ಕಾಡಾನೆ ತಡೆಗೆ ಜೇನು ಪೆಟ್ಟಿಗೆ ಪ್ರಯೋಗ ಬಹುತೇಕ ಯಶಸ್ವಿ


Team Udayavani, Jul 24, 2023, 7:43 AM IST

hoಕಾಡಾನೆ ತಡೆಗೆ ಜೇನು ಪೆಟ್ಟಿಗೆ ಪ್ರಯೋಗ ಬಹುತೇಕ ಯಶಸ್ವಿ

ಸುಳ್ಯ: ಕೃಷಿ ಭೂಮಿ, ಜನವಸತಿ ಪ್ರದೇಶಗಳತ್ತ ಕಾಡಾನೆ ಲಗ್ಗೆ ಇಡುವುದನ್ನು ತಡೆಯಲು ಸುಳ್ಯ ತಾಲೂಕಿನ ಗಡಿ ಗ್ರಾಮ ಮಂಡೆಕೋಲಿನ ಕೃಷಿಕರೊಬ್ಬರು ಅಳವಡಿಸಿದ ಜೇನು ಪೆಟ್ಟಿಗೆ ಪ್ರಯೋಗ ಬಹುತೇಕ ಯಶಸ್ವಿಯಾಗಿದೆ.

ಆನೆ ಕಂದಕ, ಸೋಲಾರ್‌ ಬೇಲಿ, ಸಿಮೆಂಟ್‌ ಸ್ಲಾ éಬ್‌ ಅಳವಡಿಕೆ ಹೀಗೆ ಹಲವು ಯೋಜನೆಗಳನ್ನು ಅನುಷ್ಠಾನ ಮಾಡಿದರೂ ಫ‌ಲಕಾರಿಯಾಗದಿದ್ದಾಗ ಕಂಡುಕೊಂಡದ್ದೇ ಜೇನು ಪೆಟ್ಟಿಗೆಯ ಸರಳ ಪ್ರಯೋಗ.

ಮಂಡೆಕೋಲು ಗ್ರಾಮದ ದೇವರಗುಂಡದ ಕೃಷಿಕ ಬಾಲಚಂದ್ರ ಡಿ.ಸಿ. ಅವರ ತೋಟಕ್ಕೆ ಹೆಚ್ಚಾಗಿ ಆನೆಗಳು ನುಗ್ಗುತ್ತಿದ್ದ ದಾರಿಯಲ್ಲಿ 30 ಜೇನು ಪೆಟ್ಟಿಗೆಗಳನ್ನು ಸಮಾನ ಅಂತರದಲ್ಲಿ ಇರಿಸಿ ತಂತಿಯಿಂದ ಜೋಡಿಸಲಾಗಿತ್ತು. ಆನೆಗಳು ಬಂದು ಪೆಟ್ಟಿಗೆಯನ್ನು ಅಥವಾ ತಂತಿಯನ್ನು ಸ್ಪರ್ಶಿಸಿದಾಗ ಏಕಕಾಲಕ್ಕೆ ಎಲ್ಲ ಪೆಟ್ಟಿಗಳು ಅಲುಗುವುದರಿಂದ ಜೇನು ನೊಣಗಳು ಹೊರ ಬಂದು ಗುಂಯ್‌ಗಾಟ್ಟುತ್ತವೆ. ಆ ಸದ್ದಿನಿಂದ ಕಿರಿಕಿರಿ ಅನುಭವಿಸುವ ಆನೆಗಳು ಮತ್ತೆ ಅತ್ತ ಸುಳಿಯಲಾರವು ಎಂಬುದು ಈ ಪ್ರಯೋಗದ ಸಿದ್ಧಾಂತ.

ಪೆಟ್ಟಿಗೆ ಕಂಡು ದಾರಿ
ಬದಲಿಸಿದ ಆನೆಗಳು !
ಕಳೆದ ಜನವರಿಯಲ್ಲಿ ಯೋಜನೆ ಅನುಷ್ಠಾನವಾಗಿತ್ತು. 6 ತಿಂಗಳ ಈ ಅವಧಿಯಲ್ಲಿ ಒಮ್ಮೆ ಮಾತ್ರ ಬೇರೆ ದಾರಿಯ ಮೂಲಕ ಆನೆಗಳು ತೋಟಕ್ಕೆ ನುಗ್ಗಿದ್ದವು. ಮರಳಿ ಹೋಗುವಾಗ ಜೇನು ಪೆಟ್ಟಿಗೆ ಇರುವಲ್ಲಿ ಬಂದರೂ ಹತ್ತಿರ ಬಂದಾಕ್ಷಣ ನಿಂತು ನೋಡಿ ಬೇರೆ ದಾರಿ ಹಿಡಿದಿದ್ದವು. ಇದು ಅಲ್ಲಿ ಅಳವಡಿಸಿರುವ ಸಿಸಿ ಕೆಮರಾದಲ್ಲಿ ದಾಖಲಾಗಿದೆ. ಆ ಬಳಿಕ ಆನೆಗಳು ಅವರ ತೋಟಕ್ಕೆ ಬಂದಿಲ್ಲ.

ಮಳೆಗಾಲದ ಬಳಿಕ
ಇತರೆಡೆ ಅಳವಡಿಕೆ
ಮಳೆಗಾಲದಲ್ಲಿ ಈ ಭಾಗದಲ್ಲಿ ಆನೆಗಳ ಹಾವಳಿ ಅಧಿಕ. ಈ ಮಳೆಗಾಲ ದಲ್ಲಿ ಆನೆ ಹಾವಳಿ ತಡೆಯುವಲ್ಲಿ ಜೇನು ಪೆಟ್ಟಿಗೆ ಪ್ರಯೋಗ ಎಷ್ಟರ ಮಟ್ಟಿಗೆ ಸಹಕಾರಿಯಾಗುತ್ತದೆ ಎಂಬು ದನ್ನು ನೋಡಿಕೊಂಡು ಮುಂದೆ ಇತರ ತೋಟಗಳಲ್ಲೂ ಈ ವಿಧಾನ ಅಳವಡಿಸುವ ಯೋಚನೆ ಸ್ಥಳೀಯರದ್ದು.

ಖಾದಿ ಮತ್ತು ಗ್ರಾಮೋದ್ಯೋಗ ಆಯೋಗದ ವತಿಯಿಂದ ದ.ಕ., ಉಡುಪಿ ಜೇನು ವ್ಯವಸಾಯಗಾರರ ಸಹಕಾರ ಸಂಘದ ನೇತೃತ್ವದಲ್ಲಿ ಹನಿಮಿಷನ್‌ ಯೋಜನೆಯಡಿ 35 ಕೃಷಿಕರಿಗೆ ಜೇನು ಕೃಷಿ ತರಬೇತಿ ನೀಡಿ ಜೇನು ಕೃಷಿ ಮಾಡಲು ತಲಾ 10 ಪೆಟ್ಟಿಗೆಗಳನ್ನು ಜೇನು ಕುಟುಂಬ ಸಮೇತ ವಿತರಿಸಲಾಗಿತ್ತು. ಹೀಗೆ ದೊರೆತ ಜೇನು ಪೆಟ್ಟಿಗೆ ಗಳನ್ನು ದೇವರ ಗುಂಡದಲ್ಲಿ ಅಳವಡಿಸ ಲಾಗಿದೆ. ಪೆಟ್ಟಿಗೆಯಲ್ಲಿ ಉತ್ತಮ ಪ್ರಮಾಣದಲ್ಲಿ ಜೇನು ದೊರೆತಿದ್ದು, ಅಲ್ಪ ಆದಾಯವೂ ಕೈಸೇರಿದೆ.

ಪ್ರಥಮ ಪ್ರಯೋಗ
ನಾಗರಹೊಳೆಯಲ್ಲಿ
ನಾಗರಹೊಳೆ ವ್ಯಾಪ್ತಿಯಲ್ಲಿ ಈ ಪ್ರಯೋಗವನ್ನು ಪೊನ್ನಂಪೇಟೆಯ ಫಾರೆಸ್ಟ್ರಿ ಕಾಲೇಜ್‌ ವತಿಯಿಂದ ನಡೆ ಸಿದ್ದು, ಅಲ್ಲಿ ಕಾಫಿ ತೋಟಕ್ಕೆ ಆನೆಗಳು ಬರುವುದು ಶೇ. 70ರಷ್ಟು ಕಡಿಮೆಯಾಗಿತ್ತು ಎಂದು ಅಧಿಕಾರಿ ಗಳು ಹೇಳಿದ್ದಾರೆ.

ಜೇನು ಪೆಟ್ಟಿಗೆ ಇರಿಸಿದ ಬಳಿಕ ತೋಟಕ್ಕೆ ಆನೆ ಹಾವಳಿ ಕಡಿಮೆಯಾಗಿದೆ. ಒಮ್ಮೆ ಬೇರೆ ದಾರಿಯ ಮೂಲಕ ಬಂದರೂ ಪೆಟ್ಟಿಗೆ ಸಮೀಪ ಬಂದು ಬೇರೆ ದಾರಿ ಹಿಡಿದಿವೆ. ಮಳೆಗಾಲದಲ್ಲಿ ಆನೆ ಹಾವಳಿಯನ್ನು ನೋಡಿಕೊಂಡು ಈ ದಾರಿಯ ಮೂಲಕ ಬಾರದೆ ಇದ್ದರೆ ಆನೆ ಹಾವಳಿ ಇರುವ ಬೇರೆ ಕಡೆಗಳಲ್ಲೂ ಜೇನು ಪೆಟ್ಟಿಗೆ ಇರಿಸುವ ಬಗ್ಗೆ ಯೋಚನೆ ಮಾಡಿದ್ದೇವೆ.
– ಡಿ.ಸಿ. ಬಾಲಚಂದ್ರ ದೇವರಗುಂಡ,ಕೃಷಿಕರು

ಟಾಪ್ ನ್ಯೂಸ್

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

de

Vitla: ಕಾಲು ಜಾರಿ ಕೆರೆಗೆ ಬಿದ್ದು ಯುವಕ ಸಾವು

Vitla: Bolanthur Narsha robbery case: Four more arrested including Kerala police

Vitla: ಬೋಳಂತೂರು ನಾರ್ಶ ದರೋಡೆ ಪ್ರಕರಣ: ಕೇರಳದ ಪೊಲೀಸ್‌ ಸೇರಿ ಮತ್ತೆ ನಾಲ್ವರ ಬಂಧನ

8-kukke

Subrahmanya: ಮುಜರಾಯಿ ಸಚಿವರ ನೇತೃತ್ವದಲ್ಲಿ ಕುಕ್ಕೆ ದೇಗುಲದ ಅಭಿವೃದ್ಧಿ ಸಭೆ

3(1

Sullia: ಜಳಕದಹೊಳೆ ಸೇತುವೆ; ಸಂಚಾರ ನಿಷೇಧ

2(1

Uppinangady: ಕಾಂಕ್ರೀಟ್‌ ರಸ್ತೆಯೇ ಕಿತ್ತೋಗಿದೆ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

accident

Kaup: ಸ್ಕೂಟಿ, ಕಾರಿಗೆ ಬಸ್‌ ಢಿಕ್ಕಿ; ಸವಾರನಿಗೆ ಗಾಯ

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.