ಫೇಸ್‌ಬುಕ್‌ ಲೈವ್‌: ಇನ್ನು ಹಿಂಸಾ ಚಿತ್ರೀಕರಣ ಇಲ್ಲ


Team Udayavani, May 17, 2019, 6:10 AM IST

facebook

ಮಣಿಪಾಲ: ಫೇಸ್‌ಬುಕ್‌ ಅನ್ನು ಬಳಕೆದಾರರು ದುರ್ಬಳಕೆ ಮಾಡದಂತೆ ಹೊಸ ನಿಯಮ ಜಾರಿಗೊಳಿಸಲಿದೆ.

ಫೇಸ್‌ಬುಕ್‌ ಬಳಕೆದಾರರು ಇನ್ನು ಮುಂದೆ ಯಾವುದೇ ರೀತಿಯ ಹಿಂಸಾತ್ಮಕ ವೀಡಿಯೋಗಳನ್ನು ಲೈವ್‌ ಮಾಡು ವುದು, ಶೇರ್‌ ಮಾಡುವಂತಿಲ್ಲ. ಇಂತಹ ಘಟನೆಗಳು ಕಂಡುಬಂದರೆ ಅಂತಹ ಖಾತೆಗಳು ಬ್ಲಾಕ್‌ ಆಗಲಿದೆ ಎಂದು ಫೇಸ್‌ಬುಕ್‌ ಹೇಳಿದೆ.

ಒಂದು ವೇಳೆ ಬಳಕೆದಾರರು ಈ ನಿಯಮ ಗಳನ್ನು ಮೀರಿದರೆ, ಆ ಖಾತೆಯನ್ನು ಯಾವುದೇ ಮುಲಾಜಿಲ್ಲದೆ ಬ್ಲಾಕ್‌ ಮಾಡಲಾಗುವುದು ಎಂದು ಸಂಸ್ಥೆ ಹೇಳಿದೆ. ನ್ಯೂಜಿಲೆಂಡ್‌ ಘಟನೆ ಬಳಿಕ ಫೇಸ್‌ಬುಕ್‌ ಸಂಸ್ಥಾಪಕರಲ್ಲಿ ಈ ಬಗ್ಗೆ ಹಲವು ದೇಶಗಳ ನಾಯಕರು ಚರ್ಚಿಸಿದ್ದರು.

ಸಂಸ್ಥೆ ಹೇಳಿದ್ದೇನು?

  • ಬಳಕೆದಾರರು ಭಯೋತ್ಪಾದಕ ಸಂಘಟನೆಗಳಿಗೆ ಸಂಬಂಧಿಸಿದ ಹೇಳಿಕೆ ಅಥವಾ ವೀಡಿಯೋಗಳ ಲಿಂಕ್‌ ಹಂಚಿಕೊಳ್ಳುವುದೂ ಈ ನಿಯಮದ ಸುಪರ್ದಿಗೆ ಬರುತ್ತದೆ. ನಿಯಮದನ್ವಯ ಅಂಥ ಖಾತೆಯೂ ನಿಷೇಧ.
  • ಫೇಸ್‌ಬುಕ್‌ನ ಈ ಕ್ರಮದಿಂದ ಸಮಾಜದ ಸ್ವಾಸ್ಥ್ಯ ಹಾಳಾಗುವುದು ತಪ್ಪುತ್ತದೆ. ಸಮಾಜದಲ್ಲಿ ಶಾಂತಿ ನೆಲೆಸಲು ಇದು ಸಹಕಾರಿಯಾಗಲಿದೆ.
  • ಈ ನಿಯಮಗಳನ್ನು ಉಲ್ಲಂಘಿಸಿದರೆ ಬಳಕೆದಾರರ ಖಾತೆಯನ್ನು ಬ್ಲಾಕ್‌ ಮಾಡಲಾಗುತ್ತದೆ ಅಥವಾ ನಿಮಗೆ ನೀಡಲಾದ ಕೆಲವು ಆಯ್ಕೆಗಳನ್ನು ನಿಷೇಧಿಸಲಾಗುತ್ತದೆ.
  • ನ್ಯೂಜಿಲೆಂಡ್‌ ಚರ್ಚ್‌ ದಾಳಿ ವೀಡಿಯೋವನ್ನು ಈಗಾಗಲೇ ಅನೇಕ ಖಾತೆಗಳಿಂದ ಅಳಿಸಿ ಹಾಕಲಾಗಿದೆ. ಕೆಲವರು ಈ ವೀಡಿಯೋವನ್ನು ಸೇವ್‌ ಮಾಡಿಕೊಂಡಿದ್ದು, ಅಂತಹ ಖಾತೆಗಳೂ ನಿಷೇಧಕ್ಕೊಳಗಾಗಲಿವೆ.

ಯಾಕೆ ಈ ಕ್ರಮ?

ಇತ್ತೀಚೆಗೆ ನ್ಯೂಜಿಲೆಂಡ್‌ನ‌ ಕ್ರೈಸ್ಟ್‌ ಚರ್ಚ್‌ ಮಸೀದಿ ಮೇಲೆ ಭಯೋತ್ಪಾದಕ ದಾಳಿ ನಡೆದ ವೇಳೆ ಉಗ್ರ ತನ್ನ ಕೃತ್ಯವನ್ನು ಫೇಸ್‌ಬುಕ್‌ ಲೈವ್‌ ಸ್ಟ್ರೀಮಿಂಗ್‌ ಮಾಡಿದ್ದನು. ಈ ವೀಡಿಯೋ ಕೆಲವೇ ಕ್ಷಣಗಳಲ್ಲಿ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸಂಚಲನವನ್ನು ಸೃಷ್ಟಿಸಿತು. ದಾಳಿಯ ಸಂದರ್ಭ ಈ ಆಯ್ಕೆಯ ಕುರಿತಂತೆ ವ್ಯಾಪಕ ಟೀಕೆಗಳು ಕೇಳಿಬಂದಿದ್ದವು. ಇಂತಹ ಸಂದರ್ಭಗಳ ಬಗ್ಗೆ ಕಠಿನ ಕ್ರಮ ಕೈಗೊಳ್ಳುವಂತೆ ಮನವಿ ಮಾಡಲಾಗಿತ್ತು. ಇದರನ್ವಯ ನಿಯಮದಲ್ಲಿ ಬದಲಾವಣೆ ತರಲಿದೆ.

ಟಾಪ್ ನ್ಯೂಸ್

supreem

Supreme Court: ಬೇಸಗೇಲಿ 1,170 ಕೇಸ್‌ ಇತ್ಯರ್ಥ

Jalashaya

Monsoon: ನಾಲ್ಕು ಜಿಲ್ಲೆಗಳಲ್ಲಿ ಭಾರೀ ಮಳೆ; ಹಲವು ಪ್ರದೇಶ ಜಲಾವೃತ

Supreme Court

NEET ಪರೀಕ್ಷೆ ರದ್ದು ತನಿಖೆ ಬಳಿಕ ತೀರ್ಮಾನ: ಸುಪ್ರೀಂ ಕೋರ್ಟ್‌

Mangaluru ಪಾಲಿಕೆ ಆಯುಕ್ತರ ವರ್ಗಾವಣೆ ರದ್ದುಗೊಳಿಸಿದ ಸರಕಾರMangaluru ಪಾಲಿಕೆ ಆಯುಕ್ತರ ವರ್ಗಾವಣೆ ರದ್ದುಗೊಳಿಸಿದ ಸರಕಾರ

Mangaluru ಪಾಲಿಕೆ ಆಯುಕ್ತರ ವರ್ಗಾವಣೆ ರದ್ದುಗೊಳಿಸಿದ ಸರಕಾರ

Heavy Rain ದಕ್ಷಿಣ ಕನ್ನಡದಲ್ಲಿ ಸೋಮವಾರವೂ ಭಾರೀ ಮಳೆ

Heavy Rain ದಕ್ಷಿಣ ಕನ್ನಡದಲ್ಲಿ ಸೋಮವಾರವೂ ಭಾರೀ ಮಳೆ

CM-Siddaramaiah

Government ಜಮೀನು ಒತ್ತುವರಿ ನಿರ್ದಾಕ್ಷಿಣ್ಯ ತೆರವು: ಸಿಎಂ ಸಿದ್ದರಾಮಯ್ಯ

Rain ಮೈದುಂಬಿದ ನೇತ್ರಾವತಿ, ಕುಮಾರಧಾರಾ ನದಿ

Rain ಮೈದುಂಬಿದ ನೇತ್ರಾವತಿ, ಕುಮಾರಧಾರಾ ನದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Krishi Sinchai Yojana: ರೈತರಿಗೆ ಸಿಗಲಿದೆ ಶೇ.90 ಸಬ್ಸಿಡಿ

Krishi Sinchai Yojana: ರೈತರಿಗೆ ಸಿಗಲಿದೆ ಶೇ.90 ಸಬ್ಸಿಡಿ

Theft ಕಟಪಾಡಿ ಫಾರೆಸ್ಟ್‌ಗೇಟ್‌: ಬಬ್ಬುಸ್ವಾಮಿ ದೈವಸ್ಥಾನದ ಕಾಣಿಕೆ ಡಬ್ಬಿಯಿಂದ ಕಳವು

Theft ಕಟಪಾಡಿ ಫಾರೆಸ್ಟ್‌ಗೇಟ್‌: ಬಬ್ಬುಸ್ವಾಮಿ ದೈವಸ್ಥಾನದ ಕಾಣಿಕೆ ಡಬ್ಬಿಯಿಂದ ಕಳವು

Manipal ಯಾವುದೇ ಮಾಹಿತಿ ನೀಡದಿದ್ದರೂ 1.57 ಲಕ್ಷ ರೂ. ವರ್ಗಾವಣೆ !

Manipal ಯಾವುದೇ ಮಾಹಿತಿ ನೀಡದಿದ್ದರೂ 1.57 ಲಕ್ಷ ರೂ. ವರ್ಗಾವಣೆ !

Kapu ರಿಕ್ಷಾ ಮಾಲಕ ನೇಣಿಗೆ ಶರಣು

Kapu ರಿಕ್ಷಾ ಮಾಲಕ ನೇಣಿಗೆ ಶರಣು

Shirva; ವಿಜಯಾ ಬ್ಯಾಂಕ್ ನಿವೃತ್ತ ಚೀಫ್‌ ಮ್ಯಾನೇಜರ್‌ ಕೆ. ದಿವಾಕರ ಮಾರ್ಲ ನಿಧನ

Shirva; ವಿಜಯಾ ಬ್ಯಾಂಕ್ ನಿವೃತ್ತ ಚೀಫ್‌ ಮ್ಯಾನೇಜರ್‌ ಕೆ. ದಿವಾಕರ ಮಾರ್ಲ ನಿಧನ

MUST WATCH

udayavani youtube

ಬೆನ್ನು ನೋವು ನಿವಾರಣೆ | ಬೆನ್ನು ನೋವಿನ ಸಮಸ್ಯೆಗೆ ಪರಿಹಾರ

udayavani youtube

ಉಡುಪಿ ಜಿಲ್ಲಾದ್ಯಂತ ಭಾರೀ ಮಳೆ – ಜಲಾವೃತಗೊಂಡ ಮುಖ್ಯ ರಸ್ತೆಗಳು

udayavani youtube

ಕೂಲ್ ಮೂಡ್ ನಲ್ಲಿ ಸ್ವಿಮ್ಮಿಂಗ್ ಮಾಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ : ಇಲ್ಲಿದೆ ವಿಡಿಯೋ

udayavani youtube

ಅಂಬಾನಿ ಕುಟುಂಬದಿಂದ ಆಟಗಾರರೊಂದಿಗೆ ವಿಶ್ವಕಪ್ ಗೆಲುವಿನ ಸಂಭ್ರಮಾಚರಣೆ

udayavani youtube

Team india

ಹೊಸ ಸೇರ್ಪಡೆ

supreem

Supreme Court: ಬೇಸಗೇಲಿ 1,170 ಕೇಸ್‌ ಇತ್ಯರ್ಥ

Jalashaya

Monsoon: ನಾಲ್ಕು ಜಿಲ್ಲೆಗಳಲ್ಲಿ ಭಾರೀ ಮಳೆ; ಹಲವು ಪ್ರದೇಶ ಜಲಾವೃತ

Supreme Court

NEET ಪರೀಕ್ಷೆ ರದ್ದು ತನಿಖೆ ಬಳಿಕ ತೀರ್ಮಾನ: ಸುಪ್ರೀಂ ಕೋರ್ಟ್‌

police crime

BSP ಅಧ್ಯಕ್ಷ ಹತ್ಯೆ ಬೆನ್ನಲ್ಲೇ ಚೆನ್ನೈ ಪೊಲೀಸ್‌ ಕಮಿಷನರ್‌ ಎತ್ತಂಗಡಿ

1-mm

France ಸಂಸತ್‌ ಅತಂತ್ರ?: ಎಡಪಕ್ಷ ಕೂಟಕ್ಕೆ ಮುನ್ನಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.