Subramanya: ಮನೆ ಮನೆಗೆ ಕೇರ್ಪಡ ದೇವಳದ ಹುಲಿ
Team Udayavani, Oct 12, 2024, 8:00 AM IST
ಸುಬ್ರಹ್ಮಣ್ಯ: ದೇವಿ ಕ್ಷೇತ್ರಗಳಲ್ಲಿ ಪ್ರಧಾನವಾದ ಕಡಬ ತಾಲೂಕಿನ ಕೇರ್ಪಡ ಮಹಿಷಮರ್ದಿನಿ ದೇವಳದ ವತಿಯಿಂದ ಪ್ರತಿವರ್ಷ ನವರಾತ್ರಿಯಂದು ಹುಲಿ ವೇಷ ಧರಿಸಿ ಮನೆಮನೆಗೆ ತೆರಳುವ ಸಂಪ್ರದಾಯ ಕಳೆದ ಹಲವಾರು ವರ್ಷಗಳಿಂದ ನಡೆಯುತ್ತಿದೆ. ಶ್ರೀ ದೇವಿಯೇ ಹುಲಿಯ ರೂಪದಲ್ಲಿ ಮನೆಗೆ ಬಂದಿದ್ದಾಳೆಂದು ದೇವಳದ ಹುಲಿ ವೇಷಕ್ಕೆ ಪೂಜನೀಯವಾಗಿ ಮನೆಯವರು ಕಾಣಿಕೆ ಅರ್ಪಿಸಿ ಆಶೀರ್ವಾದ ಪಡೆಯುವ ಸಂಪ್ರದಾಯವಿದೆ.
ನಿಂತಿಕಲ್ಲು ಸಮೀಪದ ಕೇರ್ಪಡದ ನೂಜಾಡಿಯ ಕಿಟ್ಟು ಎಂಬವರು ಕಳೆದ ಹಲವಾರು ವರುಷಗಳಿಂದ ನವರಾತ್ರಿ ದಿನಗಳಲ್ಲಿ ಸಾಂಪ್ರದಾಯಿಕವಾಗಿ ಹುಲಿ ವೇಷ ಧರಿಸಿ ಪಿಲಿ ಕಿಟ್ಟು ಎಂಬ ಅನ್ವರ್ಥ ನಾಮಧೇಯದೊಂದಿಗೆ ದೇವಿ ಸೇವೆಯನ್ನು ಮಾಡುತ್ತಾ ಬರುತ್ತಿದ್ದಾರೆ.
ಕಿಟ್ಟು ಅವರು ವೇಷ ಧರಿಸಿ ದೇವಳದಲ್ಲಿ ಪೂಜೆ ಸಲ್ಲಿಸಿದ ಬಳಿಕ ಮನೆಮನೆಗೆ ತೆರಳುತ್ತಾರೆ. ತಂಡದ ನಿರ್ವಹಣೆಗೆ ದೇವಳದಿಂದ ನಿರ್ವಾಹಕರನ್ನು ನೇಮಿಸಲಾಗುತ್ತದೆ. ಮನೆಯವರು ವೇಷಧಾರಿಗೆ ಕಾಣಿಕೆಯೊಂದಿಗೆ ಅಕ್ಕಿ, ತೆಂಗಿನ ಕಾಯಿ, ಧವಸ ಧಾನ್ಯ ನೀಡುತ್ತಾರೆ. ಅಲ್ಲದೆ ಪುಟ್ಟ ಮಕ್ಕಳಿಗೆ ಹುಲಿಯಿಂದ ಆಶೀರ್ವಾದ ಮಾಡಿಸುವುದೂ ಉಂಟು.
ಯಾವುದೇ ಕಾಣಿಕೆಯು ಕೂಡಾ ಹುಲಿವೇಷ ಧಾರಣೆ ಮಾಡಿದವರಿಗೆ ದೊರಕುವುದಿಲ್ಲ ಬದಲಾಗಿ ಇದು ದೇವಳಕ್ಕೆ ಸಲ್ಲುವ ಕಾಣಿಕೆಯಾಗಿರುತ್ತದೆ. ಈ ಪರಿಸರದ ಕೇರ್ಪಡ, ಅಲೆಕ್ಕಾಡಿ, ನಿಂತಿಕಲ್, ಎಣ್ಮೂರು, ಬಾಳಿಲ, ಮುರುಳ್ಯ ಪ್ರದೇಶದಲ್ಲಿ ತಿರುಗಾಟವಿರುತ್ತದೆ.
-ದಯಾನಂದ ಕಲ್ನಾರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Hubli: ಗೋಪನಕೊಪ್ಪ ಕೊಲೆ ಪ್ರಕರಣ; ಕಾಲಿಗೆ ಗುಂಡು ಹೊಡೆದು ಇಬ್ಬರ ಬಂಧನ
Women: ಹೆಣ್ಣು ಹೊರೆಯಲ್ಲ ಶಕ್ತಿ
Sahara Desert: 50 ವರ್ಷಗಳಲ್ಲಿ ಕಂಡು ಕೇಳರಿಯದ ಧಾರಾಕಾರ ಮಳೆ-ಸಹರಾ ಮರುಭೂಮಿಯಲ್ಲಿ ಪ್ರವಾಹ!
Mysuru-Darbhanga Train Mishap: ಪಾಠ ಕಲಿಯದ ಸರಕಾರ… ಕೇಂದ್ರದ ವಿರುದ್ಧ ರಾಹುಲ್ ಕಿಡಿ
Malpe: ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ಪ್ರಜೆಗಳ ಬಂಧನ; ನಕಲಿ ಆಧಾರ್ ಕಾರ್ಡ್ ವಶ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.