Belapu;ತಯಾರಾಗುತ್ತಿವೆ ಲವ್‌ ಮಾರ್ಕ್‌ ಬ್ಯೂಟಿ ಸೋಪ್‌, ಕ್ಯಾಲ್ಸಿಬ್ರೈಟ್‌ ಟೂತ್‌ಪೇಸ್ಟ್‌

ದಕ್ಷಿಣ ಭಾರತದಲ್ಲಿ ಭಾರೀ ಬೇಡಿಕೆ, ಗ್ರಾಮೀಣ ಭಾಗದ ನಿರುದ್ಯೋಗಿಗಳ ಪಾಲಿಗೆ ವರದಾನ

Team Udayavani, Oct 7, 2023, 5:33 PM IST

1-aadsad

ಕಾಪು: ಬೆಳಪು ಕೆಐಎಡಿಬಿ ಕೈಗಾರಿಕಾ ಪಾರ್ಕ್‌ನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಹಿಂಡೋಕೇರ್‌ ಇಂಡಿಯಾ ಪ್ರೈ. ಲಿ.ನ ಲವ್‌ ಮಾರ್ಕ್‌ ಬ್ಯೂಟಿ ಸೋಪ್‌ ಮತ್ತು ಕ್ಯಾಲ್ಸಿಬ್ರೈಟ್‌ ಟೂತ್‌ ಪೇಸ್ಟ್‌ ದಕ್ಷಿಣ ಭಾರತದಾದ್ಯಂತ ಮಾರುಕಟ್ಟೆಯಲ್ಲಿ ಭಾರೀ ಸದ್ದು ಮಾಡುತ್ತಿದೆ.

ಕರಾವಳಿ ಕರ್ನಾಟಕದ ಪ್ರಪ್ರಥಮ ಕೈಗಾರಿಕಾ ಸ್ಥಾವರದಲ್ಲಿ ಕಡಲೆ ಹಿಟ್ಟು, ಸ್ಯಾಂಡಲ್‌, ನೀಮ್‌, ಟರ್ಮರಿಕ್‌, ಕಾಫಿ ಪ್ಲೇವರ್‌, ಮ್ಯಾಂಗೋ ಬಟರ್‌, ಜಾಸ್ಮಿನ್‌ ಪೇಯ್‌ ಸಹಿತವಾಗಿ 20 ಕ್ಕೂ ಅಧಿಕ ಫ್ಲೆವರ್‌ಗಳಲ್ಲಿ ಲವ್‌ ಮಾರ್ಕ್‌ ಬ್ಯೂಟಿ ಸೋಪ್‌ಗ ಳನ್ನು ಉತ್ಪಾದಿಸಿ ಸ್ಯಾಚೆಟ್‌, ಬಾಕ್ಸ್‌ಗಳಲ್ಲಿ ತುಂಬಿ ಮಾರುಕಟ್ಟೆಗೆ ಬಿಡಲಾಗುತ್ತಿದೆ. ಕಡಲೆಹಿಟ್ಟು ಸೋಪ್‌ಗೆ ಹೆಚ್ಚಿನ ಬೇಡಿಕೆಯಿದ್ದು ಪ್ರತೀ ತಿಂಗಳು ಲಕ್ಷಕ್ಕೂ ಅಧಿಕ ಸೋಪ್‌ಗಳು ಮಾರಾಟಗೊಳ್ಳುತ್ತಿವೆ.

ಆರು ರಾಜ್ಯಗಳಲ್ಲಿ ಬೇಡಿಕೆ

ಕರಾವಳಿ ಕರ್ನಾಟಕದ ಪ್ರಪ್ರಥಮ ಸೋಪ್‌ ಮತ್ತು ಟೂತ್‌ ಪೇಸ್ಟ್‌ ಉತ್ಪಾದನಾ ಘಟಕ ಇದಾಗಿದ್ದು ಲವ್‌ ಮಾರ್ಕ್‌ ಬ್ಯೂಟಿ ಸೋಪ್‌ಗಳಿಗೆ ಕರ್ನಾಟಕ ಮಾತ್ರವಲ್ಲದೇ ಕೇರಳ, ಗೋವಾ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ ರಾಜ್ಯಗಳಲ್ಲಿ ಭಾರೀ ಬೇಡಿಕೆಯಿದ್ದರೆ, ಉತ್ತರ ಭಾಗದ ಕೆಲವು ಕಡೆಗಳಲ್ಲೂ ಬೇಡಿಕೆಯಿದೆ. ಲವ್‌ ಮಾರ್ಕ್‌ ಬ್ಯೂಟಿ ಸೋಪ್‌ ಮತ್ತು ಕ್ಯಾಲ್ಸಿಬ್ರೈಟ್‌ ಟೂತ್‌ ಪೇಸ್ಟ್‌ 250ಕ್ಕೂ ಅಧಿಕ ಡಿಸ್ಟ್ರಿಬ್ಯೂಟರ್‌ಗಳ ಮೂಲಕ 30 ಸಾವಿರಕ್ಕೂ ಅಧಿಕ ಶಾಪ್‌ಗಳಿಗೆ ರವಾನೆಯಾಗುತ್ತಿದೆ.

ಪರಿಸರ ಸಹ್ಯ ಸ್ಥಾವರ
ಸಂಪೂರ್ಣ ಸ್ವಯಂಚಾಲಿತ ಸಂಸ್ಕರಣೆ ಮತ್ತು ಪ್ಯಾಕೇಜಿಂಗ್‌ ಯಂತ್ರಗಳನ್ನು ಹೊಂದಿರುವ ಸ್ಥಾವರದಲ್ಲಿ ದಿನಕ್ಕೆ 24 ಟನ್‌ನಷ್ಟು ಸಾಬೂನು ಉತ್ಪಾದನೆಯಾಗುತ್ತಿದೆ. ಉತ್ಪಾದನಾ ಪ್ರಮಾಣವನ್ನು ಮಾರುಕಟ್ಟೆಯ ಬೇಡಿಕೆಗೆ ಅನುಗುಣವಾಗಿ 72 ಟನ್‌ಗಳಿಗೆ ವಿಸ್ತರಿಸಲು ಅವಕಾಶವಿದೆ. ದಿನಕ್ಕೆ 8 ಟನ್‌ನಷ್ಟು ಟೂತ್‌ ಪೇಸ್ಟ್‌ ಉತ್ಪಾದನಾ ಸಾಮರ್ಥಯವನ್ನು ಹೊಂದಿದ್ದು ಬೇಡಿಕೆಗೆ ಅನುಗುಣವಾಗಿ 24 ಟನ್‌ಗಳಿಗೆ ವಿಸ್ತರಿಸಲು ಅವಕಾಶವಿದೆ. ಪ್ರತೀ ನಿಮಿಷಕ್ಕೆ 120 ಟೂತ್‌ ಪೇಸ್ಟ್‌ ಟ್ಯೂಬ್‌ಗಳನ್ನು ಉತ್ಪಾದಿಸುವ ಮತ್ತು ಪ್ಯಾಕ್‌ ಮಾಡುವ ಸ್ವಯಂಚಾಲಿತ ಪ್ಯಾಕೇಜಿಂಗ್‌ ಯಂತ್ರಗಳನ್ನು ಒಳಗೊಂಡಿದೆ. ಸ್ಥಾವರದಲ್ಲಿ ನಿಯಂತ್ರಣ ಮತ್ತು ನಿರ್ವಹಣೆಗಾಗಿ ಅತ್ಯಾಧುನಿಕ ಗುಣಮಟ್ಟದ ಉಪಕರಣ ಮತ್ತು ಸೂಕ್ಷ್ಮ ಜೀವ ವಿಜ್ಞಾನ ಪ್ರಯೋಗಾಲಯವಿದೆ. ಸುಮಾರು 1200 ಲೀ. ಸಾಮರ್ಥ್ಯದ ವಾಟರ್‌ ಪ್ಲಾಂಟ್‌, ಮಳೆ ನೀರು ಕೊಯ್ಲು ವ್ಯವಸ್ಥೆ, ಸ್ವತಂತ್ರ ಕೊಳಚೆ ನೀರು ಮತ್ತು ತ್ಯಾಜ್ಯ ಸಂಸ್ಕರಣಾ ಘಟಕವಿದ್ದು ಪರಿಸರ ಸಹ್ಯವಾಗಿಯೂ ಗುರುತಿಸಲ್ಪಟ್ಟಿದೆ.

ಗ್ರಾಮೀಣ ಜನರಿಗೆ ಉದ್ಯೋಗ
ಸ್ಥಾವರದಲ್ಲಿ 55-60 ಮಂದಿ ಉದ್ಯೋಗ ಮಾಡುತ್ತಿದ್ದು ಬೆಳಪು ಆಸುಪಾಸಿನವರಿಗೆ ಹೆಚ್ಚಿನ ಅವಕಾಶ ನೀಡಲಾಗಿದೆ. ಮಾರುಕಟ್ಟೆ ಮತ್ತು ಪ್ರಸರಣ ವಿಭಾಗದಲ್ಲಿ 100ಕ್ಕೂ ಅಧಿಕ ಮಂದಿ ಕಾರ್ಯ ನಿರ್ವಹಿಸುತ್ತಿದ್ದು ಕೈಗಾರಿಕಾ ಘಟಕದಲ್ಲಿ ನಿರ್ವಹಣೆ, ಪ್ಯಾಕೇಂಜಿಗ್‌, ಮಾರುಕಟ್ಟೆ ವಿಭಾಗದಲ್ಲಿ ಸ್ಥಳೀಯರಿಗೆ ದೊಡ್ಡ ಸಂಖ್ಯೆಯಲ್ಲಿ ಉದ್ಯೋಗಾವಕಾಶವನ್ನು ಒದಗಿಸಿಕೊಡುವ ಮೂಲಕ ಗ್ರಾಮೀಣ ಭಾಗದ ನಿರುದ್ಯೋಗಿಗಳ ಪಾಲಿಗೆ ವರದಾನವಾಗಿದೆ.

ಲೋಕಲ್‌ ಬ್ರ್ಯಾಂಡ್ ಪರಿಚಯಿಸುವ ಮಹತ್ವಾಕಾಂಕ್ಷೆಯಿತ್ತು
ದೇಶಕ್ಕೆ ಕರ್ನಾಟಕದ ಸ್ಥಳೀಯ ಬ್ರಾಂಡ್‌ನ್ನು ಪರಿಚಯಿಸುವ ಪರಿಸರ ಸ್ನೇಹಿ ಮತ್ತು ಜನಸ್ನೇಹಿಯಾಗುವ ಕೈಗಾರಿಕೆಯನ್ನು ಸ್ಥಾಪಿಸಬೇಕು. ಆ ಮೂಲಕ ಗ್ರಾಮೀಣ ಭಾಗದ ಜನರಿಗೆ ಉದ್ಯೋಗ ನೀಡುವಂತಾಗಬೇಕು ಎಂಬ ಮಹತ್ವಾಕಾಂಕ್ಷೆಯೊಂದಿಗೆ ಬೆಳಪುವಿನಲ್ಲಿ ಹಿಂಡೋಕೇರ್‌ ಇಂಡಿಯಾ ಪ್ರೈ. ಲಿ. ಅನ್ನು ಪ್ರಾರಂಭಿಸಲಾಗಿದೆ. ನಿರೀಕ್ಷೆಯಂತೆ ಕಾರ್ಖಾನೆಯು ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು ಲವ್‌ ಮಾರ್ಕ್‌ ಬ್ಯೂಟಿ ಸೋಪ್‌, ಕ್ಯಾಲ್ಸಿಬ್ರೈಟ್‌ ಟೂತ್‌ ಪೇಸ್ಟ್‌ಗೆ ಎಲ್ಲೆಡೆ ಉತ್ತಮ ಬೇಡಿಕೆ ಬರುತ್ತಿದೆ. ನಮ್ಮಲ್ಲೂ ಬಹಳಷ್ಟು ಮಂದಿ ಉದ್ಯೋಗವನ್ನೂ ಪಡೆಯುತ್ತಿದ್ದು ನಮ್ಮ ಉದ್ದೇಶ ಈಡೇರಿದೆ.
– ಕರ್ಸ್ಟನ್‌ ಫರಾಯಾಸ್‌, ಆಡಳಿತ ನಿರ್ದೇಶಕ, ಹಿಂಡೋಕೇರ್‌ ಇಂಡಿಯಾ ಪ್ರೈ. ಲಿ., ಬೆಳಪು

ಗ್ರಾಮಾಭಿವೃದ್ಧಿಯಲ್ಲಿ ಬೆಳಪು ಜಿಲ್ಲೆ, ರಾಜ್ಯ ಮತ್ತು ರಾಷ್ಟ್ರಕ್ಕೆ ಮಾದರಿಯಾಗಿ ಬೆಳೆದಿದೆ. ಕಳೆದ ಹತ್ತು ವರ್ಷಗಳಲ್ಲಿ ಶೈಕ್ಷಣಿಕ, ಕೈಗಾರಿಕೆ ಮತ್ತು ಪ್ರವಾಸೋದ್ಯಮವಾಗಿಯೂ ಗ್ರಾಮ ಗುರುತಿಸಲ್ಪಡುತ್ತಿದೆ. ಕೆಐಎಡಿಬಿ ಮೂಲಕವಾಗಿ 58 ಎಕ್ರೆ ಪ್ರದೇಶದಲ್ಲಿ ಕೈಗಾರಿಕಾ ಪಾರ್ಕ್‌ ನಿರ್ಮಾಣ ಮಾಡಿ, ಪರಿಸರ ಸಹ್ಯ ಮತ್ತು ಜನಸ್ನೇಹಿಯಾದ ಕೈಗಾರಿಕೆ ಸ್ಥಾಪನೆಗೆ ಒತ್ತು ನೀಡಲಾಗಿದೆ. ಪ್ರಥಮ ಸಂಸ್ಥೆಯಾಗಿ ಹಿಂಡೋಕೇರ್‌ ಇಂಡಿಯಾ ಪ್ರೈ.ಲಿ. ಸ್ಥಾಪನೆಯಾಗಿದ್ದು ಇಲ್ಲಿನ ಲವ್‌ ಮಾರ್ಕ್‌ ಬ್ಯೂಟಿ ಸೋಪ್‌ ದೇಶದಾದ್ಯಂತ ಪ್ರಸಿದ್ಧಿ ಪಡೆದಿರುವುದಕ್ಕೆ ಖುಷಿಯಾಗುತ್ತಿದೆ.
– ದೇವಿಪ್ರಸಾದ್‌ ಶೆಟ್ಟಿ, ಅಧ್ಯಕ್ಷರು, ಬೆಳಪು ಗ್ರಾಮ ಪಂಚಾಯತ್‌

ಟಾಪ್ ನ್ಯೂಸ್

vidya balan in bhool bhulaiya 3

Vidya Balan; ಮತ್ತೆ ಬಂದಳು ಮಂಜುಳಿಕಾ!

mumbai

Short Circuit; ಅಗ್ನಿ ಆಕಸ್ಮಿಕದಲ್ಲಿ ಒಂದೇ ಕುಟುಂಬದ ಏಳು ಮಂದಿ ಸಜೀವ ದಹನ

Agra: ಶಿಕ್ಷಕಿಯ ಆಕ್ಷೇಪಾರ್ಹ ವಿಡಿಯೋ ಹಂಚಿಕೊಂಡ ವಿದ್ಯಾರ್ಥಿಗಳು; ನಾಲ್ವರ ಬಂಧನ

Agra: ಶಿಕ್ಷಕಿಯ ಆಕ್ಷೇಪಾರ್ಹ ವಿಡಿಯೋ ಹಂಚಿಕೊಂಡ ವಿದ್ಯಾರ್ಥಿಗಳು; ನಾಲ್ವರ ಬಂಧನ

2-kulur-1

Kuloor: ಮೊಯ್ದೀನ್‌ ಬಾವಾ ಸೋದರ ಮಮ್ತಾಜ್‌ ಅಲಿ ನಾಪತ್ತೆ; ಅಪಘಾತ ಸ್ಥಿತಿಯಲ್ಲಿ ಕಾರು ಪತ್ತೆ

Navratri special: ಮತ್ತೆ ಪರಪಂಚಕೆ ಸಿಗುವುದೇ ಉಸಿರಲಿ ಬೆರೆಯುವ ಹಸಿರಾದ ಪ್ರೀತಿ?

Navratri special: ಮತ್ತೆ ಪರಪಂಚಕೆ ಸಿಗುವುದೇ ಉಸಿರಲಿ ಬೆರೆಯುವ ಹಸಿರಾದ ಪ್ರೀತಿ?

Martin: ಇಂದು ಧ್ರುವ ಸರ್ಜಾ ಬರ್ತ್‌ಡೇ; ದಾವಣಗೆರೆಯಲ್ಲಿ ಪ್ರೀ ರಿಲೀಸ್‌ ಇವೆಂಟ್‌

Martin: ಇಂದು ಧ್ರುವ ಸರ್ಜಾ ಬರ್ತ್‌ಡೇ; ದಾವಣಗೆರೆಯಲ್ಲಿ ಪ್ರೀ ರಿಲೀಸ್‌ ಇವೆಂಟ್‌

Kumara-Parvatha

New Guideline For Trekkers: ಇಂದಿನಿಂದ ಕುಮಾರ ಪರ್ವತ ಚಾರಣಕ್ಕೆ ಅವಕಾಶ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

kunita-bhajane

Kaup: ಉಚ್ಚಿಲ ದಸರಾ: ಐತಿಹಾಸಿಕ ದಾಖಲೆ ಬರೆದ ಸಾಮೂಹಿಕ ಕುಣಿತ ಭಜನೆ

Udupi-DC-Meeting

Udupi: ಅಕ್ರಮ ಮೀನುಗಾರಿಕೆ ಬೋಟುಗಳಿಗೆ ಗರಿಷ್ಠ ದಂಡ: ಜಿಲ್ಲಾಧಿಕಾರಿ ಡಾ. ವಿದ್ಯಾಕುಮಾರಿ

Kota-poojary

Social Media Fake Account: ಸಂಸದ ಕೋಟ ಶ್ರೀನಿವಾಸ ಪೂಜಾರಿ ಖಾತೆ ನಕಲಿ: ದೂರು

Katapadi

Udupi: ಉದ್ಯಾವರ ಬಳಿ ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್‌ ಮೇಲೆರಿದ ಕಾರು; ಪ್ರಯಾಣಿಕರಿಗೆ ಗಾಯ

11

Udupi: ಸರಣಿ ಕಳ್ಳತನ; 3 ಮಂದಿಯ ಕೃತ್ಯ! ಸಿಸಿಟಿವಿಯಲ್ಲಿ ದಾಖಲು 

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

vidya balan in bhool bhulaiya 3

Vidya Balan; ಮತ್ತೆ ಬಂದಳು ಮಂಜುಳಿಕಾ!

mumbai

Short Circuit; ಅಗ್ನಿ ಆಕಸ್ಮಿಕದಲ್ಲಿ ಒಂದೇ ಕುಟುಂಬದ ಏಳು ಮಂದಿ ಸಜೀವ ದಹನ

Agra: ಶಿಕ್ಷಕಿಯ ಆಕ್ಷೇಪಾರ್ಹ ವಿಡಿಯೋ ಹಂಚಿಕೊಂಡ ವಿದ್ಯಾರ್ಥಿಗಳು; ನಾಲ್ವರ ಬಂಧನ

Agra: ಶಿಕ್ಷಕಿಯ ಆಕ್ಷೇಪಾರ್ಹ ವಿಡಿಯೋ ಹಂಚಿಕೊಂಡ ವಿದ್ಯಾರ್ಥಿಗಳು; ನಾಲ್ವರ ಬಂಧನ

2-kulur-1

Kuloor: ಮೊಯ್ದೀನ್‌ ಬಾವಾ ಸೋದರ ಮಮ್ತಾಜ್‌ ಅಲಿ ನಾಪತ್ತೆ; ಅಪಘಾತ ಸ್ಥಿತಿಯಲ್ಲಿ ಕಾರು ಪತ್ತೆ

Navratri special: ಮತ್ತೆ ಪರಪಂಚಕೆ ಸಿಗುವುದೇ ಉಸಿರಲಿ ಬೆರೆಯುವ ಹಸಿರಾದ ಪ್ರೀತಿ?

Navratri special: ಮತ್ತೆ ಪರಪಂಚಕೆ ಸಿಗುವುದೇ ಉಸಿರಲಿ ಬೆರೆಯುವ ಹಸಿರಾದ ಪ್ರೀತಿ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.