ಸುಳ್ಯ ಅರಣ್ಯ ವ್ಯಾಪ್ತಿ: 1.70 ಲಕ್ಷ ಗಿಡ ವಿತರಣೆಗೆ ಸಿದ್ಧ


Team Udayavani, May 18, 2020, 5:45 AM IST

ಸುಳ್ಯ ಅರಣ್ಯ ವ್ಯಾಪ್ತಿ: 1.70 ಲಕ್ಷ ಗಿಡ ವಿತರಣೆಗೆ ಸಿದ್ಧ

ಸುಳ್ಯ: ಅರಣ್ಯ ಇಲಾಖೆ ವ್ಯಾಪ್ತಿಯ ಸುಳ್ಯ ವಲಯ ವಿಭಾಗದ ಸಸ್ಯ ಕ್ಷೇತ್ರದಲ್ಲಿ ಈ ಬಾರಿ 1.70 ಲಕ್ಷ ಗಿಡ ಬೆಳೆಸಲಾಗಿದ್ದು, ನಾಟಿ ಹಾಗೂ ವಿತರಣೆಗೆ ಸಿದ್ಧವಾಗಿದೆ.

ಸಾರ್ವಜನಿಕರಿಗೆ ವಿತರಿಸಲು ಹಾಗೂ ನೆಡುತೋಪುಗಳಲ್ಲಿ ನೆಡಲು ಗಿಡ ಬೆಳೆಸಲಾಗುತ್ತದೆ. ಅರಣ್ಯ ಇಲಾಖೆ ವಿವಿಧ ಯೋಜನೆ ಮೂಲಕ ಗಿಡ ವಿತರಿಸಲಿದೆ.

ಸಾರ್ವಜನಿಕ ವಿತರಣೆಗೆ 60,800 ಗಿಡ
ಸುಳ್ಯ ವಲಯದ ಮೇದಿನಡ್ಕ ಸಸ್ಯ ಕ್ಷೇತ್ರದಲ್ಲಿ ಸಾರ್ವಜನಿಕರಿಗೆ ವಿತರಣೆಗೆಂದು 60,800 ಗಿಡಗಳಿವೆ. ಕಳೆದ ವರ್ಷ 42,500 ಗಿಡಗಳಿತ್ತು. ಅಂದರೆ ಈ ಬಾರಿ 18,300 ಗಿಡಗಳು ಹೆಚ್ಚುವರಿಯಾಗಿ ಬೆಳೆಯಲಾಗಿದೆ. ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆ ಸಹಿತ ವಿವಿಧ ಯೋಜನೆಗಳಡಿ ಪ್ರೋತ್ಸಾಹ ದರದಲ್ಲಿ ಗಿಡ ವಿತರಿಸಲಾಗುತ್ತದೆ. ಪ್ರತಿ ವರ್ಷ ಮಳೆಗಾಲ ಆರಂಭಗೊಂಡ ಮೇಲೆ ಸಂಘ-ಸಂಸ್ಥೆ, ಶಾಲೆಗಳ ಸಹಯೋಗದಲ್ಲಿ ವನಮಹೋತ್ಸವ ಮೊದಲಾದ ಚಟುವಟಿಕೆ ಹಮ್ಮಿಕೊಳ್ಳಲು ಅರಣ್ಯ ಇಲಾಖೆ ತಯಾರಿ ನಡೆಸುತ್ತದೆ. ಆದರೆ ಬಾರಿ ಶಾಲಾ ಶೈಕ್ಷಣಿಕ ವರ್ಷ ಕಾರ್ಯಾರಂಭದ ಅನಂತರ ಈ ಬಗ್ಗೆ ತೀರ್ಮಾನ ಕೈಗೊಳ್ಳಬೇಕಿದೆ.ನೆಡುತೋಪುಗಳಲ್ಲಿ ನಾಟಿ ಮಾಡಲು ಮೇದಿನಡ್ಕ ಸಸ್ಯ ಕ್ಷೇತ್ರದಲ್ಲಿ 1,09,900 ಗಿಡಗಳಿವೆ. ಇವುಗಳು ಮಾರಾಟಕ್ಕೆಂದು ನಾಟಿ ಮಾಡಿದ ಗಿಡಗಳಲ್ಲ. ಅರಣ್ಯ ಇಲಾಖೆಯ ನೆಡುತೋಪುಗಳಲ್ಲಿ ಇವುಗಳನ್ನು ಬೆಳೆಸಲಾಗುತ್ತದೆ.

ಯಾವೆಲ್ಲ ಗಿಡಗಳಿವೆ?
ಮೂರು ವಲಯದ ಸಸ್ಯ ಕ್ಷೇತ್ರದಲ್ಲಿ ಸಾಗುವಾನಿ, ಮಹಾಗನಿ, ಹುಣಸೆ, ಶ್ರೀಗಂಧ, ನೆಲ್ಲಿ, ಕಿರಾಲ್‌ಬೋಗಿ, ರಾಂಪತ್ರೆ, ರೆಂಜೆ, ಹೊಂಗೆ, ಹೆಬ್ಬೇವು, ಅಂಟುವಾಳ, ಬಾದಾಮಿ, ನೇರಳೆ, ಮಾವು ಮೊದಲಾದ 55ಕ್ಕೂ ಅಧಿಕ ಜಾತಿಯ ಸಸ್ಯಗಳಿವೆ.

ಕಳೆದ ಎರಡು ವರ್ಷ 1.83 ಲಕ್ಷ ಗಿಡಗಳು
2018ರಲ್ಲಿ ಮೇದಿನಡ್ಕ ಕೇಂದ್ರೀಯ ಸಸ್ಯ ಕ್ಷೇತ್ರದಲ್ಲಿ 81,575 ಗಿಡಗಳನ್ನು ಬೆಳೆದು, ನೆಡು ತೋಪುಗಳಲ್ಲಿ ನೆಡಲು 67,575 ಮತ್ತು ಸಾರ್ವಜನಿಕ ವಿತರಣೆಗೆ 14 ಸಾವಿರ ಗಿಡಗಳನ್ನು ಬಳಸಲಾಗಿತ್ತು. 2019 ಸಾರ್ವಜನಿಕರಿಗೆ ವಿತರಣೆಗೆ 42,500 ಗಿಡಗಳು, ನೆಡುತೋಪುಗಳಲ್ಲಿ ನಾಟಿ ಮಾಡಲು 1,01,500 ಗಿಡಗಳು ಸಹಿತ 1.44 ಲಕ್ಷ ಗಿಡಗಳನ್ನು ವಿತರಿಸಲಾಗಿತ್ತು.

ಹಸುರು ಸಂಪತ್ತು ವೃದ್ಧಿಗೆ ಕ್ರಮ
ಮೇದಿನಡ್ಕ ಸಸ್ಯ ಕ್ಷೇತ್ರದಲ್ಲಿ ಸಾರ್ವಜನಿಕ ವಿತರಣೆ ಮತ್ತು ಅರಣ್ಯ ಇಲಾಖೆ ನೆಡುತೋಪುಗಳಲ್ಲಿ ನೆಡಲು 1,70,700 ಗಿಡಗಳು ಸಿದ್ಧವಾಗಿವೆ. ಹಸುರು ಸಂಪತ್ತು ವೃದ್ಧಿಗೆ ಅರಣ್ಯ ಇಲಾಖೆ ಪೂರಕ ಕ್ರಮ ಕೈಗೊಂಡಿದೆ.
-ಮಂಜುನಾಥ,ವಲಯ ಅರಣ್ಯಾಧಿಕಾರಿ, ಸುಳ್ಯ

ಟಾಪ್ ನ್ಯೂಸ್

DKSHi-4

Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Gambhir-Agarkar have differences of opinion on Pant-Rahul issue

Team India: ಪಂತ್-ರಾಹುಲ್‌ ವಿಚಾರದಲ್ಲಿ ಗಂಭೀರ್-‌ ಅಗರ್ಕರ್‌ ನಡುವೆ ಭಿನ್ನಾಭಿಪ್ರಾಯ

15-monalisa

Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ

nagavalli bangale kannada movie

Sandalwood: ʼನಾಗವಲ್ಲಿ ಬಂಗಲೆ’ಯಿಂದ ಹಾಡು ಬಂತು

ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್

Namma Santhe: ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್

Tollywood: ಚಿತ್ರರಂಗಕ್ಕೆ N.T ರಾಮರಾವ್ ಪರಿಚಯಿಸಿದ್ದ ಹಿರಿಯ ನಟಿ ಕೃಷ್ಣವೇಣಿ ನಿಧನ

Tollywood: ಚಿತ್ರರಂಗಕ್ಕೆ N.T ರಾಮರಾವ್ ಪರಿಚಯಿಸಿದ್ದ ಹಿರಿಯ ನಟಿ ಕೃಷ್ಣವೇಣಿ ನಿಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Vitla: Bolanthur Narsha robbery case: Four more arrested including Kerala police

Vitla: ಬೋಳಂತೂರು ನಾರ್ಶ ದರೋಡೆ ಪ್ರಕರಣ: ಕೇರಳದ ಪೊಲೀಸ್‌ ಸೇರಿ ಮತ್ತೆ ನಾಲ್ವರ ಬಂಧನ

8-kukke

Subrahmanya: ಮುಜರಾಯಿ ಸಚಿವರ ನೇತೃತ್ವದಲ್ಲಿ ಕುಕ್ಕೆ ದೇಗುಲದ ಅಭಿವೃದ್ಧಿ ಸಭೆ

3(1

Sullia: ಜಳಕದಹೊಳೆ ಸೇತುವೆ; ಸಂಚಾರ ನಿಷೇಧ

2(1

Uppinangady: ಕಾಂಕ್ರೀಟ್‌ ರಸ್ತೆಯೇ ಕಿತ್ತೋಗಿದೆ

1

Bantwal: ಕೃಷಿಕರ ತೋಟಗಳಿಗೆ ನುಗ್ಗಿದ ಜಕ್ರಿಬೆಟ್ಟು ಅಣೆಕಟ್ಟು ನೀರು!

MUST WATCH

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

udayavani youtube

ಮುಕೇಶ್ ಅಂಬಾನಿ ಕುಟುಂಬದ ನಾಲ್ಕು ತಲೆಮಾರು ಮಹಾ ಕುಂಭಮೇಳದಲ್ಲಿ ಪವಿತ್ರ ಸ್ನಾನ

ಹೊಸ ಸೇರ್ಪಡೆ

18

Uv Fusion: ಗೆಳೆತನವೆಂಬ ನಿಸ್ವಾರ್ಥ ಬಾಂಧವ್ಯ

17

Uv Fusion: ಎಡವುದು ಕೂಡ ಒಳ್ಳೆಯದೇ ಒಮ್ಮೊಮ್ಮೆ…

DKSHi-4

Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

16

Uv Fusion: ಪೆನ್ನಿಗೊಂದು ಕಥೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.