ಹಳ್ಳಿ ಮಕ್ಕಳಿಗೆ ದೂರವಾದ ದೂರದರ್ಶನ ಪಾಠ

ವಿದ್ಯೆ ಕಲಿಸುವುದು ಪೋಷಕರಿಗೂ, ಶಿಕ್ಷಕರಿಗೂ ಸವಾಲು!

Team Udayavani, Jul 29, 2020, 12:27 PM IST

ಹಳ್ಳಿ ಮಕ್ಕಳಿಗೆ ದೂರವಾದ ದೂರದರ್ಶನ ಪಾಠ

ಕಾರ್ಕಳ: ಕೋವಿಡ್‌-19 ಶಿಕ್ಷಣದ ಮೇಲೆ ಸಾಕಷ್ಟು ದುಷ್ಪರಿಣಾಮ ಬೀರಿದ್ದು , ಮಕ್ಕಳಿಗೆ ವಿದ್ಯೆ ಕಲಿಸುವುದು ಹೆತ್ತವರಿಗೆ, ಶಿಕ್ಷಕರಿಗೆ ದೊಡ್ಡ ಸವಾಲಾಗಿದೆ. ಖಾಸಗಿ ಶಾಲೆಗಳಲ್ಲಿ ಆನ್‌ಲೈನ್‌ ಶಿಕ್ಷಣ ಆರಂಭವಾಗಿದೆ. ಗ್ರಾಮಾಂತರದ ಬಡ ಮಕ್ಕಳು ಆನ್‌ಲೈನ್‌ ಕ್ಲಾಸ್‌ನಿಂದ ವಂಚಿತರಾಗಿದ್ದಾರೆ. 8, 9, 10 ನೇ ತರಗತಿ ಮಕ್ಕಳಿಗೆ ದೂರದರ್ಶನ ಡಿಡಿ ಚಂದನದಲ್ಲಿ ಸೇತುಬಂಧ ಮೂಲಕ ಪಾಠ ಹೇಳಿ ಕೊಡಲಾಗುತ್ತಿದೆ. ಮುಂದೆ ಇದನ್ನು ಇತರ ತರಗತಿಗಳಿಗೂ ವಿಸ್ತರಿಸುವ ಸಾಧ್ಯತೆಯಿದೆ.

ಟಿವಿ ಇದ್ದರೂ ಕರೆಂಟಿಲ್ಲ
ಗ್ರಾಮೀಣ ಭಾಗದ ಬಡ ಕುಟುಂಬಗಳ ಎಲ್ಲ ಮನೆಗಳಲ್ಲಿ ಮೊಬೈಲ್‌, ಟಿವಿ ಇರುತ್ತವೆ ಎಂದು ಹೇಳಲಾಗುವುದಿಲ್ಲ. ಟಿವಿ ಇಲ್ಲದ ಮನೆಗಳೂ ಇವೆ. ಸಿಡಿಲಿಗೆ ಕೆಲವರ ಟಿವಿ ಕೆಟ್ಟಿರುತ್ತದೆ. ಕೆಲವರು ನಿಗದಿತವಾಗಿ ರೀಜಾರ್ಜ್‌ ಮಾಡಿಸುವುದೂ ಕಡಿಮೆ. ಇಷ್ಟಿದ್ದರೂ ಕೆಲವು ಸಂದರ್ಭ ಕಾಡಿನ ಮಾರ್ಗದಲ್ಲಿ ವಿದ್ಯುತ್‌ ತಂತಿಗಳ ದೋಷದಿಂದ ಆಗಾಗ್ಗೆ ವಿದ್ಯುತ್‌ ವ್ಯತ್ಯಯಗಳಾಗುತ್ತಿರುತ್ತವೆ. ಕಬ್ಬಿನಾಲೆ, ಕೆರ್ವಾಶೆ, ಬೋಳ, ಸಚ್ಚೇರಿಪೇಟೆ, ಮುನಿಯಾಲು, ಮುಂಡ್ಕೂರು ಸಹಿತ ಕೆಲವು ಹಳ್ಳಿಗಳಲ್ಲಿ ನೆಟ್‌ವರ್ಕ್‌ ಸಮಸ್ಯೆಯಿಂದ ಕಲಿಕೆಗೆ ಅಡ್ಡಿಯಾಗಿದೆ.

ಇಲಾಖೆ ಪ್ರಯತ್ನ
ಸೇತುಬಂಧ ಕಾರ್ಯಕ್ರಮವು ಇಲಾಖೆಯ ವೆಬ್‌ಸೈಟ್‌, ಯೂಟ್ಯೂಬ್‌ಗಳಲ್ಲಿಯೂ ದೊರಕುತ್ತದೆ. ಟಿವಿ ಇಲ್ಲದ ಮನೆಗಳಲ್ಲಿ ಆ್ಯಂಡ್ರಾಯಿಡ್‌ ಇಲ್ಲದಿದ್ದರೂ ಕನಿಷ್ಠ ಕುಟುಂಬದ ಒಬ್ಬ ಸದಸ್ಯನಲ್ಲಿ ಕೀ ಬಟನ್‌ ಮೊಬೈಲ್‌ ಆದರೂ ಇರುತ್ತದೆ. ಮಕ್ಕಳನ್ನು ಶಿಕ್ಷಕರು ತಮ್ಮ ಮೊಬೈಲ್‌ ಮೂಲಕ ಸಂಪರ್ಕಿಸಿ ಅವರನ್ನು ಒಂದು ಕಡೆ ಸೇರಿಸಿ, ಸಾಮಾಜಿಕ ಅಂತರದೊಂದಿಗೆ ಪಾಠ ಮಾಡುವಂತಹ ವ್ಯವಸ್ಥೆಯನ್ನು ಕೂಡ ಶಿಕ್ಷಕರು ಅಗತ್ಯಬಿದ್ದರೆ ಮಾಡುತ್ತಾರೆ ಎಂದು ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳು ತಿಳಿಸಿದ್ದಾರೆ.

ಕಾರ್ಕಳ ತಾಲೂಕಿನಲ್ಲಿ 29,435 ಮಕ್ಕಳು
ಕಾರ್ಕಳ ತಾ|ನಲ್ಲಿ 166 ಸರಕಾರಿ ಶಾಲಾ-ಕಾಲೇಜು, 42 ಅನುದಾನಿತ, 37 ಖಾಸಗಿ ಶಾಲೆಗಳಿವೆ. ನವೋದಯ ಸಹಿತ ಇತರ 2 ಶಾಲೆ, ಒಟ್ಟು 247 ಶಾಲಾ-ಕಾಲೇಜು, 29,435 ಮಂದಿ ಮಕ್ಕಳಿದ್ದಾರೆ. ಬಹುತೇಕ ಸರಕಾರಿ ಶಾಲೆಗಳಿರುವುದು ಹಳ್ಳಿಯಲ್ಲಿ. ಆನ್‌ಲೈನ್‌, ದೂರದರ್ಶನ ಶಿಕ್ಷಣ ಈ ಮಕ್ಕಳಿಗೆ ಸರಿಯಾಗಿ ಈಗ ಕೈಗೆಟಕುತ್ತಿಲ್ಲ.

ಈ ವ್ಯವಸ್ಥೆ ಅನಿವಾರ್ಯ
ಕಲಿಕೆಯಲ್ಲಿ ನೇರ ತರಗತಿ ಸಂವಹನಕ್ಕೂ ಆನ್‌ಲೈನ್‌ ತರಗತಿಗೂ ಸರಿಸಾಟಿಯಿಲ್ಲ ಎನ್ನುವುದು ನಿಜ. ಎದುರು ಬದುರಿನ ಪಾಠದ ಸಂವಹನ ಶಕ್ತಿಯುತವಾಗಿರುತ್ತದೆ. ಕೊರೊನಾದಂತಹ ಸಂದಿಗ್ಧ ಸ್ಥಿತಿಯಲ್ಲಿ ಈ ವ್ಯವಸ್ಥೆ ಅನಿವಾರ್ಯವಾಗಿದೆ.
-ಜಿ.ಎಸ್‌. ಶಶಿಧರ್‌, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಕಾರ್ಕಳ

ಟಾಪ್ ನ್ಯೂಸ್

1-congress

Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ

DKSHi-4

Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Gambhir-Agarkar have differences of opinion on Pant-Rahul issue

Team India: ಪಂತ್-ರಾಹುಲ್‌ ವಿಚಾರದಲ್ಲಿ ಗಂಭೀರ್-‌ ಅಗರ್ಕರ್‌ ನಡುವೆ ಭಿನ್ನಾಭಿಪ್ರಾಯ

15-monalisa

Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ

nagavalli bangale kannada movie

Sandalwood: ʼನಾಗವಲ್ಲಿ ಬಂಗಲೆ’ಯಿಂದ ಹಾಡು ಬಂತು

ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್

Namma Santhe: ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್

Namma Santhe: ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್

5

Kaup: ಶಿಲಾಮಯ ಗುಡಿಯ ಮೆರುಗು ಹೆಚ್ಚಿಸಿದ ಕಾರ್ಕಳ, ಸಿರಾದ ಕಲ್ಲು

4(1

Manipal: ನಮ್ಮ ಸಂತೆಯಲ್ಲಿ ಜನ ಸಾಗರ

Namma-SANTHE-1

Manipal: ನಮ್ಮ ಸಂತೆಗೆ ಎರಡನೇ ದಿನವೂ ಅಭೂತಪೂರ್ವ ಸ್ಪಂದನೆ: ಇಂದೇ ಕೊನೆಯ ದಿನ

8

Karkala: ಚಾರ್ಚ್‌ಗಿಟ್ಟ ಮೊಬೈಲ್‌ ಸ್ಫೋ*ಟ; ಮನೆಗೆ ಬೆಂಕಿ

MUST WATCH

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

udayavani youtube

ಮುಕೇಶ್ ಅಂಬಾನಿ ಕುಟುಂಬದ ನಾಲ್ಕು ತಲೆಮಾರು ಮಹಾ ಕುಂಭಮೇಳದಲ್ಲಿ ಪವಿತ್ರ ಸ್ನಾನ

ಹೊಸ ಸೇರ್ಪಡೆ

1sadgu

Pariksha Pe Charcha: ಸಾರ್ಟ್‌ಫೋನ್‌ಗಿಂತಲೂ ನೀವು ಸಾರ್ಟ್‌ ಆಗಬೇಕು:ಸದ್ಗುರು

1-congress

Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ

18

Uv Fusion: ಗೆಳೆತನವೆಂಬ ನಿಸ್ವಾರ್ಥ ಬಾಂಧವ್ಯ

17

Uv Fusion: ಎಡವುದು ಕೂಡ ಒಳ್ಳೆಯದೇ ಒಮ್ಮೊಮ್ಮೆ…

DKSHi-4

Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.