Udupi; ಇಂದ್ರಾಳಿ ರೈಲ್ವೇ ಸ್ಟೇಷನ್‌ಗೆ ಯಾರೂ ನುಗ್ಗಬಹುದು!!

ಉಡುಪಿಯ ಪ್ರಧಾನ ರೈಲು ನಿಲ್ದಾಣದಲ್ಲಿ ಭದ್ರತೆ ಕೊರತೆ ;2ನೇ ಪ್ಲ್ರಾಟ್‌ ಫಾರಂಗೆ ಡೈರೆಕ್ಟ್ ಎಂಟ್ರಿ ಸಾಧ್ಯ!

Team Udayavani, Aug 1, 2024, 5:53 PM IST

1-u-2

ಉಡುಪಿ: ಮಂಗಳೂರು ಮತ್ತು ಕಾರವಾರದ ನಡುವೆ ಸಿಗುವ ಅತೀ ದೊಡ್ಡ ರೈಲು ನಿಲ್ದಾಣ ಇಂದ್ರಾಳಿ. ದಿನಂಪ್ರತಿ ಸಾವಿರಾರು ಸಂಖ್ಯೆಯಲ್ಲಿ ಪ್ರಯಾಣಿಕರು ಬಂದು ಹೋಗುವ ಇಂದ್ರಾಳಿ ರೈಲ್ವೇ ನಿಲ್ದಾಣಕ್ಕೆ ಸೂಕ್ತ ಭದ್ರತೆಯೇ ಇಲ್ಲ ಎಂದರೆ ನಿಮಗೆ ಅಚ್ಚರಿ ಆಗಬಹುದು.

ಮುಂಜಾನೆ, ರಾತ್ರಿ ಎನ್ನದೆ ಅದೆಷ್ಟೋ ಮಂದಿ ಪ್ರಯಾಣಕರು ಇಲ್ಲಿ ರೈಲು ಹತ್ತುತ್ತಾರೆ, ರೈಲು ಇಳಿಯುತ್ತಾರೆ.ತಮ್ಮ ಊರಿಗೆ/ ಪ್ರವಾಸಿ ತಾಣ, ಶಿಕ್ಷಣ ಸಂಸ್ಥೆಗಳಿಗೆ ಬಂದು ಹೋಗುವವರು ಸಾವಿರಾರು ಮಂದಿ. ಆದರೆ, ಇಲ್ಲಿ ರೈಲು ನಿಲ್ದಾಣದಲ್ಲಿ ಭದ್ರತೆಯ ಕೊರತೆ ತೀವ್ರವಾಗಿ ಕಾಡುತ್ತದೆ.

ರೈಲು ನಿಲ್ದಾಣದ ಪರಿಸ್ಥಿತಿ ಹೇಗಿದೆ ಎಂದರೆ, ಇಲ್ಲಿ ಯಾರು ಬೇಕಾದರೂ ನುಗ್ಗಬಹುದು! ಯಾರೂ ಕೇಳುವುದಿಲ್ಲ. ಸಾಮಾನ್ಯವಾಗಿ ಯಾವುದೇ ರೈಲು ನಿಲ್ದಾಣಕ್ಕೆ ಪ್ರಯಾಣಿಕರಲ್ಲದವರು ಪ್ರವೇಶಿಸಬೇಕಾದರೆ ಪ್ಲ್ರಾಟ್‌ಫಾರಂ ಟಿಕೆಟ್‌ ಪಡೆಯಬೇಕು. ವಿಚಾರಣೆ ಮಾಡಿದರೆ ಯಾರನ್ನು ಬೀಳ್ಕೊಡಲು, ಇಲ್ಲವೇ ಕರೆದೊಯ್ಯಲು ಬಂದಿದ್ದೇವೆ ಎಂದು ಸ್ಪಷ್ಟವಾಗಿ ಹೇಳಬೇಕು. ಇಲ್ಲವಾದರೆ, ದಂಡ ವಿಧಿಸುವ, ಬಂಧಿಸುವ ಅವಕಾಶವೂ ಇದೆ.

ಆದರೆ ಇಲ್ಲಿ ಪ್ಲ್ರಾಟ್‌ಫಾರಂ ಟಿಕೆಟ್‌ ಪಡೆಯುವುದು ಕಡ್ಡಾಯವಲ್ಲ. ಪ್ಲ್ರಾಟ್‌ಫಾರಂ ಒಳಗೆ ಹೋಗಬೇಕೆಂದರೆ ಆಗಮನ ಶುಲ್ಕ ಎಂದು 10 ರೂ. ತೆಗೆದುಕೊಳ್ಳಬೇಕು ಎಂಬ ನಿಯಮವಿದೆಯಾದರೂ ಇದನ್ನು ತೆಗೆದುಕೊಳ್ಳದೆಯೂ ಒಳಗೆ ಹೋಗಬಹುದು. ತೆಗೆದುಕೊಳ್ಳದಿದ್ದರೆ ಯಾರೂ ನಿಲ್ಲಿಸಿ ಕೇಳುವ ವ್ಯವಸ್ಥೆ ಇಲ್ಲಿಲ್ಲ.

ಪ್ರಯಾಣಿಕರ ಹಿತದೃಷ್ಟಿ ಹಾಗೂ ಕಳ್ಳಕಾಕರಿಂದ ರಕ್ಷಿಸಲು ನಿಲ್ದಾಣದ ಒಳ ಹಾಗೂ ಹೊರ ಆವರಣದಲ್ಲಿ ಏನೆಲ್ಲ ವ್ಯವಸ್ಥೆ ಇದೆ ಎಂದು ಕಣ್ಣಾಡಿಸಿದರೆ ಅತ್ಯಂತ ಕಡಿಮೆ ವ್ಯವಸ್ಥೆ ಇಲ್ಲಿ ಕಂಡುಬರುತ್ತದೆ.

ಕೆಲವು ಕಡೆ ಮಾತ್ರ ಸಿಸಿ ಕೆಮರಾ!

ರೈಲ್ವೇ ನಿಲ್ದಾಣದ ಎದುರು ಭಾಗ ಹಾಗೂ ಪ್ಲ್ರಾಟ್‌ಫಾರಂ ಸಂಖ್ಯೆ 1ರ ಶೆಲ್ಟರ್‌ 8ರಿಂದ 12ರವರೆಗೆ ಹಾಗೂ ಕೌಂಟರ್‌ ಭಾಗದಲ್ಲಿ ಸಿಸಿಟಿವಿ ಕೆಮರಾ ಅಳವಡಿಕೆ ಮಾಡಲಾಗಿದೆ. ಪ್ಲ್ರಾಟ್‌ಫಾರಂ 2ರಲ್ಲಿ ಹಾಗೂ ಅದಕ್ಕೆ ತೆರಳುವ ಮೇಲ್ಸೇತುವೆಯಲ್ಲಿ ಹೋಗುವ ಮಾರ್ಗದಲ್ಲಿ ಒಂದೇ ಒಂದು ಸಿಸಿ ಕೆಮರಾಗಳಿಲ್ಲ. 1ರಿಂದ 20 ಬೋಗಿಗಳಲ್ಲಿ ಹಲವಾರು ಮಂದಿ ರೈಲು ಹತ್ತಿ ಇಳಿಯುವ ಕಾರಣ ಅವರ ಸುರಕ್ಷತೆ ಹಾಗೂ ಭದ್ರತೆ ತುಂಬ ಮುಖ್ಯ. ಅವಘಡಗಳು ನಡೆದರೆ ಮುಖ್ಯ ಸಾಕ್ಷಿಯಾಗುವುದೇ ಕೆಮರಾ.

ಕಾಡುತ್ತಿದೆ ಸಿಬಂದಿ ಕೊರತೆ

ಇಡೀ ರೈಲು ನಿಲ್ದಾಣದಲ್ಲಿ ಕೌಂಟರ್‌ ಸಿಬ್ಬಂದಿ ಜತೆ ಇತರ ಕೆಲವು ಸಿಬ್ಬಂದಿಗಳು ಮಾತ್ರ ಇದ್ದಾರೆ. ಎಲ್ಲಿಯೂ ಭದ್ರತಾ ಸಿಬ್ಬಂದಿ ಕಾಣಿಸುತ್ತಿಲ್ಲ! ಅನುಮಾನಾಸ್ಪದ ವ್ಯಕ್ತಿಗಳು ಆಗಮಿಸಿದರೆ ಅಥವಾ ಕಳ್ಳತನ ನಡೆದರೆ ಇಲ್ಲಿ ಸಿಸಿಟಿವಿಯನ್ನಷ್ಟೇ
ನಂಬಬೇಕು. ಅದು ಕೂಡ ಪರಿಪೂರ್ಣವಾಗಿಲ್ಲ. ಪ್ಲ್ರಾಟ್‌ಫಾರಂ 1ರಲ್ಲಿ ಕೌಂಟರ್‌ ಸಿಬಂದಿ ಮತ್ತು ಇತರ ಕೆಲವರು ಇದ್ದಾರಾದರೂ ಪ್ಲ್ರಾಟ್‌ಫಾರಂ 2ನಲ್ಲಿ ಅದೂ ಇಲ್ಲ. ಪ್ಲ್ರಾಟ್‌ ಫಾರಂ 1ರ ಪ್ರವೇಶದ್ವಾರದ ಎದುರು ಭಾಗದಲ್ಲಿಯೇ ಊಟ ಮಾಡುವುದು, ಮಲಗುವುದು ನಡೆಯುತ್ತಿದ್ದರೂ ಅವರಿಗೆ ಎಚ್ಚರಿಕೆ ನೀಡುವ ಅಥವಾ ಸೂಕ್ತ ಮಾಹಿತಿ ನೀಡುವ ಕೆಲಸವೂ ಇಲ್ಲಿ ನಡೆಯುತ್ತಿಲ್ಲ.

ಭದ್ರತೆ ಸಂಬಂಧಿತ ಸಮಸ್ಯೆಗಳು

ರೈಲು ನಿಲ್ದಾಣದಲ್ಲಿ ಸೂಕ್ತ ಸಿಸಿ ಟಿವಿ ಕಣ್ಗಾವಲು, ಇಲ್ಲವೇ ಭದ್ರತಾ ಸಿಬಂದಿ ವ್ಯವಸ್ಥೆ ಇಲ್ಲ.

ಯಾರು ಬೇಕಾದರೂ ನಿಲ್ದಾಣಕ್ಕೆ ಹೋಗಬಹುದು. 1ನೇ ಪ್ಲ್ರಾಟ್‌  ಫಾರಂನಲ್ಲಿ ಕನಿಷ್ಠ ಸಿಬಂದಿಯಾದರೂ ಇದ್ದಾರೆ, ಎರಡರಲ್ಲಿ ಕೇಳುವವರೇ ಇಲ್ಲ.

ಪ್ರವೇಶ ದ್ವಾರ ದಲ್ಲೇ ಊಟ, ನಿದ್ದೆ ಮಾಡುತ್ತಿದ್ದರೂ ಅವರಿಗೆ ಸೂಚನೆ, ಎಚ್ಚರಿಕೆ ಕೊಡುವ ವ್ಯವಸ್ಥೆ ಇಲ್ಲ.

2ನೇ ಪ್ಲ್ರಾಟ್‌ ಫಾ ರಂಗೆ ಗೋಡೌನ್‌ ಕಡೆ ಯಿಂದ ಯಾರು ಬೇಕಾ ದರೂ ಪ್ರವೇಶ ಮಾಡ ಬ ಹುದು. ಸಣ್ಣ ಗೇಟ್‌ ಕೂಡಾ ಇಲ್ಲ. ರೈಲು ನಿಲ್ದಾಣ ಹೀಗಿದ್ದರೆ ಡೇಂಜರ್‌!

ಕೆಲವೆಡೆ ಬೀದಿ ದೀಪಗಳು ಇವೆಯಾದರೂ ಪೂರ್ಣಪ್ರಮಾಣದಲ್ಲಿ ಉರಿಯುತ್ತಿಲ್ಲ

ಪ್ಲ್ರಾಟ್‌ ಫಾರಂ 2: ಮುಕ್ತ ಪ್ರವೇಶ!

ಎರಡನೇ ಪ್ಲ್ರಾಟ್‌ಫಾರಂನಿಂದ ನೇರವಾಗಿ ರೈಲ್ವೇ ಗೋಡಾನ್‌ ಬಳಿಯ ಮೂಲಕ ಹಾದುಹೋಗಲು ರಸ್ತೆ ಮಾರ್ಗವಿದೆ. ರೈಲ್ವೇ ಗೋಡಾನ್‌ನಿಂದ ಯಾರೂ ಕೂಡ ಸುಲಭದಲ್ಲಿ ಪ್ಲ್ರಾಟ್‌ಫಾರಂಗೆ ಬರಬಹುದು. ಯಾವುದೇ ಸುರಕ್ಷತೆ ಹಾಗೂ ಭದ್ರತೆ ಇಲ್ಲಿಲ್ಲ.

ಮುಖ್ಯದ್ವಾರದಲ್ಲಿ ಇದ್ದಂತೆ ಕೌಂಟರ್‌ ವ್ಯವಸ್ಥೆ ಕೂಡ ಇಲ್ಲದ ಕಾರಣ ಎಲ್ಲೆಂದರಲ್ಲಿ ಜನರು ಓಡಾಡುವಂತಾಗಿದೆ. ಪ್ರಸ್ತುತ ಈ ಭಾಗದಲ್ಲಿ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು, ಕಾರ್ಮಿಕರು ಸಹಿತ ಸಾರ್ವಜನಿಕರು ಕೂಡ ರೈಲು ಬರುವುದು ತಡವಾಗುವ ಸಂದರ್ಭದಲ್ಲಿ ಇತ್ತ ಭೇಟಿ ನೀಡುವುದಿದೆ. ಈ ಭಾಗದಲ್ಲಿ ಪೊದೆಗಳು ಕೂಡ ಬೆಳೆದಿವೆ.

ವರದಿ: ಪುನೀತ್‌ ಸಾಲ್ಯಾನ್‌

ಚಿತ್ರಗಳು : ಆಸ್ಟ್ರೋ ಮೋಹನ್

ಟಾಪ್ ನ್ಯೂಸ್

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Kinnigoli: ಕಳವು ಆರೋಪಿಗಳ ಬಂಧನ

Kinnigoli: ಕಳವು ಆರೋಪಿಗಳ ಬಂಧನ

Untitled-1

Mangaluru ಶಕ್ತಿನಗರ: ವ್ಯಕ್ತಿ ನಾಪತ್ತೆ: ದೂರು ದಾಖಲು

Kasaragod: ರಿಕ್ಷಾ ಚಾಲಕನ ಕೊಲೆ: ಜೀವಾವಧಿ ಸಜೆ

Kasaragod: ರಿಕ್ಷಾ ಚಾಲಕನ ಕೊಲೆ: ಜೀವಾವಧಿ ಸಜೆ

Road Mishap ಶಾಲಾ ಬಸ್‌-ಬೈಕ್‌ ಢಿಕ್ಕಿ: ಸವಾರನಿಗೆ ಗಾಯ

Road Mishap ಶಾಲಾ ಬಸ್‌-ಬೈಕ್‌ ಢಿಕ್ಕಿ: ಸವಾರನಿಗೆ ಗಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Udupi: ಗೀತಾರ್ಥ ಚಿಂತನೆ-40: ದುರ್ಯೋಧನರಿಗಿಂತ ಶಕುನಿಗಳು ಅಪಾಯ

Udupi: ಗೀತಾರ್ಥ ಚಿಂತನೆ-40: ದುರ್ಯೋಧನರಿಗಿಂತ ಶಕುನಿಗಳು ಅಪಾಯ

Udayavani.com “ನಮ್ಮನೆ ಕೃಷ್ಣ”: ಮೆಚ್ಚುಗೆ ಗಳಿಸಿದ 3ನೇ ರೀಲ್ಸ್ ಪ್ರಸಾರ

Udayavani.com “ನಮ್ಮನೆ ಕೃಷ್ಣ”: ತೃತೀಯ ಬಹುಮಾನ ಗಳಿಸಿದ ರೀಲ್ಸ್

ಮುನಿಯಾಲ್‌ ಇನ್ಸ್ಟಿಟ್ಯೂಟ್‌ ಆಫ್ ಆಯುರ್ವೇದ ಮೆಡಿಕಲ್‌ ಕಾಲೇಜು

Sep.20: ಮುನಿಯಾಲ್‌ ಇನ್ಸ್ಟಿಟ್ಯೂಟ್‌ ಆಫ್ ಆಯುರ್ವೇದ ಮೆಡಿಕಲ್‌ ಕಾಲೇಜು ಘಟಿಕೋತ್ಸವ

Udupi: ಯುಜಿಡಿ ಚೇಂಬರ್‌ ಅವ್ಯವಸ್ಥೆಗಿಲ್ಲ ಪರಿಹಾರ

Udupi: ಯುಜಿಡಿ ಚೇಂಬರ್‌ ಅವ್ಯವಸ್ಥೆಗಿಲ್ಲ ಪರಿಹಾರ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Kinnigoli: ಕಳವು ಆರೋಪಿಗಳ ಬಂಧನ

Kinnigoli: ಕಳವು ಆರೋಪಿಗಳ ಬಂಧನ

Untitled-1

Mangaluru ಶಕ್ತಿನಗರ: ವ್ಯಕ್ತಿ ನಾಪತ್ತೆ: ದೂರು ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.