ಕುದುರೆಮುಖ ಉದ್ಯಾನವನಕ್ಕೆ ಸಿಬಂದಿ ಕೊರತೆ ಬೇಗುದಿ!

ಒಟ್ಟು 24 ಸಿಬಂದಿ ಕೊರತೆ; ನಿರ್ವಹಣೆ ಕಷ್ಟ

Team Udayavani, Sep 4, 2020, 5:33 AM IST

ಕುದುರೆಮುಖ ಉದ್ಯಾನವನಕ್ಕೆ ಸಿಬಂದಿ ಕೊರತೆ ಬೇಗುದಿ!

ಕಾರ್ಕಳ: ವಿಸ್ತೀರ್ಣದಲ್ಲಿ 600 ಚದರ ಕಿ.ಮೀ. ವಿಸ್ತಾರ ಹೊಂದಿರುವ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ದಟ್ಟ ಕಾಡು, ಅಳಿವಿನಂಚಿನ ಜೀವಿಗಳಿಗೆ ಹೆಸರಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರೂ ಇಲ್ಲಿಗೆ ಬರುತ್ತಾರೆ. ಈ ವೈವಿಧ್ಯಮಯ ಉದ್ಯಾನವನದ ಸಂರಕ್ಷಣೆ ನಿಯಂತ್ರಣವೇ ಈಗ ಇಲಾಖೆಗೆ ದೊಡ್ಡ ಸವಾಲಾಗಿದೆ.

ವ್ಯಾಪ್ತಿ ದೊಡ್ಡದು: ಕಡಿಮೆ ಸಿಬಂದಿ
ಉದ್ಯಾನವನ ವ್ಯಾಪ್ತಿಯ ರಸ್ತೆ, ಚಾರಣಿಗರ ನಿಯಂತ್ರಣದೊಂದಿಗೆ ಉದ್ಯಾನವನ ಸಂರಕ್ಷಣೆ, ಬೇಟೆಗಾರರ ಪತ್ತೆ, ತಪಾಸಣೆ ಇತ್ಯಾದಿಗಳಿಗೆ ಸಾಕಷ್ಟು ಸಂಖ್ಯೆಯ ಸಿಬಂದಿಯಿಲ್ಲ. ಲೆಕ್ಕ ಪ್ರಕಾರ ಪ್ರತಿ 10 ಚ.ಕಿ.ಮೀ ಪ್ರದೇಶಕ್ಕೆ ಒಬ್ಬ ಸಿಬಂದಿ ಇರಬೇಕು. ಆದರಿಲ್ಲಿ 30.40 ಚ.ಕಿ.ಮೀ. ಒಬ್ಬರಂತೆ ಸಿಬಂದಿ ಇದ್ದಾರೆ. 60 ಹುದ್ದೆಗಳ ಪೈಕಿ 24 ಹುದ್ದೆಗಳು ಖಾಲಿಯಿವೆೆ. ಸಿಬಂದಿ ಕಡಿಮೆ ಇರುವುದರಿಂದ ಕೆಲಸ ಹೊರೆಯಾಗುತ್ತಿದೆ. ಇದಕ್ಕಾಗಿ ಎರವಲು ಪಡೆದು ನಿಭಾಯಿಸಬೇಕಿದೆ.

ಕುದುರೆಮುಖ ದ.ಕ. ಮತ್ತು ಉಡುಪಿ ಜಿಲ್ಲೆ ವ್ಯಾಪ್ತಿಯಲ್ಲಿ ವ್ಯಾಪಿಸಿದೆ. ಕೆರೆಕಟ್ಟೆ, ಕಾರ್ಕಳ, ಕುದುರೆಮುಖ, ಬೆಳ್ತಂಗಡಿ ಎಂದು ನಾಲ್ಕು ವಿಭಾಗಗಳಿದ್ದು 3 ಕಡೆ ಚೆಕ್‌ಪೋಸ್ಟ್‌ ಗಳಿವೆ. ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯೊಳಗೆ ರಾಷ್ಟ್ರೀಯ ಹೆದ್ದಾರಿ- 169 ಮತ್ತು ಕಳಸ ಮುಖ್ಯರಸ್ತೆ ಹಾದು ಹೋಗಿದೆ. 3 ರಸ್ತೆಗಳಲ್ಲಿ ಅರಣ್ಯ ಇಲಾಖೆ ತಪಾಸಣ ಕೇಂದ್ರಗಳಿವೆ. ಕಾರ್ಕಳ ತಾ| ಮಾಳ, ಶೃಂಗೇರಿ ತಾ.ನ ತನಿಕೋಡು, ಕಳಸ ತಾ.ನ ಬಸ್ರಿಕಲ್ಲು ಈ ಮೂರು ಕಡೆ ಅರಣ್ಯ ತಪಾಸಣ ಚೆಕ್‌ಪೋಸ್ಟ್‌ಗಳಿವೆ.

ಗಮನವಿಡುವುದು ಕಷ್ಟ
ಲಾಕ್‌ಡೌನ್‌ ವೇಳೆ ಪ್ರವಾಸಕ್ಕೆ ನಿರ್ಬಂಧವಿತ್ತು. ಈಗಲೂ ಪೂರ್ಣ ಪ್ರಮಾಣದಲ್ಲಿ ತೆರೆದುಕೊಂಡಿಲ್ಲ. ಆದರೂ ಪ್ರವಾಸಿಗರು ಜಲಪಾತ, ಪ್ರಕೃತಿ ವೀಕ್ಷಣೆಗೆ ಭೇಟಿ ನೀಡುತ್ತಿದ್ದಾರೆ. ರಜಾದಿನಗಳು, ವಾರಾಂತ್ಯದ ದಿನಗಳಲ್ಲಿ ಹೆಚ್ಚು ಜನ ಬರುತ್ತಿರುತ್ತಾರೆ. ಸಿಬಂದಿ ಕೊರತೆಯಿಂದ ಇವರ ಬಗ್ಗೆ ಗಮನಹರಿಸಲು ಇಲಾಖೆಗೆ ಕಷ್ಟವಾಗುತ್ತಿದೆ.

ದಂಡ ವಸೂಲಿ
ಪ್ರವಾಸಿಗರ ಸಂಖ್ಯೆ, ಚಾರಣಿಗರ ಸಂಖ್ಯೆ ಹೆಚ್ಚಿರುವುದರಿಂದ ನಿಯಮ ಉಲ್ಲಂಘನೆ ಪ್ರಕರಣಗಳೂ ಇಲ್ಲಿ ಹೆಚ್ಚು. ಇವರನ್ನು ಗಮನಿಸಲು, ನಿಯಮ ಮೀರಿದಲ್ಲಿ ದಂಡ ವಿಧಿಸಲು ಸಿಬಂದಿ ಇಲ್ಲ. ಆದರೂ 2019-20ರ ಸಾಲಿನಲ್ಲಿ 87 ಪ್ರಕರಣಗಳಲ್ಲಿ 1,00,220 ರೂ. ವಸೂಲಿಯಾಗಿದೆ.

ಮನವಿ ಮಾಡಿದ್ದೇವೆ
ವಿಭಾಗದಲ್ಲಿ ಸಿಬಂದಿ ಕೊರತೆ ಶೇ.45ರಷ್ಟು ಇದೆ. ಅದರಲ್ಲಿ ಗಾರ್ಡ್‌ ವಿಭಾಗದ ಸಿಬಂದಿ ಕೊರತೆ ಹೆಚ್ಚಿದೆ. ಸಿಬಂದಿ ನೇಮಕಕ್ಕೆ ಬೇಡಿಕೆ ಸಲ್ಲಿಸಿದ್ದೇವೆ. ಸರಕಾರ ನೇಮಕಾತಿ ನಡೆಸಿದಾಗ ಸಮಸ್ಯೆ ನಿವಾರಣೆಯಾಗಲಿದೆ.
-ರುಥ್ರನ್‌, ಉಪ ಅರಣ್ಯ ಸಂರಕ್ಷಣಾಧಿಕಾರಿ, ವನ್ಯಜೀವಿ ವಿಭಾಗ ಕುದುರೆಮುಖ

ದ.ಕ. ಮತ್ತು ಉಡುಪಿ ಜಿಲ್ಲೆ
ಚೆಕ್‌ಪೋಸ್ಟ್‌-3
ದಂಡ ಶುಲ್ಕ (ರೂ.) 5,01,00,200

ಬಾಲಕೃಷ್ಣ ಭೀಮಗುಳಿ

ಟಾಪ್ ನ್ಯೂಸ್

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

1-tengu-dsdsa

Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ

1-namm-mannu-1

Udayavani-MIC ನಮ್ಮ ಸಂತೆ:ಮಣ್ಣಿನಿಂದ ಮಾಡಿದ ನಾನಾ ಉತ್ಪನ್ನ

1-neyge-1

Udayavani-MIC ನಮ್ಮ ಸಂತೆ:ಗಮನ ಸೆಳೆದ ನೇಯ್ಗೆ ಯಂತ್ರ

ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್

Namma Santhe: ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

19

Bharamasagara: ವಿದ್ಯುತ್ ಕಿಡಿಗೆ ಎರಡು‌ ಮೇವಿನ ಬಣವೆ ಸಂಪೂರ್ಣ ಭಸ್ಮ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.