ಕಾಪು-ಮಲ್ಲಾರು ಉರ್ದು ಶಾಲೆಗಳ ಕಟ್ಟಡ ಶಿಥಿಲ; ಕಿಡಿಗೇಡಿಗಳ ಕಾಟ‌

ಇಲ್ಲಿ ಕ್ರಮವಾಗಿ 33, 40 ಮತ್ತು 70 ಮಂದಿ ವಿದ್ಯಾರ್ಥಿಗಳಿದ್ದಾರೆ.

Team Udayavani, Jul 9, 2024, 4:09 PM IST

ಕಾಪು-ಮಲ್ಲಾರು ಉರ್ದು ಶಾಲೆಗಳ ಕಟ್ಟಡ ಶಿಥಿಲ; ಕಿಡಿಗೇಡಿಗಳ ಕಾಟ‌

ಕಾಪು: ಕಿಡಿಗೇಡಿಗಳ ಕಾಟ ಮತ್ತು ನಿರ್ವಹಣೆಯ ಕೊರತೆಯಿಂದಾಗಿ ಕಾಪು ಪುರಸಭೆ ವ್ಯಾಪ್ತಿಯ ಮಲ್ಲಾರಿನ ಒಂದೇ ಕ್ಯಾಂಪಸ್‌ನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮೂರು ಶಾಲೆಗಳ 144 ವಿದ್ಯಾರ್ಥಿಗಳು ಮಳೆಗಾಲದಲ್ಲಿ ಆತಂಕದಿಂದಲೇ ಪಾಠ ಕೇಳಬೇಕಾಗಿದೆ.

ಮಲ್ಲಾರು ಉರ್ದು ಸರಕಾರಿ ಸಂಯುಕ್ತ ಪ್ರೌಢಶಾಲೆ, ಉರ್ದು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಮೌಲಾನಾ ಆಜಾದ್‌
ಆಂಗ್ಲ ಮಾಧ್ಯಮ ಮಾದರಿ ಶಾಲೆಗಳು ಒಂದೇ ಕ್ಯಾಂಪಸ್‌ ನೊಳಗೆ ಕಾರ್ಯನಿರ್ವಹಿಸುತ್ತಿದ್ದು ಇಲ್ಲಿ ಕ್ರಮವಾಗಿ 33, 40 ಮತ್ತು 70 ಮಂದಿ ವಿದ್ಯಾರ್ಥಿಗಳಿದ್ದಾರೆ.

ಮೂರೂ ಶಿಕ್ಷಣ ಸಂಸ್ಥೆಗಳು ಕಿಡಿಗೇಡಿಗಳ ದಾಳಿಗೆ ಗುರಿಯಾಗುತ್ತಿದ್ದು, ಇದರಿಂದಾಗಿ ತರಗತಿ ಕೊಠಡಿಗಳು, ಶಿಕ್ಷಕರ ಕೊಠಡಿ,
ದಾಸ್ತಾನು ಕೊಠಡಿ, ವಾಚನಾಲಯ ಸಹಿತ ಹೆಚ್ಚಿನ ಕೊಠಡಿಗಳು ಮಳೆಗಾಲದಲ್ಲಿ ಸೋರುತ್ತಿವೆ. ಮೌಲಾನಾ ಆಜಾದ್‌ ಮಾದರಿ
ಶಾಲೆಯ ವಿದ್ಯಾರ್ಥಿಗಳು ಮತ್ತು ಶಿಕ್ಷಕರಂತೂ ಗಾಳಿ-ಮಳೆಯ ಮಧ್ಯೆಯೂ ಶಿಥಿಲ ಕಟ್ಟಡದಲ್ಲೇ ಕುಳಿತು ಪಾಠ ಕೇಳಬೇಕಾದ
ಅನಿವಾರ್ಯತೆಗೆ ಸಿಲುಕಿದ್ದಾರೆ.

ಶಿಕ್ಷಕರ ಕೊರತೆಯಿಲ್ಲ, ಉತ್ತಮ ಫ‌ಲಿತಾಂಶ : ಮೌಲಾನಾ ಆಜಾದ್‌ ಆಂಗ್ಲ ಮಾಧ್ಯಮ ಶಾಲೆಯಲ್ಲಿ 6 ರಿಂದ 10ನೇ ತರಗತಿವರೆಗೆ ಸಂಪೂರ್ಣ ಉಚಿತ ಶಿಕ್ಷಣವಿದೆ. 2022-23ರಲ್ಲಿ 23 ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದಿದ್ದು ಶೇ. 81ರಷ್ಟು ಫಲಿತಾಂಶ, 2023-24ರಲ್ಲಿ 6ರಲ್ಲಿ ಆರೂ ವಿದ್ಯಾರ್ಥಿಗಳು ಉತ್ತೀ ರ್ಣರಾಗಿದ್ದಾರೆ. ಸರಕಾರ ನೇಮಿಸಿದ 6 ಮಂದಿ
ಗೌರವ ಶಿಕ್ಷಕರೊಂದಿಗೆ ಓರ್ವ ಮುಖ್ಯ ಶಿಕ್ಷಕರು ಇಲ್ಲಿದ್ದಾರೆ. ಪೂರ್ಣಕಾಲಿಕ ಶಿಕ್ಷಕರ ನೇಮಕಾತಿ ನಿರೀಕ್ಷಿಸಲಾಗುತ್ತಿದೆ. ಶಿಥಿಲ ಕಟ್ಟಡದಿಂದ ಹೊಸ ಕಟ್ಟಡಕ್ಕೆ ಸ್ಥಳಾಂತರವಾದರೆ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಬಹುದು ಎನ್ನುತ್ತಾರೆ ಶಿಕ್ಷಕರು.

ಜಾಗ ಮಂಜೂರಾಗಿದೆ, ಕಟ್ಟಡ ರಚನೆ ವಿಳಂಬ: ಮಲ್ಲಾರು ಶಾಲೆಗೆ ಬೆಳಪುವಿನಲ್ಲಿ ಈಗಾಗಲೇ ಒಂದು ಎಕರೆ ಜಮೀನು ಮಂಜೂರಾಗಿದ್ದು ಆರ್‌ಟಿಸಿ ಶಾಲೆಯ ಹೆಸರಿಗೆ ವರ್ಗಾವಣೆಗೊಂಡಿದೆ. ಕಟ್ಟಡ ನಿರ್ಮಾಣಕ್ಕೆ ಅಂದಾಜು ಪಟ್ಟಿ ಸಲ್ಲಿಸಲಾಗಿದೆ. ಆದರೆ ಅದಕ್ಕೆ ಬೇಕಾದ ಅನುದಾನ, ಮಂಜೂರಾತಿ ಇನ್ನೂ ಸಿಕ್ಕಿಲ್ಲ.  ಹಾಗಾಗಿ ಕಟ್ಟಡ ರಚನೆ ವಿಳಂಬವಾಗುತ್ತಿದೆ.

ಸಮಸ್ಯೆಗಳು ಹತ್ತಾರು
*ಕಿಟಕಿಗೆ ಬಾಗಿಲುಗಳಿಲ್ಲದೆ ಮಳೆ ನೀರು ತರಗತಿಯೊಳಗೆ ಬರುತ್ತಿದೆ. ಹೆಂಚುಗಳು ಒಡೆದು ನೀರು ಸೋರುತ್ತಿದೆ.
*ಜೋರು ಮಳೆ ಬಂದಾಗ ಅರ್ಧ ಕೊಠಡಿಯಷ್ಟೇ ವಿದ್ಯಾರ್ಥಿಗಳ ಬಳಕೆಗೆ ಸಿಗುತ್ತದೆ.
*ಮಳೆ ಬಂದಾಗ ವಿದ್ಯಾರ್ಥಿಗಳು ಡೆಸ್ಕ್ ಬೆಂಚ್‌ಗಳನ್ನು ಸರಿಸಿ ಪುಸ್ತಕ ಬ್ಯಾಗ್‌ ರಕ್ಷಿಸಿಕೊಳ್ಳಬೇಕು.
*ಕಿಟಕಿ ಬಾಗಿಲುಗಳಿಲ್ಲದೆ ಪುಸ್ತಕ, ಗ್ರಂಥಾಲಯ ಸಹಿತ ವಿವಿಧ ವಸ್ತುಗಳು ಒದ್ದೆಯಾಗುತ್ತಿವೆ.
*ಕಾಂಕ್ರೀಟ್‌ ಮೇಲ್ಛಾವಣಿಯ ಕಚೇರಿ ಕೊಠಡಿಯೂ ಸೋರುತ್ತಿದ್ದು ಬಕೆಟ್‌ ಇಟ್ಟು ಕೊಳ್ಳಬೇಕಾದ ಅನಿವಾರ್ಯತೆ!

ಶೀಘ್ರವೇ ದುರಸ್ತಿ ಕಾರ್ಯ
ಶಾಲಾ ಕಟ್ಟಡಗಳಿಗೆ ಕಿಡಿಗೇಡಿಗಳ ಹಾವಳಿ ಜೋರಾಗಿದೆ. ಪ್ರತೀ ವರ್ಷ ಇಲಾಖೆಯಿಂದ ದುರಸ್ತಿಗೊಳಿಸಬೇಕಾಗಿದೆ. ಮಳೆಯಿಂದ ಮಕ್ಕಳಿಗೆ ಆಗುತ್ತಿರುವ ತೊಂದರೆಗಳನ್ನು ಪರಿಶೀಲಿಸಲಾಗಿದ್ದು, ಅವಶ್ಯ ದುರಸ್ತಿ ಕೆಲಸಗಳನ್ನು ಎರಡು ದಿನದಲ್ಲಿ ನಡೆಸಲಾಗುವುದು.
-ಪೂರ್ಣಿಮಾ ಬಿ. ಚೂರಿ,
ಜಿಲ್ಲಾ ಅಧಿಕಾರಿ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಉಡುಪಿ

ಈ ವರ್ಷದಲ್ಲಿ ಕಟ್ಟಡ ನಿರ್ಮಾಣ ಸಾಧ್ಯತೆ
ಶಾಲೆಯ ಸೊತ್ತುಗಳಿಗೆ ಕಿಡಿಗೇಡಿಗಳಿಂದ ಆಗುತ್ತಿರುವ ತೊಂದರೆಯ ಬಗ್ಗೆ ದೂರುಗಳು ಬಂದಿವೆ. ಪರಿಶೀಲನೆಯನ್ನೂ ನಡೆಸಲಾಗಿದೆ. ಈ ಬಗ್ಗೆ ಸ್ಥಳೀಯರು, ಎಸ್‌ಡಿಎಂಸಿ, ಹಳೆ ವಿದ್ಯಾರ್ಥಿಗಳನ್ನೊಳಗೊಂಡ ಸಮಿತಿ ರಚಿಸಿ, ರಜಾದಿನಗಳಲ್ಲಿ ಎಚ್ಚರಿಕೆ ವಹಿಸಲು ಸೂಚಿಸ ಲಾಗಿದೆ. ಪೊಲೀಸ್‌ ಇಲಾಖೆ ಗಮನಕ್ಕೂ ತರ ಲಾಗಿದೆ. ಈ ವರ್ಷದಲ್ಲಿ ಕಟ್ಟಡ ನಿರ್ಮಿಸಿ ಕೊಡುವ ಭರವಸೆ ದೊರಕಿದೆ.
*ಗುರ್ಮೆ ಸುರೇಶ್‌ ಶೆಟ್ಟಿ, ಶಾಸಕರು, ಕಾಪು

*ರಾಕೇಶ್‌ ಕುಂಜೂರು

ಟಾಪ್ ನ್ಯೂಸ್

ವೈದ್ಯೆಯ ಮೇಲೆ ಅತ್ಯಾ*ಚಾರ ಎಸಗಿ ಕೊಂದಿದ್ದು ಸಂಜಯ್‌ ರಾಯ್:‌ ಸಿಬಿಐ ಚಾರ್ಜ್‌ ಶೀಟ್‌ ಸಲ್ಲಿಕೆ

ವೈದ್ಯೆಯ ಮೇಲೆ ಅತ್ಯಾ*ಚಾರ ಎಸಗಿ ಕೊಂದಿದ್ದು ಸಂಜಯ್‌ ರಾಯ್:‌ ಸಿಬಿಐ ಚಾರ್ಜ್‌ ಶೀಟ್‌ ಸಲ್ಲಿಕೆ

Mangaluru CCB team seized huge quantity of drugs; Siberian citizen arrested

Mangaluru: ಬೃಹತ್‌ ಪ್ರಮಾಣದ ಡ್ರಗ್ಸ್‌ ವಶಪಡಿಸಿಕೊಂಡ ಸಿಸಿಬಿ ತಂಡ; ನೈಜಿರಿಯಾ ಪ್ರಜೆ ಬಂಧನ

zameer ahmed khan

Vijayapura: ಸಿದ್ದರಾಮಯ್ಯ ಜತೆ ಕಾಂಗ್ರೆಸ್ ಹೈಕಮಾಂಡ್ ಇದೆ, ವಿಜಯೇಂದ್ರ ಯಾರು?: ಸಚಿವ ಜಮೀರ್

Coal Mine: ಕಲ್ಲಿದ್ದಲು ಗಣಿಯಲ್ಲಿ ಭೀಕರ ಸ್ಫೋಟ.. 7 ಮಂದಿ ಮೃತ್ಯು, ಹಲವು ಕಾರ್ಮಿಕರಿಗೆ ಗಾಯ

Coal Mine: ಕಲ್ಲಿದ್ದಲು ಗಣಿಯಲ್ಲಿ ಭೀಕರ ಸ್ಫೋಟ.. 7 ಮಂದಿ ಮೃತ್ಯು, ಹಲವು ಕಾರ್ಮಿಕರಿಗೆ ಗಾಯ

BY Vijayendra’s contribution is to talk lightly about those who worked for the party says KS Eshwarappa

Hubli: ವಿಜಯೇಂದ್ರ ಎಳಸು, ನನ್ನ ಬಗ್ಗೆ ಏನು ಮಾತನಾಡುತ್ತಾರೆ..: ಕೆ.ಎಸ್.ಈಶ್ವರಪ್ಪ ವಾಗ್ದಾಳಿ

v

Kinnigoli: ಕಾರಿಗೆ ಆಕಸ್ಮಿಕ ಬೆಂಕಿ; ಸ್ಥಳೀಯರ ಸಹಾಯದಿಂದ ಪಾರಾದ ತಾಯಿ ಮಕ್ಕಳು

BBT8: ವಿವಾದಾತ್ಮಕ ನಿರ್ಮಾಪಕ ಟು ಖ್ಯಾತ ನಟಿ.. ಇವರೇ ನೋಡಿ ಬಿಗ್‌ಬಾಸ್‌ ತಮಿಳು ಸ್ಪರ್ಧಿಗಳು

BBT8: ವಿವಾದಾತ್ಮಕ ನಿರ್ಮಾಪಕ ಟು ಖ್ಯಾತ ನಟಿ.. ಇವರೇ ನೋಡಿ ಬಿಗ್‌ಬಾಸ್‌ ತಮಿಳು ಸ್ಪರ್ಧಿಗಳು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kapu Pili Parba – Season 2 Competition on 11th

Kaup: ಅ.11ರಂದು ಕಾಪು ಪಿಲಿ ಪರ್ಬ- ಸೀಸನ್ 2 ಹುಲಿವೇಷ ಕುಣಿತ ಸ್ಪರ್ಧೆ

Hebri: ಮುದ್ರಾಡಿ ಬಲ್ಲಾಡಿ ವರುಣನ ಅಬ್ಬರಕ್ಕೆ ಕೊಚ್ಚಿ ಹೋದ ವೃದ್ಧೆಯ ಮೃತದೇಹ ಪತ್ತೆ

Hebri: ಮುದ್ರಾಡಿ ಬಲ್ಲಾಡಿ ವರುಣನ ಅಬ್ಬರಕ್ಕೆ ಕೊಚ್ಚಿ ಹೋದ ವೃದ್ಧೆಯ ಮೃತದೇಹ ಪತ್ತೆ

dw

Padubidri: ರಸ್ತೆ ಅಪಘಾತ; ಗಾಯಾಳು ಸಾವು

13

Malpe: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ

10

Panaji: ಮಲ್ಪೆಯ ಎರಡು ಮೀನುಗಾರಿಕಾ ಬೋಟ್‌ಗಳನ್ನು ವಶಪಡಿಸಿಕೊಂಡ ಗೋವಾ ಸರಕಾರ!

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

ವೈದ್ಯೆಯ ಮೇಲೆ ಅತ್ಯಾ*ಚಾರ ಎಸಗಿ ಕೊಂದಿದ್ದು ಸಂಜಯ್‌ ರಾಯ್:‌ ಸಿಬಿಐ ಚಾರ್ಜ್‌ ಶೀಟ್‌ ಸಲ್ಲಿಕೆ

ವೈದ್ಯೆಯ ಮೇಲೆ ಅತ್ಯಾ*ಚಾರ ಎಸಗಿ ಕೊಂದಿದ್ದು ಸಂಜಯ್‌ ರಾಯ್:‌ ಸಿಬಿಐ ಚಾರ್ಜ್‌ ಶೀಟ್‌ ಸಲ್ಲಿಕೆ

Mangaluru CCB team seized huge quantity of drugs; Siberian citizen arrested

Mangaluru: ಬೃಹತ್‌ ಪ್ರಮಾಣದ ಡ್ರಗ್ಸ್‌ ವಶಪಡಿಸಿಕೊಂಡ ಸಿಸಿಬಿ ತಂಡ; ನೈಜಿರಿಯಾ ಪ್ರಜೆ ಬಂಧನ

6(1)

Karkala: ಮಕ್ಕಳ ಕೈಯ್ಯಲ್ಲಿ ಹೂವಿನಕೋಲು!; ನವರಾತ್ರಿ ವಿಶೇಷ ಆಚರಣೆ ಮುಂದುವರಿಸುವ ಮಕ್ಕಳು

zameer ahmed khan

Vijayapura: ಸಿದ್ದರಾಮಯ್ಯ ಜತೆ ಕಾಂಗ್ರೆಸ್ ಹೈಕಮಾಂಡ್ ಇದೆ, ವಿಜಯೇಂದ್ರ ಯಾರು?: ಸಚಿವ ಜಮೀರ್

5(1)

Kuppepadav: ಅಶಕ್ತರ ನೆರವಿಗೆ ವೇಷ ಹಾಕಿದ ಯುವಕರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.