ನೇತ್ರಾವತಿ ಕಿನಾರೆಯಲ್ಲಿದ್ದರೂ ನೀರಿನ ಬರ


Team Udayavani, Sep 3, 2021, 3:20 AM IST

Untitled-1

ಬಂಟ್ವಾಳ ತಾಲೂಕಿನ ಸಜೀಪಮುನ್ನೂರು ಗ್ರಾಮದಿಂದ ಹಲವು ಬೃಹತ್‌ ಉದ್ದಿಮೆಗಳು, ಸ್ಥಳೀಯಾಡಳಿತ ಸಂಸ್ಥೆ ಗಳಿಗೆ ನೀರು ಸರಬರಾಜಾದರೂ ಇಲ್ಲಿನ ನೀರಿನ ಕೊರತೆ ನೀಗಿಲ್ಲ. ಮಾತ್ರವಲ್ಲ ಇಲ್ಲಿನ ಇನ್ನೂ ಹಲವು ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ ಪ್ರಯತ್ನ ಒಂದು ಊರು; ಹಲವು ದೂರು ಅಂಕಣದಲ್ಲಿ.

ಬಂಟ್ವಾಳ: ಹಲವು ಬೃಹತ್‌ ಉದ್ದಿಮೆಗಳು, ಸ್ಥಳೀಯಾಡಳಿತ ಸಂಸ್ಥೆ ಗಳಿಗೆ ಇದೇ ಗ್ರಾಮದಿಂದ ನೀರು ಸರಬ ರಾಜಾದರೂ, ಈ ಗ್ರಾಮಕ್ಕೆ ಕುಡಿಯುವ ನೀರಿನ ಸಮಸ್ಯೆಗೆ ಇನ್ನೂ ಕೂಡ ಪರಿಹಾರ ಕಂಡು ಕೊಳ್ಳುವುದಕ್ಕೆ ಸಾಧ್ಯವಾಗಿಲ್ಲ. ಗ್ರಾಮದ ಬಹುತೇಕ ಪ್ರದೇಶ ನೇತ್ರಾವತಿ ನದಿ ಕಿನಾರೆಯಲ್ಲಿದ್ದರೂ, ಗ್ರಾಮಕ್ಕೆ ನೀರಿನ ಸಮಸ್ಯೆ ಇರುವುದು ವಿಪರ್ಯಾಸ.

ಇದು ಸಜೀಪಮುನ್ನೂರು ಗ್ರಾಮದ ಕಥೆ. ಸರಕಾರದ ಅನುದಾನಗಳ ಮೂಲಕ ತಾಲೂಕಿನ ಹಲವಾರು ಗ್ರಾಮಗಳಿಗೆ ಶಾಶ್ವತ ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ. ಆದರೆ ಸಜೀಪಮುನ್ನೂರು ಗ್ರಾಮದಲ್ಲಿ ಕೊಳವೆಬಾವಿಯನ್ನೇ ನಂಬಿ ನೀರು ಪೂರೈಕೆ ಮಾಡಲಾಗುತ್ತಿದೆ. ನದಿಯಿಂದ ಹತ್ತಾರು ಕಿ.ಮೀ.ದೂರಕ್ಕೆ ನೀರು ಕೊಂಡುಹೋದರೆ ನದಿ ಕಿನಾರೆಯಲ್ಲೇ ಇರುವ ಗ್ರಾಮಕ್ಕೆ ನೀರಿಲ್ಲ.

ಇದರ ಜತೆಗೆ ಹತ್ತು ಹಲವು ಸಮಸ್ಯೆಗಳು ಗ್ರಾಮಸ್ಥರನ್ನು ಕಾಡುತ್ತಿದ್ದು,  ಕೆಲವೊಂದು ಒಳರಸ್ತೆಗಳು ಹದಗೆಟ್ಟು ಹೋಗಿವೆ. ಗ್ರಾಮದಲ್ಲಿ ನಿವೇಶನ, ವಸತಿ ಸಮಸ್ಯೆಯೂ ಸಾಕಷ್ಟು ಕಡೆಗಳಲ್ಲಿದೆ. ಇನ್ನು ಗ್ರಾಮದ ಬೊಕ್ಕಸ ಪ್ರದೇಶದಲ್ಲಿ ಮಂಗಳೂರು ವಿವಿಯ ಜಾಕ್‌ವೆಲ್‌ ಸಿಬಂದಿ ವಸತಿ ಗೃಹದ ಕಟ್ಟಡ ಪಾಳು ಬಿದ್ದಿದ್ದು, ಅದರ ತೆರವು ಕಾರ್ಯವೂ ಇನ್ನೂ ನಡೆದಿಲ್ಲ. ವಿವಿ ಸಿಂಡಿಕೇಟ್‌ ಸಭೆಯಲ್ಲಿ ತೆರವಿಗೆ ನಿರ್ಧಾರವಾದರೂ, ಇನ್ನೂ ಅದರ ಕಾರ್ಯ ನಡೆದಿಲ್ಲ.

ಹಲವು ಕಡೆಗೆ ಇಲ್ಲಿಂದ ನೀರು :

ಸಜೀಪಮುನ್ನೂರು ಗ್ರಾಮದ ಹಲವು ಕಡೆಗಳಿಂದ ಮಂಗಳೂರು ವಿಶ್ವ ವಿದ್ಯಾನಿಲಯ, ಕರೋಪಾಡಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ನೀರು ಕೊಂಡು ಹೋಗಲಾಗುತ್ತಿದೆ. ಗ್ರಾಮದಲ್ಲೇ ಜಾಕ್‌ವೆಲ್‌ ಕೂಡ ನಿರ್ಮಿಸಲಾಗಿದೆ. ಉಳ್ಳಾಲ ನಗರ ಸಭೆ ಸೇರಿದಂತೆ ಅಲ್ಲಿ ಹಲವು ಸ್ಥಳೀಯಾಡಳಿತ ಸಂಸ್ಥೆಗಳಿಗೆ ನೀರು ಪೂರೈಕೆಯ ದೃಷ್ಟಿಯಿಂದ ಬೃಹತ್‌ ಜಾಕ್‌ವೆಲ್‌ ಅನುಷ್ಠಾನಗೊಳ್ಳುತ್ತಿದ್ದು, ಅದರ ಕಾಮಗಾರಿಯೂ ಬಹುತೇಕ ಪೂರ್ಣಗೊಂಡಿದೆ.

ಸಜೀಪಮುನ್ನೂರು ಗ್ರಾಮಕ್ಕೆ ನೀರು ನೀಡುತ್ತಿಲ್ಲ ಎಂಬ ಕಾರಣಕ್ಕೆ ಜಾಕ್‌ವೆಲ್‌ ನಿರ್ಮಾಣಕ್ಕೆ ಪ್ರಾರಂಭದಲ್ಲಿ ಸಾಕಷ್ಟು ವಿರೋಧಗಳು ಕೇಳಿಬಂದಿತ್ತು. ಬಳಿಕ ಸ್ಥಳೀಯ ಗ್ರಾಮಕ್ಕೂ ನೀರು ನೀಡ ಲಾಗುತ್ತದೆ ಎಂಬ ಭರವಸೆಯ ಹಿನ್ನೆಲೆಯಲ್ಲಿ ಕಾಮಗಾರಿಗೆ ಅವಕಾಶ ನೀಡಿದ್ದರು. ಇಲ್ಲಿಂದ ನೀರು ಕೊಂಡು ಹೋಗುವ ವೇಳೆಯೇ ಹಿಂತಿರುಗಿ ಬರುವ ಪೈಪುಲೈನ್‌ ಹಾಕಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದರು. ಆದರೆ ನೀರು ಶುದ್ಧೀಕರಣಗೊಂಡು ಹಿಂದಿರುಗಿ ಬರುವ ಪೈಪ್‌ಲೈನ್‌ ಹಾಕದಿರುವುದರಿಂದ ಗ್ರಾಮಸ್ಥರಿಗೆ ಇನ್ನೂ ನೀರು ಸಿಗುವ ಭರ ವಸೆ ಸಿಕ್ಕಿಲ್ಲ.

ನೇರವಾಗಿ ನದಿಯಿಂದ ನೀರು :

ನದಿಯಲ್ಲಿ ಸಾಕಷ್ಟು ನೀರಿದ್ದರೂ ಜನತೆಗೆ ಕುಡಿಯುವ ನೀರು ಕೊಡುವ ಸಂದರ್ಭದಲ್ಲಿ ನೇರವಾಗಿ ಕೊಡುವಂತಿಲ್ಲ ಎಂಬ ನಿಯಮವಿದ್ದರೂ, ನಂದಾವರ ಪ್ರದೇಶ ಸೇರಿದಂತೆ ಗ್ರಾಮದ ಕೆಲ ವೊಂದೆಡೆ ನೇರವಾಗಿ ನೀರು ಕೊಡ ಲಾಗುತ್ತಿದೆ ಎಂಬ ಆರೋಪ ಇದೆ. ಅಂದರೆ ಶುದೀœಕರಣ ಘಟಕಕ್ಕೆ ಸಾಕಷ್ಟು ಅನುದಾನ ಬೇಕಿ ರುವು ದರಿಂದ ಅನುಷ್ಠಾನ ಮಾಡ ಲಾಗಿಲ್ಲ. ಕೆಲವು ಕೊಳವೆ ಬಾವಿಗಳಲ್ಲಿ ನೀರು ಬತ್ತಿ ಹೋದ ಸಂದರ್ಭದಲ್ಲೂ ಪದೇ ಪದೆ ಗ್ರಾಮಕ್ಕೆ ನೀರಿನ ಸಮಸ್ಯೆ ಎದುರಾಗುತ್ತಲೇ ಇರುತ್ತದೆ.

ರುದ್ರಭೂಮಿ ಅನುಷ್ಠಾನಗೊಂಡಿಲ್ಲ  :

ಪ್ರತೀ ಗ್ರಾಮದಲ್ಲೂ ಮುಕ್ತಿಧಾಮದ ಹೆಸರಿನಲ್ಲಿ ಹಿಂದೂ ರುದ್ರಭೂಮಿ ಇರ ಬೇಕು ಎಂಬ ನಿಯಮವಿದ್ದರೂ, ಸಜೀಪ ಮುನ್ನೂ ರಿನಲ್ಲಿ ಇನ್ನೂ ರುದ್ರಭೂಮಿ ಅನುಷ್ಠಾನಗೊಂಡಿಲ್ಲ ಎಂದು ಗ್ರಾಮಸ್ಥರು ಆರೋಪಿಸುತ್ತಿದ್ದಾರೆ. ಹಲವು ವರ್ಷಗಳ ಹಿಂದೆಯೇ ರುದ್ರ ಭೂಮಿಗೆ ಜಾಗ ಮೀಸ ಲಿಟ್ಟಿ ದ್ದರೂ, ಅದು ಕೂಡ ಗೊಂದಲದಲ್ಲಿದೆ. ರುದ್ರಭೂಮಿಯ ನಿವೇಶ ನದ ಸಮಸ್ಯೆಯನ್ನು ಅಂತಿಮ ಗೊಳಿಸುವುದಕ್ಕೆ ಅಧಿಕಾರಿಗಳು ಇಚ್ಛಾಶಕ್ತಿ ಪ್ರದರ್ಶಿಸುತ್ತಿಲ್ಲ ಎಂಬ ಆರೋಪವೂ ಇದೆ.

ಸಾವಿರಕ್ಕೂ ಅಧಿಕ ಅರ್ಜಿ :

ಗ್ರಾಮದಲ್ಲಿ ಹಲವಾರು ಮಂದಿ ನಿವೇಶನರಹಿತರಾಗಿದ್ದು ಫಲಾನುಭವಿಗಳ ಸಂಖ್ಯೆ ಸಾವಿರ ದಾಟಿದೆ. ಆದರೆ ಅದರ ಹಂಚಿಕೆಯೂ ಇನ್ನೂ ಕೂಡ ವಿಳಂಬವಾಗುತ್ತಲೇ ಇದೆ. ಅಂದರೆ ಒಂದೇ ಮನೆಯಲ್ಲಿ 10-15 ಮಂದಿ ವಾಸಿಸುತ್ತಿದ್ದು, ಅವರು ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ. ಆದರೆ ಅದಕ್ಕೆ ಸರಕಾರಿ ಭೂಮಿಯ ಲಭ್ಯತೆಯ ಆಧಾರದಲ್ಲಿ ಭೂಮಿ ಹಂಚಿಕೆಯ ಕಾರ್ಯ ನಡೆಯಬೇಕಿದೆ.

-ಕಿರಣ್‌ ಸರಪಾಡಿ

 

ಟಾಪ್ ನ್ಯೂಸ್

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

de

Vitla: ಕಾಲು ಜಾರಿ ಕೆರೆಗೆ ಬಿದ್ದು ಯುವಕ ಸಾವು

Vitla: Bolanthur Narsha robbery case: Four more arrested including Kerala police

Vitla: ಬೋಳಂತೂರು ನಾರ್ಶ ದರೋಡೆ ಪ್ರಕರಣ: ಕೇರಳದ ಪೊಲೀಸ್‌ ಸೇರಿ ಮತ್ತೆ ನಾಲ್ವರ ಬಂಧನ

8-kukke

Subrahmanya: ಮುಜರಾಯಿ ಸಚಿವರ ನೇತೃತ್ವದಲ್ಲಿ ಕುಕ್ಕೆ ದೇಗುಲದ ಅಭಿವೃದ್ಧಿ ಸಭೆ

3(1

Sullia: ಜಳಕದಹೊಳೆ ಸೇತುವೆ; ಸಂಚಾರ ನಿಷೇಧ

2(1

Uppinangady: ಕಾಂಕ್ರೀಟ್‌ ರಸ್ತೆಯೇ ಕಿತ್ತೋಗಿದೆ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

accident

Kaup: ಸ್ಕೂಟಿ, ಕಾರಿಗೆ ಬಸ್‌ ಢಿಕ್ಕಿ; ಸವಾರನಿಗೆ ಗಾಯ

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.