ಕಾಡು ಮೃಗ, ಪಕ್ಷಿಗಳಿಂದ ಫ‌ಸಲು ನಷ್ಟ ; ಪರಿಹಾರಕ್ಕೆ ಆಗ್ರಹ


Team Udayavani, Feb 4, 2021, 5:10 AM IST

KARKALA

ಕಾರ್ಕಳ: ಕೋವಿಡ್‌-19ದಿಂದ ನಗರದ ಜನತೆ ಊರುಗಳತ್ತ ಮುಖ ಮಾಡಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಕೃಷಿ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಕಾಡುಮೃಗಗಳ ಹಾವಳಿಯಿಂದ ಕೃಷಿ ನಡೆಸಲು ಸಾಧ್ಯವಾಗುತಿಲ್ಲ. ಫ‌ಸಲು ನಷ್ಟವಾಗುತ್ತಿದೆ. ಕಾಡು ಪ್ರಾಣಿಗಳಿಂದ ರಕ್ಷಣೆ ಹೇಗೂ ಇಲ್ಲ. ಕನಿಷ್ಠ ಪರಿಹಾರವನ್ನಾದರೂ ಒದಗಿಸಿ ಎಂದು ತಾ.ಪಂ. ಸದಸ್ಯ ಸುಧಾಕರ ಶೆಟ್ಟಿ ಆಗ್ರಹಿಸಿದರು.
ತಾ.ಪಂ. ಕಾರ್ಕಳ ಇದರ 20ನೇ ಸಾಮಾನ್ಯ ಸಭೆ ಬುಧವಾರ ತಾ.ಪಂ. ಸಭಾಂಗಣದಲ್ಲಿ ನಡೆಯಿತು. ತಾ.ಪಂ ಅಧ್ಯಕ್ಷೆ ಸೌಭಾಗ್ಯಾ ಮಡಿವಾಳ ಅಧ್ಯಕ್ಷತೆ ವಹಿಸಿದ್ದರು.
ಉಪಾಧ್ಯಕ್ಷ ಹರೀಶ್‌ ನಾಯಕ್‌, ಸ್ಥಾಯೀ ಸಮಿತಿ ಅಧ್ಯಕ್ಷ ಪ್ರವೀಣ್‌ ಸಾಲಿಯಾನ್‌, ತಾ.ಪಂ. ಇ.ಒ. ಮೇ| ಡಾ| ಹರ್ಷ, ತಹಶೀಲ್ದಾರ್‌ ಪುರಂದರ ಹೆಗ್ಡೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ತಾ.ಪಂ. ಸದಸ್ಯ ಸುಧಾಕರ ಶೆಟ್ಟಿ ವಿಷಯ ಪ್ರಸ್ತಾವಿಸಿ, ಕೃಷಿಯಲ್ಲಿ ಹೆಚ್ಚಿನ ಮಂದಿ ನಿರತರಾಗಿದ್ದಾರೆ. ನವಿಲು, ಕಾಡುಕೋಣ, ಮಂಗ, ಹಂದಿಗಳು ಫ‌ಸ ಲಿಗೆ ಹಾನಿ ಉಂಟು ಮಾಡುವುದರಿಂದ ಕೃಷಿಕರು ತೊಂದರೆ ಅನುಭವಿಸುತ್ತಿದ್ದಾರೆ. ಇದ ಕ್ಕೆ ಯಾವ ಪರಿಹಾರವೂ ಇಲ್ಲ ಎಂದರು.

ಅರಣ್ಯ ಇಲಾಖೆ ಅಧಿಕಾರಿ ಉತ್ತರಿಸಿ, ಕಾಡುಕೋಣ ಫ‌ಸಲು ನಷ್ಟ ಮಾಡಿದರೆ ಪರಿಹಾರ ನೀಡಲಾಗುತ್ತದೆ. ಇತರ ಮೃಗಗಳಿಗೆ ಅನ್ವಯವಾಗುವುದಿಲ್ಲ. ಕಾಡುಕೋಣದಿಂದ ಫ‌ಸಲು ಹಾನಿ ಬಗ್ಗೆ ಇಲಾಖೆ ಗಮನಕ್ಕೆ ತಂದಲ್ಲಿ ಸ್ಥಳ ಮಹಜರು ನಡೆಸಿ ವರದಿ ಸಲ್ಲಿಸುತ್ತೇವೆ ಎಂದರು. ಸಂಬಂಧಿಸಿದ ಇಲಾಖೆಗೆ ಪತ್ರ ಬರೆದು ಸರಕಾರದ ಗಮನಕ್ಕೆ ತರುವ ಎಂದು ತಾ.ಪಂ. ಇ.ಒ. ಡಾ| ಹರ್ಷ ಹೇಳಿದರು.

94 ಸಿ ಯೋಜನೆಯ ಫ‌ಲಾನುಭವಿಗಳು ಜಾಗ ವಿಸ್ತರಿಸಿ ಒತ್ತುವರಿ ಮಾಡಿಕೊಳ್ಳುತ್ತಿರುವ ಪ್ರಕರಣಗಳು ಕಂಡು ಬರುತ್ತಿವೆ. ರಸ್ತೆ ಕೂಡ ಸಕ್ರಮಗೊಳಿಸುತ್ತಿದ್ದಾರೆ ಎಂದು ಸದಸ್ಯ ಸುಧಾಕರ ಶೆಟ್ಟಿ ಹೇಳಿದರು.
ಸರಕಾರಿ ಜಾಗದ ಒತ್ತುವರಿಗೆ ಅವಕಾಶವಿಲ್ಲ ಎಂದು ತಹಶೀಲ್ದಾರ್‌ ಪುರಂದರ ಹೆಗ್ಡೆ ಹೇಳಿದರು. ಗ್ರಾ.ಪಂ.ಗಳಿಗೆ ಪತ್ರ ಬರೆದು ಒತ್ತುವರಿ ನಡೆಸಿದ ಕಡೆಗಳಲ್ಲಿ ತೆರವಿಗೆ ಕ್ರಮವಹಿಸುತ್ತೇವೆ ಎಂದು ಇ.ಒ. ಹೇಳಿದರು.

ಪಿಡಿಒ ಗಳ ಕೊರತೆ

ಬಜಗೋಳಿ ಗ್ರಾ.ಪಂ.ನಲ್ಲಿ ತಾನು ಸದಸ್ಯನಾಗಿ ಆಯ್ಕೆಯಾದ ಮೇಲೆ 5 ಮಂದಿ ಪಿಡಿಒಗಳು ಬದಲಾದರು. ಜನರಿಂದಲೋ ಜನ ಪ್ರತಿನಿಧಿ ಗಳಿಂದಲೋ ಅಥವಾ ಅಧಿಕಾರಿಗಳಿಂದಲೋ ಹೀಗೆ ಯಾರಿಂದ ತಪ್ಪಾಗುತ್ತಿದೆ ಗೊತ್ತಿಲ್ಲ. ಗ್ರಾಮದ ಜನರಂತೂ ಕರೆ ಮಾಡಿ ಸಮಸ್ಯೆ ಹೇಳಿಕೊಳ್ಳುತ್ತಿದ್ದಾರೆ. ಪಿಡಿಒಗಳ ಪರಿಚಯವಾಗುವ ಮೊದಲೆ ಅಲ್ಲಿಂದ ತೆರವಾಗುತ್ತಿದ್ದಾರೆ. ಕನಿಷ್ಠ 3 ವರ್ಷಗಳಾದರೂ ಒಂದೇ ಕಡೆ ಉಳಿಸಿಕೊಳ್ಳಿ ಎಂದು ಸುಧಾಕರ ಶೆಟ್ಟಿ ಆಗ್ರಹಿಸಿದರು. ಪಿಡಿಒಗಳ ಸಂಖ್ಯೆ ಕಡಿಮೆಯಿದೆ. ಅಲ್ಲಿಗೆ ಪ್ರಭಾರ ವ್ಯವಸ್ಥೆ ಕಲ್ಪಿಸುತ್ತೇವೆ ಎಂದು ತಾ.ಪಂ. ಇಒ ಉತ್ತರಿಸಿದರು.

ಪ್ರಮೀಳಾ ಅವರ ಮನೆ ಪಕ್ಕ ರಸ್ತೆ ಹಾದು ಹೋದ ಸ್ಥಳದಲ್ಲಿ ವಿದ್ಯುತ್‌ ಕಂಬವೊಂದಿದ್ದು ಸಮಸ್ಯೆಯಾಗುತ್ತಿದೆ ಎಂದಾಗ ಮೆಸ್ಕಾಂ ಕಂಬದಿಂದ ಕಂಬಕ್ಕೆ 50 ಮೀ. ಅಂತರವಿದ್ದರೆ ತಂತಿ ಎಳೆಯಬಹುದು. ಸ್ಥಳ ಪರಿಶೀಲಿಸುವುದಾಗಿ ಹೇಳಿದರು

ಸದಸ್ಯೆ ಮಾಲಿನಿ ಜೆ. ಶೆಟ್ಟಿ ಜಲಾನಯನ ಯೋಜನೆಯಲ್ಲಿ ತೋಡುಗಳಿಂದ ಹೂಳೆತ್ತಲು ಕ್ರಮ ವಹಿಸಬೇಕು ಎಂದಾಗ ಸದ್ಯ ನಮ್ಮ ಕ್ರಿಯಾ ಯೋಜನೆಯಲ್ಲಿ ಇಲ್ಲ. ಮುಂದೆ ಇಡುತ್ತೇವೆ ಎಂದು ಕೃಷಿ ಇಲಾಖೆ ಅಧಿಕಾರಿ ಉತ್ತರಿಸಿದರು.

ಕುಡಿಯುವ ನೀರು ಒದಗಿಸಲು ಸೂಚನೆ
ತಾ| ವ್ಯಾಪ್ತಿಯಲ್ಲಿ 94 ಸಿ ಮತ್ತು ಡೀಮ್ಡ್ ಫಾರೆಸ್ಟ್‌ ಜಮೀನಿನಲ್ಲಿ ವಾಸವಾಗಿರುವ ಕುಟುಂಬಗಳಿಗೆ ತಾತ್ಕಾಲಿಕ ನೆಲೆಯಲ್ಲಿ ಕುಡಿಯುವ ನೀರು ಒದಗಿಸಲು ಸೂಚಿಸಲಾಗಿದೆ ಎಂದು ತಾ.ಪಂ. ಇ.ಒ. ಕೇಳಿದರು.

ಟಾರ್ಪಾಲು ಹಂಚಿಕೆ: ನಮಗೂ ಕೊಡಿ
ಟಾರ್ಪಾಲು ವಿತರಣೆಗೆೆ ತಾ.ಪಂ. ಅನುದಾನವಿಲ್ಲ. ಸದಸ್ಯರಿಗೆ ಕನಿಷ್ಠ 10 ಆದರೂ ನೀಡಿ ಎಂದು ಸದಸ್ಯೆ ಮಾಲಿನಿ ಶೆಟ್ಟಿ ಒತ್ತಾಯಿಸಿದರು. ಬೇಡಿಕೆ ಜಾಸ್ತಿಯಿದೆ. ಪ್ರಾಶಸ್ತ್ಯದ ಮೇಲೆ ನೀಡುತ್ತಿದ್ದೇವೆ. ಟಾರ್ಪಾಲು ಬಂದಾಗ ಕನಿಷ್ಠ 5 ನೀಡಲು ಪ್ರಯತ್ನಿಸುವುದಾಗಿ ಕೃಷಿ ಅಧಿಕಾರಿ ತಿಳಿಸಿದರು.
ಮೂವರಿಗೆ ಸಮ್ಮಾನ

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅಧಿಕ ಅಂಕ ಪಡೆದ ಮೂವರು ವಿದ್ಯಾರ್ಥಿಗಳನ್ನು ಸಮ್ಮಾನಿಸಲಾಯಿತು. ತಾ.ಪಂ. ಸದಸ್ಯರು ಉಪಸ್ಥಿತ ರಿದ್ದರು. ನಿತಿನ್‌ಕುಮಾರ್‌ ಕಡತ ವರದಿಗಳನ್ನು ವಾಚಿಸಿದರು.

ಸಬ್‌ಸ್ಟೇಶನ್‌ಗೆ ಜಾಗ ಬೇಕು

ಬಜಗೋಳಿ ಭಾಗದಲ್ಲಿ ಪವರ್‌ ಸ್ಟೇಶನ್‌ ಇಲ್ಲದೆ ಕೃಷಿಕರಿಗೆ ತೊಂದರೆಯಾಗುತ್ತಿದೆ. ಅಂಬೇಡ್ಕರ್‌ ಯೋಜನೆಯೂ ಅರ್ಧಕ್ಕೆ ನಿಂತಿದೆ. ಕುಡಿಯುವ ನೀರಿನ ಸಮಸ್ಯೆಯಿದೆ ಎಂದು ಸದಸ್ಯರೊಬ್ಬ ರು ಕೇಳಿ ದ ಪ್ರಶ್ನೆಗೆ ಉತ್ತರಿಸಿದ ಮೆಸ್ಕಾಂ ಅಧಿಕಾರಿ ಸಂದೀಪ್‌ ಸಬ್‌ಸ್ಟೇಶನ್‌ಗೆ ಸರಕಾರದಿಂದ ಜಾಗ ಹಸ್ತಾಂತರ ಆಗಬೇಕಿದೆ. ಅದಾಗದೆ ಏನೂ ಮಾಡುವಂತಿಲ್ಲ. ಇಲಾಖೆ ಕಡೆಯಿಂದ ವಿಳಂಬವಾಗುತ್ತಿಲ್ಲ. ಕಡತ ಸರಕಾರಕ್ಕೆ ಸಲ್ಲಿಕೆಯಾಗಿ ಜಿಲ್ಲಾಧಿಕಾರಿ ಕಚೇರಿಗೆ ಹೋಗಿದೆ. ನೀರೆ ಸಬ್‌ಸ್ಟೇಶನ್‌ ಅದಕ್ಕಿಂತ ಮೊದಲು ಆಗುತ್ತದೆ ಎಂದರು. ಈ ಬಗ್ಗೆ ಗಮನಹರಿಸುವುದಾಗಿ ತಾ.ಪಂ. ಇಒ ಹೇಳಿದರು.

ದಾಖಲಾತಿ ಸಮಸ್ಯೆ

ಹಿಂದಿನ ಸಭೆಯ ನಡಾವಳಿ ಮೇಲಿನ ಚರ್ಚೆ ನಡೆದು ಮುಂಡ್ಕೂರು ಮುಲ್ಲಡ್ಕ ಪರಿಸರದಲ್ಲಿ ಕೊರಗ ಕುಟುಂಬಗಳಿಗೆ ಸರಕಾರದಿಂದ ಜಾಗ ಮಂಜೂರಾಗಿದೆ. ಮೀಸಲಿಟ್ಟ ಜಾಗಕ್ಕೆ ಸಂಬಂಧಿಸಿ ದಾಖಲಾತಿ ಸಮಸ್ಯೆಯಿದೆ ಎಂದು ಸದಸ್ಯರು ಹೇಳಿದಾಗ ತಾಂತ್ರಿಕ ತೊಂದರೆ ನಿವಾರಿಸುವ ಕೆಲಸವಾಗಬೇಕಿದೆ. ಜಿಲ್ಲಾಧಿಕಾರಿಗಳ ತಾ| ಗ್ರಾಮ ವಾಸ್ತವ್ಯ ಸಂದರ್ಭ ಸಮಸ್ಯೆಗೆ ಪರಿಹಾರ ಸಿಗಬಹುದು. ತಾಂತ್ರಿಕ ತೊಂದರೆಯಿಂದ ಹೀಗಾಗಿದೆ ಎಂದು ತಹಶೀಲ್ದಾರ್‌ ಪುರಂದರ ಹೆಗ್ಡೆ ಹೇಳಿದರು.

ಟಾಪ್ ನ್ಯೂಸ್

‌BBK11: ಮತ್ತೆ ʼಬಿಗ್‌ಬಾಸ್‌ʼ ಕಾರ್ಯಕ್ರಮದ ವಾಹಿನಿಗೆ ಬಂದ‌ ಲಾಯರ್ ಜಗದೀಶ್; ವೀಕ್ಷಕರು ಖುಷ್

‌BBK11: ಮತ್ತೆ ʼಬಿಗ್‌ಬಾಸ್‌ʼ ಕಾರ್ಯಕ್ರಮದ ವಾಹಿನಿಗೆ ಬಂದ‌ ಲಾಯರ್ ಜಗದೀಶ್; ವೀಕ್ಷಕರು ಖುಷ್

Uttara Pradesh: 9 ವರ್ಷದ ಹಿಂದಿನ ಅವಮಾನ…ಶೂಗಳ ಹಾರ ಧರಿಸುವಂತೆ ಮಾಡಿದಾತನ ಬರ್ಬರ ಹ*ತ್ಯೆ!

Uttara Pradesh: 9 ವರ್ಷದ ಹಿಂದಿನ ಅವಮಾನ…ಶೂಗಳ ಹಾರ ಧರಿಸುವಂತೆ ಮಾಡಿದಾತನ ಬರ್ಬರ ಹ*ತ್ಯೆ!

INDvsNZ: Why KL Rahul, Kuldeep Yadav & Mohammed Siraj dropped? Here’s the reason

INDvsNZ: ರಾಹುಲ್‌, ಕುಲದೀಪ್‌, ಸಿರಾಜ್‌ ರನ್ನು ಕೈಬಿಟ್ಟಿದ್ಯಾಕೆ? ಇಲ್ಲಿದೆ ಕಾರಣ

3-ullala

Deralakatte: ಶಾಲಾ ವಿದ್ಯಾರ್ಥಿಗಳಿದ್ದ ರಿಕ್ಷಾಗೆ ಪಿಕಪ್ ಡಿಕ್ಕಿ; ವಿದ್ಯಾರ್ಥಿನಿ ಸಾವು

Turkey ಮೇಲಿನ ದಾಳಿಗೆ ಪ್ರತೀಕಾರ: ಇರಾಕ್‌, ಸಿರಿಯಾದ 30 ಕುರ್ದಿಶ್‌ ಉ*ಗ್ರರ ನೆಲೆ ಧ್ವಂಸ

Turkey ಮೇಲಿನ ದಾಳಿಗೆ ಪ್ರತೀಕಾರ: ಇರಾಕ್‌, ಸಿರಿಯಾದ 30 ಕುರ್ದಿಶ್‌ ಉ*ಗ್ರರ ನೆಲೆ ಧ್ವಂಸ

Jai tulu movie; ಶೂಟಿಂಗ್‌ ಆರಂಭಿಸಿದ ರೂಪೇಶ್‌ ಶೆಟ್ಟಿ

Jai tulu movie; ಶೂಟಿಂಗ್‌ ಆರಂಭಿಸಿದ ರೂಪೇಶ್‌ ಶೆಟ್ಟಿ

Mangaluru: ವಿಧಾನ ಪರಿಷತ್ ಉಪಚುನಾವಣೆ… ನಿರೀಕ್ಷೆಯಂತೆ ಬಿಜೆಪಿ ಸುಲಭ ಗೆಲುವು

Mangaluru: ವಿಧಾನ ಪರಿಷತ್ ಉಪಚುನಾವಣೆ… ಬಿಜೆಪಿಯ ಕಿಶೋರ್ ಕುಮಾರ್ ಬೊಟ್ಯಾಡಿ ಗೆಲುವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Rubber-Estate

Illegal Immigration: ರಬ್ಬರ್‌ ಎಸ್ಟೇಟ್‌ಗಳು ಶಂಕಿತ ಬಾಂಗ್ಲಾದೇಶಿಗರ ಭದ್ರ ನೆಲೆ?

1

Kasaragod: ಸಚಿತಾ ರೈ ವಿರುದ್ಧ ಮತ್ತೊಂದು ಪ್ರಕರಣ ದಾಖಲು

manipal-marathon

Manipal Marathon: ಮಾಹೆ ವಿ.ವಿ: ಮಣಿಪಾಲ ಮ್ಯಾರಥಾನ್‌ ನೋಂದಣಿ ಆರಂಭ

KOTA-2

Udupi: ಇಂದ್ರಾಳಿ ಮೇಲ್ಸೇತುವೆ ಕಾಮಗಾರಿ ಜ.15ರೊಳಗೆ ಪೂರ್ಣಗೊಳಿಸಿ: ಸಂಸದ ಕೋಟ

Suside-Boy

Udupi: ಉಸಿರಾಟದ ತೊಂದರೆ: ವ್ಯಕ್ತಿ ಸಾವು

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಕಪ್ಪುಪಟ್ಟಿ ತೆಗೆಸಿದ ಚೀಫ್ ಜಸ್ಟೀಸ್ ಆಫ್ ಇಂಡಿಯಾ!

udayavani youtube

ಯಾಹ್ಯಾ ಸಿನ್ವಾರ್ ಹತ್ಯೆಯ ಡ್ರೋನ್ ವಿಡಿಯೋ ಬಿಡುಗಡೆ ಮಾಡಿದ ಇಸ್ರೇಲ್

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

ಹೊಸ ಸೇರ್ಪಡೆ

‌BBK11: ಮತ್ತೆ ʼಬಿಗ್‌ಬಾಸ್‌ʼ ಕಾರ್ಯಕ್ರಮದ ವಾಹಿನಿಗೆ ಬಂದ‌ ಲಾಯರ್ ಜಗದೀಶ್; ವೀಕ್ಷಕರು ಖುಷ್

‌BBK11: ಮತ್ತೆ ʼಬಿಗ್‌ಬಾಸ್‌ʼ ಕಾರ್ಯಕ್ರಮದ ವಾಹಿನಿಗೆ ಬಂದ‌ ಲಾಯರ್ ಜಗದೀಶ್; ವೀಕ್ಷಕರು ಖುಷ್

Uttara Pradesh: 9 ವರ್ಷದ ಹಿಂದಿನ ಅವಮಾನ…ಶೂಗಳ ಹಾರ ಧರಿಸುವಂತೆ ಮಾಡಿದಾತನ ಬರ್ಬರ ಹ*ತ್ಯೆ!

Uttara Pradesh: 9 ವರ್ಷದ ಹಿಂದಿನ ಅವಮಾನ…ಶೂಗಳ ಹಾರ ಧರಿಸುವಂತೆ ಮಾಡಿದಾತನ ಬರ್ಬರ ಹ*ತ್ಯೆ!

INDvsNZ: Why KL Rahul, Kuldeep Yadav & Mohammed Siraj dropped? Here’s the reason

INDvsNZ: ರಾಹುಲ್‌, ಕುಲದೀಪ್‌, ಸಿರಾಜ್‌ ರನ್ನು ಕೈಬಿಟ್ಟಿದ್ಯಾಕೆ? ಇಲ್ಲಿದೆ ಕಾರಣ

3

Muddebihal:‌ ಕ್ರೇನ್ ಚಕ್ರ ಹರಿದು ವ್ಯಕ್ತಿ ಸಾವು; ಪ್ರಕರಣ ದಾಖಲು

3-ullala

Deralakatte: ಶಾಲಾ ವಿದ್ಯಾರ್ಥಿಗಳಿದ್ದ ರಿಕ್ಷಾಗೆ ಪಿಕಪ್ ಡಿಕ್ಕಿ; ವಿದ್ಯಾರ್ಥಿನಿ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.