ಜ. 8: ಅದಮಾರು ಶ್ರೀಗಳ ಪುರಪ್ರವೇಶ


Team Udayavani, Jan 5, 2020, 1:23 AM IST

35

ಉಡುಪಿ: ಜೋಡುಕಟ್ಟೆ ಬಳಿ ಆಕರ್ಷಕ ಕಮಾನು.

ಉಡುಪಿ: ಪರ್ಯಾಯ ಸಂಚಾರ ಪೂರೈಸಿರುವ ಅದಮಾರು ಮಠದ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಜ. 8ರ ಅಪರಾಹ್ನ 2.30ಕ್ಕೆ ಜೋಡುಕಟ್ಟೆಯಿಂದ ಪುರಪ್ರವೇಶ ಮಾಡುವರು ಎಂದು ಶ್ರೀಕೃಷ್ಣ ಸೇವಾ ಬಳಗದ ಗೌರವಾಧ್ಯಕ್ಷ, ಶಾಸಕ ಕೆ. ರಘುಪತಿ ಭಟ್‌ ತಿಳಿಸಿದರು.

ಪುರಪ್ರವೇಶದ ಮೆರವಣಿಗೆ ಜೋಡುಕಟ್ಟೆಯಿಂದ ತೆಂಕುಪೇಟೆ ಮಾರ್ಗವಾಗಿ ರಥಬೀದಿಗೆ ಬಂದ ಬಳಿಕ ಶ್ರೀ ಚಂದ್ರಮೌಳೀಶ್ವರ, ಶ್ರೀ ಅನಂತೇಶ್ವರ, ಶ್ರೀಕೃಷ್ಣ ದೇವರ ದರ್ಶನ ಪಡೆಯುತ್ತಾರೆ. ಸಂಜೆ 5.55ಕ್ಕೆ ಅದಮಾರು ಮಠವನ್ನು ಪ್ರವೇಶಿಸುವರು. ರಾತ್ರಿ ಸುಮಾರು 8 ಗಂಟೆಗೆ ಉತ್ಸವವಾದ ಬಳಿಕ ಸ್ವಾಮೀಜಿಯವರಿಗೆ ಪೌರ ಸಮ್ಮಾನ ನಡೆಯಲಿದೆ. ನಗರಸಭೆ ಆಡಳಿತ ಮಂಡಳಿ ಅಸ್ತಿತ್ವದಲ್ಲಿಲ್ಲದ ಕಾರಣ ಪೌರಾಡಳಿತ ಮತ್ತು ಕಂದಾಯ ಸಚಿವ ಆರ್‌. ಅಶೋಕ್‌ ಅವರು ಪೌರಸಮ್ಮಾನವನ್ನು ನೆರವೇರಿಸುವರು.

ಪರ್ಯಾಯ ಶ್ರೀ ಪಲಿಮಾರು ಮಠಾಧೀಶರ ಅಧ್ಯಕ್ಷತೆಯಲ್ಲಿ ನಡೆಯುವ ಸಭೆಯಲ್ಲಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ಮೊದಲಾದ ನಾಯಕರು ಭಾಗವಹಿಸುವರು. ಶಿಕ್ಷಣ ತಜ್ಞ ಡಾ| ಗುರುರಾಜ ಕರ್ಜಗಿ ಅಭಿನಂದನ ಭಾಷಣ ಮಾಡಲಿರುವರು. ಹಿಂದಿನ ಪೊಲೀಸ್‌ ಅಧಿಕಾರಿ ಅಣ್ಣಾಮಲೈ ಶುಭಾಶಂಸನೆಗೈಯುವರು ಎಂದರು.

ಪುರಪ್ರವೇಶದ ಮೆರವಣಿಗೆ ಕುರಿತು ಯಶಪಾಲ್‌ ಸುವರ್ಣ ಮಾಹಿತಿ ನೀಡಿದರು. ಶ್ರೀಕೃಷ್ಣ ಸೇವಾ ಬಳದ ಪದಾಧಿಕಾರಿಗಳಾದ ಅನಂತ ನಾಯಕ್‌, ವೈ.ಎನ್‌. ರಾಮಚಂದ್ರ ರಾವ್‌, ದಿನೇಶ ಪುತ್ರನ್‌, ಪ್ರದೀಪ ಕುಮಾರ್‌, ಪ್ರದೀಪ ರಾವ್‌, ಮಾಧವ ಉಪಾಧ್ಯಾಯ, ಮಠದ ಮ್ಯಾನೇಜರ್‌ ರಾಘವೇಂದ್ರ ಭಟ್‌, ಅದಮಾರು ಮಠ ಅತಿಥಿಗೃಹದ ಮ್ಯಾನೇಜರ್‌ ಗೋವಿಂದರಾಜ್‌ ಉಪಸ್ಥಿತರಿದ್ದರು.

ಸಾಂಸ್ಕೃತಿಕ ಸೊಗಡಿನ ಸಿಂಗಾರ
 ತುಳುನಾಡಿನ ಸಾಂಸ್ಕೃತಿಕ ಸೊಗಡು ಅನಾವರಣಗೊಳ್ಳುವಂತೆ ಸಿಂಗರಿಸಲು ಸಿದ್ಧತೆಗಳಾಗುತ್ತಿವೆ.
 ತಳಿರು ತೋರಣಗಳನ್ನು ನಿರ್ಮಿಸುವಾಗ ನೆಡುವ ಬಾಳೆಗಿಡಗಳನ್ನು ಬೇರುಸಹಿತ ಅಳವಡಿಸಲು ಸೂಚಿಸಲಾಗಿದೆ. ಇದರಿಂದಾಗಿ ಅನಂತರವೂ ಬಾಳೆಗಿಡಗಳನ್ನು ನೆಡಬಹುದಾಗಿದೆ.
 ಸ್ವಾಗತ ಕೋರುವ ಕಂಬಗಳಿಗೆ ಆಚಾರ್ಯ ಮಧ್ವರಿಂದ ಶ್ರೀವಿಬುಧೇಶತೀರ್ಥರವರೆಗಿನ ಹಿಂದಿನ ಯತಿಗಳ ಹೆಸರುಗಳನ್ನು ಬರೆಸಲಾಗುವುದು.
 ಜಾನಪದ ಸೊಬಗುಳ್ಳ ಸಹಜ ಅಲಂಕಾರಗಳ ಸ್ವಾಗತ ಕಮಾನುಗಳನ್ನು ನಿರ್ಮಿಸಲು ಆಸಕ್ತ ಯುವಕರಿಗೆ ಅವಕಾಶ ಕಲ್ಪಿಸಲಾಗಿದೆ.
 ಪೂರ್ಣಪ್ರಜ್ಞ ಸಂಸ್ಥೆಗಳ ಸುಮಾರು 2,000 ವಿದ್ಯಾರ್ಥಿಗಳು ವಿವಿಧ ರಾಜ್ಯಗಳ ಜಾನಪದ ನೃತ್ಯಗಳ ಮೂಲಕ ಪುರಪ್ರವೇಶದ ಸ್ವಾಗತ ಮೆರವಣಿಗೆಯಲ್ಲಿ ಬರಲಿದ್ದಾರೆ. ಸುಮಾರು 67 ತಂಡಗಳಿಗೆ ತರಬೇತಿ ನಡೆಯುತ್ತಿದೆ. ಇದಲ್ಲದೆ ಸ್ಥಳೀಯ ಭಜನಾ ಮಂಡಳಿಗಳು ಇರುತ್ತವೆ. ಟ್ಯಾಬ್ಲೋಗಳು ಇರುವುದಿಲ್ಲ.
 ಪೌರ ಸಮ್ಮಾನ, ಅಭಿನಂದನ ಸಮಾರಂಭದಲ್ಲಿ ಗಂಧದ ಹಾರ, ಮಣಿಗಳನ್ನು ಪೋಣಿಸಿದ ಹಾರಗಳಿಗೆ ಅವಕಾಶವಿರುವುದಿಲ್ಲ.
 ಪ್ಲಾಸ್ಟಿಕ್‌ ಫ್ಲೆಕ್ಸ್‌ಗಳಿಗೆ ಅವಕಾಶವಿಲ್ಲ. ಬಟ್ಟೆಯ ಫ‌ಲಕ ಅಥವಾ ಬ್ಯಾನರ್‌ಗಳನ್ನು ಬಳಸುವಂತೆ ವಿನಂತಿಸಲಾಗಿದೆ.

 ಪರ್ಯಾಯಕ್ಕೆ ಸಂಬಂಧಿಸಿ ಜ. 6ರ ಬೆಳಗ್ಗೆ 10ಕ್ಕೆ ಡಿಸಿ ಕಚೇರಿಯಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಅಧಿಕಾರಿಗಳ ಸಭೆ ನಡೆಯಲಿದೆ.
 ಜ. 15ರ ಅಪರಾಹ್ನ 2.30ಕ್ಕೆ ಅದಮಾರು, ಮಲ್ಪೆ, ಕೊಡವೂರು, ಮಟ್ಟು ಕಡೆಗಳಿಂದ ಹೊರೆಕಾಣಿಕೆ ಮೆರವಣಿಗೆ ಗೋವಿಂದ ಕಲ್ಯಾಣ ಮಂಟಪದಿಂದ ಬರಲಿದೆ. ಇನ್ನು 15 ದಿನಗಳಿಗೊಮ್ಮೆ ಹೊರೆಕಾಣಿಕೆ ಸಮರ್ಪಣೆಯಾಗಲಿದೆ.

ಟಾಪ್ ನ್ಯೂಸ್

Arrest

Davanagere: ಪೂಜೆಯಿಂದ ಕಷ್ಟ ಪರಿಹರಿಸುವ ನೆಪದಲ್ಲಿ ಮನೆಯಿಂದ ಕಳವು: ಇಬ್ಬರ ಬಂಧನ

Kodagu-Polcie

Madikeri: ವಿವಿಧ ಕಳವು ಪ್ರಕರಣ: ಕೊಡಗು ಪೊಲೀಸರಿಂದ ಮೂವರ ಸೆರೆ

DKSHi (3)

Water; ಗೌಡರು ಅಧಿಕಾರದಲ್ಲಿದ್ದಾಗ ನೀರಿನ ಹೋರಾಟ ಏಕೆ: ಡಿಕೆಶಿ

Beer

ಶಾಲೆ ಸಮೀಪ ಮದ್ಯದಂಗಡಿ ಇದ್ದರೆ ದೂರು ನೀಡಿ

1-dee

ಕಾಲೇಜುಗಳಲ್ಲಿ ಜಾನಪದ ಉತ್ಸವ: ಇಲಾಖೆ ಸೂಚನೆ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

accident

Kaup: ಸ್ಕೂಟಿ, ಕಾರಿಗೆ ಬಸ್‌ ಢಿಕ್ಕಿ; ಸವಾರನಿಗೆ ಗಾಯ

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

1-tengu-dsdsa

Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ

1-namm-mannu-1

Udayavani-MIC ನಮ್ಮ ಸಂತೆ:ಮಣ್ಣಿನಿಂದ ಮಾಡಿದ ನಾನಾ ಉತ್ಪನ್ನ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Suside-Boy

Sulya: ಪಯಸ್ವಿನಿ ನದಿಯಲ್ಲಿ ಯುವಕನ ಶವ ಪತ್ತೆ

Arrest

Davanagere: ಪೂಜೆಯಿಂದ ಕಷ್ಟ ಪರಿಹರಿಸುವ ನೆಪದಲ್ಲಿ ಮನೆಯಿಂದ ಕಳವು: ಇಬ್ಬರ ಬಂಧನ

Kodagu-Polcie

Madikeri: ವಿವಿಧ ಕಳವು ಪ್ರಕರಣ: ಕೊಡಗು ಪೊಲೀಸರಿಂದ ಮೂವರ ಸೆರೆ

DKSHi (3)

Water; ಗೌಡರು ಅಧಿಕಾರದಲ್ಲಿದ್ದಾಗ ನೀರಿನ ಹೋರಾಟ ಏಕೆ: ಡಿಕೆಶಿ

Beer

ಶಾಲೆ ಸಮೀಪ ಮದ್ಯದಂಗಡಿ ಇದ್ದರೆ ದೂರು ನೀಡಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.