Udayavani Interview: ಇಂದಿನಿಂದಲೇ ಸಮರ್ಪಣ ಭಾವದಿಂದ ಕೆಲಸ ಮಾಡುವೆ: ಕೋಟ


Team Udayavani, Jun 5, 2024, 6:59 AM IST

kota srinivas poojary

ಇಡೀ ಕ್ಷೇತ್ರ ಭಿನ್ನವಾಗಿದೆ. ಅಡಕೆ, ಕಾಫಿ ಬೆಳೆಗಾರರ ಸಮಸ್ಯೆ ಮತ್ತು ಮೀನುಗಾರಿಕೆಯಲ್ಲಿ ಎದುರಾಗಿರುವ ಸಮಸ್ಯೆಗಳನ್ನು ಅರ್ಥ ಮಾಡಿಕೊಂಡು, ಕೇಂದ್ರ ಸರಕಾರದ ಯೋಜನೆಗಳನ್ನು ಸಮರ್ಪಕವಾಗಿ ಬಳಸಿ ಮುಂದಿನ 5 ವರ್ಷಗಳಲ್ಲಿ ಸಮಸ್ಯೆಗೆ ಪರಿಹಾರ ಒದಗಿಸಲು ಪ್ರಯತ್ನಿಸುವೆ.  ಸಮರ್ಪಣ ಭಾವದೊಂದಿಗೆ ತತ್‌ಕ್ಷಣದಿಂದಲೇ ಜನ ಸೇವೆಗೆ ತೊಡಗುವೆ.

ಇಷ್ಟು ದೊಡ್ಡ ಅಂತರದ ಗೆಲುವಿನ ನಿರೀಕ್ಷೆ ಇತ್ತೇ?

– ಗೆಲ್ಲುತ್ತೇನೆ ಎಂಬ ಸ್ಪಷ್ಟ ವಿಶ್ವಾಸ ಇತ್ತು. ಅಂತರದ ನಿರೀಕ್ಷೆ ಇರಲಿಲ್ಲ. ನಿರೀಕ್ಷೆಗೂ ಮೀರಿ ಗೆಲವು ಸಾಧ್ಯವಾಗಿದ್ದರೆ ಅದು ಬಿಜೆಪಿ-ಜೆಡಿಎಸ್‌ ಕಾರ್ಯಕರ್ತರು, ಮುಖಂಡರ ಸಮನ್ವಯ ಕಾರಣ. ಎಚ್‌. ಡಿ. ದೇವೇಗೌಡರು, ಬಿ.ಎಸ್‌. ಯಡಿ ಯೂರಪ್ಪ, ಎಚ್‌.ಡಿ. ಕುಮಾರಸ್ವಾಮಿ, ಬಿ.ವೈ. ವಿಜಯೇಂದ್ರ ಹೀಗೆ ಗೆಲುವಿನಲ್ಲಿ ಎಲ್ಲರ ಶ್ರಮವಿದೆ.

ಗ್ರಾ.ಪಂ.ನಿಂದ ಸಂಸತ್‌ವರೆಗಿನ ಪಯಣ ಹೇಗನ್ನಿಸುತ್ತಿದೆ?

ನನ್ನಂತ ಸಾಮಾನ್ಯ ಕಾರ್ಯ ಕರ್ತನನ್ನು ಪಂಚಾಯತ್‌ ಸದಸ್ಯನನ್ನಾಗಿ ಮಾಡಿ, ಅಲ್ಲಿಂದ ಸಂಸತ್‌ ಭವನ ಪ್ರವೇ ಶಿಸುವಂತೆಯೂ ಮಾಡಿದ್ದು ಪಕ್ಷ. ಹೀಗಾಗಿ ಪಕ್ಷಕ್ಕೆ  ಸದಾ ಋಣಿ. ಇದು ದೊಡ್ಡ ಚುನಾವಣೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಮರ್ಥ ನಾಯಕತ್ವ, ಕೇಂದ್ರ ಸರಕಾರದ ವಿವಿಧ ಯೋಜನೆಗಳು, ಮೋದಿಯವರ ಮೇಲೆ ಜನರು ಇಟ್ಟಿರುವ ವಿಶ್ವಾಸ. ಈ ಎಲ್ಲ ಕಾರಣದಿಂದ ಗೆಲುವು ಸಿಕ್ಕಿದೆ.

ನಿಮ್ಮ ಶಾಸಕರು ಇಲ್ಲದ ಕಡೆಯಲ್ಲೂ ಲೀಡ್‌ ಸಿಕ್ಕಿದ್ದು ಹೇಗೆ?

ಕಾರ್ಕಳ, ಉಡುಪಿ, ಕಾಪು ಹಾಗೂ ಕುಂದಾಪುರದಲ್ಲಿ ನಮ್ಮ ಪಕ್ಷದ ಶಾಸಕರು ಅಭ್ಯರ್ಥಿ ಘೋಷಣೆಯಾದ ಮೊದಲ ದಿನದಿಂದಲೇ ಪ್ರಚಾರ ಕಾರ್ಯ ಆರಂಭಿಸಿದ್ದರು. ಶಾಸಕರ ಬಲದಿಂದ ಉಡುಪಿಯ ನಾಲ್ಕು ಕ್ಷೇತ್ರದಲ್ಲಿ ಹೆಚ್ಚಿನ ಲೀಡ್‌ ಪಡೆಯಲು ಸಾಧ್ಯವಾಗಿದೆ. ಚಿಕ್ಕಮಗಳೂರಿನಲ್ಲೂ ನಮ್ಮ ಪಕ್ಷದ ಮತ್ತು ಜೆಡಿಎಸ್‌ ಮುಖಂಡರು ಸಂಘಟಿತ ವಾಗಿ ಹೋರಾಟ ನೀಡಿದ್ದಾರೆ. ಅದರ ಫ‌ಲವಾಗಿ ಉತ್ತಮ ಲೀಡ್‌ ಸಿಕ್ಕಿದೆ.

ದಶಕದ ಹಿಂದಿನ ಸೋಲು, ಈಗ ಗೆಲುವು ಹೇಗನಿಸುತ್ತಿದೆ?

ಬ್ರಹ್ಮಾವರ ವಿಧಾನಸಭಾ ಕ್ಷೇತ್ರ ವಿದ್ದ ಸಂದರ್ಭ 1999 ಹಾಗೂ 2004ರ ಚುನಾವಣೆಯಲ್ಲಿ ಜಯ ಪ್ರಕಾಶ್‌ ಹೆಗ್ಡೆ ವಿರುದ್ಧ ಪಕ್ಷದ ಸೂಚನೆ ಯಂತೆ ಸ್ಪರ್ಧಿಸಿ ಸೋತಿದ್ದೆ. ಆ ಸೋಲನ್ನು ಅಷ್ಟೇ ಗೌರವದಿಂದ ಸ್ವೀಕರಿಸಿದ್ದೆ. ಲೋಕಸಭೆ ಚುನಾವಣೆಯಲ್ಲಿ ಪುನಃ ಅವರ ವಿರುದ್ಧ ಸ್ಪರ್ಧೆಗೆ ಪಕ್ಷ ಅವಕಾಶ ಮಾಡಿಕೊಟ್ಟಿತ್ತು. ಆಗ ಮತ್ತೆ ಸೋಲಾಯಿತು. ಈಗ ಗೆಲವು ಸಿಕ್ಕಿದೆ. ಹೆಗ್ಡೆಯವರು ಕಾಂಗ್ರೆಸ್‌ನ ಪ್ರಬಲ ನಾಯಕರು. ವೈಯಕ್ತಿಕ ಚರ್ಚೆ ಇಲ್ಲ. ವ್ಯಕ್ತಿ, ಸ್ಪರ್ಧೆಗಿಂತ ಹೆಚ್ಚಾಗಿ ಚುನಾವಣೆಯನ್ನು ಚುನಾವಣೆಯಾಗಿ, ರಾಜಕಾರಣವನ್ನು ರಾಜಕಾರಣವಾಗಿ ತೆಗೆದುಕೊಂಡಿದ್ದೇನೆ. ಗೆಲುವನ್ನು ಮಾತ್ರ ನೆನಪಿಸಿಕೊಳ್ಳುತ್ತೇನೆ. ಹೆಗ್ಡೆಯವರ ಹಿರಿತನವನ್ನು ಸದಾ ಗೌರವಿಸುತ್ತೇನೆ.

ಭಾಷೆ ಸವಾಲಾಗಲಿದೆಯೇ?

ಮುಂದಿನ ಐದೂವರೆ ತಿಂಗಳಲ್ಲಿ ಹಿಂದಿ ಕಲಿತು, ಅನಂತರವೇ ಅದಕ್ಕೆಲ್ಲ ಉತ್ತರ ನೀಡುವೆ. ಸವಾಲು ಯಾವುದೂ ಅಲ್ಲ, ಕಲಿಯುವೆ.

ಎನ್‌ಡಿಎಗೆ ಬಹುಮತ ಸಿಕ್ಕಿದೆ, ಸರಕಾರ ರಚನೆ ಆಗಲಿದೆಯೇ?

ಭಾರತದ ಗೌರವ ಹೆಚ್ಚಿಸಿರುವುದು ಪ್ರಧಾನಿ ನರೇಂದ್ರ ಮೋದಿಯವರು. ಸುಧಾರಣೆಯ ದೃಷ್ಟಿಯಿಂದ ಹಲವು ಕಾಯ್ದೆ, ಕಾನೂನು ಜಾರಿ ಮಾಡಿದ್ದಾರೆ. ದೇಶದ ಅಭಿವೃದ್ಧಿ, ಆರ್ಥಿಕ ಸುಧಾರಣೆ ಹೀಗೆ ಹಲವು ಮೈಲುಗಲ್ಲು ಸಾಧಿಸಿದ್ದಾರೆ. ಕಾಂಗ್ರೆಸ್‌ ಕೊನೆಯ ಹಂತದಲ್ಲಿ 1 ಲಕ್ಷ ರೂ.ಗಳ ಬಾಂಡ್‌ ಆಸೆ ತೋರಿಸಿದ್ದಾರೆ. ಹೀಗಾಗಿ ಸ್ವಲ್ಪ ವ್ಯತ್ಯಾಸಗಳು ಆಗಿವೆ. ಆದರೆ ಎನ್‌ಡಿಎ ಅಧಿಕಾರ ನಡೆಸಲಿದೆ ಮತ್ತು ಮೋದಿಯವರು ಪ್ರಧಾನಿಯಾಗಿ ಮುಂದುವರಿಯಲಿದ್ದಾರೆ.

ಸಂದರ್ಶನ: ರಾಜು ಖಾರ್ವಿ ಕೊಡೇರಿ

ಟಾಪ್ ನ್ಯೂಸ್

1-stalin

Tamil Nadu; ಪುತ್ರ ಉದಯನಿಧಿಗೆ ಬಡ್ತಿ ನೀಡಿದ ಸ್ಟಾಲಿನ್: ನಾಳೆ ಪ್ರಮಾಣವಚನ

Car-Auto

Kaup: ರಿಕ್ಷಾ, ಕಾರು ಮುಖಾಮುಖಿ ಢಿಕ್ಕಿ: ಇಬ್ಬರಿಗೆ ಗಾಯ

BBK-11: ಬಿಗ್‌ ಬಾಸ್‌ ಮನೆಗೆ 4ನೇ ಸ್ಪರ್ಧಿ ಎಂಟ್ರಿ.. ಯಾರು ಈ ʼಗೋಲ್ಡ್‌ ಮ್ಯಾನ್‌ʼ?

BBK-11: ಬಿಗ್‌ ಬಾಸ್‌ ಮನೆಗೆ 4ನೇ ಸ್ಪರ್ಧಿ ಎಂಟ್ರಿ.. ಯಾರು ಈ ʼಗೋಲ್ಡ್‌ ಮ್ಯಾನ್‌ʼ?

1-PT

IOC ಗೆ ಪತ್ರ; ಪಿ.ಟಿ.ಉಷಾ ವಿರುದ್ಧ ಡಜನ್ ಗೂ ಹೆಚ್ಚು ಎಕ್ಸಿಕ್ಯೂಟಿವ್ ಕೌನ್ಸಿಲ್ ಸದಸ್ಯರು!

Ramalinga-Raeddy

Transport: ವಾಯವ್ಯ ಸಾರಿಗೆ ನಿಗಮಕ್ಕೆ 400 ಬಸ್‌ ಖರೀದಿಗೆ ಕ್ರಮ: ಸಚಿವ ರಾಮಲಿಂಗಾರೆಡ್ಡಿ

BBK11: ಮೂರನೇ ಸ್ಪರ್ಧಿಯಾಗಿ ಬಿಗ್‌ ಬಾಸ್‌ ಮನೆಗೆ ʼಫೈಯರ್‌ ಬ್ರ್ಯಾಂಡ್‌ʼ ಎಂಟ್ರಿ

BBK11: ಮೂರನೇ ಸ್ಪರ್ಧಿಯಾಗಿ ಬಿಗ್‌ ಬಾಸ್‌ ಮನೆಗೆ ʼಫೈರ್‌ ಬ್ರ್ಯಾಂಡ್‌ʼ ಎಂಟ್ರಿ

snemahamayi-Krishna

MUDA Case: ಸಿದ್ದರಾಮಯ್ಯ 2011ರ ಹೇಳಿಕೆ ವಿಡಿಯೋ ಹಾಕಿ ಟಾಂಗ್‌ ಕೊಟ್ಟ ಸ್ನೇಹಮಯಿ ಕೃಷ್ಣ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Car-Auto

Kaup: ರಿಕ್ಷಾ, ಕಾರು ಮುಖಾಮುಖಿ ಢಿಕ್ಕಿ: ಇಬ್ಬರಿಗೆ ಗಾಯ

655

Fraud: ಹಳೆ ಬ್ಯಾಟರಿ ನೀಡುವುದಾಗಿ ವಂಚನೆ

02554

Padubidri: 10 ವರ್ಷಗಳ ಹಿಂದೆ ಕಾಣೆಯಾಗಿದ್ದ ಮಹಿಳೆಯ ಪತ್ತೆ

002

Karkala: ಎದೆ ನೋವಿನಿಂದ ಕೃಷಿಕ ಸಾವು

Udupi: ರಸ್ತೆ ಮಾರ್ಜಿನ್‌ ಮಾಹಿತಿ ಇಲ್ಲದೆ ಸಂಕಷ್ಟ: ನಗರಕ್ಕೆ 21ಮೀ.,ಗ್ರಾಮಾಂತರಕ್ಕೆ 40 ಮೀ.

Udupi: ರಸ್ತೆ ಮಾರ್ಜಿನ್‌ ಮಾಹಿತಿ ಇಲ್ಲದೆ ಸಂಕಷ್ಟ: ನಗರಕ್ಕೆ 21ಮೀ.,ಗ್ರಾಮಾಂತರಕ್ಕೆ 40 ಮೀ.

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

042174

WFI: ಕುಸ್ತಿಪಟುಗಳಿಗೆ ಡಬ್ಲ್ಯುಎಫ್ಐ ತಡೆ

1-stalin

Tamil Nadu; ಪುತ್ರ ಉದಯನಿಧಿಗೆ ಬಡ್ತಿ ನೀಡಿದ ಸ್ಟಾಲಿನ್: ನಾಳೆ ಪ್ರಮಾಣವಚನ

Car-Auto

Kaup: ರಿಕ್ಷಾ, ಕಾರು ಮುಖಾಮುಖಿ ಢಿಕ್ಕಿ: ಇಬ್ಬರಿಗೆ ಗಾಯ

655

Fraud: ಹಳೆ ಬ್ಯಾಟರಿ ನೀಡುವುದಾಗಿ ವಂಚನೆ

02554

Padubidri: 10 ವರ್ಷಗಳ ಹಿಂದೆ ಕಾಣೆಯಾಗಿದ್ದ ಮಹಿಳೆಯ ಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.