![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Aug 4, 2023, 3:44 PM IST
ಉಪ್ಪುಂದ: ಮೀನುಗಾರಿಕೆ ನಡೆಸುತ್ತಿದ್ದಾಗ ಬೃಹತ್ ಅಲೆಗೆ ದೋಣಿ ಸಿಲುಕಿ ಪಲ್ಟಿಯಾದ ಘಟನೆ ಕೊಡೇರಿ ಕಡಲ ತೀರದಲ್ಲಿ ಆ.4ರ ಶುಕ್ರವಾರ ಸಂಭವಿಸಿದೆ.
ಬೈಂದೂರು ತಾಲೂಕಿನ ಉಪ್ಪುಂದ ಗ್ರಾಮದ ಪಾಳ್ಯದರತೋಪ್ಲು ಪುರ್ಶುಯ್ಯನ ಪುಂಡಲಿಕ ಎನ್ನುವರ ಮಾಲಿಕತ್ವದ ಶ್ರೀ ದುರ್ಗಾಪರಮೇಶ್ವರಿ ದೋಣಿಯಲ್ಲಿ 9 ಮಂದಿ ಮೀನುಗಾರರು ಮೀನುಗಾರಿಕೆಗೆ ತೆರಳಿದ್ದರು.
ಕೊಡೇರಿ ಸಮುದ್ರ ತೀರದ ಸುಮಾರು 5 ನಾಟಿಕಲ್ ದೂರದಲ್ಲಿ ಅಲೆಗಳ ಹೊಡೆತಕ್ಕೆ ದೋಣಿ ಸಿಲುಕಿ ಪಲ್ಟಿಯಾಗಿದೆ. ತಕ್ಷಣ ಇತರೆ ದೋಣಿಗಳ ಸಹಾಯದಿಂದ ಮೀನುಗಾರನ್ನು ಪಾರು ಮಾಡಲಾಗಿದೆ.
ಬಲೆ ಒಳಗೆ ಸಿಲುಕಿದ್ದ ಮೀನುಗಾರ
ದೋಣಿ ಮಗುಚಿದ ಪರಿಣಾಮ ಕುಪ್ಪಯ್ಯ ಎನ್ನುವ ಮೀನುಗಾರ ಸುಮಾರು ಹತ್ತು ಮೀಟರ್ ದೂರದಲ್ಲಿ ಬಲೆಗಳ ನಡುವೆ ಸಿಕ್ಕಿಬಿದ್ದರು. ಅವರನ್ನು ಬಹಳ ಕಷ್ಟಪಟ್ಟು ಬಲೆಯಿಂದ ಬಿಡಿಸಿ ಪಾರು ಮಾಡಲಾಯಿತು.
ಸಮುದ್ರದಲ್ಲೇ ಕಾರ್ಯಾಚರಣೆ: ಅಲೆಗಳ ಹೊಡೆತದಿಂದ ದೋಣಿ ಮಗುಚಿದ ತತ್ಕ್ಷಣ ಮತ್ತೂಂದು ದೋಣಿಯಲ್ಲಿದ್ದ ಚಂದ್ರ ಅವರು ಸನಿಹದಲ್ಲಿದ್ದ ಇತರ ಮೀನುಗಾರರನ್ನು ಸಂಪರ್ಕಿಸಿ ರಕ್ಷಣೆಗೆ ಮನವಿ ಮಾಡಿದರು. ಅವರೆಲ್ಲ ಘಟನೆ ನಡೆದ ಸ್ಥಳಕ್ಕೆ ಬಂದು ಮೀನುಗಾರರನ್ನು ರಕ್ಷಿಸಿದರಲ್ಲದೇ ಪಲ್ಟಿಯಾಗಿ ಕೊಚ್ಚಿಕೊಂಡು ಹೋಗುತ್ತಿದ್ದ ದೋಣಿಗೆ ಇತರ ದೋಣಿಗಳ ಸಹಕಾರದಿಂದ ಹಗ್ಗವನ್ನು ಕಟ್ಟಿ ದೋಣಿಯನ್ನು ತಮ್ಮ ಹತೋಟಿಗೆ ತೆಗೆದುಕೊಳ್ಳುವಲ್ಲಿ ಯಶಸ್ವಿಯಾದರು. ಆ ಬಳಿಕ ದೋಣಿ
ಯಲ್ಲಿದ್ದ ನೀರು ಖಾಲಿ ಮಾಡಿ, ಸುರಕ್ಷಿತವಾಗಿ ಮರವಂತೆ ಬಂದರಿಗೆ ಕರೆ ತಂದರು. ಕಾರ್ಯಾಚರಣೆಯಲ್ಲಿ ಆರು ದೋಣಿಗಳು ಭಾಗವಹಿಸಿದ್ದವು.
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
You seem to have an Ad Blocker on.
To continue reading, please turn it off or whitelist Udayavani.