಿ ಸುರಿದ ಭಾರೀ ಮಳೆಯಿಂದಾಗಿ ಸಂಪಾಜೆ ಗ್ರಾಮ ತತ್ತರಿಸಿದೆ.
ಮಂಗಳವಾರ ಬೆಳಗ್ಗೆ ನೆರೆ ನೀರು ಇಳಿದಿದೆಯಾದರೂ ಮನೆ, ಅಂಗಡಿ ಮುಂಗಟ್ಟುಗಳು, ರಸ್ತೆ, ತೋಟ ಇಡೀ ಪ್ರದೇಶ ಕೆಸರುಮಯವಾಗಿದೆ. ಹಲವು ಮಂದಿ ಸರ್ವಸ್ವವನ್ನೂ ಕಳೆದು ಕೊಂಡಿದ್ದಾರೆ.
ಸೋಮವಾರ ರಾತ್ರಿ 10 ಗಂಟೆ ಸುಮಾರಿಗೆ ಭಾರೀ ಮಳೆ ಆರಂಭ ಗೊಂಡಿತು. 12 ಗಂಟೆಯ ಸುಮಾರಿಗೆ ಪಯಸ್ವಿನಿ, ಅರೆಕಲ್ಲು ಹೊಳೆಗಳು ಒಮ್ಮೆಗೆ ಉಕ್ಕಿ ಬಂದು ಹಲವು ಮನೆ ಗಳು ಜಲಾವೃತಗೊಂಡವು. 5-6 ಅಡಿ ಎತ್ತರದಲ್ಲಿ ಜಲ ಆವರಿಸಿಕೊಂಡಿತು. ನೆರೆ ಇಳಿದ ಬಳಿಕ ನೋಡಿದರೆ ಮನೆ, ಅಂಗಡಿಗಳಲ್ಲಿ 3-4 ಅಡಿಗಳಷ್ಟು ಕೆಸರು ತುಂಬಿ ಕೊಂಡಿರುವುದನ್ನು ಕಂಡು ಜನ ಆಘಾತಗೊಂಡಿದ್ದಾರೆ.
ಸಂಪಾಜೆಯ ವಿವಿಧ ಮಳಿಗೆಗಳ ವಸ್ತುಗಳು ನಾಶವಾಗಿವೆ, ಬಟ್ಟೆಬರೆಗಳು ಕೂಡಾ ಇಲ್ಲವಾಗಿವೆ.
ಸ್ವಾವಲಂಬಿ ಬದುಕು ನುಚ್ಚುನೂರು
ಅರಂತೋಡು: ಸ್ವ ಸಂಪಾದನೆಯ ಮೂಲಕವೇ ಬದುಕು ಸಾಗಿಸುವ ಛಲ ತೊಟ್ಟಿದ್ದ ಮಹಿಳೆಯೊಬ್ಬರು ಇತ್ತೀಚೆಗಷ್ಟೇ ಕುಕ್ಕುಟೋದ್ಯಮ ಆರಂಭಿಸಿದ್ದರು. ಆದರೆ ಅವರ ಕನಸುಗಳೆಲ್ಲ ತಡರಾತ್ರಿ ಸುರಿದ ಮಳೆಗೆ ಕೊಚ್ಚಿಕೊಂಡು ಹೋಗಿದೆ. ಸಂಪಾಜೆ ಗ್ರಾಮದ ಚೌಕಿ ಸಮೀಪದ ಸಾವಿತ್ರಿ ಅವರು ಸಾಕಿದ 40ಕ್ಕೂ ಹೆಚ್ಚು ಕೋಳಿಗಳು ಪ್ರವಾಹಕ್ಕೆ ಗೂಡು ಸಮೇತ ನೀರು ಪಾಲಾಗಿವೆ. ಅವರ ಕನಸಿನ ಮನೆಯೂ ನೀರಿನ ರಭಸಕ್ಕೆ ಸಿಲುಕಿ ಕೆಸರಿನಿಂದ ನಲುಗಿ ಹೋಗಿದೆ. ಅವರ ಕುಟುಂಬವೀಗ ಕಣ್ಣೀರಿನಿಂದ ಕೈ ತೊಳೆಯುವಂತಾಗಿದೆ.
ಇದನ್ನೂ ಓದಿ : ಸುಬ್ರಹ್ಮಣ್ಯ ಗುಡ್ಡ ಕುಸಿದು ದುರಂತ ಪ್ರಕರಣ : ಇಬ್ಬರು ಮಕ್ಕಳಿಗೆ ಕಣ್ಣೀರ ವಿದಾಯ
You seem to have an Ad Blocker on.
To continue reading, please turn it off or whitelist Udayavani.