Udupi; ಗೀತಾರ್ಥ ಚಿಂತನೆ 01; ಗೀತೆಯಲ್ಲಿ ಧರ್ಮದ ಸ್ವರೂಪಾಶಯ
Team Udayavani, Aug 9, 2024, 6:28 PM IST
ಶ್ರೀಕೃಷ್ಣನು ಅರ್ಜುನನಿಗೆ ಮೊದಲಾಗಿ ಭಗವದ್ಗೀತೆಯನ್ನು ಉಪದೇಶಿಸಿದ್ದು ಎಂದು ತಿಳಿಯುತ್ತಾರೆ. ಆದರೆ ಗೀತೋಪದೇಶವಾದದ್ದು ಅದಕ್ಕೂ ಹಿಂದೆ. ಇದನ್ನು ಈ ಮೊದಲು ವಿವಸ್ವಾನ್(ಸೂರ್ಯ)ನಿಗೆ ಉಪದೇಶಿಸಿರುವುದಾಗಿ ಶ್ರೀಕೃಷ್ಣ ಅರ್ಜುನನಿಗೆ ಸ್ಪಷ್ಟಪಡಿಸಿದ್ದಾನೆ.
ಭಗವಂತನ ಪೂರ್ಣ ಸನ್ನಿಧಾನ ಇದೆ ಎಂಬ ಕಾರಣಕ್ಕೆ ಭಗವದ್ಗೀತೆ ಎಂಬ ಹೆಸರು ಬಂತು. ಭಗವಂತನನ್ನು ಗೀತೆಯಲ್ಲಿ ಕಾಣಲು ಪ್ರಯತ್ನಿಸಿದರೆ ಗೀತಾ ಪರ್ಯಾಯ ಎನ್ನುವುದಕ್ಕೆ ಅನ್ವರ್ಥಕ. ಅಧ್ಯಯನದ ಜತೆ ಅಧ್ಯಾಪನವನ್ನೂ ನಡೆಸಿದಂತಾಗುತ್ತದೆ. ಭಗವದ್ಗೀತೆಗೆ ಎಲ್ಲ ಆಚಾರ್ಯರು ಭಾಷ್ಯವನ್ನು ಬರೆದಿದ್ದಾರೆ. ಇವೆಲ್ಲವನ್ನೂ ಒಳಗೊಂಡಂತೆ ಎಲ್ಲ 700 ಶ್ಲೋಕಗಳ ಪಾಠ ಪ್ರವಚನದ ಚಿಂತನಕ್ರಮವನ್ನು ಲೋಕಕಲ್ಯಾಣಾರ್ಥವಾಗಿ ಚತುರ್ಥ ಪರ್ಯಾಯದ ಅವಧಿಯಲ್ಲಿ ಶ್ರೀಮದಾಚಾರ್ಯರ ಸರ್ವಜ್ಞಪೀಠದಲ್ಲಿ ಅಖಂಡವಾಗಿ ಸಮರ್ಪಿಸಲು ಸಂಕಲ್ಪಿಸಿದ್ದೇವೆ.
ಧರ್ಮಕ್ಷೇತ್ರೇ ಕುರುಕ್ಷೇತ್ರೇ ಸಮವೇತಾ ಯುಯುತ್ಸವಃ|
ಮಾಮಕಾಃ ಪಾಂಡವಾಶೆòವ ಕಿಮಕುರ್ವತ ಸಂಜಯ||
ಭಗವದ್ಗೀತೆಯ ಮೊದಲ ಶ್ಲೋಕದ ಮೊದಲ ಶಬ್ದ(ಧರ್ಮ)ದಲ್ಲಿರುವ “ಧರ್’-ಕೊನೆಯ “ಮ’ ಕಾರವನ್ನು ಸೇರಿಸಿದರೆ “ಧರ್ಮ’ ಹೀಗೆ ಗೀತೆಯ ಆತ್ಯಂತಿಕ ಅಕ್ಷರಗಳನ್ನು ಜೋಡಿಸಿದರೆ ಧರ್ಮದ ಸ್ವರೂಪ ಕಾಣುತ್ತೇವೆ. ಪ್ರತಿಯೊಂದು ಶ್ಲೋಕದಲ್ಲಿಯೂ ಸ್ವಾರಸ್ಯಗಳಿವೆ. ಗೀತೆಗೆ ಸಾವಿರಾರು ವ್ಯಾಖ್ಯಾನಗಳು ಬಂದಿವೆ, ಬರುತ್ತಿವೆ. ಆದ್ದರಿಂದ ಗೀತೆಯು ನಿತ್ಯಗರ್ಭಿಣಿ ಮಾತೆ.
ಶ್ರೀಸುಗುಣೇಂದ್ರತೀರ್ಥ ಶ್ರೀಪಾದರು,
ಪರ್ಯಾಯ ಶ್ರೀಪುತ್ತಿಗೆ ಶ್ರೀಕೃಷ್ಣಮಠ.
ಕೋಟಿ ಗೀತಾ ಲೇಖನ ಯಜ್ಞದಲ್ಲಿ ಪಾಲೊಳ್ಳಿ
ಗೀತಾ ಮಂದಿರ,ಉಡುಪಿ
ಸಂಪರ್ಕ ಸಂಖ್ಯೆ: 8055338811
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ISPRL Programme: ಪಾದೂರು ಜಲ್ಲಿ ಕ್ರಷರ್: ಸರ್ವೆಗೆ ಬಂದ ಅಧಿಕಾರಿಗಳಿಗೆ ತಡೆ
MAHE University: ವಾಗ್ಶಾ ವಿದ್ಯಾರ್ಥಿಗೆ ವಿಶ್ವ ಪಾಕಶಾಲೆ ಶ್ರೇಷ್ಠತೆ ಗರಿ
Konkani Movie: “ತರ್ಪಣ’ ಚಲನಚಿತ್ರಕ್ಕೆ ಅಂತಾರಾಷ್ಟ್ರೀಯ ಪ್ರಶಸ್ತಿ
Chaturmasya: ವಿಶ್ವಕರ್ಮ ಮ್ಯೂಸಿಯಂ ಸ್ಥಾಪನೆ ಗುರಿ: ಶ್ರೀ ಕಾಳಹಸ್ತೇಂದ್ರ ಸ್ವಾಮೀಜಿ
Child safety: ಮಕ್ಕಳ ರಕ್ಷಣ ಕಾಯ್ದೆಗಳ ಪರಿಣಾಮಕಾರಿ ಅನುಷ್ಠಾನ
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.