ಅಷ್ಟಮಿ ಬಳಿಕ ಗುರು ಸ್ಮರಣೆ
ಪ್ರಸಾದ ವಿತರಣೆ, ಕನಕನಕಿಂಡಿಯಲ್ಲಿ ದರ್ಶನ
Team Udayavani, Sep 12, 2020, 10:52 PM IST
ಕನಕನ ಕಿಂಡಿ ಮೂಲಕ ಭಕ್ತರು ದರ್ಶನ ಪಡೆದರು.
ಉಡುಪಿ: ಶ್ರೀಕೃಷ್ಣ ಮಠದಲ್ಲಿ ಕೃಷ್ಣಜಯಂತಿ- ವಿಟ್ಲಪಿಂಡಿ ಸಂಭ್ರಮ ಮುಗಿದ ಬಳಿಕ ಶನಿವಾರ ವಿವಿಧೆಡೆ ಪ್ರಸಾದ ವಿತರಣೆಯನ್ನು ಮಠದ ಸಿಬಂದಿ ನಡೆಸಿದರು. ಇದೇ ವೇಳೆ ಅದಮಾರು ಮಠದ ಹಿಂದಿನ ಪೀಠಾಧಿಪತಿ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ಸಾಧನೆ ಮಾಡಿದ ಶ್ರೀವಿಬುಧೇಶತೀರ್ಥ ಶ್ರೀಪಾದರ ಆರಾಧನೋತ್ಸವ ಜರಗಿತು.
ಶುಕ್ರವಾರ ವಿಟ್ಲಪಿಂಡಿ ಉತ್ಸವದ ವೇಳೆ ಸಾರ್ವಜನಿಕರಿಗೆ ರಥಬೀದಿಗೆ ಪ್ರವೇಶವಿರಲಿಲ್ಲ. ಉತ್ಸವ ಮುಗಿದ ಬಳಿಕ ಸಾರ್ವಜನಿಕರು ರಥಬೀದಿಗೆ ಆಗಮಿಸಿ ದೇವರ ದರ್ಶನವನ್ನು ಕನಕನ ಕಿಂಡಿ ಮೂಲಕ ನಡೆಸಿದರು. ಕೃಷ್ಣಾಷ್ಟಮಿ ಯಂತೆ ಶನಿವಾರವೂ ಭಕ್ತರು ಕನಕನ ಕಿಂಡಿ ಮೂಲಕ ದರ್ಶನ ಪಡೆದರು.
ಶುಕ್ರವಾರ 5,000 ಉಚಿತ ಪ್ರಸಾದ ವನ್ನು ರಥಬೀದಿಯಲ್ಲಿ ಹಾಕಿದ ಕೌಂಟರ್ನಲ್ಲಿ ವಿತರಿಸಲಾಗಿತ್ತು. ಇದಕ್ಕೂ ಶನಿವಾರ ಹೆಚ್ಚಿನ ಬೇಡಿಕೆ ಇತ್ತು. ಶುಕ್ರವಾರ ಉಡುಪಿ ನಗರದಲ್ಲಿ ಪ್ರಸಾದ ವಿತರಣೆ ನಡೆದರೆ, ಶುಕ್ರವಾರ, ಶನಿವಾರ ವಿವಿಧ ಕಚೇರಿಗಳಿಗೆ ಪ್ರಸಾದವನ್ನು ವಿತರಿಸಲಾಯಿತು. ಒಟ್ಟು 20 ಸಾವಿರ ಉಚಿತ ಪ್ಯಾಕೆಟ್ ವಿತರಿಸಲಾಗಿದೆ.
ಆರಾಧನೋತ್ಸವದ ಅಂಗವಾಗಿ ಬೆಳಗ್ಗೆ ಮಹಾ ಪೂಜೆ ಬಳಿಕ ಪರ್ಯಾಯ ಶ್ರೀಈಶಪ್ರಿಯತೀರ್ಥ ಶ್ರೀಪಾದರು, ಪಲಿಮಾರು ಮಠದ ಶ್ರೀವಿದ್ಯಾಧೀಶ ತೀರ್ಥ ಶ್ರೀಪಾದರು, ಕಾಣಿಯೂರು ಮಠದ ಶ್ರೀವಿದ್ಯಾವಲ್ಲಭತೀರ್ಥ ಶ್ರೀಪಾದರು ಪಾದ್ಯವನ್ನು ಸಮರ್ಪಿಸಿದರೆ, ಅದಮಾರು ಮಠದ ಶ್ರೀವಿಶ್ವಪ್ರಿಯ ತೀರ್ಥ ಶ್ರೀಪಾದರು ಅದಮಾರು ಮೂಲ ಮಠದಲ್ಲಿರುವ ವೃಂದಾವನಕ್ಕೆ ಪೂಜೆ ಸಲ್ಲಿಸಿದರು. ಸಂಜೆ ರಾಜಾಂಗಣದಲ್ಲಿ ಶ್ರೀವಿಬುಧೇಶತೀರ್ಥ ಶ್ರೀಪಾದರ ಸಂಸ್ಮರಣೆ ನಡೆಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Manipal ಪರಿಸರದ 15-20 ಪಕ್ಷಿ ಪ್ರಭೇದ ಕಣ್ಮರೆ; ಇ ಬರ್ಡ್ ಪೋರ್ಟಲ್ನಲ್ಲಿ ದಾಖಲಾತಿ
Shirva: ಹುಲಿ ವೇಷ ಹಾಕಿ ಅನಾರೋಗ್ಯಪೀಡಿತ ಬಾಲಕನಿಗೆ ನೆರವು ನೀಡಿದ ಪೋರರು!
Katpadi: ತ್ಯಾಜ್ಯ ಗುಂಡಿಯಾಗುತ್ತಿದೆ ಕುರ್ಕಾಲು ಮದಗ
Pramod Madhwaraj ಅವರದ್ದು ಯಾರನ್ನೂ ದ್ವೇಷಿಸದ ಅಪರೂಪದ ವ್ಯಕ್ತಿತ್ವ: ಕೋಟ
Udupi: ಗೀತಾರ್ಥ ಚಿಂತನೆ-67: ಅರ್ಜುನನ ಅಹಂ ನಾಶಕ್ಕೆ ಕೃಷ್ಣತಂತ್ರ
MUST WATCH
ಹೊಸ ಸೇರ್ಪಡೆ
Train; ದೀಪಾವಳಿಗೆ ಬೆಂಗಳೂರು- ಕಾರವಾರ ವಿಶೇಷ ರೈಲು
ಟಿಕೆಟ್ ಕೊಡಿಸದೆ ವಂಚನೆ: ಸಚಿವ ಜೋಶಿ ಸೋದರ, ಸೋದರಿ, ಅಳಿಯನ ವಿರುದ್ಧ ಕೇಸ್
MUDA ಮಾತ್ರವಲ್ಲ ಸಿದ್ದರಾಮಯ್ಯ ಇನಕಲ್ ನಿವೇಶನವೂ ಅಕ್ರಮ: ಎಚ್ ಡಿಕೆ ಮತ್ತೊಂದು ಬಾಂಬ್
INDvsNZ: ಟೆಸ್ಟ್ ಕ್ರಿಕೆಟ್ ನಲ್ಲಿ 9000 ರನ್ ಪೂರೈಸಿದ ವಿರಾಟ್ ಕೊಹ್ಲಿ
ED ಯಿಂದ ಬಂಧನಕ್ಕೊಳಗಾಗಿದ್ದ ಆಪ್ ನಾಯಕ ಸತ್ಯೇಂದ್ರ ಜೈನ್ ಗೆ ಜಾಮೀನು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.