ಜರಿದು ಬಿದ್ದ ಅಡಿಗಲ್ಲು: ಸಂಪರ್ಕ ಕಡಿತ ಭೀತಿಯಲ್ಲಿ ಜನತೆ

ಕಾನರ್ಪದಿಂದ ದೂಂಬೆಟ್ಟು ಸಂಪರ್ಕಿಸುವ ಕುರುಡ್ಯ ಕಿರು ಸೇತುವೆ

Team Udayavani, Jun 29, 2019, 5:21 AM IST

21

ಬೆಳ್ತಂಗಡಿ: ಕಡಿರುದ್ಯಾವರ ಗ್ರಾಮದ ಕಾನರ್ಪದಿಂದ ದೂಂಬೆಟ್ಟು ಸಂಪರ್ಕಿಸುವ ಕುರುಡ್ಯ ಸಮೀಪದ ಸೇತುವೆ ಪಿಲ್ಲರ್‌ನ ಅಡಿಗಲ್ಲು ಕುಸಿದು ಬಿದ್ದ ಪರಿಣಾಮ ನುರಾರು ಮನೆಗಳಿಗೆ ಸಂಪರ್ಕ ಕಡಿತ ಭೀತಿ ಎದುರಾಗಿದೆ.

ಸುಮಾರು 40 ವರ್ಷಗಳಿಗೂ ಹಳೆಯ, ಕಲ್ಲಿನಿಂದ ಕಟ್ಟಿದ ಸೇತುವೆ ಸೇತುವೆಯಾಗಿದ್ದರಿಂದ ಜೂ. 22ರಂದು ಸುರಿದ ಮಳೆಗೆ ಅಡಿಗಲ್ಲಿನ ಒಂದು ಭಾಗ ಜರಿದು ಬಿದ್ದಿದೆ. 7 ಮೀ. ಉದ್ದ, 5 ಮೀ. ಅಗಲವಿರುವ ಸೇತುವೆ ಕೆಳಭಾಗದ ಪಿಲ್ಲರ್‌ನ 4 ಅಡಿ ಎತ್ತರ, 3 ಅಡಿ ಉದ್ದ ಭಾಗದ ಕಲ್ಲು ಕುಸಿದು ಬಿದ್ದಿದೆ. ದೂಂಬೆಟ್ಟು ಪ್ರದೇಶದಂಚಿಗೆ 300ಕ್ಕೂ ಹೆಚ್ಚು ಮನೆಯವರು ಇದೇ ಕಿರು ಸೇತುವೆ ಆಶ್ರಯಿಸಿದ್ದಾರೆ.

ಬೆಳ್ಳೂರು ಬೈಲಿ ಕಾಮಗಾರಿ ಆಮೆಗತಿ
ಕಡಿರುದ್ಯಾವರ ಈಂದಬೆಟ್ಟುಗೆ ಸಂಪರ್ಕಿಸುವ ಬೆಳ್ಳೂರು ಬೈಲಿನ ಎತ್ತಿನಗಂಡಿ ಎಂಬಲ್ಲಿ 4 ಕೋ.ರೂ. ವೆಚ್ಚದಲ್ಲಿ ನೇತ್ರಾವತಿ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಿಸಲು ಕಳೆದ ವಿಧಾನಸಭಾ ಚುನಾವಣೆ ಸಂದರ್ಭ ಮಾಜಿ ಶಾಸಕರಿಂದ ಶಂಕುಸ್ಥಾಪನೆ ನೆರವೇರಿತ್ತು. ಹಲವು ಕಾರಣಗಳಿಂದ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಇದರಿಂದ ಸುಮಾರು 500 ಮನೆಗೆ ಸಂಪರ್ಕ ಕಲ್ಪಿಸಲಾಗುತ್ತಿದ್ದು, ಸೇತುವೆ ನಿರ್ಮಾಣವಾಗದೆ ಇಲ್ಲಿನ ಮಂದಿ ಕುಕ್ಕಾವು ಪ್ರದೇಶದಿಂದ ಹತ್ತಾರು ಕಿ.ಮೀ. ಸುತ್ತಿ ಬಳಸಬೇಕು. ಸೇತುವೆ ನಿರ್ಮಾಣವಾಗದೆ ನದಿ ನೀರು ದಾಟಬೇಕಾದ ಪರಿಸ್ಥಿತಿ. ಮತ್ತೂಂದೆಡೆ ಉದ್ದಾರ ಮಠ ಸಮೀಪ ಸಣ್ಣ ನೀರಾವರಿ ಯೋಜನೆಯಡಿ 5 ಕೋ. ರೂ.ವೆಚ್ಚ‌ದಲ್ಲಿ ಅಣೆಕಟ್ಟು, ರಸ್ತೆ ನಿರ್ಮಾಣ ಕಾಮಗಾರಿ ಭರದಿಂದ ಸಾಗುತ್ತಿದ್ದು, ಸ್ಥಳೀಯರಿಗೆ ಅನುಕೂಲವಾಗಲಿದೆ.

ದೂಂಬೆಟ್ಟು ಕಾಲನಿಗೆ ಸಮಸ್ಯೆ
ನೂರಾರು ವರ್ಷಗಳಿಂದ ದೂಂಬೆಟ್ಟು ಎಂಬಲ್ಲಿ ವಾಸವಿರುವ ಪ. ಪಂಗಡಕ್ಕೆ ಸೇರಿದ 100ಕ್ಕೂ ಹೆಚ್ಚು ಮನೆಯವರು ಇದೇ ಮಾರ್ಗವನ್ನು ಅವಲಂಬಿಸಿ ದ್ದಾರೆ. ಸೇತುವೆ ಸಂಪೂರ್ಣ ಕುಸಿದಲ್ಲಿ ಮುಂಡಾಜೆ ಮೃತ್ಯುಂಜಯ ನದಿಗೆ ನಿರ್ಮಿಸಿದ ಆಲು ಪಿತ್ತಿಲು ತೂಗು ಸೇತುವೆಯಾಗಿ ಸುತ್ತಿ ಬರುವ ಪರಿಸ್ಥಿತಿ. ಕಿರುಸೇತುವೆ ಗೋಡೆ ಕುಸಿದಿದ್ದರಿಂದ ವಾಹನ ನಿಷೇಧಿಸುವ ಸಾಧ್ಯತೆ ಇದ್ದು, ಅಗತ್ಯ ಮನೆ ಬಳಕೆ ಸೊತ್ತುಗಳ ಸಾಗಾಟ ಸಮಸ್ಯೆ ಎದುರಾಗಲಿದೆ.

ಈಗಾಗಲೇ ಪಂಚಾಯತ್‌ರಾಜ್‌ ಎಂಜಿನಿಯರಿಂಗ್‌ ವಿಭಾಗದ ಅಧಿಕಾರಿಗಳು ಸ್ಥಳ ಪರಿಶೀಲಿಸಿದ್ದು, ಸಿಮೆಂಟ್ ಚೀಲದಲ್ಲಿ ಮರಳು ತುಂಬಿಸಿ ತಾತ್ಕಾಲಿಕ ತಡೆಗೋಡೆ ನಿರ್ಮಿಸಲು ಗ್ರಾ.ಪಂ.ಗೆ ಸೂಚಿಸಿದೆ. ಕಾಮಗಾರಿ ತಡವಾದಲ್ಲಿ ಮತ್ತಷ್ಟು ಆತಂಕ ಎದುರಾಗುವ ಸಾಧ್ಯತೆ ಇದ್ದು ಸಂಬಂಧಪಟ್ಟ ಅಧಿಕಾರಗಳು ಎಚ್ಚೆತ್ತುಕೊಳ್ಳಬೇಕಿದೆ.

ಕ್ರಿಯಾಯೋಜನೆ ಸಿದ್ಧ

ಕುರುಡ್ಯ ಸೇತುವೆ ಪರಿಶೀಲಿಸಿದ್ದೇನೆ. ಈಗಾಗಲೇ ಕ್ರಿಯಾಯೋಜನೆ ಸಿದ್ಧಪಡಿಸಿದ್ದು, ತಹಶೀಲ್ದಾರ್‌ಗೆ ಗಮನಕ್ಕೆ ತರಲಾಗುವುದು. ತಾತ್ಕಾಲಿಕವಾಗಿ ಮರಳು ಗೋಣಿ ಅಳವಡಿಸಲು ಗ್ರಾ.ಪಂ. ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
– ತಮ್ಮಣ್ಣ ಗೌಡ ಪಾಟೀಲ್ ಕಿರಿಯ ಅಭಿಯಂತರು, ಪಂಚಾಯತ್‌ರಾಜ್‌ ಉಪವಿಭಾಗ

ಅಧಿಕಾರಿಗಳ ಸೂಚನೆಯಂತೆ ತಾತ್ಕಾಲಿಕ ಕ್ರಮ

ಅಧಿಕಾರಿಗಳ ಸೂಚನೆಯಂತೆ ತಾತ್ಕಾಲಿಕ ಕ್ರಮಕ್ಕಾಗಿ ಗೋಡೆಗೆ ಆಧಾರವಾಗಿ ಮರಳಿನ ಮೂಟೆ ಜೋಡಿಸಲಾಗುವುದು. ವಾಹನ ನಿಷೇಧ ಸೂಚನ ಫಲಕ ಅಳವಡಿಸಿ ಸ್ಥಳೀಯರಿಗೆ ಮಾಹಿತಿ ನೀಡಲಾಗುವುದು.
– ದೇವಕಿ, ಪಿಡಿಒ, ಕಡಿರುದ್ಯಾವರ ಗ್ರಾ.ಪಂ.

ಚೈತ್ರೇಶ್‌ ಇಳಂತಿಲ

ಟಾಪ್ ನ್ಯೂಸ್

Zakir

Public Meeting: ಬಾಲಕಿ ಕೇಳಿದ ಪ್ರಶ್ನೆಗೆ ಉತ್ತರಿಸಿದೆ ಸಿಟ್ಟಿಗೆದ್ದ ಜಾಕೀರ್‌ ನಾಯ್ಕ್‌!

Minister-Shivaraj

Jharkhand: ಬಿಜೆಪಿ ಗೆದ್ದರೆ ಎನ್‌ಆರ್‌ಸಿ ಜಾರಿ ಖಚಿತ: ಕೇಂದ್ರ ಸಚಿವ ಶಿವರಾಜ್‌ ಸಿಂಗ್‌

Kaup

Ucchila Dasara: ಕರಾವಳಿಯ 108 ವೀಣಾವಾದಕರಿಂದ ಶತವೀಣಾವಲ್ಲರಿ

Manipal-Rain

Heavy Rain: ಅನಿರೀಕ್ಷಿತ ಸಿಡಿಲು ಮಳೆಗೆ ದಂಗಾದ ಉಡುಪಿ

Mangalur

PDO Strikes: ಉಭಯ ಜಿಲ್ಲೆಗಳಲ್ಲಿ ಪಿಡಿಒ, ನೌಕರರಿಂದ ಅನಿರ್ದಿಷ್ಟಾವಧಿ ಮುಷ್ಕರ

MGM-govinda-Bhat

Udupi: ʼಯಕ್ಷಗಾನ ಕಲಾವಿದನಾಗಿ ಪ್ರತಿಹಂತದಲ್ಲಿ ಕಲಿವ ಮನಸ್ಥಿತಿಯಲ್ಲಿ ಕಾರ್ಯನಿರ್ವಹಿಸಿದೆʼ

HAALUMADDI

Vitla: ಹಾಲುಮಡ್ಡಿ ಸಂಗ್ರಹಿಸಿ ರಿಕ್ಷಾದಲ್ಲಿ ಸಾಗಾಟ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Savanooru

Savanooru: ಪಿಕಪ್‌-ಬೈಕ್‌ ಅಪಘಾತ: ಸವಾರರಿಗೆ ಗಾಯ

River-Hand-Person

Vitla: ಹೊಳೆಗೆ ಬಿದ್ದ ವೃದ್ಧರೊಬ್ಬರ ರಕ್ಷಿಸಿದ ಯುವಕರು; ಶ್ಲಾಘನೆ

HAALUMADDI

Vitla: ಹಾಲುಮಡ್ಡಿ ಸಂಗ್ರಹಿಸಿ ರಿಕ್ಷಾದಲ್ಲಿ ಸಾಗಾಟ

Untitled-1

Puttur: ಪದವಿ ವಿದ್ಯಾರ್ಥಿ ನಾಪತ್ತೆ; ದೂರು ದಾಖಲು

Vitla : ಭಾರೀ ಮಳೆಗೆ ಆಯತಪ್ಪಿ ಹೊಳೆಗೆ ಬಿದ್ದ ವ್ಯಕ್ತಿಯನ್ನು ರಕ್ಷಿಸಿದ ಯುವಕರು

Vitla : ಭಾರೀ ಮಳೆಗೆ ಆಯತಪ್ಪಿ ಹೊಳೆಗೆ ಬಿದ್ದ ವ್ಯಕ್ತಿಯನ್ನು ರಕ್ಷಿಸಿದ ಯುವಕರು

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

Zakir

Public Meeting: ಬಾಲಕಿ ಕೇಳಿದ ಪ್ರಶ್ನೆಗೆ ಉತ್ತರಿಸಿದೆ ಸಿಟ್ಟಿಗೆದ್ದ ಜಾಕೀರ್‌ ನಾಯ್ಕ್‌!

Minister-Shivaraj

Jharkhand: ಬಿಜೆಪಿ ಗೆದ್ದರೆ ಎನ್‌ಆರ್‌ಸಿ ಜಾರಿ ಖಚಿತ: ಕೇಂದ್ರ ಸಚಿವ ಶಿವರಾಜ್‌ ಸಿಂಗ್‌

Kaup

Ucchila Dasara: ಕರಾವಳಿಯ 108 ವೀಣಾವಾದಕರಿಂದ ಶತವೀಣಾವಲ್ಲರಿ

Manipal-Rain

Heavy Rain: ಅನಿರೀಕ್ಷಿತ ಸಿಡಿಲು ಮಳೆಗೆ ದಂಗಾದ ಉಡುಪಿ

1-gk

Shri Rama Sena;ನ. 4ರಿಂದ ದತ್ತಮಾಲಾ ಅಭಿಯಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.