ಹೈಕಮಾಂಡ್ ಪಟ್ಟಿಯಲ್ಲಿ ಮೂವರು : ಆಕಾಂಕ್ಷಿಗಳಲ್ಲಿ ತಳಮಳ
ಅನ್ಯರಿಗೆ ಟಿಕೆಟ್: 1989ರ ಪ್ರಯೋಗ?
Team Udayavani, Apr 9, 2023, 8:20 AM IST
ಪುತ್ತೂರು : ಪುತ್ತೂರು ಕ್ಷೇತ್ರಕ್ಕೆ ಬಿಜೆಪಿ ವರಿಷ್ಠರು ಬೇರೆಯೇ ಮೂರು ಹೆಸರುಗಳನ್ನು ಸಿದ್ಧಪಡಿಸಿಕೊಂಡಿದೆ ಎನ್ನಲಾಗಿದ್ದು, ಪ್ರಸ್ತುತ ಆಕಾಂಕ್ಷಿಗಳ ಸಾಲಿನಲ್ಲಿರುವವರ ನಿದ್ದೆಗೆಡಿಸಿದೆ.
ಈ ಬಾರಿ ಹೊಸ ಮುಖವನ್ನು ಕಣ ಕ್ಕಿಳಿಸುವ ಬಗ್ಗೆ ಈಗಾಗಲೇ ವರಿಷ್ಠರು ಬಹುತೇಕ ತೀರ್ಮಾನಕ್ಕೆ ಬಂದಿದ್ದಾರೆ. ಈ ಹಿನ್ನೆಲೆಯಲ್ಲಿ ಇದ್ದಕ್ಕಿದ್ದಂತೆ ಆಕಾಂಕ್ಷಿ ಗಳ ಪಟ್ಟಿಯೂ ಬಹಳ ದೊಡ್ಡದಾಗಿದೆ. ಆದರೆ ವರಿಷ್ಠರು ಬೇರೆಯೇ ಮೂರು ಹೆಸರುಗಳನ್ನು ಪಟ್ಟಿ ಮಾಡಿದ್ದಾರೆ ಎನ್ನುವ ಅಂಶ ಕುತೂಹಲಕ್ಕೆ ಕಾರಣವಾಗಿದೆ.
1989 ರ ಪ್ರಯೋಗ?
ಪುತ್ತೂರಿನ ಬಿಜೆಪಿ ಪಾಳಯದಲ್ಲಿ ಎರಡು ಬಣಗಳ ರಾಜಕೀಯ ಮುಂದುವರಿದಿದೆ. ಹೀಗಾಗಿ ಯಾವುದೇ ಗುಂಪಿನವರಿಗೆ ಅವಕಾಶ ಕೊಟ್ಟರೆ ಸಮಸ್ಯೆ ಹೆಚ್ಚಾಗಲೂ ಬಹುದು. ಇದಕ್ಕಾಗಿ ಪರ್ಯಾಯ ದಾರಿಯಾಗಿ 1989 ರಲ್ಲಿನ ಪ್ರಯೋಗದ ಪುನರಾವರ್ತನೆಗೂ ವರಿಷ್ಠರು ಯೋಚಿಸುತ್ತಿದ್ದಾರೆ ಎನ್ನಲಾಗಿದೆ.
1989 ರಲ್ಲಿ ಕಾಂಗ್ರೆಸ್ನ ವಿನಯ ಕುಮಾರ್ ಸೊರಕೆ ವಿರುದ್ಧ ಪುತ್ತೂರಿನ ಬಿಜೆಪಿ ಅಭ್ಯರ್ಥಿಯಾಗಿ ಸುಳ್ಯ ಕ್ಷೇತ್ರದಿಂದ ಡಿ.ವಿ. ಸದಾನಂದ ಗೌಡರನ್ನು ಕರೆಸಿ ಅವಕಾಶ ನೀಡಲಾ ಗಿತ್ತು. ಈ ಬಾರಿಯ ಬಣ ರಾಜಕೀಯ ಹತ್ತಿಕ್ಕಲು ಹೊರಗಿನ ಅಭ್ಯರ್ಥಿಯನ್ನೂ ತಂದು ನಿಲ್ಲಿಸುವ ಸಾಧ್ಯತೆಯನ್ನೂ ತಳ್ಳಿ ಹಾಕುವಂತಿಲ್ಲ ಎನ್ನುತ್ತವೆ ಪಕ್ಷದ ಮೂಲಗಳು.
ಯಾವ ಕ್ಷೇತ್ರದ ಅಭ್ಯರ್ಥಿ..!
ಬಿಜೆಪಿ ರಾಜ್ಯಾಧ್ಯಕ್ಷರು ಮಂಗಳೂರಿನಲ್ಲಿ ಶುಕ್ರವಾರ ನಡೆಸಿದ ಸಭೆಯಲ್ಲಿ ಎಲ್ಲರ ಅಭಿಪ್ರಾಯ ಕೇಳಿದ ಮೇಲೆ, ಹೈಕಮಾಂಡ್ ಮಟ್ಟದಲ್ಲೂ ಮೂರು ಹೆಸರುಗಳಿವೆ ಎಂದು ಪ್ರಸ್ತಾವಿಸಿದ್ದರಂತೆ. ಅವುಗಳಲ್ಲಿ ಸುಳ್ಯ ಭಾಗದವರ ಹೆಸರೂ ಸೇರಿದೆ ಎಂಬ ಮಾಹಿತಿ ಲಭ್ಯವಾಗಿದೆ. ಇಲ್ಲಿ ಜಾತಿ ಲೆಕ್ಕಾಚಾರದಲ್ಲಿ ಆಭ್ಯರ್ಥಿಯನ್ನು ಆಯ್ಕೆ ಮಾಡುತ್ತಾರೋ ಅಥವಾ ಪಕ್ಷದ ಲೆಕ್ಕದಲ್ಲಿ ಅಭ್ಯರ್ಥಿಯನ್ನು ಆಯ್ಕೆ ಮಾಡುತ್ತಾರೋ ಕಾದು ನೋಡಬೇಕಿದೆ.
ಒಪ್ಪಿಸುವುದೇ ಸವಾಲು..!
ಹೊರ ಕ್ಷೇತ್ರದ ಅಭ್ಯರ್ಥಿಯನ್ನು ನಿಲ್ಲಿಸದೆ, ಕ್ಷೇತ್ರದ ಅಭ್ಯರ್ಥಿಗೆ ಮಣೆ ಹಾಕಬೇಕು ಎನ್ನುವ ಬಗ್ಗೆ ಈಗಾಗಲೇ ಪುತ್ತೂರು ಕ್ಷೇತ್ರದ ಮುಖಂಡರು ಪಟ್ಟು ಹಿಡಿದಿದ್ದಾರೆ. ಹಾಗಾಗಿ ವರಿಷ್ಠರು ಹೇಗೆ ಮುಖಂಡರ ಮನವೊಲಿಸುವರು ಎಂಬುದು ಮುಂದಿರುವ ಬೆಳವಣಿಗೆಯಾಗಿದೆ.
ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ತವರು ಕ್ಷೇತ್ರವಾದ ಪುತ್ತೂರನ್ನು ಗೆಲ್ಲಲೆಬೇಕಾದ ಒತ್ತಡದಲ್ಲಿರುವ ಕಾರಣ ಅವರ ನಿರ್ಧಾರವನ್ನು ಸ್ಥಳೀಯ ಮುಖಂಡರು ಒಪ್ಪುವ ಅನಿವಾರ್ಯವೂ ಬರಬಹುದು ಎನ್ನಲಾಗಿದೆ.
ಬೆಂಬಲಿಗರ ಪ್ರಚಾರ ಬಿರುಸು
ಪುತ್ತೂರಿನ ಬಿಜೆಪಿ ಪಾಳಯದಲ್ಲಿ ರಾಜಕೀಯ ಚಟುವಟಿಕೆ ಬಿರುಸಾಗುತ್ತಿರುವ ಬೆನ್ನಲ್ಲೇ ಆಕಾಂಕ್ಷಿತರ ಬೆಂಬಲಿಗರು ಅಭ್ಯರ್ಥಿತನಕ್ಕೆ ಆಗ್ರಹಿಸಿ ಸಾಮಾಜಿಕ ಜಾಲ ತಾಣಗಳಲ್ಲಿ ಬಿರುಸಿನ ಪ್ರಚಾರ, ಅಭಿಯಾನ ನಡೆಸುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Tollywood: ʼಪುಷ್ಪ-3 ಬರುವುದು ಕನ್ಫರ್ಮ್.. ನಿರ್ಮಾಪಕರೇ ಬಿಟ್ಟು ಕೊಟ್ರು ಗುಟ್ಟು
KSRTC ನಿಲ್ದಾಣ-ಲಾಲ್ಭಾಗ್ ರಸ್ತೆ ಫುಟ್ಪಾತ್ ಇಲ್ಲದೆ ಪಾದಚಾರಿಗಳ ಪರದಾಟ
Davanagere: ಹಳೆಯ ದಾಖಲೆಗಳ ಲ್ಯಾಮಿನೇಶನ್: ಮಹಾನಗರ ಪಾಲಿಕೆಯ ಹೊಸ ಕ್ರಮ
IPL 2025: ಸಿಎಸ್ ಕೆ ಅಭಿಮಾನಿಗಳಿಗೆ ಶಾಕಿಂಗ್ ಸುದ್ದಿ ಕೊಟ್ಟ ಎಂ.ಎಸ್.ಧೋನಿ
Thekkatte: ಹೆದ್ದಾರಿ ಹೊಡೆತದಿಂದ ತೆಕ್ಕಟ್ಟೆ ಕನ್ನಡ ಶಾಲೆ ಉಳಿಸಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.