Sullia: ಹಾವು ಕಡಿದು ಮಹಿಳೆ ಸಾವು
Team Udayavani, Jun 13, 2024, 10:54 PM IST
ಸುಳ್ಯ: ವಿಷಕಾರಿ ಹಾವು ಕಡಿದು ಮಹಿಳೆಯೋರ್ವರು ಮೃತ ಪಟ್ಟ ಘಟನೆ ಬೆಳ್ಳಾರೆ ಬಳಿ ಜೂ.12ರ ರಾತ್ರಿ ಸಂಭವಿಸಿದೆ.
ಬೆಳ್ಳಾರೆ ಸಮೀಪದ ಬೂಡು ನಿವಾಸಿ ಚೋಮ ಎಂಬವರ ಪತ್ನಿ ಸುಶೀಲ ಮೃತರು. ಸುಶೀಲ ಅವರು ನೆಟ್ಟಾರಿನ ಮನೆಯೊಂದರಲ್ಲಿ ಕೆಲಸ ಮಾಡುತ್ತಿದ್ದಾಗ ಹಾವು ಕಚ್ಚಿದ್ದು ಅವರನ್ನು ತಕ್ಷಣ ಸುಳ್ಯ ಸರಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು. ಆದರೂ ಅವರು ಮೃತಪಟ್ಟಿರುವುದಾಗಿ ತಿಳಿದು ಬಂದಿದೆ. ಕೆಲ ದಿನಗಳ ಹಿಂದೆ (ಜೂ.3) ಹರಿಹರ ಪಲ್ಲತ್ತಡ್ಕದಲ್ಲಿ ಹಾವು ಕಡಿದು ಮಹಿಳೆಯೋರ್ವರು ಮೃತರಾಗಿದ್ದರು.
ಜಾಗೃತಿ ವಹಿಸಲು ಸೂಚನೆ:
ಮಳೆಗಾಲ ಸಂದರ್ಭದಲ್ಲಿ ವಿಷಜಂತು, ವಿಷಕಾರಿ ಹಾವು ಓಡಾಟ ನಡೆಸುತ್ತಿದ್ದು, ಈ ವೇಳೆ ಜನರು ಜಾಗೃತಿ ಹಾಗೂ ಎಚ್ಚರಿಕೆ ವಹಿಸುವಂತೆ ಪುತ್ತೂರು ಉಪವಿಭಾಗ ಸಹಾಯಕ ಆಯುಕ್ತ ಜುಬಿನ್ ಮೊಹಪಾತ್ರ ತಿಳಿಸಿದ್ದಾರೆ. ತಾಲೂಕಿನಲ್ಲಿ ಎರಡು ಘಟನೆಗಳು ಸಂಭವಿಸಿರುವ ಹಿನ್ನಲೆಯಲ್ಲಿ ಸುಳ್ಯದಲ್ಲಿ ನಡೆದ ಸಭೆಯಲ್ಲಿ ಸೂಚಿಸಿದರು. ಹಾವು ಕಡಿದ ಕೂಡಲೇ ಪ್ರಾಥಮಿಕ ಮುನ್ನೆಚ್ಚರಿಕೆ ವಹಿಸಿ ಅತ್ಯಂತ ಶೀಘ್ರವಾಗಿ ಪಕ್ಕದ ಚಿಕಿತ್ಸೆ ಲಭ್ಯವಾಗುವ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆಯಬೇಕು. ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ವಹಿಸಿಸುವುದು ಸರಿಯಲ್ಲ ಎಂದವರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.