ಸಕಾಲದಲ್ಲಿ ವಿದ್ಯುತ್‌ ಬಿಲ್‌ಗೆ ಕ್ರಮ; ದಿನೇಶ್‌ ಉಪಾಧ್ಯ

ಉದಯವಾಣಿ ಫೋನ್‌ ಇನ್‌ ಕಾರ್ಯಕ್ರಮ

Team Udayavani, Jun 27, 2023, 3:30 PM IST

ಸಕಾಲದಲ್ಲಿ ವಿದ್ಯುತ್‌ ಬಿಲ್‌ಗೆ ಕ್ರಮ; ದಿನೇಶ್‌ ಉಪಾಧ್ಯ

ಉಡುಪಿ: ಇಂಧನ (ವಿದ್ಯುತ್‌) ಇಲಾಖೆಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಉದಯವಾಣಿ ಮಣಿಪಾಲದ ಕೇಂದ್ರ ಕಚೇರಿಯಲ್ಲಿ ಸೋಮವಾರ ಫೋನ್‌ ಇನ್‌ ಕಾರ್ಯಕ್ರಮ ನಡೆಯಿತು.

ಮೆಸ್ಕಾಂನ ಉಡುಪಿ ಜಿಲ್ಲಾ ಅಧೀಕ್ಷಕ ಎಂಜಿನಿಯರ್‌ ದಿನೇಶ್‌ ಉಪಾಧ್ಯ ಮತ್ತು ಇತರ ಅಧಿಕಾರಿಗಳು ಭಾಗವಹಿಸಿ ಸಾರ್ವಜನಿಕರ ಪ್ರಶ್ನೆಗಳಿಗೆ ಉತ್ತರಿಸಿದರು.

ಜಿಲ್ಲೆಯ ಹಲವೆಡೆ ಈ ಬಾರಿ ವಿದ್ಯುತ್‌ ಬಿಲ್‌ ವಿಳಂಬದ ಜತೆಗೆ ಅಧಿಕ ದರ ಬಂದಿರುವ ಬಗ್ಗೆ ಕರೆಗಳು ಬಂತು. ಈ ಬಗ್ಗೆ ಪ್ರತಿಕ್ರಿಯಿಸಿದ ಅಧಿಕಾರಿಗಳು ಸ್ಲ್ಯಾಬ್ ದರ ಹೆಚ್ಚಳದ ಜತೆಗೆ ಗೃಹಜ್ಯೋತಿ ಯೋಜನೆಯ ಕಾರಣ ತುಸು ವಿಳಂಬವಾಗಿದೆ. ಮುಂದಿನ ದಿನದಲ್ಲಿ ಇದು ಸಮಯಕ್ಕೆ ಸರಿಯಾಗಿ ನಡೆಯಲಿದೆ. ಹಲವು ಪಟ್ಟು ಹೆಚ್ಚಳ ಬಿಲ್‌ ಬಂದಿದ್ದರೆ ಸಮೀಪದ ಮೆಸ್ಕಾಂ ಕಚೇರಿಯನ್ನು ಭೇಟಿಯಾಗಬಹುದು ಎಂದರು.

ಹಲವೆಡೆ ಚಾರ್ಜಿಂಗ್‌ ಸ್ಟೇಷನ್‌
ಜಿಲ್ಲೆಯ 20 ಕಡೆಗಳಲ್ಲಿ ಎಲೆಕ್ಟ್ರಿಕ್‌ ವಾಹನಗಳಿಗೆ ಚಾಜಿಂಗ್‌ ಪಾಯಿಂಟ್‌ ನಿರ್ಮಿಸಲು ಉದ್ದೇಶಿಸಲಾಗಿದೆ. ಆದರೆ ಎಲ್ಲ ಕಡೆಗೂ ಟೆಂಡರ್‌ ಆಗದ ಕಾರಣ ಪ್ರಸ್ತುತ ಮಣಿಪಾಲ ಇನ್‌, ಮಲ್ಪೆ ಸೆಕ್ಷನ್‌ ಆಫೀಸ್‌, ಶಾರದಾ ಹೊಟೇಲ್‌, ಮಣಿಪಾಲ, ಕಾಪು, ಬ್ರಹ್ಮಾವರ ಸಬ್‌ ಡಿವಿಜನ್‌ನಲ್ಲಿ ಚಾರ್ಜಿಂಗ್‌ ಸ್ಟೇಷನ್‌ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಕಡೆ ಇದನ್ನು ನಿರ್ಮಿಸಲು ಉದ್ದೇಶಿಸಲಾಗಿದೆ ಎಂದರು.

ಹಲವು ಕರೆ
ಲೋ ವೋಲ್ಟೆàಜ್‌, ವಿದ್ಯುತ್‌ ಕಡಿತ, ವಿದ್ಯುತ್‌ ಶುಲ್ಕ ಹೆಚ್ಚಳ, ಅಪಾಯಕಾರಿ ಮರಗಳ ತೆರವು, ಟ್ರಾನ್ಸ್‌ಫಾರ್ಮರ್‌ ಸಮಸ್ಯೆ, ಅಪಾಯಕಾರಿ ವಿದ್ಯುತ್‌ ಕಂಬ, ವಿದ್ಯುತ್‌ ಮೀಟರ್‌ ಬದಲಾವಣೆ ಸಹಿತ ವಿವಿಧ ಸಮಸ್ಯೆಗಳು ಸಾರ್ವ
ಜನಿಕರಿಂದ ಕೇಳಿಬಂತು. ಸಂಬಂಧಪಟ್ಟವರ ಆರ್‌ಆರ್‌ ಸಂಖ್ಯೆ ಹಾಗೂ ದೂರವಾಣಿ ಸಂಖ್ಯೆ ಪಡೆದ ಅಧಿಕಾರಿಗಳು ಅದನ್ನು ಬಗೆಹರಿಸುವ ಬಗ್ಗೆ ಭರವಸೆ ನೀಡಿದರು.

3.65 ಲಕ್ಷದಲ್ಲಿ 3.37 ಲಕ್ಷ ಮಂದಿ 200 ಯುನಿಟ್‌ಗಿಂತ
ಕಡಿಮೆ ಬಳಕೆದಾರರು
ಜಿಲ್ಲೆಯಲ್ಲಿ 3,64,000 ಮಂದಿ ವಿದ್ಯುತ್‌ ಬಳಕೆದಾರ ರಿದ್ದು, ಈ ಪೈಕಿ 3,37,000 ಮಂದಿ 200 ಯುನಿಟ್‌ಗಿಂತ ಒಳಗೆ ವಿದ್ಯುತ್‌ ಬಳಕೆ ಮಾಡುತ್ತಿದ್ದಾರೆ.

ಗೃಹಜ್ಯೋತಿ ನೋಂದಣಿಗೆ ಸೂಚನೆ
ಜಿಲ್ಲೆಯ ವಿದ್ಯುತ್‌ ಬಳಕೆದಾರರು ಗೃಹಜ್ಯೋತಿ ಯೋಜನೆಗೆ ಸ್ಮಾರ್ಟ್‌ಫೋನ್‌, ಕಂಪ್ಯೂಟರ್‌, ಲ್ಯಾಪ್‌ಟಾಪ್‌ ಮೂಲಕ ಸುಲಭದಲ್ಲಿ ನೋಂದಣಿ ಮಾಡಬಹುದು. ವಿದ್ಯುತ್‌ ಬಿಲ್‌, ಆಧಾರ್‌ ಸಂಖ್ಯೆ, ಆಧಾರ್‌ ಕಾರ್ಡ್‌ ನಲ್ಲಿರುವ ಫೋನ್‌ ಸಂಖ್ಯೆಯಿರುವ ಮೊಬೈಲ್‌ ಇದ್ದರೆ ಸಾಕು. ಸೆಕ್ಷನ್‌ ಆಫೀಸ್‌ ಅಥವಾ ಸೇವಾಸಿಂಧು ಮೂಲಕವೂ ನೋಂದಣಿ ಮಾಡಬಹುದು ಎಂದರು.

12ಕೋ.ರೂ.ವಿದ್ಯುತ್‌ ಬಾಕಿ
ಜಿಲ್ಲೆಯಲ್ಲಿ ಮೇ ತಿಂಗಳ ಅಂತ್ಯಕ್ಕೆ 12 ಕೋ.ರೂ.ವಿದ್ಯುತ್‌ ಬಿಲ್‌ ಸಂಗ್ರಹಕ್ಕೆ ಬಾಕಿ ಉಳಿದಿದೆ. ಉಡುಪಿಯಲ್ಲಿ 8.28, ಕಾರ್ಕಳ 3.68 ಹಾಗೂ ಕುಂದಾಪುರದಲ್ಲಿ 0.50 ಕೋ.ರೂ. ವಿದ್ಯುತ್‌ ಪಾವತಿಗೆ ಬಾಕಿಯಿದೆ. ಆಸ್ಪತ್ರೆಗಳು ಸಹಿತ ಕಚೇರಿಗಳ ಪಾವತಿ ವಿಳಂಬವಾಗುವ ಬಾಕಿ ಉಳಿದುಕೊಂಡಿದೆ ಎಂದರು.

ಅಪಾಯಕಾರಿ ಮರ ತೆರವಿಗೆ ಅಡ್ಡಿ
ಸಕೆಲವೆಡೆ ಅಪಾಯಕಾರಿ ಮರಗಳಿಂದಾಗಿ ವಿದ್ಯುತ್‌ ತಂತಿಗಳಿಗೆ ಹಾನಿ ಉಂಟಾಗುತ್ತಿರುವ ಬಗ್ಗೆ ಬಂದ ಕರೆಗಳಿಗೆ ಪ್ರತಿಕ್ರಿಯಿಸಿ, ಮರಗಳ ತೆರವಿಗೆ ಅರಣ್ಯ ಇಲಾಖೆಯ ಅನುಮತಿ ಬೇಕಾಗುತ್ತದೆ. ತಂತಿಗಳಿಗೆ ತಾಗುವ ಗೆಲ್ಲುಗಳನ್ನಷ್ಟೇ ಲೈನ್‌ಮ್ಯಾನ್‌ಗಳ ಮೂಲಕ ತೆರವುಗೊಳಿಸುವ ಪ್ರಕ್ರಿಯೆ ನಡೆಯುತ್ತಿದೆ. ಜಿಲ್ಲೆಯಲ್ಲಿ ಲೋಡ್‌ ಶೆಡ್ಡಿಂಗ್‌ ಇಲ್ಲದಿದ್ದರೂ ಭಾರೀ ಮಳೆಯಾಗುವ ಸಂದರ್ಭದಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ವಿದ್ಯುತ್‌
ಕಡಿತ ಮಾಡಲಾಗುತ್ತದೆ. ವಿಳಂಬವಾದರೆ 1912 ಸಂಖ್ಯೆಗೆ ಉಚಿತವಾಗಿ ಕರೆ ಮಾಡಿ ದೂರು ನೀಡಬಹುದು ಎಂದರು.

ಬಜಗೋಳಿಯಲ್ಲಿ ಸಬ್‌ಸ್ಟೇಷನ್‌
ಕಾರ್ಕಳ ತಾಲೂಕಿನ ಮಾಳ ಮತ್ತಿತರ ಪ್ರದೇಶಗಳಲ್ಲಿ ಆಗುತ್ತಿರುವ ಲೋ ವೋಲ್ಟೆàಜ್‌ ಸಮಸ್ಯೆ ಬಗ್ಗೆ ಪ್ರತಿಕ್ರಿಯಿಸಿದ ಅಧಿಕಾರಿಗಳು ಬಜಗೋಳಿಯಲ್ಲಿ ಮುಂದಿನ 18 ತಿಂಗಳಲ್ಲಿ ಸಬ್‌ಸ್ಟೇಷನ್‌ ನಿರ್ಮಾಣವಾಗಲಿದ್ದು, ಬಳಿಕ ಈ ಸಮಸ್ಯೆ ನಿವಾರಣೆಯಾಗಲಿದೆ ಎಂದರು.

ಸೋಲಾರ್‌ ರೂಫ್ಟಾಪ್‌
ಸೋಲಾರ್‌ ರೂಪ್‌ಟಾಪ್‌ ಹಾಕಲಿಚ್ಛಿಸುವವರು ಎಂಎನ್‌ಆರ್‌ ಪೋರ್ಟಲ್‌ ಮೂಲಕ ನೋಂದಣಿ ಮಾಡಬಹುದು. ಸಬ್ಸಿಡಿ ಮೂಲಕ ಅಥವಾ ಖಾಸಗಿಯಾಗಿಯೂ ಸೋಲಾರ್‌ ಅಳವಡಿಕೆಗೆ ಅವಕಾಶ ಕಲ್ಪಿಸಲಾಗಿದೆ ಎಂದರು.

ಕರೆ ಮಾಡಿದವರು
ಚಿಕ್ಕಯ್ಯ ಶೆಟ್ಟಿ ತೆಕ್ಕಟ್ಟೆ, ಗೀತಾ ಭಟ್‌ ಉಡುಪಿ, ಪ್ರಕಾಶ್‌ ಪಡಿಯಾರ್‌ ಮರವಂತೆ, ಸುದರ್ಶನ್‌ ಉಪ್ಪಿನಕುದ್ರು, ಅಲ್ವರ್‌ ಆಲಿ ಕಾಪು, ರಾಜೇಶ್‌ ಶಿವಪುರ, ರಾಮಚಂದ್ರ ಆಚಾರ್ಯ ಉಡುಪಿ, ವಿಜಯ ಸಾಲ್ಯಾನ್‌ ಉಚ್ಚಿಲ, ಶ್ರೀನಾಥ್‌ ಹೆಬ್ಟಾರ್‌ ಮಣಿಪಾಲ, ದೇವಪ್ಪ ಶೆಟ್ಟಿ ಕುಂದಾಪುರ, ಪೆಡ್ರಿಕ್‌ ಡಿಸಿಲ್ವ ಶಿರ್ವ, ಚಂದ್ರ ಭಂಡಾರಿ ಕುಂದಾಪುರ, ಜಯ ಕೊರಂಗ್ರಪಾಡಿ, ಅಬ್ರಾಹಂ ಗಂಗೊಳ್ಳಿ, ವಿಜಯ ಕುಮಾರ್‌ ಕುಂದಾಪುರ, ಶ್ರೀನಿವಾಸ ಕಿದಿಯೂರು, ನಿತೇಶ್‌ ಬ್ರಹ್ಮಾವರ, ಅರುಣ್‌ ಮಣಿಪಾಲ, ಯಶವಂತ್‌ ದೊಡ್ಡಣಗುಡ್ಡೆ, ಪ್ರೇಮಾನಂದ ಅಂಜಾರು, ಶುಭಾ ಅಂಬಲಪಾಡಿ, ಮಾಧವ ಶೆಣೈ ಕೋಟ, ಜಯರಾಜ್‌ ಈಶ್ವರನಗರ, ರಾಮಕೃಷ್ಣ ಸಾಸ್ತಾನ, ಸುನೀತಾ ಮಣಿಪಾಲ, ಡಾ| ಪ್ರವೀಣ್‌ ಶೆಟ್ಟಿ ಹನೆಹಳ್ಳಿ, ವಸಂತ ಪೂಜಾರಿ ಕಟಪಾಡಿ, ಜಲಜಾ ಶೆಟ್ಟಿ ಮಾಳ, ಮಲ್ಲಿಕಾರ್ಜುನ ಮಜೂರು.

ಟಾಪ್ ನ್ಯೂಸ್

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

17-desiswara-ganaap

Ganesh Chaturthi Special Story: ವಿಶ್ವಪೂಜಿತ ವಿನಾಯಕ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ganesha Chaturthi: ಆರೂರು: 35ನೇ ಸಾರ್ವಜನಿಕ ಶ್ರೀ ಗಣೇಶೋತ್ಸವ… ವಿವಿಧ ಕಾರ್ಯಕ್ರಮ

ಆರೂರು ಶ್ರೀ ವಿಷ್ಣುಮೂರ್ತಿ ದೇವಸ್ಥಾನ: ಸೆ.9ರಂದು ಪ್ರಥಮ ವರ್ಷದ ಲೋಬಾನ ಸೇವೆ ಹುಲಿವೇಷ ಕುಣಿತ

ವಿದೂಷಕರ ವೇಷ ಧರಿಸಿ ಸಂಗ್ರಹಿಸಿದ 14.33 ಲ.ರೂ. ಅನಾಥಾಶ್ರಮಕ್ಕೆ !

Kaup ವಿದೂಷಕರ ವೇಷ ಧರಿಸಿ ಸಂಗ್ರಹಿಸಿದ 14.33 ಲ.ರೂ. ಅನಾಥಾಶ್ರಮಕ್ಕೆ !

Ganesh Chaturthi ; ಕರಾವಳಿಯ ಮನೆಮನೆಗಳಲ್ಲಿ ಇಂದು ಗಣೇಶೋತ್ಸವ ಸಂಭ್ರಮ

Ganesh Chaturthi ; ಕರಾವಳಿಯ ಮನೆಮನೆಗಳಲ್ಲಿ ಇಂದು ಗಣೇಶೋತ್ಸವ ಸಂಭ್ರಮ

Udupi ಗೀತಾರ್ಥ ಚಿಂತನೆ-29 ಭಗವದವತಾರದ ಉದ್ದೇಶವೇನು?

Udupi ಗೀತಾರ್ಥ ಚಿಂತನೆ-29; ಭಗವದವತಾರದ ಉದ್ದೇಶವೇನು?

Karkala ಕರ್ತವ್ಯಲೋಪ, ಶಿಷ್ಟಾಚಾರ ಉಲ್ಲಂಘನೆ: ಅಂಗನವಾಡಿ ಕಾರ್ಯಕರ್ತೆ ಅಮಾನತು

Karkala ಕರ್ತವ್ಯಲೋಪ, ಶಿಷ್ಟಾಚಾರ ಉಲ್ಲಂಘನೆ: ಅಂಗನವಾಡಿ ಕಾರ್ಯಕರ್ತೆ ಅಮಾನತು

MUST WATCH

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

udayavani youtube

ತಮ್ಮ ಮಕ್ಕಳನ್ನು ಬೆಳೆಸುವ ಸಲುವಾಗಿ ಕಂಡೋರ ಮಕ್ಕಳ ಭವಿಷ್ಯ ನಾಶ. ಈ ವ್ಯವಸ್ಥೆಗೆ ನಾನೂ ಬಲಿ

ಹೊಸ ಸೇರ್ಪಡೆ

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.