Kaup: ಬೆಳಪು ಸ್ನಾತಕೋತ್ತರ ಅಧ್ಯಯನ ಕೇಂದ್ರಕ್ಕೆ ಗ್ರಹಣ; ಇನ್ನೂ ಪೂರ್ಣಗೊಂಡಿಲ್ಲ ಕಾಮಗಾರಿ!

ಶಿಲಾನ್ಯಾಸಗೊಂಡು 9 ವರ್ಷ,  ನಿರ್ಮಾಣ ಆರಂಭಗೊಂಡು 6 ವರ್ಷ

Team Udayavani, Aug 19, 2024, 7:14 PM IST

20

ಕಾಪು: ರಾಜ್ಯ ಸರಕಾರದಿಂದ ಮಂಜೂರುಗೊಂಡು ಮಂಗಳೂರು ವಿಶ್ವ ವಿದ್ಯಾನಿಲಯದ ಮೂಲಕವಾಗಿ ಅನುಷ್ಠಾನ ಗೊಳ್ಳುತ್ತಿರುವ ಬೆಳಪುವಿನ ಅತ್ಯಾಧುನಿಕ ವಿಜ್ಞಾನ ಸಂಶೋಧನಾ ಕೇಂದ್ರ ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ನಿರ್ಮಾಣ ಕಾಮಗಾರಿಗೆ ಮುಕ್ತಾಯ ಹಂತದಲ್ಲಿರುವಾಗ ಗ್ರಹಣ ಬಡಿದಂತಾಗಿದೆ. 9 ವರ್ಷದ ಹಿಂದೆ ಚಾಲನೆ ದೊರಕಿದ್ದ ಯೋಜನೆಯ ಪ್ರಥಮ ಹಂತದ ಕಾಮಗಾರಿಯು ಶೇ. 80ರಷ್ಟು ಪೂರ್ಣಗೊಂಡಿದೆ. ಉಳಿದ ಕಾಮಗಾರಿಗೆ ಸಮರ್ಪಕ ಅನುದಾನದ ಕೊರತೆ, ತರಗತಿ ಪ್ರಾರಂಭಕ್ಕೆ ಬೇಕಾದ ವ್ಯವಸ್ಥೆಗಳ ಜೋಡಣೆಯಲ್ಲಿ ವಿಳಂಬವಾಗುತ್ತಿದೆ. ಈ ಮೂಲಕ ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಉನ್ನತ ಶಿಕ್ಷಣದ ಕನಸಿಗೆ ಕೊಳ್ಳಿ ಬಿದ್ದಿದೆ.

141 ಕೋ. ರೂ. ವೆಚ್ಚದ ಬೃಹತ್‌ ಯೋಜನೆ
ಮಂಗಳೂರು ವಿ.ವಿ. ಸಂಯೋಜಿತ ಅತ್ಯಾಧುನಿಕ ವಿಜ್ಞಾನ ಸಂಶೋಧನಾ ಕೇಂದ್ರ ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ಸ್ಥಾಪನೆಗೆ ಸೆನೆಟ್‌ ಸಮಿತಿಯು ಮಂಜೂರಾತಿ ನೀಡಿತ್ತು.  ಬೆಳಪು ಗ್ರಾ.ಪಂ. ಈ ಹಿಂದೆ ಕೊಜೆಂಟ್ರಿಕ್ಸ್‌ ಯೋಜನೆಯ ಪುನರ್‌ ವಸತಿ ಕಾಲನಿಗೆ ನೀಡಿ, ಬಳಿಕ ಕಾನೂನು ಸಮರ ನಡೆಸಿ ಮರಳಿ ತನ್ನ ತೆಕ್ಕೆಗೆ ಪಡೆದು ಕೊಂಡಿದ್ದ 68 ಎಕ್ರೆ ಸರಕಾರಿ ಜಾಗದಲ್ಲಿ 24.26 ಎಕ್ರೆ ಭೂಮಿಯನ್ನು ಕೇಂದ್ರಕ್ಕೆ ಮೀಸಲಿಟ್ಟಿತ್ತು. ಅದನ್ನು ಕೆಎಐಡಿಬಿ ಮೂಲಕವಾಗಿ ಮಂಗಳೂರು ವಿವಿಗೆ ಒಪ್ಪಿಸಿತ್ತು. 141 ಕೋ. ರೂ. ವೆಚ್ಚದ ಯೋಜನೆಗೆ ಚಾಲನೆ ನೀಡಲಾಗಿತ್ತು.

ಈ ಅಧ್ಯಯನ ಕೇಂದ್ರಕ್ಕೆ 2013ರಲ್ಲಿ ರಾಜ್ಯ ಸರಕಾರ ಮಂಜೂರಾತಿ ನೀಡಿದ್ದು 2015ರ ಮೇ 4ರಂದು ಅಂದಿನ ಮುಖ್ಯಮಂತ್ರಿಯಾಗಿದ್ದ ಎಸ್‌. ಸಿದ್ಧರಾಮಯ್ಯ ಅವರೇ ಸ್ವತಃ ಬೆಳಪುವಿಗೆ ಬಂದು ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಿದ್ದರು.   ಕರ್ನಾಟಕ ಗೃಹ ಮಂಡಳಿಯ ಉಸ್ತುವಾರಿಯಲ್ಲಿ ದೇವಿಪ್ರಸಾದ್‌ ಕನ್‌ಸ್ಟ್ರಕ್ಷನ್ಸ್‌ ಪ್ರೈ. ಲಿ. ಕಂಪೆನಿಗೆ ಕಾಮಗಾರಿಯ ಗುತ್ತಿಗೆ ವಹಿಸಿ ಕೊಡಲಾಗಿತ್ತು. ಆದರೆ, ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಇದೀಗ ವಿವಿಯೇ ಹಣಕಾಸು ಬಿಕ್ಕಟ್ಟಿನಲ್ಲಿರುವುದರಿಂದ ಸಮಸ್ಯೆ ಇನ್ನಷ್ಟು ಬಿಗಡಾಯಿಸಿದೆ.

ಏನೇನು ಕಟ್ಟಡಗಳಿವೆ?
ಬೆಳಪು ಅತ್ಯಾಧುನಿಕ ವಿಜ್ಞಾನ ಸಂಶೋಧನಾ ಕೇಂದ್ರದಲ್ಲಿ ಆಡಳಿತ ಸೌಧ, ಅತಿಥಿಗೃಹ, ಅಧಿಕಾರಿಗಳ ವಸತಿ ಗೃಹ, ಬೋಧಕೇತರ ಸಿಬಂದಿಗಳ ವಸತಿಗೃಹ, ವಿಜ್ಞಾನ ಸಂಕೀರ್ಣ ಕಟ್ಟಡ, ಸಂಶೋಧನಾ ಕೇಂದ್ರ ಕಟ್ಟಡ, ನಿರ್ದೇಶಕರ ಕೊಠಡಿ, ಉಪಾಹಾರ ಗೃಹ, ಅಟೆಂಡರ್ ಬ್ಲಾಕ್‌ ಸಹಿತ 13 ಕಟ್ಟಡಗಳು ನಿರ್ಮಾಣಗೊಳ್ಳಲಿವೆ.

ಪ್ರಥಮ ಹಂತದಲ್ಲಿ ಆಡಳಿತ ಸೌಧ (9.15 ಕೋ.), ಅತಿಥಿ ಗೃಹ (4.78 ಕೋ.), ವಸತಿ ಗೃಹ (5.04 ಕೋ.), ಬೋಧ‌ಕೇತರ ಸಿಬಂದಿಗಳ ವಸತಿಗೃಹ (2.29 ಕೋ.), ಸೈಯನ್ಸ್‌ ಬ್ಲಾಕ್‌ (6.62 ಕೋ.), ಸಂಶೋಧನಾ ಕೇಂದ್ರ ಕಟ್ಟಡ (7.78 ಕೋ.), ನಿರ್ದೇಶಕರ ಬಂಗಲೆ (2.14 ಕೋ.), ಅಟೆಂಡರ್ ವಸತಿ ಗೃಹ (2.25 ಕೋ.), ರಸ್ತೆ, ಚರಂಡಿ, ನೀರಿನ ಟ್ಯಾಂಕ್‌, ಯುಜಿಡಿ ಸಹಿತ ಮೂಲ ಸೌಕರ್ಯಗಳ ಜೋಡಣೆ (4.85 ಕೋ.) ಸೇರಿದಂತೆ 44.92 ಕೋ. ರೂ. ವೆಚ್ಚದಲ್ಲಿ 9 ಕಾಮಗಾರಿಗಳನ್ನು ನಡೆಸಲು ಮಂಜೂರಾತಿ ನೀಡಲಾಗಿದೆ.

ತನಿಖೆಯಾಗಲಿ
ಅಧ್ಯಯನ ಕೇಂದ್ರ ನಿರ್ಮಾಣ ವಿಳಂಬದಿಂದ  ಗ್ರಾಮಸ್ಥರಿಗೆ ಮತ್ತು ಉನ್ನತ ಶಿಕ್ಷಣದ ಕನಸನ್ನು ಕಾಣುತ್ತಿರುವ ಬಡ ವಿದ್ಯಾರ್ಥಿಗಳಿಗೆ ತೀವ್ರ ನಿರಾಸೆಯಾಗಿದೆ. ಇದೀಗ ಸಿದ್ಧರಾಮಯ್ಯನವರೇ ಮುಖ್ಯಮಂತ್ರಿ ಯಾಗಿರುವುದರಿಂದ ಅವರೇ ಅನುದಾನ ಬಿಡುಗಡೆಗೊಳಿಸಿ, ಉದ್ಘಾಟಿಸುವಂತಾಗಲಿ. ಅನುದಾನ ಒಂದು ಪಾಲನ್ನು ವಿವಿ ಬೇರೆ ಕೆಲಸಕ್ಕೆ ವಿನಯೋಗಿಸಿರುವ ಆರೋಪದ ಬಗ್ಗೆ ತನಿಖೆಯಾಗಲಿ.
-ಡಾ| ದೇವಿಪ್ರಸಾದ್‌ ಶೆಟ್ಟಿ, ಅಧ್ಯಕ್ಷರು, ಬೆಳಪು ಗ್ರಾ.ಪಂ.

ವಿ.ವಿ.ಗೆ ಮನವಿ
ಸರಕಾರ ಬಿಡುಗಡೆಗೊಳಿಸಿದ ಪೂರ್ಣ ಹಣವನ್ನು ಬಿಡುಗಡೆಗೊಳಿಸುವಂತೆ ಮಂಗಳೂರು ವಿ.ವಿ.ಗೆ ಮನವಿ ಮಾಡಲಾಗಿದೆ. ಕೊರೊನಾ, ಅವಶ್ಯಕತೆಗೆ ತಕ್ಕಂತೆ ಸಿಗದ ಕಟ್ಟಡ ನಿರ್ಮಾಣ ಸಾಮಗ್ರಿಗಳು, ಅನುದಾನ ಅಲಭ್ಯತೆಯಿಂದಾಗಿ ಕಾಮಗಾರಿ ವಿಳಂಬವಾಗಿದೆ. ಅನುದಾನದ ಲಭ್ಯತೆಯನ್ನು ನೋಡಿಕೊಂಡು, ಹಂತ ಹಂತವಾಗಿ ಒಂದೊಂದೇ ಕಾಮಗಾರಿಯನ್ನು ಪೂರ್ಣಗೊಳಿಸಿ ಹಸ್ತಾಂತರಿಸಲಾಗುವುದು.
-ಅಧಿಕಾರಿಗಳು, ಕರ್ನಾಟಕ ಗೃಹ ಮಂಡಳಿ

ಉತ್ತರ ಸಿಕ್ಕಿಲ್ಲ
ಕಾಮಗಾರಿ ವಿಳಂಬದ ಬಗ್ಗೆ ಉನ್ನತ ಶಿಕ್ಷಣ ಸಚಿವರ ಗಮನಕ್ಕೆ ತರಲಾಗಿದೆ. ಅಧಿವೇಶನದಲ್ಲಿ ಪ್ರಶ್ನೆಯನ್ನೂ ನೀಡಲಾಗಿದೆ. ಆದರೆ ಅಧಿವೇಶನ ಒಂದು ದಿನ ಮುಂಚಿತವಾಗಿ ಮುಗಿದಿದ್ದು ಉತ್ತರ ಸಿಕ್ಕಿಲ್ಲ. ಆದರೆ ಈ ವಿಚಾರವನ್ನು ಸರಕಾರದ ಗಮನಕ್ಕೆ ತಂದು, ಸೂಕ್ತ ಅನುದಾನ ನೀಡುವಂತೆ ಒತ್ತಡ ಹೇರಲಾಗುವುದು.
-ಗುರ್ಮೆ ಸುರೇಶ್‌ ಶೆಟ್ಟಿ, ಶಾಸಕರು, ಕಾಪು

ಈಗ ಏನೇನು ಕೆಲಸ ಬಾಕಿ?
ಪ್ರಥಮ ಹಂತದ ಯೋಜನೆಯ ನಿರ್ಮಾಣ ಹಂತದ ಕಾಮಗಾರಿ ಪೂರ್ಣಗೊಂಡಿವೆ. ಕಟ್ಟಡಗಳಿಗೆ ಒಳಗಿನ ಕಿಟಿಕಿ ಬಾಗಿಲುಗಳ ಜೋಡಣೆ, ಬಾಗಿಲುಗಳ ಜೋಡಣೆ ಕೆಲಸ ಪ್ರಗತಿಯಲ್ಲಿದೆ. ಆರ್‌ಸಿಸಿ ಡ್ರೈನ್‌ ಕೆಲಸ ಶೇ. 70ರಷ್ಟು ಪೂರ್ಣಗೊಂಡಿದೆ. ಎಂಟು ಬ್ಲಾಕ್‌ಗಳಲ್ಲಿನ ವಯರಿಂಗ್‌ ಸಹಿತ ವಿದ್ಯುತ್‌ ಜೋಡಣೆ, ಪ್ಲಂಬಿಂಗ್‌, ಪೈಂಟಿಂಗ್‌, ಎಸ್‌ಟಿಪಿ ಪ್ಲಾಂಟ್‌, ಕಂಪೌಂಡ್‌ ಹಾಲ್‌ ನಿರ್ಮಾಣ ಸಹಿತ ಕೆಲವು ಕೆಲಸಗಳಷ್ಟೇ ಬಾಕಿಯುಳಿದಿವೆ.

ಕಾಮಗಾರಿ ವಿಳಂಬಕ್ಕೆ ಕಾರಣಗಳೇನು?
ರಾಜ್ಯ ಸರಕಾರ 38.30 ಕೋ. ರೂ. ಅನುದಾನ ಮಂಜೂರು ಮಾಡಿದೆ. ಅದರಲ್ಲಿ 30.50 ಕೋ. ರೂ. ಹಣವನ್ನು ಮಂಗಳೂರು ವಿವಿ ಕಾಮಗಾರಿಯ ನಿರ್ವಹಣೆ ವಹಿಸಿಕೊಂಡಿರುವ ಕೆಎಚ್‌ಬಿ ಮೂಲಕ  ಗುತ್ತಿಗೆದಾರರಿಗೆ ಪಾವತಿಸಲಾಗಿದೆ. ಉಳಿದ ಹಣವನ್ನು  ಮಂಗಳೂರು ವಿವಿ ಇತರ ಯೋಜನೆಗಳಿಗೆ ಬಳಸಿಕೊಂಡಿರುವ  ಆರೋಪಗಳಿವೆ.

– ರಾಕೇಶ್‌ ಕುಂಜೂರು

ಟಾಪ್ ನ್ಯೂಸ್

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

Modi (2)

PM ಮೋದಿ ಅಮೆರಿಕ ಪ್ರವಾಸ; ಮಣಿಪುರಕ್ಕೆ ಹೋಗುವುದಿಲ್ಲವೇಕೆ?:ಕಾಂಗ್ರೆಸ್ ಪ್ರಶ್ನೆ

High Court: ಮಹಿಳೆ ಅಪಹರಣ ಕೇಸ್‌; ರೇವಣ್ಣ ಅರ್ಜಿ ವಿಚಾರಣೆ ಮುಂದಕ್ಕೆ

High Court: ಮಹಿಳೆ ಅಪಹರಣ ಕೇಸ್‌; ಎಚ್‌.ಡಿ.ರೇವಣ್ಣ ಅರ್ಜಿ ವಿಚಾರಣೆ ಮುಂದಕ್ಕೆ

11

Eshwara Khandre: ಮಹದಾಯಿಗೆ ಅನುಮತಿ ಸಿಗೋವರೆಗೂ ಮರ ಕಡಿಯಲು ಬಿಡಲ್ಲ

H.D.Kumaraswamy

H. D. Kumaraswamy: ರಾಜಕೀಯ ಮಾಡಲು, ಬೆಂಕಿ ಹಚ್ಚಲು ಬಂದಿಲ್ಲ

1-frr

BJP ಶಾಸಕ ಮುನಿರತ್ನಗೆ ಷರತ್ತುಬದ್ಧ ಜಾಮೀನು; ಆದರೂ ತಪ್ಪಿಲ್ಲ ಸಂಕಷ್ಟ!

HP ಯಿಂದ ಹೊಸ ಪ್ರಿಂಟರ್‌ಗಳ ಬಿಡುಗಡೆ

HP ಯಿಂದ ಹೊಸ ಪ್ರಿಂಟರ್‌ಗಳ ಬಿಡುಗಡೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udayavani.com “ನಮ್ಮನೆ ಕೃಷ್ಣ”: ಮೆಚ್ಚುಗೆ ಗಳಿಸಿದ 3ನೇ ರೀಲ್ಸ್ ಪ್ರಸಾರ

Udayavani.com “ನಮ್ಮನೆ ಕೃಷ್ಣ”: ತೃತೀಯ ಬಹುಮಾನ ಗಳಿಸಿದ ರೀಲ್ಸ್

ಮುನಿಯಾಲ್‌ ಇನ್ಸ್ಟಿಟ್ಯೂಟ್‌ ಆಫ್ ಆಯುರ್ವೇದ ಮೆಡಿಕಲ್‌ ಕಾಲೇಜು

Sep.20: ಮುನಿಯಾಲ್‌ ಇನ್ಸ್ಟಿಟ್ಯೂಟ್‌ ಆಫ್ ಆಯುರ್ವೇದ ಮೆಡಿಕಲ್‌ ಕಾಲೇಜು ಘಟಿಕೋತ್ಸವ

Udupi: ಯುಜಿಡಿ ಚೇಂಬರ್‌ ಅವ್ಯವಸ್ಥೆಗಿಲ್ಲ ಪರಿಹಾರ

Udupi: ಯುಜಿಡಿ ಚೇಂಬರ್‌ ಅವ್ಯವಸ್ಥೆಗಿಲ್ಲ ಪರಿಹಾರ

ಮಲ್ಪೆ ಸೈಂಟ್‌ಮೇರೀಸ್‌ ದ್ವೀಪದಲ್ಲಿ ಸ್ವತ್ಛತೆ

Malpe ಸೈಂಟ್‌ಮೇರೀಸ್‌ ದ್ವೀಪದಲ್ಲಿ ಸ್ವಚ್ಛತೆ

Udupi: ಜಿಲ್ಲಾ ಕ್ರೀಡಾಂಗಣದ ಸಿಂಥೆಟಿಕ್‌ ಟ್ರ್ಯಾಕ್‌ಗೆ ಹಾನಿ

Udupi: ಜಿಲ್ಲಾ ಕ್ರೀಡಾಂಗಣದ ಸಿಂಥೆಟಿಕ್‌ ಟ್ರ್ಯಾಕ್‌ಗೆ ಹಾನಿ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

POCSO ಪ್ರಕರಣ : ಜ್ಯೋತಿಷಿ ನರಸಿಂಹ ಪ್ರಸಾದ್‌ ಪಾಂಗಣ್ಣಾಯ ಬಂಧನ

POCSO ಪ್ರಕರಣ : ಜ್ಯೋತಿಷಿ ನರಸಿಂಹ ಪ್ರಸಾದ್‌ ಪಾಂಗಣ್ಣಾಯ ಬಂಧನ

Kundapura: ಪ್ರಾಣಿ ತ್ಯಾಜ್ಯ ಚೀಲದಲ್ಲಿ ಪತ್ತೆ… ಕೇಸು ದಾಖಲು

Kundapura: ಪ್ರಾಣಿ ತ್ಯಾಜ್ಯ ಚೀಲದಲ್ಲಿ ಪತ್ತೆ… ಕೇಸು ದಾಖಲು

1-baa

Mangalore Port ಇಬ್ಬರು ಬಾಲಕಾರ್ಮಿಕರ ರಕ್ಷಣೆ

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

12

High Court: ಬಿಎಸ್‌ವೈ ಪೋಕ್ಸೋ ಕೇಸ್‌: ಸೆ.27ಕ್ಕೆ ವಿಚಾರಣೆ ಮುಂದಕ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.