ಕೊಳಚೆ ನೀರಿನಿಂದ ಮುಕ್ತಿಗೆ ಸೋಕ್‌ಫಿಟ್‌

ಬಂಟ್ವಾಳದಲ್ಲಿ ಪ್ರಗತಿಯಲ್ಲಿದೆ 357 ಕಾಮಗಾರಿ

Team Udayavani, Jan 5, 2021, 4:30 AM IST

ಕೊಳಚೆ ನೀರಿನಿಂದ ಮುಕ್ತಿಗೆ ಸೋಕ್‌ಫಿಟ್‌

ಮಾಣಿ ಗ್ರಾ.ಪಂ.ವ್ಯಾಪ್ತಿಯ ರಾಜೀವ್‌ ಶೆಟ್ಟಿ ವಾರಾಟ ಅವರ ಮನೆಯಲ್ಲಿ ನಿರ್ಮಿಸಿರುವ ಸೋಕ್‌ಫಿಟ್‌.

ಬಂಟ್ವಾಳ: ಸ್ವಚ್ಛತೆಯ ದೃಷ್ಟಿಯಿಂದ ಸರಕಾರ ಹಲವು ರೀತಿಯಲ್ಲಿ ಅನುದಾನ ನೀಡುತ್ತಿದ್ದು, ಇದೀಗ ಕೊಳಚೆ ನೀರು ಪರಿಸರವನ್ನು ಸೇರುತ್ತಿದೆ ಎಂದು ದ್ರವ ತ್ಯಾಜ್ಯ ಗುಂಡಿ (ಸೋಕ್‌ಫಿಟ್‌)ಗಳ ಮೂಲಕ ನೀರು ಶುದ್ಧಗೊಂಡು ಭೂಮಿ ಸೇರುವಂತೆ ಮಾಡುತ್ತಿದೆ. ಈ ಬಾರಿ ಸೋಕ್‌ಫಿಟ್‌ಗಳ ರಚನೆಯನ್ನು ಅಭಿಯಾನದ ರೀತಿಯಲ್ಲಿ ಕೈಗೊಂಡಿದ್ದು, ಬಂಟ್ವಾಳದಲ್ಲಿ 357 ಕಾಮಗಾರಿಗಳು ಪ್ರಗತಿಯಲ್ಲಿವೆ.

ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಮೂಲಕ ದ್ರವ ತ್ಯಾಜ್ಯ ಗುಂಡಿಗಳನ್ನು ರಚನೆ ಮಾಡಲಾಗುತ್ತಿದ್ದು, ಅದಕ್ಕಾಗಿ ನಿರ್ದಿಷ್ಟ ಮೊತ್ತದ ಅನುದಾನವನ್ನು ನೀಡುತ್ತಿದೆ. ಗುಂಡಿಗಳ ರಚನೆ ಕಾರ್ಯವು ನಿರಂತರವಾಗಿ ನಡೆಯುತ್ತಿದ್ದರೂ, ಈ ಬಾರಿ ಅದನ್ನು ಅಭಿಯಾನದ ರೀತಿಯಲ್ಲಿ ಪ್ರಚುರ ಪಡಿಸಲಾಗಿತ್ತು.

ಸಾಕಷ್ಟು ಭಾಗಗಳಲ್ಲಿ ಕೊಳಚೆ ನೀರನ್ನು ಎಲ್ಲೆಲ್ಲಿಗೋ ಬಿಡುವ ಪರಿಸ್ಥಿತಿ ಇದ್ದು, ಕೆಲವೆಡೆ ಮನೆಯ ಸುತ್ತ ಎಲ್ಲಿಗೂ ಬಿಡಲು ಜಾಗವಿಲ್ಲದೆ ನೇರವಾಗಿ ರಸ್ತೆಗೆ ಬಿಡುತ್ತಿದ್ದಾರೆ. ಇದು ಸ್ವಚ್ಛತೆಗೆ ಧಕ್ಕೆಯಾಗುತ್ತಿದ್ದು, ಈ ನಿಟ್ಟಿನಲ್ಲಿ ಸರಕಾರ ಇದನ್ನು ಗಂಭೀರವಾಗಿ ಪರಿಗಣಿಸಿ ದ್ರವ ತ್ಯಾಜ್ಯ ಗುಂಡಿ ರಚನೆಗೆ ಪ್ರೇರೇಪಣೆ ನೀಡುತ್ತಿದೆ.

ಏಳು ಅಡಿಗಳಷ್ಟು ಆಳದ ಹೊಂಡ
ಒಟ್ಟು 7 ಅಡಿ ಆಳದ ಹೊಂಡ ಮಾಡಿಕೊಂಡು ಅದಕ್ಕೆ ತಳಭಾಗದಲ್ಲಿ ಸುಮಾರು 4 ಅಡಿಗಳಷ್ಟು ಜಲ್ಲಿ ಅಥವಾ ಮುರ ಕಲ್ಲನ್ನು ತುಂಬಿಸಲಾಗುತ್ತದೆ. ನೀರು ಶುದ್ಧಗೊಂಡು ಭೂಮಿಯನ್ನು ಸೇರಬೇಕು ಎಂಬ ದೃಷ್ಟಿಯಿಂದ ತಳ ಭಾಗದಲ್ಲಿ ಒಂದು ಲೇಯರ್‌ ಜಲ್ಲಿ ಅಥವಾ ಮುರ ಕಲ್ಲು ಹುಡಿ ಹಾಕಿದ ಬಳಿಕ ಒಂದು ಲೇಯರ್‌ ಇದ್ದಿಲನ್ನು ತುಂಬಿಸಲಾಗುತ್ತದೆ. ಬಳಿಕ ಅದಕ್ಕೆ ಮರಳನ್ನು ತುಂಬಿಸಲಾಗುತ್ತದೆ. ಜತೆಗೆ ನೈಲಾನ್‌ ಮೆಸ್‌ ಕೂಡ ಅಳವಡಿಸಲಾಗುತ್ತದೆ.

ಚರಂಡಿಗೆ ಬಿಡುವ ಕಡೆಯಿಂದ ಬೇಡಿಕೆ
ಗ್ರಾಮೀಣ ಭಾಗಗಳಲ್ಲಿ ತೆಂಗಿನಗಿಡ ಸೇರಿದಂತೆ ಇತರ ಗಿಡಗಳಿರುವವರು ನೇರವಾಗಿ ಅವುಗಳಿಗೆ ಬಿಡುತ್ತಾರೆ. ಆದರೆ ಜಾಗವಿಲ್ಲದೆ ಚರಂಡಿ ಬಿಡುವ ಪರಿಸ್ಥಿತಿ ಇದ್ದ ಪ್ರದೇಶದಿಂದ ಸೋಕ್‌ಫಿಟ್‌ಗಳಿಗೆ ಬೇಡಿಕೆ ಬಂದಿದೆ. ತಾಲೂಕಿನಲ್ಲಿ ಒಟ್ಟು 580 ಸೋಕ್‌ಫಿಟ್‌ಗಳಿಗೆ ಬೇಡಿಕೆ ಇದ್ದು, ಸಾಕಷ್ಟು ಕಡೆ ಕಾಮಗಾರಿ ನಡೆಯುತ್ತಿದೆ.
-ರಾಜಣ್ಣ, ಕಾರ್ಯನಿರ್ವಹಣಾಧಿಕಾರಿ,  ಬಂಟ್ವಾಳ ತಾ.ಪಂ.

ಟಾಪ್ ನ್ಯೂಸ್

Repo Rate: ಸತತ 10ನೇ ಬಾರಿಯೂ ರೆಪೋ ದರ ಯಥಾಸ್ಥಿತಿ: RBI ಗವರ್ನರ್‌ ಶಕ್ತಿಕಾಂತ್‌ ದಾಸ್

Repo Rate: ಸತತ 10ನೇ ಬಾರಿಯೂ ರೆಪೋ ದರ ಯಥಾಸ್ಥಿತಿ: RBI ಗವರ್ನರ್‌ ಶಕ್ತಿಕಾಂತ್‌ ದಾಸ್

1-jin

Haryana; ಬಿಜೆಪಿಗೆ ಸೆಡ್ದು ಹೊಡೆದು ಪಕ್ಷೇತರರಾಗಿ ಗೆದ್ದ ದೇಶದ ಶ್ರೀಮಂತ ಮಹಿಳೆ !

Bengaluru: ಹರಳು ಕೂರಿಸುವುದಾಗಿ 1 ಕೋಟಿ ರೂ. ಮೌಲ್ಯದ ಚಿನ್ನ ಕದ್ದ!

Bengaluru: ಹರಳು ಕೂರಿಸುವುದಾಗಿ 1 ಕೋಟಿ ರೂ. ಮೌಲ್ಯದ ಚಿನ್ನ ಕದ್ದ!

BBK11: ಯಾವ್ ಸೀಮೆ ಕ್ಯಾಪ್ಟನ್ ರೀ ನೀವು.. ಹಂಸಾ ಮೇಲೆ ನರಕ ವಾಸಿಗಳ ಕೂಗಾಟ

BBK11: ಯಾವ್ ಸೀಮೆ ಕ್ಯಾಪ್ಟನ್ ರೀ ನೀವು.. ಹಂಸಾ ಮೇಲೆ ನರಕ ವಾಸಿಗಳ ಕೂಗಾಟ

pramod madhwaraj

Pramod Madhwaraj;ಬಿಜೆಪಿ ನಾಯಕ ಪ್ರಮೋದ್ ಮಧ್ವರಾಜ್ ಆಸ್ಪತ್ರೆಗೆ ದಾಖಲು

1-koppala

Koppala: ಉದ್ಯಮಿ ಅರ್ಜುನ್ ಸಾ ಕಾಟ್ವಾ ಶವ ಪತ್ತೆ

1-aaaaa

Tunga River; ಬಂಡೆ ಮೇಲೆ ಸಿಲುಕಿ ಪರದಾಡುತ್ತಿದ್ದ ವ್ಯಕ್ತಿ ರಕ್ಷಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Dasara: ಅತಿಥಿ ಶಿಕ್ಷಕರಿಗಿಲ್ಲ ಸಂಭ್ರಮ; “ನಿಧಿ’ ಬಿಡುಗಡೆಯಾಗಿದ್ದರೂ ಸಿಗದ ಸಂಬಳ

Dasara: ಅತಿಥಿ ಶಿಕ್ಷಕರಿಗಿಲ್ಲ ಸಂಭ್ರಮ; “ನಿಧಿ’ ಬಿಡುಗಡೆಯಾಗಿದ್ದರೂ ಸಿಗದ ಸಂಬಳ

Kukke Shri Subrahmanya Temple: ಅನ್ನ ಪ್ರಸಾದಕ್ಕೆ ವೈವಿಧ್ಯಮಯ ಪಾಯಸ

Kukke Shri Subrahmanya Temple: ಅನ್ನ ಪ್ರಸಾದಕ್ಕೆ ವೈವಿಧ್ಯಮಯ ಪಾಯಸ

Subrahmanya: ಕುಮಾರ ಪರ್ವತ ಚಾರಣ ಆರಂಭಿಸಿದ ಚಾರಣಿಗರು

Subrahmanya: ಕುಮಾರ ಪರ್ವತ ಚಾರಣ ಆರಂಭಿಸಿದ ಚಾರಣಿಗರು

Puttur: ಹೊಸ ಅಡಿಕೆ ಧಾರಣೆ ಜಿಗಿತ

Puttur: ಹೊಸ ಅಡಿಕೆ ಧಾರಣೆ ಜಿಗಿತ; ಬೆಳೆಗಾರರ ಸಂಭ್ರಮ

Polali Temple: ನವರಾತ್ರಿ ಮಹೋತ್ಸವ; ಲಲಿತಾ ಪಂಚಮಿ: ಭಕ್ತರಿಗೆ ಸೀರೆಗಳ ವಿತರಣೆ

Polali Temple: ನವರಾತ್ರಿ ಮಹೋತ್ಸವ; ಲಲಿತಾ ಪಂಚಮಿ: ಭಕ್ತರಿಗೆ ಸೀರೆಗಳ ವಿತರಣೆ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

Repo Rate: ಸತತ 10ನೇ ಬಾರಿಯೂ ರೆಪೋ ದರ ಯಥಾಸ್ಥಿತಿ: RBI ಗವರ್ನರ್‌ ಶಕ್ತಿಕಾಂತ್‌ ದಾಸ್

Repo Rate: ಸತತ 10ನೇ ಬಾರಿಯೂ ರೆಪೋ ದರ ಯಥಾಸ್ಥಿತಿ: RBI ಗವರ್ನರ್‌ ಶಕ್ತಿಕಾಂತ್‌ ದಾಸ್

1-jin

Haryana; ಬಿಜೆಪಿಗೆ ಸೆಡ್ದು ಹೊಡೆದು ಪಕ್ಷೇತರರಾಗಿ ಗೆದ್ದ ದೇಶದ ಶ್ರೀಮಂತ ಮಹಿಳೆ !

3-ankola

Ankola:ಸಂಭವನೀಯ ರೈಲು ಅಪಘಾತ ತಪ್ಪಿಸಿದ ಟ್ರ್ಯಾಕ್‌ಮ್ಯಾನ್ ಗೆ ರೈಲ್ವೆಅಧಿಕಾರಿಗಳಿಂದ ಸನ್ಮಾನ

High Court: ವಕೀಲರ ವಾಕ್‌ ಸ್ವಾತಂತ್ರ್ಯ ನಿರ್ಬಂಧಿಸುವ ಅಧಿಕಾರ ಬಾರ್‌ ಕೌನ್ಸಿಲ್‌ಗೆ ಇಲ್ಲ

High Court: ವಕೀಲರ ವಾಕ್‌ ಸ್ವಾತಂತ್ರ್ಯ ನಿರ್ಬಂಧಿಸುವ ಅಧಿಕಾರ ಬಾರ್‌ ಕೌನ್ಸಿಲ್‌ಗೆ ಇಲ್ಲ

Arrested: ತ.ನಾಡಿನಿಂದ ಬಂದು ಲ್ಯಾಪ್‌ಟಾಪ್‌ ಕಳ್ಳತನ

Arrested: ತ.ನಾಡಿನಿಂದ ಬಂದು ಲ್ಯಾಪ್‌ಟಾಪ್‌ ಕಳ್ಳತನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.